ಗೇರು ಕಾಡುಬೆಳೆಯಲ್ಲ. ಅದೊಂದು ತೋಟಗಾರಿಕಾ ಬೆಳೆಯಾಗಿದೆ. ಇತರ ತೋಟಗಾರಿಕಾ ಬೆಳೆಗಳಿಗೆ ಒದಗಿಸುವಂತಹ ಕೃಷಿ ನಿರ್ವಹಣಾ ಕ್ರಮಗಳನ್ನು ಗೇರು ಬೇಸಾಯದಲ್ಲೂ ಅಳವಡಿಸಿಕೊಂಡಲ್ಲಿ ಗೇರು ಉತ್ಪಾದಕತೆಯಲ್ಲಿ ಗಣನೀಯವಾದ ಪ್ರಗತಿಯನ್ನು ಸಾಧಿಸಲು ಸಾಧ್ಯ ಎಂದು ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಆರ್ ಸಿ ಜಗದೀಶ್ ಹೇಳಿದರು.
ಅವರು ಪುತ್ತೂರು ಮೊಟ್ಟೆತ್ತಡ್ಕದ ಐಸಿಏಆರ್ -ಡಿಸಿಆರ್ ಕೇಂದ್ರದಲ್ಲಿ ಆಯೋಜಿಸಲಾಗಿರುವ ಭಾರತೀಯ ಕೃಷಿ ಸಂಶೋಧನಾ ಪರಿಷತ್ ಪ್ರಾಯೋಜಿತ ಸಮಗ್ರ ಕೀಟ ನಿರ್ವಹಣಾ ಕ್ರಮಗಳ ಪ್ರಾಮುಖ್ಯತೆಯೊಂದಿಗೆ ಸುಧಾರಿತ ಗೇರು ಉತ್ಪಾದಕತಾ ತಂತ್ರಜ್ಞಾನ ದ ಕುರಿತ ರಾಷ್ಟ್ರಮಟ್ಟದ ಒಂದು ವಾರದ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಡಾ. ಹೆಚ್. ರಾಜಶೇಖರ ವಿಜ್ಞಾನಿ (ಸಸ್ಯ ರೋಗಶಾಸ್ತ್ರ), ತರಬೇತಿ ಮತ್ತು ಅದರ ಉಪಯುಕ್ತತೆಯ ಕುರಿತಂತೆ ವಿವರಿಸಿದರು. ಡಾ. ಟಿ ಎನ್, ರವಿಪ್ರಸಾದ್,ಪ್ರಧಾನ ವಿಜ್ಞಾನಿ (ಕೀಟಶಾಸ್ತ್ರ) ರವರು ತರಬೇತಿಗೆ ಸಂಬಂಧಿಸಿದಂತೆ ಮಾಹಿತಿ ನೀಡಿದರು. ಸಂಸ್ಥೆಯ ಹಿರಿಯ ವಿಜ್ಞಾನಿ (ಕೀಟಶಾಸ್ತ್ರ) ಡಾ. ಕೆ ವನಿತಾ ಸ್ವಾಗತಿಸಿದರು.
ಐಸಿಏಆರ್ –ಡಿಸಿಆರ್ ಸಂಸ್ಥೆಯ ನಿರ್ದೇಶಕರಾದ ಡಾ. ಜೆ. ದಿನಕರ ಅಡಿಗ ಸಭಾಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮುಖ್ಯಅತಿಥಿಗಳಿಂದ ತರಬೇತಿಗೆ ಸಂಬಂಧಿಸಿದ ಕೈಪಿಡಿಯನ್ನು ಬಿಡುಗಡೆಗೊಳಿಸಲಾಯಿತು. ಡಾ. ವೀಣಾ ಜಿ ಎಲ್ ಕಾರ್ಯಕ್ರಮವನ್ನು ನಿರ್ವಹಿಸಿದರು. ಡಾ. ಹೆಚ್ ರಾಜಶೇಖರ್ ವಂದಿಸಿದರು.
ಕಳೆದ ಸುಮಾರು 5-6 ವರ್ಷಗಳಿಂದ ಮನೆಗಳಿಗೆ ಮರ ಬಳಕೆ ಮಾಡುತ್ತಿಲ್ಲ. ಈಗಾಗಲೇ ಸುಮಾರು…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490
ವಿಶ್ವ ಯೋಗ ದಿನಾಚರಣೆ ಹಿನ್ನೆಲೆಯಲ್ಲಿ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಬಾಲಕಿ ಋತ್ವಿ ಯೋಗ…
ರಾಜ್ಯದ ಮಾವು ಬೆಳೆಗಾರರು ಸಂಕಷ್ಟದಲ್ಲಿದ್ದು, ಅವರ ನೆರವಿಗೆ ಧಾವಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ…
ಭಾರತದ ಕಾಫಿ ರಫ್ತು ಕಳೆದ 5 ವರ್ಷದಲ್ಲಿ ಗಣನೀಯ ಬೆಳವಣಿಗೆ ಸಾಧಿಸಿದ್ದು, ಶೇಕಡ…
ಮೊನ್ನೆ ತಾನೆ ಆತ್ಮೀಯ ಮಿತ್ರರೊಬ್ಬರ ಮನೆಗೆ ಹೋಗಿದ್ದೆ. ಮನೆಯ ಹಟ್ಟಿಯಲ್ಲಿ ದೇವನಿ ಜಾತಿಯ…