Advertisement
MIRROR FOCUS

ನೇಪಾಳದಲ್ಲಿ ಕೈಗಾರಿಕಾ ಬಳಕೆಗೆ ಅಡಿಕೆ, ಏಲಕ್ಕಿ, ಕಾಳುಮೆಣಸು ಆಮದುಗೆ ಅನುಮತಿ

Share

ನೇಪಾಳ ಸರ್ಕಾರವು ಈ ಆರ್ಥಿಕ ವರ್ಷಕ್ಕೆ ಕೈಗಾರಿಕಾ ಉದ್ದೇಶಕ್ಕಾಗಿ ಅಡಿಕೆ , ಏಲಕ್ಕಿ , ಕಪ್ಪು ಮತ್ತು ಬಿಳಿ ಕಾಳುಮೆಣಸು ಆಮದುಗೆ ಅಧಿಕೃತ ಅನುಮತಿ ನೀಡಿದೆ. ಆದರೆ ಆಮದು ಮಾಡಲು ಇಚ್ಛಿಸುವ ಕೈಗಾರಿಕೆಗಳು ಉದ್ಯಮ ಇಲಾಖೆ (Department of Industry)ಯಿಂದ ಕಡ್ಡಾಯ ಅನುಮೋದನೆ ಪಡೆಯಬೇಕು. ಇಲಾಖೆಯು ಕೈಗಾರಿಕಾ ಅವಶ್ಯಕತೆ, ದೇಶೀಯ ಲಭ್ಯತೆ ಹಾಗೂ ಅಗತ್ಯ ಪ್ರಮಾಣವನ್ನು ಪರಿಶೀಲಿಸಿ ಅನುಮತಿ ನೀಡಲಿದೆ.

ಹೊಸವಾಗಿ ಸ್ಥಾಪಿತವಾಗಿರುವ ಕೈಗಾರಿಕೆಗಳು ತಮ್ಮ ಉದ್ಯಮ ನೋಂದಣಿ ದಾಖಲೆಗಳು, ತೆರಿಗೆ ವಿವರಗಳು ಹಾಗೂ ಉತ್ಪಾದನಾ ಯೋಜನೆಗಳನ್ನು ಸಲ್ಲಿಸಬೇಕಾಗುತ್ತದೆ. ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಕೈಗಾರಿಕೆಗಳು ಹಿಂದಿನ ವರ್ಷಗಳಲ್ಲಿ ಮಾಡಿರುವ ಆಮದು ಪ್ರಮಾಣ ಮತ್ತು ಬಳಕೆಯ ವಿವರಗಳನ್ನು ನೀಡುವುದು ಕಡ್ಡಾಯವಾಗಿದೆ ಎಂದು ಸರ್ಕಾರ ತಿಳಿಸಿದೆ. ಸರ್ಕಾರದ ಪ್ರಕಾರ, ಈ ಕ್ರಮವು ಆಮದು ಪದಾರ್ಥಗಳ ಸರಿಯಾದ ಕೈಗಾರಿಕಾ ಬಳಕೆಯನ್ನು ಖಚಿತಪಡಿಸುವುದು, ಅಕ್ರಮ ವ್ಯಾಪಾರವನ್ನು ನಿಯಂತ್ರಿಸುವುದು ಹಾಗೂ ದೇಶೀಯ ಉತ್ಪಾದನೆ ಮತ್ತು ಮೌಲ್ಯವರ್ಧಿತ ಕೈಗಾರಿಕೆಗಳಿಗೆ ಬೆಂಬಲ ನೀಡುವುದು ಎಂಬ ಉದ್ದೇಶ ಹೊಂದಿದೆ.

ನೇಪಾಳದ ಆಮದು ನಿರ್ಧಾರವು ಭಾರತದ ಅಡಿಕೆ ಮಾರುಕಟ್ಟೆಗೆ ಪರಿಣಾಮ ಬೀರಲಿದೆಯೇ ಎಂಬುದು ಈಗಿನ ಪ್ರಶ್ನೆ. ನೇಪಾಳ ಸರ್ಕಾರ ಕೈಗಾರಿಕಾ ಉದ್ದೇಶಕ್ಕಾಗಿ ಅಡಿಕೆ ಆಮದುಗೆ ಅಧಿಕೃತ ಅನುಮತಿ ನೀಡಿರುವುದು ದಕ್ಷಿಣ ಏಷ್ಯಾದ ಅಡಿಕೆ ವ್ಯಾಪಾರದಲ್ಲಿ ಹೊಸ ಸಂಚಲನ ತಂದಿದೆ. ಇದರಿಂದ ಭಾರತ, ವಿಶೇಷವಾಗಿ ಕರ್ನಾಟಕ ಮತ್ತು ಕೇರಳದ ಅಡಿಕೆ ಮಾರುಕಟ್ಟೆಗೆ ಪರಿಣಾಮ ಬೀರುವ ಸಾಧ್ಯತೆ ಇದೆ. ಭಾರತ ಮತ್ತು ನೇಪಾಳ ನಡುವೆ ಮುಕ್ತ ಗಡಿ ವ್ಯಾಪಾರ ಇರುವುದರಿಂದ, ನೇಪಾಳಕ್ಕೆ ಆಮದುಗೊಳ್ಳುವ ಅಡಿಕೆಯ ಒಂದು ಭಾಗ ಮರುರಪ್ತಾಗಿ ಭಾರತಕ್ಕೆ ಹರಿದುಬರುವ ಅಪಾಯ ಇರುತ್ತದೆ. ಕೈಗಾರಿಕಾ ಬಳಕೆ ಎಂದು ಆಮದು ಮಾಡಿದ ಅಡಿಕೆ,  ಅಕ್ರಮವಾಗಿ ಭಾರತೀಯ ಮಾರುಕಟ್ಟೆಗೆ ಪ್ರವೇಶಿಸಿದರೆ ಸ್ಥಳೀಯ ಉತ್ಪಾದಕರಿಗೆ ಬೆಲೆ ಕುಸಿತ ಉಂಟಾಗಬಹುದು. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

ಭಾರತ ಕೆಲವು ದೇಶಗಳಿಗೆ ಅಡಿಕೆ ರಫ್ತು ಮಾಡುತ್ತದೆ.  ನೇಪಾಳದಲ್ಲಿ ಕೈಗಾರಿಕೆಗಳಿಗೆ ಅಧಿಕೃತ ಆಮದು ಅವಕಾಶ ನೀಡಿದರೆ, ನೇಪಾಳ ಮಾರುಕಟ್ಟೆಯಲ್ಲಿ ಭಾರತೀಯ ಅಡಿಕೆಗೆ ಬೇಡಿಕೆ ಕಡಿಮೆಯಾಗಬಹುದು ಹಾಗೂ ಆಮದು ಅಡಿಕೆಯ ಮೇಲಿನ ಅವಲಂಬನೆ ಹೆಚ್ಚಬಹುದು, ಇದರಿಂದ ಭಾರತದ ರಫ್ತು ಅವಕಾಶ ಕಡಿಮೆಯಾಗುವ ಸಾಧ್ಯತೆ ಇದೆ.

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಮಿರರ್‌ ಡೆಸ್ಕ್

the rural mirror news

Published by
ಮಿರರ್‌ ಡೆಸ್ಕ್

Recent Posts

ಹವಾಮಾನ ವರದಿ | 22-08-2026 | ಕರಾವಳಿಯಲ್ಲಿ ಮಳೆ ಇಳಿಕೆ, 26ರಿಂದ ಮತ್ತಷ್ಟು ದುರ್ಬಲವಾಗುವ ಸಾಧ್ಯತೆ

ಕರ್ನಾಟಕದಲ್ಲಿ ಆಗಸ್ಟ್ 23ರಿಂದ 25ರವರೆಗೆ ಹಲವೆಡೆ ಅಲ್ಲಲ್ಲಿ ಸಾಮಾನ್ಯ ಮಳೆಯಷ್ಟೇ ನಿರೀಕ್ಷಿಸಲಾಗಿದ್ದು, ಕರಾವಳಿ…

5 hours ago

ಸೆಪ್ಟೆಂಬರ್‌ನಲ್ಲಿ ಪಿಎಂ ಕಿಸಾನ್ ಹಣ ಬರಬೇಕೇ? ರೈತರು ಈಗಲೇ e-KYC ಪೂರ್ಣಗೊಳಿಸಿ

PM-Kisan ಯೋಜನೆಯ 24ನೇ ಕಂತಿನ ಹಣ ಪಡೆಯಲು ಅರ್ಹ ರೈತರು ಬಯೋಮೆಟ್ರಿಕ್ ಅಥವಾ…

12 hours ago

ಬೆಳೆ ವಿಮೆಗೆ ರೈತರಿಗೆ ಮತ್ತೊಂದು ಅವಕಾಶ : ಆಗಸ್ಟ್ 31ರವರೆಗೆ ನೋಂದಣಿ ಅವಧಿ ವಿಸ್ತರಣೆ

ಮುಂಗಾರು ಹಂಗಾಮಿನ ಭತ್ತ ಸೇರಿದಂತೆ ಬೆಳೆಗಳಿಗೆ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ…

23 hours ago

ಹವಾಮಾನ ವರದಿ | 21-08-2026 | ಕರಾವಳಿಯಲ್ಲಿ ಆ.23–25 ರಂದು ಮಳೆ ಹೆಚ್ಚಳ ಸಾಧ್ಯತೆ – ಆ.26ರವರೆಗೆ ಮೋಡ–ಮಳೆ

ಕರಾವಳಿ ಕರ್ನಾಟಕದಲ್ಲಿ ಆ.23ರಿಂದ 25ರವರೆಗೆ ಮಳೆಯ ಪ್ರಮಾಣ ಸ್ವಲ್ಪ ಹೆಚ್ಚಾಗುವ ಸಾಧ್ಯತೆಯಿದ್ದು, ಆ.26ರವರೆಗೂ…

1 day ago

ನಿಮ್ಮ ಹೆಸರಲ್ಲಿ 9 ಸಿಮ್‌ಗಳಿವೆಯೇ? ಆಗಸ್ಟ್ 24ರಿಂದ ಹೊಸ ನಿಯಮ – ಹೆಚ್ಚುವರಿ ನಂಬರ್‌ಗೆ ಬ್ರೇಕ್

ಆಗಸ್ಟ್ 24ರಿಂದ ಒಬ್ಬ ವ್ಯಕ್ತಿಯ ಹೆಸರಿನಲ್ಲಿ 9 ಮೊಬೈಲ್ ಸಂಪರ್ಕಗಳ ಮಿತಿಯನ್ನು ಮೀರಿ…

1 day ago

ತೆಂಗಿನ ಮರದಿಂದ 3 ಕೋಟಿ ಜನರಿಗೆ ಬದುಕು…!, ಈಗ ₹7,038 ಕೋಟಿ ರಫ್ತು!

ಭಾರತದ ತೆಂಗು ವಲಯ ಈಗ ಕಾಯಿ ಮಾರಾಟದಿಂದ ಮೌಲ್ಯವರ್ಧಿತ ಉತ್ಪನ್ನಗಳ ಜಾಗತಿಕ ಮಾರುಕಟ್ಟೆಯತ್ತ…

1 day ago