Advertisement
MIRROR FOCUS

ಹೊಸವರ್ಷದ ನಿರೀಕ್ಷೆಗಳು ನಿಜವಾಗಲಿ

Share
ರಿಸ್ಥಿತಿ ಬದಲಾಗಿದೆ, ಎಂದಿನಂತಿಲ್ಲ. ಹೊಸವರ್ಷದ ಸ್ವಾಗತಕ್ಕೆ ವಿಶೇಷ ತಯಾರಿಯೊಂದಿಗೆ ಸಿದ್ಧವಾಗುತ್ತಿದ್ದ ಮನಸುಗಳು ಸುಮ್ಮನಾಗಿವೆ. ನಿನ್ನೆ ಮೊನ್ನೆಯವರೆಗೆ ತಣ್ಣಗಾಗಿದ್ದ ಕೊರೊನಾ ಮತ್ತೆ ಹೊಸ ರೂಪದಲ್ಲಿ ಪತ್ತೆಯಾಗುವುದರೊಂದಿಗೆ ಸ್ವಲ್ಪವೇ ಗರಿಕೆದರಿದ್ದ ಉತ್ಸಾಹ ಅಲ್ಲಿಗೆ ಕಮರಿದೆ.

2020 ರ ಆರಂಭದಲ್ಲೇ ಶುರುವಾದ ಕೊರೊನಾ ಅಬ್ಬರ ದಿನದಿಂದ ದಿನಕ್ಕೆ ಹೆಚ್ಚಾಯಿತು. ವುಹಾನ್ ನಲ್ಲಿ ಆರಂಭವಾದ ಕೋವಿಡ್ ಕೆಲವೇ ದಿನಗಳಲ್ಲಿ ಪ್ರಪಂಚದೆಲ್ಲೆಡೆ ವ್ಯಾಪಿಸಿತು. ಕಂಡು ಕೇಳರಿಯದ ಪರಿಣಾಮಗಳನ್ನು ಎದುರಿಸಬೇಕಾಯಿತು. ಅನಿರೀಕ್ಷಿತ ಪರಿಸ್ಥಿತಿ.

ಮನುಜನ ದುರಾಸೆ ಹೆಚ್ಚಾಯಿತೋ, ಪ್ರಕೃತಿ ಬದಲಾವಣೆ ಬಯಸಿತೋ ಅರಿಯದು.‌ ಬದುಕಿನ ಏಕತಾನತೆಯಿಂದ ಬೇಸತ್ತವರು ಒಂದು ಬದಲಾವಣೆ ಬಯಸಿದರು‌‌. ಕೊರೊನಾ ಬಂದು ಎಲ್ಲವನ್ನೂ ಬದಲಿಸಿ ಬಿಟ್ಟಿತು. 2020 ಯಾರು ಕೂಡ ಮರೆಯಲಾರದ ವರ್ಷವೆಂದೇ ದಾಖಲಾಯಿತು.

ಬದಲಾದ ಜೀವನ ಶೈಲಿಗೆ ಒಗ್ಗಿಕೊಂಡ ಜನತೆ 2021 ನ್ನು ಹೊಸ ನಿರೀಕ್ಷೆಯೊಂದಿಗೆ ಸ್ವಾಗತಿಸಲು ಸಜ್ಜಾಗಿಯಾಗಿದೆ. ಇಂದಿನ ಜನರ ಆಯ್ಕೆಗಳು, ಆದ್ಯತೆಗಳು ಬದಲಾಗಿವೆ. ದುಬಾರಿ ಜೀವನ ಶೈಲಿಗಿಂತ, ಸರಳ ಆರೋಗ್ಯಕರ ಪರಿಸರವೇ ಮುಖ್ಯ ಆಯ್ಕೆಗಳಾಗಿವೆ. ಆಹಾರದ ವಿಷಯದಲ್ಲೂ ಮನೆ ಆಹಾರದತ್ತಲೇ ಒಲವು ಮೂಡಿದೆ. ಕಹಿ , ಒಗರು ಆದರೂ ಅಮ್ಮ ಮಾಡಿ ಕೊಡುವ ಕಷಾಯವೇ ಅಮೃತವಾಗಿದೆ.

ಹೊಸ ವರುಷದ ಹೊಸ್ತಿಲಲ್ಲಿ ನಿಂತಿದ್ದೇವೆ, ನವ ಕನಸುಗಳೊಂದಿಗೆ. ಒಳ್ಳೆಯ ಮನಸಿನಿಂದ, ಸುಂದರ ಕಲ್ಪನೆಗಳೊಂದಿಗೆ 2021ನೇಯ ವರ್ಷವನ್ನು ಸ್ವಾಗತಿಸೋಣ. ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು.

ಅಶ್ವಿನಿಮೂರ್ತಿ ಅಯ್ಯನಕಟ್ಟೆ

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

Published by
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

Recent Posts

ಜಗತ್ತು ನಮ್ಮ ಜೊತೆಗಿದೆ ಎಂಬ ಭ್ರಮೆ

ಜಗತ್ತು ಸದಾ ನಮ್ಮ ಜೊತೆಗಿರುತ್ತದೆ ಎಂಬ ನಿರೀಕ್ಷೆಗಿಂತ, ಪರಿಸ್ಥಿತಿ ಬದಲಾದರೂ ನಮ್ಮ ದಾರಿಯಲ್ಲಿ…

16 hours ago

ತೆಂಗಿನ ಎಣ್ಣೆಯಿಂದ ವಿಮಾನದ ಇಂಧನ ? ಜೆಟ್‌ ಎಂಜಿನ್‌ ಪರೀಕ್ಷೆಯಲ್ಲಿ ಕುತೂಹಲ ಮೂಡಿಸಿದ ಫಲಿತಾಂಶ

ಮಾರುಕಟ್ಟೆಗೆ ಯೋಗ್ಯವಲ್ಲದ ತೆಂಗಿನಕಾಯಿಯಿಂದ ಪಡೆದ ತೆಂಗಿನ ಎಣ್ಣೆಯನ್ನು ಬಳಸಿ ಸುಸ್ಥಿರ ವಿಮಾನ ಇಂಧನ…

22 hours ago

ಕೃಷಿ ಇನ್ನು ಕೇವಲ ಬೆಳೆ ಬೆಳೆಯುವುದಲ್ಲ – ಯುವಕರಿಗೆ ಸ್ಟಾರ್ಟ್‌ಅಪ್ ಕ್ಷೇತ್ರ

ಕೃಷಿ ಮತ್ತು ಕೃಷಿ ಸಂಬಂಧಿತ ಕ್ಷೇತ್ರಗಳು ಯುವ ಉದ್ಯಮಶೀಲತೆಗೆ ಮುಂದಿನ ದೊಡ್ಡ ಅವಕಾಶಗಳಾಗಿದ್ದು,…

1 day ago

ಬರಪೀಡಿತ ಪ್ರದೇಶಗಳ ರೈತರಿಗೆ ಗುಡ್‌ನ್ಯೂಸ್ ; ಬೆಳೆ ವಿಮೆ ನೋಂದಣಿ ಅವಧಿ ವಿಸ್ತರಣೆ

ಕರ್ನಾಟಕದ ಬರಪೀಡಿತ ಪ್ರದೇಶಗಳಲ್ಲಿ ಬೆಳೆ ವಿಮೆ ನೋಂದಣಿ ಹಾಗೂ ಪ್ರೀಮಿಯಂ ಕಡಿತದ ಅವಧಿಯನ್ನು…

1 day ago

ರಾಜ್ಯದ 102 ತಾಲೂಕುಗಳಲ್ಲಿ ಬರದ ಛಾಯೆ – ತಿಂಗಳಾಂತ್ಯಕ್ಕೆ ಕೇಂದ್ರಕ್ಕೆ ವರದಿ ಸಲ್ಲಿಕೆ

ಕರ್ನಾಟಕದ 102 ತಾಲೂಕುಗಳಲ್ಲಿ ಬರ ಪರಿಸ್ಥಿತಿ ಉಂಟಾಗಿದ್ದು, ಈ ತಿಂಗಳಾಂತ್ಯಕ್ಕೆ ಕೇಂದ್ರ ಸರ್ಕಾರಕ್ಕೆ…

1 day ago

ಮಂಗಳೂರಿನ ಅಶ್ಮಿತ್ ಎ.ಜೆ. ಅವರಿಗೆ ‘ಸರಿಗಮಪ 2026’ರ ಕಿರೀಟ

ಮಂಗಳೂರಿನ ಅಶ್ಮಿತ್ ಎ.ಜೆ. ಅವರು ಝೀ ಕನ್ನಡದ ‘ಸರಿಗಮಪ 2026’ರ ವಿಜೇತರಾಗಿ ₹20…

2 days ago