ಅನುಕ್ರಮ

ನವರಾತ್ರಿ ಸಂಭ್ರಮಕ್ಕೆ ತೆರೆ | ದೇವಿಯ ಆರಾಧನೆಯಿಂದ ನೆಮ್ಮದಿ ಕಂಡ ಭಕ್ತರು |

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಸರಣಿ ಹಬ್ಬಗಳಲ್ಲಿ ಬಹುದಿನಗಳ ಸಂಭ್ರಮವಿರುವ ನವರಾತ್ರಿ ಮುಗಿದಿದೆ. ವಾರಗಳ ಕಾಲ ದೇವಿಯ ಆರಾಧನೆಯಲ್ಲಿ ತೊಡಗಿಸಿಕೊಂಡ ಭಕ್ತರ ಮನದಲ್ಲಿ ತೃಪ್ತಿಯ ಭಾವನೆ.

Advertisement

ಹಲವು ರೀತಿಯಲ್ಲಿ ಅರ್ಚಿಸಿ , ಪೂಜಿಸಿ, ಅಲಂಕರಿಸಿ ಎಲ್ಲಾ ರೀತಿಯಲ್ಲೂ ತಮ್ಮನ್ನು ಸಮರ್ಪಿಸಿ ಕೊಂಡ ಭಕ್ತರಿಗೆ ಏನೋ ಖಾಲಿಯಾದ ಅನುಭವ. ಶಾಲಾ ಮಕ್ಕಳಿಗೆ ವರ್ಷವಿಡೀ ಕಾದು ಕುಳಿತು ತಮ್ಮ ಪ್ರತಿಭೆಯನ್ನು ಓರೆಗೆ ಹಚ್ಚುವ ವಾರ್ಷಿಕೋತ್ಸವ ಮುಗಿದ ಅನುಭವ ಭಕ್ತರಿಗೆ.

ಈ ಬಾರಿಯ ನವರಾತ್ರಿ ನನಗೆ 25 ವರ್ಷಗಳ ಹಿಂದಿನ ಆಚರಣೆಯನ್ನು ನೆನಪಿಸಿತು. ಆ ದಿನಗಳಲ್ಲಿ ನಮ್ಮ ಊರಿನ ದೇವಾಲಯದಲ್ಲಿ ‌ ನವರಾತ್ರಿ ಹಬ್ಬದ ಆಚರಣೆ ಪ್ರತೀ ವರ್ಷ ನಡೆಯುತ್ತಿತ್ತು. ಒಂಬತ್ತು ದಿನಗಳ ಕಾಲ ನಡೆಯುತ್ತಿದ್ದ ಆಚರಣೆಯಲ್ಲಿ ಇಡೀ ಗ್ರಾಮದವರು ಮನೆಯ ಹಬ್ಬವೆಂಬಂತೆ ಭಾಗವಹಿಸುತ್ತಿದ್ದರು. ಅಲ್ಲಿ ಪೂಜೆ ನಡೆಯುವಾಗ ‌ ದಿನಕ್ಕೊಂದು ತಂಡದವರು ಭಜನೆ ಮಾಡುತ್ತಿದ್ದರು. ಅವರೊಂದಿಗೆಲ್ಲರೂ ದನಿ ಸೇರಿಸುತ್ತಿದ್ದರು. ದೇವರ ಪ್ರಸಾದವಾಗಿ‌ ಅವಲಕ್ಕಿ, ಗಟ್ಟಿ ಪಾಯಸ, ಕ್ಷೀರ ಮೊದಲಾದವುಗಳನ್ನು ವಿತರಿಸುತ್ತಿದ್ದರು.

ವಿಜಯದಶಮಿಯಂದು ನಡೆಯುತ್ತಿದ್ದ ಅನ್ನ ಸಂತರ್ಪಣೆಯಲ್ಲಿ ಎಲ್ಲರೂ ಪಾಲ್ಗೊಳ್ಳುತ್ತಿದ್ದ ನೆನಪುಗಳು ಇಂದು ನಿನ್ನೆಯಂತಿದೆ. ಈ ಬಾರಿ ಎಂದಿನಂತೆ ನವರಾತ್ರಿ ಗೌಜಿಯಾಗಿಯೇ ನಡೆದಿದೆ. ಯಾವುದೇ ಲೋಪವಿಲ್ಲದೆ, ಆಚರಣೆಗೆ ಭಂಗವಿಲ್ಲದೆ ದೇವಿಯ ಆರಾಧನೆ ನಡೆದಿದೆ. ನಮ್ಮ ವಾಹನಗಳಿಗೆ, ಯಂತ್ರೋಪಕರಣಗಳಿಗೆ ಪೂಜೆ ಮಾಡಿ ಮುಂದಿನ ವರ್ಷವಿಡೀ ಸಾಂಗವಾಗಿ ಕಾರ್ಯನಿರ್ವಹಿಸುವಲ್ಲಿ ಸಹಕಾರ ನೀಡುವಂತೆ ಪಾರ್ಥಿಸಿದ್ದಾಯಿತು.

ಮುಂದಿನ ದಿನಗಳಲ್ಲಿ ಕೊರೊನಾ ಸಹಿತ ಇತರ ಕಂಟಕಗಳ ನಿವಾರಣೆಯಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಾ ಎಲ್ಲೆಡೆ ವಿಜಯದಶಮಿಯ ಆಚರಣೆಯೊಂದಿಗೆ ನವರಾತ್ರಿಯನ್ನು ಭಕ್ತರು ಸಂಪನ್ನಗೊಳಿಸಿದರು.

Advertisement

# ಅಶ್ವಿನಿ ಮೂರ್ತಿ ಅಯ್ಯನಕಟ್ಟೆ

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

Published by
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

Recent Posts

ಹಕ್ಕಿಗಳಿಗೆ ಗೂಡುಕಟ್ಟುವ ಪರಿಸರ ಪ್ರೇಮಿ..

ಹಕ್ಕಿಗಳಿಗೆ ಗೂಡುಕಟ್ಟುವ ಮೂಲಕ ಪರಿಸರ ಸಂರಕ್ಷಣೆಗೆ ಪಣತೊಟ್ಟಿರುವ ದಂಪತಿಗಳು ಬಂಟ್ವಾಳ ತಾಲೂಕಿನಲ್ಲಿದ್ದಾರೆ. ಇವರ…

7 hours ago

ಭಾರತದಿಂದ ಅಡಿಕೆಯ ರಫ್ತು ಎಷ್ಟಾಗುತ್ತದೆ…? ಹೇಗಾಗುತ್ತದೆ…?

ಜಾಗತಿಕ ಮಟ್ಟದಲ್ಲಿ ಅಡಿಕೆ ಬೆಳೆಯ ವಿಸ್ತೀರ್ಣ ಮತ್ತು ಉತ್ಪಾದನೆಯಲ್ಲಿ ಭಾರತ ಮೊದಲನೇ ಸ್ಥಾನದಲ್ಲಿದೆ.ಇನ್ನು…

10 hours ago

ಮಹಾರಾಷ್ಟ್ರ ಸರ್ಕಾರ ಕೃಷಿ ಕ್ಷೇತ್ರದಲ್ಲಿ 25,000 ಕೋಟಿ ರೂ. ಹೂಡಿಕೆ ಮಾಡಲಿದೆ

ಕೃಷಿಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಮಹಾರಾಷ್ಟ್ರ  ರಾಜ್ಯ ಸರ್ಕಾರವು ಮುಂದಿನ ಐದು ವರ್ಷಗಳಲ್ಲಿ ಕೃಷಿ…

10 hours ago

ಆಶ್ಲೇಷ ನಕ್ಷತ್ರದಲ್ಲಿ ಬುಧ: ಈ 4 ರಾಶಿಗೆ ಹೆಜ್ಜೆ ಹೆಜ್ಜೆಗೂ ಕಂಟಕ..!

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

10 hours ago

ಮಕ್ಕಳ ಪುಟ | ನಿಮ್ಮ ಚಿತ್ರ-ನಮ್ಮ ಬೆಳಕು | ದರ್ಶಿತ್‌ ಕೆ ಎಸ್

ದರ್ಶಿತ್‌ ಕೆ ಎಸ್‌, 3 ನೇ ತರಗತಿ, ಜ್ಞಾನಗಂಗಾ ಸೆಂಟ್ರಲ್‌ ಸ್ಕೂಲ್‌, ಬೆಳ್ಳಾರೆದರ್ಶಿತ್‌…

18 hours ago

ಕೋವಿಡ್ ಲಸಿಕೆಯಿಂದ ಹೃದಯಾಘಾತ ಸಂಭವಿಸುತ್ತಿಲ್ಲ | ಸಚಿವ ದಿನೇಶ್ ಗುಂಡೂರಾವ್

ರಾಜ್ಯದಲ್ಲಿ ಹೆಚ್ಚುತ್ತಿರುವ ಹೃದಯಾಘಾತ ಪ್ರಕರಣಗಳ ಕುರಿತು ವರದಿ ನೀಡಲು ರಚಿಸಲಾಗಿದ್ದ ತಜ್ಞರ ಸಮಿತಿ…

20 hours ago