ಅಡಿಕೆ ಬೆಳೆಗಾರರಿಗೆ ಮಾಹಿತಿ…| ಅಡಿಕೆ ಹಾಳಾಗದಂತೆ ಮಾತ್ರೆ ಹಾಕಬೇಡಿ | ಪಿಂಗಾರ ಸಂಸ್ಥೆ ಮಾಡಿರುವ ಅಧ್ಯಯನ ಇಲ್ಲಿದೆ.. |

March 8, 2023
12:38 AM

ಅಡಿಕೆ ಹಾಳಾಗದಂತೆ ದಾಸ್ತಾನು ಮಾಡುವುದು ಹೇಗೆ? ಈ ಬಗ್ಗೆ ಅಡಿಕೆ ಬೆಳೆಗಾರರಲ್ಲಿ ಇರುವ ಬಹುವಾದ ಚರ್ಚೆಗೆ ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದ ಪಿಂಗಾರ ರೈತ ಉತ್ಪಾದಕ ಸಂಸ್ಥೆ ಪರಿಹಾರವೊಂದನ್ನು ಕಂಡುಕೊಂಡಿದೆ. ಅಡಿಕೆ ದಾಸ್ತಾನು ಬಗ್ಗೆಯೇ ಅಧ್ಯಯನ ನಡೆಸಿದೆ, ಅಡಿಕೆ ದಾಸ್ತಾನು ಮಾಡಲು ಮಾತ್ರೆ ಹಾಕದೆಯೇ ಹೊಸದೊಂದು ಪ್ರಯತ್ನದಲ್ಲಿ ಯಶಸ್ಸಾಗಿದೆ. ನೈಟ್ರೋಜನ್‌ ಗ್ಯಾಸ್‌ ಬಳಕೆ ಈ ಪ್ರಯತ್ನದ ಹೆಜ್ಜೆ.

Advertisement
Advertisement

ಅಡಿಕೆ ಬೆಳೆಗಾರರ ಎಲ್ಲರಲ್ಲೂ ಇರುವ ಚರ್ಚೆ , ಅಡಿಕೆ ಹಾಳಾಗದಂತೆ ದಾಸ್ತಾನು ಇಡುವುದು  ಹೇಗೆ ?. ಎಲ್ಲರಲ್ಲೂ ಇರುವ ಸುಲಭ ವಿಧಾನ ಅಡಿಕೆಗೆ ಮಾತ್ರೆ ಹಾಕಿ ದಾಸ್ತಾನು ಇಡುವುದು. ಈಚೆಗೆ ಕೆಲವು ಸಮಯಗಳಿಂದ ಈ ಬಗ್ಗೆಯೇ ಚರ್ಚೆಯಾಗುತ್ತಿದೆ. ಅಡಿಕೆಗೆ ಹಾಕುವ ಮಾತ್ರೆಯಿಂದಾಗಿಯೇ ಅಡಿಕೆ ಹಾನಿಕಾರಕವಾಗುತ್ತಿದೆ ಎನ್ನುವುದು ಚರ್ಚೆಯ ವಿಷಯ. ಹಾಗಿದ್ದರೆ ಏನು ಮಾಡಬಹುದು ಪರ್ಯಾಯ ಎನ್ನುವುದಕ್ಕೆ ಉತ್ತರ ಇದ್ದಿರಲಿಲ್ಲ. ಇದೀಗ ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದ ಪಿಂಗಾರ ರೈತ ಉತ್ಪಾದಕ ಸಂಸ್ಥೆ ಈ ಬಗ್ಗೆಯೇ ಅಧ್ಯಯನ ನಡೆಸಿದೆ, ಅಡಿಕೆ ದಾಸ್ತಾನು ಮಾಡಲು ಮಾತ್ರೆ ಹಾಕದೆಯೇ ಹೊಸದೊಂದು ಪ್ರಯತ್ನದಲ್ಲಿ ಯಶಸ್ಸಾಗಿದೆ. (ರಾಮ್‌ ಕಿಶೋರ್‌ ಮಂಚಿ ಅವರ ಸಂದರ್ಶನದ ಯೂಟ್ಯೂಬ್‌ ಲಿಂಕ್‌ ಇಲ್ಲಿದೆ…..)

ಪಿಂಗಾರ ಸಂಸ್ಥೆಯು ಕಳೆದ ವರ್ಷದಿಂದಲೇ ಈ ಅಧ್ಯಯನ ಆರಂಭ ಮಾಡಿದೆ. ಅಡಿಕೆ ದಾಸ್ತಾನು ಮಾಡಲು ಮಾತ್ರೆಯ ಬದಲಾಗಿ ನೈಟ್ರೋಜನ್‌ ಗ್ಯಾಸ್‌ ಬಳಕೆ ಮಾಡಿದೆ. ದಾಸ್ತಾನು ಕೋಣೆಯ ಒಳಗಡೆ ಗಾಳಿಯಾಡದಂತೆ ಎಚ್ಚರಿಸಿ ವಹಿಸಿ, ದಾಸ್ತಾನು ಕೊಠಡಿಯ ಒಳಗೆ ನೈಟ್ರೋಜನ್‌ ಗ್ಯಾಸ್‌ ತುಂಬಿಸುವ ಮೂಲಕ ಯಾವುದೇ ಕೀಟಗಳು ಕ್ರಿಯಾಶೀಲವಾಗದಂತೆ ಮಾಡುವ ಕೆಲಸವನ್ನು ಮಾಡಿದೆ. ಹೀಗಾಗಿ ಅಡಿಕೆ ಯಾವುದೇ ರಾಸಾಯನಿಕ ಇಲ್ಲದೆಯೇ ಗುಣಮಟ್ಟ ಕಾಯ್ದುಕೊಂಡಿರುವುದು  ಪಿಂಗಾರ ಸಂಸ್ಥೆ ಗಮನಿಸಿದೆ. ಇದೀಗ ಬೆಳೆಗಾರರಿಗೂ ಈ ಮಾಹಿತಿ ನೀಡಿ, ಮುಂದೆ ಆಸಕ್ತ ಕೃಷಿಕರ ಅಡಿಕೆಯನ್ನೂ ದಾಸ್ತಾನು ಇರಿಸಲು ಹೆಜ್ಜೆ ಇರಿಸಿದೆ.

ರಾಮ್‌ ಕಿಶೊರ್‌ ಮಂಚಿ

ಈ ಪ್ರಯತ್ನ ಎಲ್ಲೆಡೆಯೂ ಮಾಡಬಹುದಾಗಿದೆ. ಆಹಾರ ಪದಾರ್ಥಗಳ ರಕ್ಷಣೆ, ದಾಸ್ತಾನುನಲ್ಲಿಯೂ ಬಳಕೆ ಮಾಡಬಹುದು  ಎಂದು ಪಿಂಗಾರ ಸಂಸ್ಥೆ ಅಧ್ಯಕ್ಷ ರಾಮ್‌ ಕಿಶೋರ್‌ ಮಂಚಿ ಹೇಳಿದ್ದಾರೆ. ಅಡಿಕೆಯು ಯಾವುದೇ ಹಾನಿಯಾಗದೆ ಗುಣಮಟ್ಟವನ್ನು ಕಾಯ್ದುಕೊಂಡಿದೆ ಎಂದು ಹೇಳಿದ್ದಾರೆ. ವಿವಿಧ ಬಗೆಯ ಅಡಿಕೆಯನ್ನು ಈ ಪ್ರಯೋಗದಲ್ಲಿ ಒಳಪಡಿಸಲಾಗಿದೆ, ಎಲ್ಲಾ ಬಗೆಯ ಅಡಿಕೆಯೂ ಅದೇ ಗುಣಮಟ್ಟವನ್ನು ಕಾಯ್ದುಕೊಂಡಿದೆ ಎಂದು  ಹೇಳುತ್ತಾರೆ ರಾಮ್‌ ಕಿಶೋರ್‌ ಮಂಚಿ.

 

ನಿಮ್ಮ ಅಭಿಪ್ರಾಯಗಳಿಗೆ :

Advertisement
Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

ಇದನ್ನೂ ಓದಿ

ಅಡಿಕೆಯ ಬಗ್ಗೆ ಹೊಸ ಅಧ್ಯಯನ | ಕ್ಯಾನ್ಸರ್‌ ಅಷ್ಟೇ ಅಲ್ಲ… ಹೃದಯ ರೋಗ ಮತ್ತು ಮೆಟಾಬಾಲಿಕ್ ಸಮಸ್ಯೆಯೂ ಇದೆ…!
February 12, 2026
7:47 AM
by: ದ ರೂರಲ್ ಮಿರರ್.ಕಾಂ
ರಾಜ್ಯದಲ್ಲಿ ಹೆಚ್ಚುತ್ತಿರುವ ಮಾನವ–ವನ್ಯಜೀವಿ ಸಂಘರ್ಷ | ಶಾಶ್ವತ ಪರಿಹಾರಕ್ಕೆ ಕೇಂದ್ರದ ಗಮನ ಸೆಳೆದು ಕುಮಾರಸ್ವಾಮಿ ಮನವಿ
February 12, 2026
7:04 AM
by: ಮಿರರ್‌ ಡೆಸ್ಕ್
ಮೆಕ್ಕೆಜೋಳ ಖರೀದಿ ಕೇಂದ್ರಗಳಿಂದ 3,412 ರೈತರಿಗೆ ಲಾಭ
February 12, 2026
6:54 AM
by: ದ ರೂರಲ್ ಮಿರರ್.ಕಾಂ
ಜಲಜೀವನ್ ಮಿಷನ್ ವೇಗಕ್ಕೆ ಕಟ್ಟುನಿಟ್ಟಿನ ಗಡಿ : ಉಳಿದ ಕಾಮಗಾರಿಗಳು ತ್ವರಿತ ಪೂರ್ಣಗೊಳಿಸಿ
February 12, 2026
6:47 AM
by: ಮಿರರ್‌ ಡೆಸ್ಕ್

You cannot copy content of this page - Copyright -The Rural Mirror