ಸ್ಯಾಂಡಲ್ವುಡ್ಗೆ ಒಂದು ಫಿಲ್ಮ್ ಸಿಟಿ ಬೇಕು ಎಂಬುದು ಹಳೆಯ ಬೇಡಿಕೆ. ಈ ಕೋರಿಕೆ ಇಲ್ಲಿಯವರೆಗೂ ಈಡೇರಿಲ್ಲ. ಇದರ ಜೊತೆಗೆ ಈ ಫಿಲ್ಮ್ ಸಿಟಿಯನ್ನು ಎಲ್ಲಿ ನಿರ್ಮಾಣ ಮಾಡಬೇಕು ಎನ್ನುವ ಬಗ್ಗೆಯೂ ಸಾಕಷ್ಟು ಚರ್ಚೆಗಳು ನಡೆದಿವೆ. ಕೆಲವರು ಬೆಂಗಳೂರಿನ ಹೆಸರನ್ನು ಸೂಚಿಸಿದರೆ, ಕೆಲವರು ಮೈಸೂರಿನ ಹೆಸರನ್ನು ಸೂಚಿಸಿದ್ದಾರೆ. ಈ ಫಿಲ್ಮ್ ಸಿಟಿ ಬೆಂಗಳೂರಿನಲ್ಲೇ ನಿರ್ಮಾಣ ಆಗಬೇಕು ಎಂಬುದು ರಿಷಬ್ ಶೆಟ್ಟಿ ಒತ್ತಾಯ.
ಬೆಂಗಳೂರಿನಲ್ಲಿ ನಡೆದ ಸುಶಾಸನ್ ಗರೀಬ್ ಕಲ್ಯಾಣ್ ರಾಷ್ಟ್ರೀಯ ಸಮಾವೇಶದಲ್ಲಿ ರಿಷಬ್ ಭಾಗಿ ಆಗಿದ್ದರು. ಈ ವೇಳೆ ಮಾತನಾಡಿದ ಅವರು, ‘ಪ್ರೇಕ್ಷಕರನ್ನು ತಲುಪುವುದು ಒಂದು ಸವಾಲಾಗಿದೆ. ಸರ್ಕಾರದಿಂದ ನಮಗೆ ಸಾಕಷ್ಟು ಬೆಂಬಲ ಸಿಗುತ್ತಿದೆ. ಇದರ ಜೊತೆ ಬೆಂಗಳೂರಿನಲ್ಲಿ ಫಿಲ್ಮ್ ಸಿಟಿ ನಿರ್ಮಾಣ ಆಗಬೇಕು ಎಂಬುದು ಸೇರಿ ಸರ್ಕಾರದ ಬಳಿ ಕೆಲವು ಮನವಿ ಇದೆ’ ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ.
ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷದಿಂದ ಜಾಗತಿಕ ಗೊಬ್ಬರ ಸರಬರಾಜು ವ್ಯವಸ್ಥೆಯಲ್ಲಿ ಅನಿಶ್ಚಿತತೆ ಉಂಟಾಗಿದ್ದು, ಭಾರತದಲ್ಲಿ…
ಕೇರಳದಲ್ಲಿ ಕೊಬ್ಬರಿ ದರ MSP ಗಿಂತ ಕೆಳಗೆ ಇಳಿದಿದ್ದು, ರೈತರು ಪ್ರತಿ ಕೆ.ಜಿಗೆ…
ಹವಾಮಾನ ಬದಲಾವಣೆಯಿಂದ ಎಲ್ ನಿನೋ ಮತ್ತು ಲಾ ನಿನಾ ಘಟನೆಗಳ ವರ್ತನೆ ಬದಲಾಗುತ್ತಿದ್ದು,…
ಉತ್ತರ ಪ್ರದೇಶ ಸರ್ಕಾರ ಪ್ರತಿ ಜಿಲ್ಲೆಯಲ್ಲಿ ಒಂದು ಪ್ರಮುಖ ಗೋಆಧಾರಿತ ಉದ್ಯಮ ಅಭಿವೃದ್ಧಿಪಡಿಸಲು…
ಭಾರತದಲ್ಲಿ ಹೆಚ್ಚುತ್ತಿರುವ ಅತಿವೃಷ್ಟಿ, ಬರ ಮತ್ತು ಉಷ್ಣ ಅಲೆಗಳಂತಹ ತೀವ್ರ ಹವಾಮಾನ ಘಟನೆಗಳಿಗೆ…
ಗಂಜಿಮಠದ 104 ಎಕರೆ ಪ್ಲಾಸ್ಟಿಕ್ ಪಾರ್ಕ್ ಯೋಜನೆಗೆ ಮತ್ತೆ ವೇಗ ಸಿಕ್ಕಿದ್ದು, ಸಂಸದ…