2020 ರ ಆರಂಭದಲ್ಲೇ ಶುರುವಾದ ಕೊರೊನಾ ಅಬ್ಬರ ದಿನದಿಂದ ದಿನಕ್ಕೆ ಹೆಚ್ಚಾಯಿತು. ವುಹಾನ್ ನಲ್ಲಿ ಆರಂಭವಾದ ಕೋವಿಡ್ ಕೆಲವೇ ದಿನಗಳಲ್ಲಿ ಪ್ರಪಂಚದೆಲ್ಲೆಡೆ ವ್ಯಾಪಿಸಿತು. ಕಂಡು ಕೇಳರಿಯದ ಪರಿಣಾಮಗಳನ್ನು ಎದುರಿಸಬೇಕಾಯಿತು. ಅನಿರೀಕ್ಷಿತ ಪರಿಸ್ಥಿತಿ.
ಮನುಜನ ದುರಾಸೆ ಹೆಚ್ಚಾಯಿತೋ, ಪ್ರಕೃತಿ ಬದಲಾವಣೆ ಬಯಸಿತೋ ಅರಿಯದು. ಬದುಕಿನ ಏಕತಾನತೆಯಿಂದ ಬೇಸತ್ತವರು ಒಂದು ಬದಲಾವಣೆ ಬಯಸಿದರು. ಕೊರೊನಾ ಬಂದು ಎಲ್ಲವನ್ನೂ ಬದಲಿಸಿ ಬಿಟ್ಟಿತು. 2020 ಯಾರು ಕೂಡ ಮರೆಯಲಾರದ ವರ್ಷವೆಂದೇ ದಾಖಲಾಯಿತು.
ಬದಲಾದ ಜೀವನ ಶೈಲಿಗೆ ಒಗ್ಗಿಕೊಂಡ ಜನತೆ 2021 ನ್ನು ಹೊಸ ನಿರೀಕ್ಷೆಯೊಂದಿಗೆ ಸ್ವಾಗತಿಸಲು ಸಜ್ಜಾಗಿಯಾಗಿದೆ. ಇಂದಿನ ಜನರ ಆಯ್ಕೆಗಳು, ಆದ್ಯತೆಗಳು ಬದಲಾಗಿವೆ. ದುಬಾರಿ ಜೀವನ ಶೈಲಿಗಿಂತ, ಸರಳ ಆರೋಗ್ಯಕರ ಪರಿಸರವೇ ಮುಖ್ಯ ಆಯ್ಕೆಗಳಾಗಿವೆ. ಆಹಾರದ ವಿಷಯದಲ್ಲೂ ಮನೆ ಆಹಾರದತ್ತಲೇ ಒಲವು ಮೂಡಿದೆ. ಕಹಿ , ಒಗರು ಆದರೂ ಅಮ್ಮ ಮಾಡಿ ಕೊಡುವ ಕಷಾಯವೇ ಅಮೃತವಾಗಿದೆ.
ಹೊಸ ವರುಷದ ಹೊಸ್ತಿಲಲ್ಲಿ ನಿಂತಿದ್ದೇವೆ, ನವ ಕನಸುಗಳೊಂದಿಗೆ. ಒಳ್ಳೆಯ ಮನಸಿನಿಂದ, ಸುಂದರ ಕಲ್ಪನೆಗಳೊಂದಿಗೆ 2021ನೇಯ ವರ್ಷವನ್ನು ಸ್ವಾಗತಿಸೋಣ. ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು.
ಅಶ್ವಿನಿಮೂರ್ತಿ ಅಯ್ಯನಕಟ್ಟೆ
ಕೋಲಾರದಿಂದ ಬೆಂಗಳೂರಿಗೆ ಸಾಗಿಸಲಾಗುತ್ತಿದ್ದ ಸುಮಾರು 10 ಟನ್ ಸಿಂಥೆಟಿಕ್ ಅಡಿಕೆಯನ್ನು ಅಧಿಕಾರಿಗಳು ವಶಪಡಿಸಿಕೊಂಡಿರುವುದಾಗಿ…
ಮಂಗಳೂರಿನಲ್ಲಿ ಸೆ.18ರಂದು ನಡೆಯಲಿರುವ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಅಡಿಕೆ ಬೆಳೆಗಾರರ ಸಮಸ್ಯೆಗಳಿಗೆ…
ಬೆಂಗಳೂರಿನಲ್ಲಿ ಮಂಗಳವಾರ ಸಂಜೆ ಏಕಾಏಕಿ ಸುರಿದ ಭಾರೀ ಮಳೆಗೆ ಹಲವು ರಸ್ತೆಗಳು ಜಲಾವೃತವಾಗಿ…
ಕರ್ನಾಟಕದಲ್ಲಿ ಸದ್ಯ ಬಿಸಿಲು ಮುಂದುವರಿದಿದ್ದರೂ ಸೆ.16ರಿಂದ ಮಲೆನಾಡು, ಸೆ.17ರಿಂದ ಉತ್ತರ ಒಳನಾಡಿನಲ್ಲಿ ಮೋಡ…
ಸರಿಗಮಪ ಲಿಟಲ್ ಚಾಂಪ್ಸ್ 2026ರ ವಿಜೇತ ಅಶ್ಮಿತ್ ಎ. ಜೆ. ಅವರನ್ನು ಮಂಗಳೂರಿನ…
ಕರ್ನಾಟಕದಲ್ಲಿ ಸದ್ಯ ಬಿಸಿಲು ಮುಂದುವರಿದಿದ್ದರೂ ಸೆ.18ರಿಂದ ಮಳೆಯ ವ್ಯಾಪ್ತಿ ಹೆಚ್ಚಾಗುವ ಸೂಚನೆಗಳಿವೆ. ಸೆ.19ರಿಂದ…