Advertisement
ಅಂಕಣ

ನವರಾತ್ರಿ ಸಂಭ್ರಮಕ್ಕೆ ತೆರೆ | ದೇವಿಯ ಆರಾಧನೆಯಿಂದ ನೆಮ್ಮದಿ ಕಂಡ ಭಕ್ತರು |

Share

ಸರಣಿ ಹಬ್ಬಗಳಲ್ಲಿ ಬಹುದಿನಗಳ ಸಂಭ್ರಮವಿರುವ ನವರಾತ್ರಿ ಮುಗಿದಿದೆ. ವಾರಗಳ ಕಾಲ ದೇವಿಯ ಆರಾಧನೆಯಲ್ಲಿ ತೊಡಗಿಸಿಕೊಂಡ ಭಕ್ತರ ಮನದಲ್ಲಿ ತೃಪ್ತಿಯ ಭಾವನೆ.

Advertisement
Advertisement
Advertisement
Advertisement

ಹಲವು ರೀತಿಯಲ್ಲಿ ಅರ್ಚಿಸಿ , ಪೂಜಿಸಿ, ಅಲಂಕರಿಸಿ ಎಲ್ಲಾ ರೀತಿಯಲ್ಲೂ ತಮ್ಮನ್ನು ಸಮರ್ಪಿಸಿ ಕೊಂಡ ಭಕ್ತರಿಗೆ ಏನೋ ಖಾಲಿಯಾದ ಅನುಭವ. ಶಾಲಾ ಮಕ್ಕಳಿಗೆ ವರ್ಷವಿಡೀ ಕಾದು ಕುಳಿತು ತಮ್ಮ ಪ್ರತಿಭೆಯನ್ನು ಓರೆಗೆ ಹಚ್ಚುವ ವಾರ್ಷಿಕೋತ್ಸವ ಮುಗಿದ ಅನುಭವ ಭಕ್ತರಿಗೆ.

Advertisement

ಈ ಬಾರಿಯ ನವರಾತ್ರಿ ನನಗೆ 25 ವರ್ಷಗಳ ಹಿಂದಿನ ಆಚರಣೆಯನ್ನು ನೆನಪಿಸಿತು. ಆ ದಿನಗಳಲ್ಲಿ ನಮ್ಮ ಊರಿನ ದೇವಾಲಯದಲ್ಲಿ ‌ ನವರಾತ್ರಿ ಹಬ್ಬದ ಆಚರಣೆ ಪ್ರತೀ ವರ್ಷ ನಡೆಯುತ್ತಿತ್ತು. ಒಂಬತ್ತು ದಿನಗಳ ಕಾಲ ನಡೆಯುತ್ತಿದ್ದ ಆಚರಣೆಯಲ್ಲಿ ಇಡೀ ಗ್ರಾಮದವರು ಮನೆಯ ಹಬ್ಬವೆಂಬಂತೆ ಭಾಗವಹಿಸುತ್ತಿದ್ದರು. ಅಲ್ಲಿ ಪೂಜೆ ನಡೆಯುವಾಗ ‌ ದಿನಕ್ಕೊಂದು ತಂಡದವರು ಭಜನೆ ಮಾಡುತ್ತಿದ್ದರು. ಅವರೊಂದಿಗೆಲ್ಲರೂ ದನಿ ಸೇರಿಸುತ್ತಿದ್ದರು. ದೇವರ ಪ್ರಸಾದವಾಗಿ‌ ಅವಲಕ್ಕಿ, ಗಟ್ಟಿ ಪಾಯಸ, ಕ್ಷೀರ ಮೊದಲಾದವುಗಳನ್ನು ವಿತರಿಸುತ್ತಿದ್ದರು.

ವಿಜಯದಶಮಿಯಂದು ನಡೆಯುತ್ತಿದ್ದ ಅನ್ನ ಸಂತರ್ಪಣೆಯಲ್ಲಿ ಎಲ್ಲರೂ ಪಾಲ್ಗೊಳ್ಳುತ್ತಿದ್ದ ನೆನಪುಗಳು ಇಂದು ನಿನ್ನೆಯಂತಿದೆ. ಈ ಬಾರಿ ಎಂದಿನಂತೆ ನವರಾತ್ರಿ ಗೌಜಿಯಾಗಿಯೇ ನಡೆದಿದೆ. ಯಾವುದೇ ಲೋಪವಿಲ್ಲದೆ, ಆಚರಣೆಗೆ ಭಂಗವಿಲ್ಲದೆ ದೇವಿಯ ಆರಾಧನೆ ನಡೆದಿದೆ. ನಮ್ಮ ವಾಹನಗಳಿಗೆ, ಯಂತ್ರೋಪಕರಣಗಳಿಗೆ ಪೂಜೆ ಮಾಡಿ ಮುಂದಿನ ವರ್ಷವಿಡೀ ಸಾಂಗವಾಗಿ ಕಾರ್ಯನಿರ್ವಹಿಸುವಲ್ಲಿ ಸಹಕಾರ ನೀಡುವಂತೆ ಪಾರ್ಥಿಸಿದ್ದಾಯಿತು.

Advertisement

ಮುಂದಿನ ದಿನಗಳಲ್ಲಿ ಕೊರೊನಾ ಸಹಿತ ಇತರ ಕಂಟಕಗಳ ನಿವಾರಣೆಯಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಾ ಎಲ್ಲೆಡೆ ವಿಜಯದಶಮಿಯ ಆಚರಣೆಯೊಂದಿಗೆ ನವರಾತ್ರಿಯನ್ನು ಭಕ್ತರು ಸಂಪನ್ನಗೊಳಿಸಿದರು.

# ಅಶ್ವಿನಿ ಮೂರ್ತಿ ಅಯ್ಯನಕಟ್ಟೆ

Advertisement

 

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

Published by
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

Recent Posts

ವಾಡಿಕೆಗಿಂತ  2.5 ಡಿಗ್ರಿ ಸೆಲ್ಸಿಯಸ್ ನಷ್ಟು ಬಿಸಿಲು ಅಧಿಕ

ಈ ಬಾರಿ ಫೆಬ್ರವರಿ ತಿಂಗಳಲ್ಲಿ ವಾಡಿಕೆಗಿಂತ  2.5 ಡಿಗ್ರಿ ಸೆಲ್ಸಿಯಸ್ ನಷ್ಟು ಬಿಸಿಲು…

2 hours ago

ಸರ್ಕಾರಿ ಬಸ್ ನಿರ್ವಾಹಕರಿಗೆ ಸೂಕ್ತ ಭದ್ರತೆ ಒದಗಿಸುವಂತೆ ಮನವಿ

ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಚಾಲಕ ಮತ್ತು ನಿರ್ವಾಹಕರ ಮೇಲೆ ಪ್ರಯಾಣಿಕರು…

2 hours ago

ಕೃಷಿ ವಿಶ್ವವಿದ್ಯಾಲಯಗಳು ಸಂಶೋಧನೆಗೆ ಹೆಚ್ಚಿನ ಆದ್ಯತೆ ನೀಡಬೇಕು

ಕೃಷಿ ಹಾಗೂ ರೈತರ ಅಭ್ಯುದಯವೇ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯಗಳ ಮೂಲ ಆಶಯವಾಗಿದೆ…

3 hours ago

ಏರುತ್ತಿರುವ ತಾಪಮಾನ | 2030 ರ ವೇಳೆಗೆ ಕೃಷಿ ಕ್ಷೇತ್ರದ ಮೇಲೆ ಗಂಭೀರ ಪರಿಣಾಮ | ಕೃಷಿ ಸಾಲ ಮರುಪಾವತಿ ಮೇಲೆ ಹೊಡೆತ..? |

ಏರುತ್ತಿರುವ ತಾಪಮಾನ ಮತ್ತು ಹವಾಮಾನ ಬದಲಾವಣೆಯು ಮುಂದಿನ ಐದು ವರ್ಷಗಳಲ್ಲಿ ಕೃಷಿ ಮೇಲೆ…

11 hours ago

ದೇಶಾದ್ಯಂತ ಸ್ಥೂಲಕಾಯದ ವಿರುದ್ಧ ಅಭಿಯಾನ | ರಾಜ್ಯಸಭಾ ಸಂಸದೆ ಸುಧಾಮೂರ್ತಿ ಸೇರಿದಂತೆ 10 ಮಂದಿ ನಾಮನಿರ್ದೇಶನ

ದೇಶಾದ್ಯಂತ ಸ್ಥೂಲಕಾಯದ ವಿರುದ್ಧ ಹೋರಾಡಲು ಪ್ರಧಾನಿ ನರೇಂದ್ರ ಮೋದಿ ಅವರು ಹತ್ತು ಮಂದಿಯನ್ನು…

11 hours ago

ಸಹಕಾರಿ ಪಾಠ | ಆರ್ಥಿಕ ಶಿಸ್ತು ಹಾಗೂ ಸಣ್ಣ ಸಣ್ಣ ಮೊತ್ತವೂ ಬ್ಯಾಂಕಿಗೆ ಏಕೆ ಬರಬೇಕು…?

ತೀರಾ ಸಣ್ಣ ಮಟ್ಟಿನ‌ ಆದಾಯವನ್ನೂ ಬ್ಯಾಂಕ್ ಖಾತೆಗೆ ಏಕೆ ತುಂಬಬೇಕು..?

12 hours ago