ರಬ್ಬರ್ ಬೆಲೆಯನ್ನು ಕೆಜಿಗೆ 300 ರೂ.ಗೆ ಹೆಚ್ಚಿಸುವ ಯಾವುದೇ ಪ್ರಸ್ತಾವನೆ ಸರ್ಕಾರದ ಪರಿಶೀಲನೆಯಲ್ಲಿಲ್ಲ ಎಂದು ಕೇಂದ್ರ ಸಚಿವಾಲಯ ಲೋಕಸಭೆಗೆ ಬುಧವಾರ ತಿಳಿಸಿದೆ.
ಇಡುಕ್ಕಿ ಸಂಸದ ಕುರಿಯಾಕೋಸ್ ಅವರ ಪ್ರಶ್ನೆಗೆ ಲಿಖಿತ ಉತ್ತರದಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ರಾಜ್ಯ ಸಚಿವೆ ಅನುಪ್ರಿಯಾ ಪಟೇಲ್ ಮಾಹಿತಿ ನೀಡಿದರು. ಪ್ರಸ್ತುತ, ರಬ್ಬರ್ ಧಾರಣೆ ಏರಿಕೆಯ ಯಾವುದೇ ಪ್ರಸ್ತಾಪವು ಪರಿಗಣನೆಯಲ್ಲಿಲ್ಲ ಎಂದು ಸಚಿವರು ಹೇಳಿದರು.
ಕೇರಳದ ರಬ್ಬರ್ ರೈತರನ್ನು ಬೆಂಬಲಿಸಲು ಕೇರಳವು ಹಣಕಾಸಿನ ನೆರವು ಕೋರಿದೆಯೇ ಎಂದು ಸಂಸದರು ಕೇಳಿದ್ದರು. ಇದಕ್ಕೆ ಉತ್ತರವಾಗಿ ಪಟೇಲ್, ವಾಣಿಜ್ಯ ಇಲಾಖೆಯ ಅಡಿಯಲ್ಲಿ ರಬ್ಬರ್ ಮಂಡಳಿಯು ತನ್ನ ವಿವಿಧ ಯೋಜನೆಗಳ ಅಡಿಯಲ್ಲಿ ಹೊಸ ಗಿಡನೆಡುವಿಕೆ ಮತ್ತು ಮರು ನೆಡುವಿಕೆಗೆ ಸಬ್ಸಿಡಿಯನ್ನು ಒದಗಿಸುತ್ತದೆ. ರಬ್ಬರ್ ಬೋರ್ಡ್ ರಬ್ಬರ್ ಮರಗಳನ್ನು ಟ್ಯಾಪಿಂಗ್ ಮಾಡಲು ಮತ್ತು ಶೀಟ್ ರಬ್ಬರ್ಗೆ ಸಂಸ್ಕರಿಸಲು ತರಬೇತಿಯನ್ನು ಸಹ ನೀಡುತ್ತದೆ. ರಬ್ಬರ್ ಮಂಡಳಿಯು ಉತ್ಪಾದಕತೆಯನ್ನು ಸುಧಾರಿಸಲು ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ, ಉದಾಹರಣೆಗೆ ಟ್ಯಾಪಿಂಗ್ ದಿನಗಳ ಸಂಖ್ಯೆಯನ್ನು ಹೆಚ್ಚಿಸಲು ಮಳೆ ರಕ್ಷಣೆಗೆ ಪ್ಲಾಸ್ಟಿಕ್ ಒದಗಿಸುವುದು, ರೋಗಗಳನ್ನು ತಡೆಗಟ್ಟುವುದು ಇತ್ಯಾದಿಗಳನ್ನು ಮಾಡಲಾಗಿದೆ ಎಂದರು.
ರಬ್ಬರ್ ಆಮದನ್ನು ನಿಯಂತ್ರಿಸುವ ಕ್ರಮಗಳ ಬಗ್ಗೆ ಸಂಸದರು ಕೇಳಿರುವ ಪ್ರಶ್ನೆಗೆ ಮಾಹಿತಿ ನೀಡಿದ ಸಚಿವರು, ಸರ್ಕಾರವು 30.04.2015 ರಿಂದ ರಬ್ಬರ್ ಆಮದಿನ ಮೇಲಿನ ಸುಂಕವನ್ನು ಬದಲು ಮಾಡಿದೆ. ರಬ್ಬರ್ ಆಮದು ಮಾಡಿಕೊಳ್ಳಲು ಬಂದರು ಪ್ರವೇಶವನ್ನು ಚೆನ್ನೈ ಮತ್ತು ಜವಾಹರಲಾಲ್ ನೆಹರು ಬಂದರುಗಳಿಗೆ ನಿರ್ಬಂಧಿಸಲಾಗಿದೆ . ಇದಲ್ಲದೆ, 2023-24ರ ಕೇಂದ್ರ ಬಜೆಟ್ನಲ್ಲಿ, ಸಂಯುಕ್ತ ರಬ್ಬರ್ ಮೇಲಿನ ಕಸ್ಟಮ್ ಸುಂಕದ ದರವನ್ನು 10% ರಿಂದ 25% ಕ್ಕೆ ಹೆಚ್ಚಿಸಲಾಗಿದೆ. ಬೇರೆ ಯಾವುದೇ ಪ್ರಸ್ತಾವನೆಗಳು ಪರಿಗಣನೆಯಲ್ಲಿಲ್ಲ, ಎಂದು ಉತ್ತರದಲ್ಲಿ ತಿಳಿಸಿದ್ದಾರೆ.
ರಬ್ಬರ್ ದರವನ್ನು ಕೆಜಿಗೆ 300 ರೂ.ಗೆ ಹೆಚ್ಚಿಸಿದರೆ ಕೇರಳದಿಂದ ಬಿಜೆಪಿಗೆ ಲೋಕಸಭಾ ಸದಸ್ಯ ಸಿಗುತ್ತದೆ ಎಂದು ಈಚೆಗೆ ಕೇರಳದ ಬಿಷಪ್ ಒಬ್ಬರು ಹೇಳಿದ್ದರು. ಈ ಸುದ್ದಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಹೀಗಾಗಿ ಇದೀಗ ಈ ಪ್ರಶ್ನೆಯೂ ಮುನ್ನೆಲೆಗೆ ಬಂದಿದೆ. ಇದೀಗ 300 ರೂಪಾಯಿಗೆ ದರ ಏರಿಕೆಗೆ ಯಾವುದೇ ಪ್ರಸ್ತಾಪ ಇಲ್ಲ ಎನ್ನುವ ಮೂಲಕ ಈ ಚರ್ಚೆಗೆ ತೆರೆ ಬಿದ್ದಿದೆ.
ಹೆಚ್ಚಿನ ಮಾಹಿತಿ ಬೇಕಾದರೆ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490
ಎಲ್ಲಾದರೂ ನೋಡಿದ್ದೀರಾ.. ಧರ್ಮರಾಯ, ಕೃಷ್ಣ, ಕರ್ಣ, ಭೀಷ್ಮ.. ಮೊದಲಾದ ಹೆಸರುಗಳನ್ನು ನಂನಮ್ಮ ಸಾಧನೆಗಳಿಗೆ…
ಕಾವೇರಿ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಾವೇರಿ ನದಿ ಮೈದುಂಬಿ ಹರಿಯುತ್ತಿದೆ.…
ಕಾಸರಗೋಡು ಜಿಲ್ಲೆಯ ನೆಟ್ಟಣಿಗೆ ಬಳಿಯ ಕೃಷಿ ಕಾರ್ಮಿಕ ರಾಮಕೃಷ್ಣ ಇಳಂತೋಡಿ ಅವರು ಅಡಿಕೆಗೆ…
ಕೃಷಿ ಬೆಳವಣಿಗೆಯ ಬಗ್ಗೆ ಮಿಜೋರಾಂ ಸರ್ಕಾರವು ಆದ್ಯತೆ ನೀಡುತ್ತಿದೆ. ಕಳೆದ ಕೆಲವು ಸಮಯಗಳಿಂದ…
ಬಂಗಾಳಕೊಲ್ಲಿಯ ತಿರುಗುವಿಕೆಯು ಉತ್ತರ ಪ್ರದೇಶ ತಲುಪಿದ್ದು ಅಲ್ಲಿ ಶಿಥಿಲಗೊಳ್ಳುವ ಲಕ್ಷಣಗಳಿವೆ. ಇಂಡೋನೇಷ್ಯಾದಲ್ಲಿ ಉದ್ರೇಕಗೊಂಡಿರುವ ಜ್ವಾಲಾಮುಖಿಯು…