Advertisement
MIRROR FOCUS

ಸದ್ಯ ಮುಂಗಾರು ಮಳೆ ಆಶಾವಾದ | ಮುಂದಿರುವ ಸವಾಲುಗಳಲ್ಲಿ ತಾಪಮಾನವೇ ಪ್ರಮುಖ |

Share

ಈ ಬಾರಿ ಮುಂಗಾರು ಮಳೆಯಲ್ಲಿ ಸರಾಸರಿ  105% ರಷ್ಟು ಮಳೆಯಾಗುವ ಸಾಧ್ಯತೆ ಇದೆ. ಆದರೆ ಮುಂದಿನ ತಾಪಮಾನ, ಬಿಸಿಗಾಳಿಯನ್ನು ಆಧರಿಸಿ ಮುಂದಿನ ದಿನಗಳಲ್ಲಿ ಬದಲಾವಣೆ ಸಾಧ್ಯತೆ ಇದೆ. ಹೆಚ್ಚುತ್ತಿರುವ ಶಾಖದ ಅಲೆಗಳು  ಗಂಭೀರ ಸವಾಲುಗಳನ್ನು ಒಡ್ಡುತ್ತಿವೆ. ಹೀಗಾಗಿ ಭಾರತವು ವಿಪರೀತ – ಶಾಖ ಮತ್ತು ಭಾರೀ ಮಳೆ  ಎರಡಕ್ಕೂ ಸಿದ್ಧವಾಗಬೇಕಾಗಿದೆ. ಹವಾಮಾನ ತಜ್ಞರು ಸರಿಯಾದ ನೀರಿನ ನಿರ್ವಹಣೆ, ವಿಪತ್ತು ಸಿದ್ಧತೆ ಮತ್ತು ಹವಾಮಾನ ನಿರೋಧಕ ಮೂಲಸೌಕರ್ಯದ ಅಗತ್ಯವಾಗಿ ಗಮನಹರಿಸುವಂತೆ ಸೂಚನೆ ನೀಡಿದ್ದಾರೆ.…..ಮುಂದೆ ಓದಿ….

ಭಾರತವು ಈ ಬಾರಿ ಈಗಿನ ಮುನ್ಸೂಚನೆಯಂತೆ ಸಾಮಾನ್ಯ ಅಥವಾ ಸಾಮಾನ್ಯಕ್ಕಿಂತ ಹೆಚ್ಚಿನ ಮುಂಗಾರು ಮಳೆಗೆ ಸಜ್ಜಾಗಿದ್ದು, ರೈತರು ಹಾಗೂ ಮಳೆಯ ಮೇಲೆ ಅವಲಂಬಿತವಾಗಿರುವ ಪ್ರಮುಖ ವಲಯಗಳಿಗೆ ಸದ್ಯ ಆಶಾದಾಯಕ ವಾತಾವರಣ ಇದೆ. ಜೂನ್ ನಿಂದ ಸೆಪ್ಟೆಂಬರ್ ವರೆಗೆ ದೀರ್ಘಾವಧಿಯ ಸರಾಸರಿ ಮಳೆಯ 105% ರಷ್ಟು ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ  ಮುನ್ಸೂಚನೆ ನೀಡಿದೆ.

ಈ ಬಗ್ಗೆ ಮಾಹಿತಿ ನೀಡಿದ ಐಎಂಡಿ ಮುಖ್ಯಸ್ಥ ಮೃತ್ಯುಂಜಯ್ ಮೊಹಾಪಾತ್ರ, ಎಲ್ ನಿನೊ ಪರಿಸ್ಥಿತಿಗಳು ಈ ವರ್ಷ ತಟಸ್ಥವಾಗಿ ಉಳಿಯುವ ನಿರೀಕ್ಷೆಯಿದೆ ,  ಈಗಾಗಲೇ ದಾಖಲೆಯ ಶಾಖದ ಅಲೆಗಳನ್ನು ಎದುರಿಸುತ್ತಿರುವ ದೇಶಕ್ಕೆ ಇದು ಒಳ್ಳೆಯ ಸುದ್ದಿ.ಹೀಗಾಗಿ ಈ ವರ್ಷದ ಮುಂಗಾರು ಆಶಾದಾಯಕವಾಗಿ ಕಾಣುತ್ತಿದೆ  ಎಂದು  ಮೊಹಾಪಾತ್ರ ಹೇಳಿದ್ದಾರೆ.

“ದ ರೂರಲ್‌ ಮಿರರ್.ಕಾಂ” WhatsApp ಚಾನೆಲ್‌ ಫಾಲೋಮಾಡಲು ಇಲ್ಲಿ ಕ್ಲಿಕ್‌ ಮಾಡಿರಿ..

ಭಾರತದ ಕೃಷಿ ವಲಯಕ್ಕೆ ಮುಂಗಾರು ಮಳೆಯೇ ಆಧಾರವಾಗಿದೆ. ಉತ್ತಮ ಮಳೆಯ  ಮುನ್ಸೂಚನೆಯ ಹೊರತಾಗಿಯೂ, ಏಪ್ರಿಲ್-ಜೂನ್ ಅವಧಿಯಲ್ಲಿ ತೀವ್ರ ಶಾಖದ ದಿನಗಳು ಕಂಡುಬರಬಹುದು , ಇದು ಮುಂದಿನ ಮಳೆಯ ಬಗ್ಗೆ ಕಳವಳವನ್ನು ಹುಟ್ಟುಹಾಕುತ್ತದೆ ಎಂದಿದ್ದಾರೆ.

ಎಲ್ ನಿನೊ ಮತ್ತು ಲಾ ನಿನಾ ಪ್ರಮುಖ ಜಾಗತಿಕ ಹವಾಮಾನ ಪ್ರಭಾವಿಗಳು. ಎಲ್ ನಿನೊ ಪೆಸಿಫಿಕ್ ಮಹಾಸಾಗರವನ್ನು ಬೆಚ್ಚಗಾಗಿಸುತ್ತದೆ ಮತ್ತು ಭಾರತದಲ್ಲಿನ ಮಳೆಯ ಮೇಲೆ ಪರಿಣಾಂ ಬೀರುತ್ತದೆ. ಲಾ ನಿನಾ ಅದನ್ನು ತಂಪಾಗಿಸುತ್ತದೆ, ಹಾಗೂ ಮಾನ್ಸೂನ್‌ ಗೆ ಸಹಾಯ ಮಾಡುತ್ತದೆ.ಹೀಗಾಗಿ ಜೂನ್‌ ವೇಳೆಗೆ ಭಾರತವು ವಿಪರೀತ ಶಾಖ ಮತ್ತು ಉತ್ತಮ ಮಳೆ  ಎರಡಕ್ಕೂ ಸಿದ್ಧವಾಗಬೇಕಾಗಬಹುದು ಎನ್ನುವುದು ಈಗಿನ ನಿರೀಕ್ಷೆ.

“ದ ರೂರಲ್‌ ಮಿರರ್.ಕಾಂ” WhatsApp ಚಾನೆಲ್‌ ಫಾಲೋಮಾಡಲು ಇಲ್ಲಿ ಕ್ಲಿಕ್‌ ಮಾಡಿರಿ..

India is set for an above-normal monsoon season, bringing much-needed relief to farmers and key sectors dependent on rainfall. The India Meteorological Department (IMD) forecast 105% of the long-period average rainfall from June to September.

As India braces for both extremes—heat and heavy rain—climate experts stress the need for better water management, disaster preparedness, and climate-resilient infrastructure.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಹವಾಮಾನ ವರದಿ | 21-07-2026 | ಕರಾವಳಿ-ಮಲೆನಾಡಿನಲ್ಲಿ ಸಾಧಾರಣ ಮಳೆ ಮುಂದುವರಿಕೆ, ಭಾರೀ ಮಳೆ ಸಾಧ್ಯತೆ ಕಡಿಮೆ

ಕರಾವಳಿ ಮತ್ತು ಮಲೆನಾಡಿನಲ್ಲಿ ಮುಂದಿನ 10 ದಿನಗಳವರೆಗೆ ಬಿಟ್ಟು ಬಿಟ್ಟು ಸಾಧಾರಣ ಮಳೆ…

4 hours ago

ಅಡಿಕೆ ರೋಗ ಸಂಕಷ್ಟಕ್ಕೆ ಸಂಸತ್ತಿನಲ್ಲಿ ಧ್ವನಿ : ನಿಯಮ 377ರಡಿ ಕ್ಯಾ. ಬ್ರಿಜೇಶ್ ಚೌಟ ಒತ್ತಾಯ

ಅಡಿಕೆ ತೋಟಗಳಲ್ಲಿ ಹೆಚ್ಚುತ್ತಿರುವ ಎಲೆ ಚುಕ್ಕೆ, ಹಳದಿ ಎಲೆ ಮತ್ತು ಕೊಳೆ ರೋಗಗಳಿಗೆ…

21 hours ago

ದೇಶಾದ್ಯಂತ ಮುಂಗಾರು ಅಬ್ಬರ : ಹಲವು ರಾಜ್ಯಗಳಿಗೆ ಭಾರೀ ಮಳೆ ಎಚ್ಚರಿಕೆ, ಹಿಮಾಲಯ ತಪ್ಪಲಿನಲ್ಲಿ ರೆಡ್ ಅಲರ್ಟ್

ದೇಶಾದ್ಯಂತ ಮುಂಗಾರು ಮತ್ತಷ್ಟು ತೀವ್ರಗೊಂಡಿದ್ದು, ಉತ್ತರ ಭಾರತದ ಹಲವು ಭಾಗಗಳಿಗೆ ರೆಡ್ ಅಲರ್ಟ್…

1 day ago

ರಾಜ್ಯದಲ್ಲಿ ಬರದ ಛಾಯೆ | 178 ತಾಲ್ಲೂಕುಗಳಲ್ಲಿ ತೀವ್ರ ಮಳೆ ಕೊರತೆ, ಜಲಾಶಯಗಳ ನೀರಿನ ಮಟ್ಟ ಶೇ.40ಕ್ಕೆ ಕುಸಿತ

ರಾಜ್ಯದಲ್ಲಿ ಮುಂಗಾರು ಮಳೆ 39% ಕೊರತೆಯಾಗಿದ್ದು, 26 ಜಿಲ್ಲೆಗಳ 178 ತಾಲ್ಲೂಕುಗಳಲ್ಲಿ ಬರದ…

2 days ago

ಪುತ್ತೂರಿಗೆ ಪುತ್ತಿಲ? ಪುತ್ತೂರಿನ ರಾಜಕೀಯದ ಹೊಸ ವ್ಯಾಕರಣ

ಪುತ್ತೂರಿನ ರಾಜಕೀಯದಲ್ಲಿ ವ್ಯಕ್ತಿತ್ವದ ಪ್ರಭಾವ ಹೆಚ್ಚುತ್ತಿರುವ ಕುರಿತು ಈ ವಿಶ್ಲೇಷಣೆ ಬೆಳಕು ಚೆಲ್ಲುತ್ತದೆ.…

2 days ago

ತೆಂಗಿನ ನಾಡಿನಲ್ಲಿ ಅಡಿಕೆ ಕ್ರಾಂತಿ….! ತುಮಕೂರಿನಲ್ಲಿ ಅಡಿಕೆ ಸಸಿಗಳಿಗೆ ಭಾರೀ ಬೇಡಿಕೆ

ಕೊಪ್ಪರ ಬೆಲೆಯ ಏರಿಳಿತದಿಂದ ತುಮಕೂರಿನಲ್ಲಿ ರೈತರು ಅಡಿಕೆ ಕೃಷಿಯತ್ತ ಮುಖ ಮಾಡುತ್ತಿದ್ದಾರೆ. ಇದರ…

2 days ago