MIRROR FOCUS

#RuralRoad | ಕೊಲ್ಲಮೊಗ್ರದಲ್ಲಿ 5.5 ಕೋಟಿ ರೂಪಾಯಿಯ ರಸ್ತೆ ಕಾಮಗಾರಿ | ಗ್ರಾಮೀಣ ರಸ್ತೆಯ ಗುಣಮಟ್ಟವಿಲ್ಲದ ಕಾಮಗಾರಿ | ಸಾರ್ವಜನಿಕರ ಅಸಮಾಧಾನ-ಅಧಿಕಾರಿಗಳ ಭೇಟಿ |

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಅನುದಾನಗಳು ಬರುವುದೇ ಅಪರೂಪ. ಬಂದ ಅನುದಾನಗಳು ಸರಿಯಾಗಿ ಬಳಕೆಯಾಗಬೇಕು, ಗುಣಮಟ್ಟದಿಂದ ಕೂಡಿರಬೇಕು ಎನ್ನುವುದು ಗ್ರಾಮೀಣ ಜನರೆಲ್ಲರ ಒತ್ತಾಯ. ಆದರೆ ಅನೇಕರು ಗ್ರಾಮೀಣ ಭಾಗಗಳಲ್ಲಿ ಗುಣಮಟ್ಟವಿಲ್ಲದ ಕಾಮಗಾರಿ ಮಾಡಿದರೆ ಯಾರಿಗೂ ತಿಳಿಯದು ಅಂದುಕೊಳ್ಳುತ್ತಾರೆ. ಅಂತಹವರಿಗೆ ಕೊಲ್ಲಮೊಗ್ರದ ಈ ಘಟನೆ ಎಚ್ಚರಿಕೆಯಾಗಬೇಕು. 

Advertisement
Advertisement
ಕಾಂಕ್ರೀಟ್‌ ರಸ್ತೆಯ ಗುಣಮಟ್ಟದ ಬಗ್ಗೆ ಸಾರ್ವಜನಿಕರ ಆಕ್ಷೇಪ

ಸುಳ್ಯ ತಾಲೂಕಿನ ಕೊಲ್ಲಮೊಗ್ರ ಗ್ರಾಮದ ಕಟ್ಟ-ಕರಂಗಲ್ಲು-ಕೊಲ್ಲಮೊಗ್ರ ಸಂಪರ್ಕ ರಸ್ತೆಗೆ ಸುಮಾರು 5.5ಕೋಟಿ ರೂಪಾಯಿ ವಿಶೇಷ ಅನುದಾನದಲ್ಲಿ “ನಮ್ಮ ಗ್ರಾಮ-ನಮ್ಮ ರಸ್ತೆ”ಯ ಮೂಲಕ ಅನುದಾನ ಬಿಡುಗಡೆಗೊಂಡಿತ್ತು. ಈ ಕಾಮಗಾರಿ ಕಳೆದ ಎರಡು ತಿಂಗಳ ಹಿಂದೆ ಪೂರ್ತಿಗೊಂಡು ಸಂಚಾರಕ್ಕೆ ಯೋಗ್ಯವಾಗಿತ್ತು. ಆದರೆ ಕಾಮಗಾರಿ ನಡೆಯುವ ಸಮಯದಲ್ಲಿ ಊರಿನ ಜನರು ಪದೇ ಪದೇ ಕಾಮಗಾರಿಯ ಗುಣಮಟ್ಟದ ಬಗ್ಗೆ ಸಾಕಷ್ಟು ಬಾರಿ ದೂರು ಇಂಜಿನಿಯರ್ ಅವರಿಗೆ ನೀಡಿದ್ದರು. ಹಾಗಿದ್ದರೂ ಕ್ರಮಕೈಗೊಂಡಿಲ್ಲ ಎಂಬ ಆರೋಪ ಬಂದಿತ್ತು.ಈ ಕಾಮಗಾರಿ ಕುಂದಾಪುರದ ಮೂಲದ ಗುತ್ತಿಗೆದಾರರು ಪಡೆದುಕೊಂಡಿದ್ದರು.

ಕಾಂಕ್ರೀಟ್‌ ರಸ್ತೆ ಬಿರುಕು ಬಿಟ್ಟಿರುವುದು

ಮಳೆ ಪ್ರಾರಂಭವಾಗಿ ಮೊದಲ ವಾರದಲ್ಲಿ ಕಾಮಗಾರಿ ಹಲವು ಕಡೆಗಳಲ್ಲಿ ಗುಂಡಿ‌ ಹಾಗೂ ಕಾಂಕ್ರೀಟು ಸಂಪೂರ್ಣವಾಗಿ ಬಿರುಕು ಕಾಣಿಸಿಕೊಂಡು ಬಹುಕಾಲದ ಬೇಡಿಕೆಯ ರಸ್ತೆ ಜನರಿಗೆ ನಿರಾಸೆ ಮೂಡಿಸಿ ಆಕ್ರೋಶಕ್ಕೆ ಕಾರಣವಾಗಿತ್ತು.ಮೊದಲ ಮಳೆಗೆ ತಡೆಗೋಡೆ ಒಂದು ಕುಸಿದು ಹೋಗಿತ್ತು.ಈ ಸಂಬಂಧ ಇಂಜಿನಿಯರ್ ಹಾಗೂ ಗುತ್ತಿಗೆದಾರರಿಗೆ ಕರೆ ಮಾಡಿದರೆ ಸ್ವೀಕರಿಸುತ್ತಿರಲಿಲ್ಲ. ಹೀಗಾಗಿ ಸ್ಥಳೀಯರು ಉನ್ನತ ಮಟ್ಟದ ಅಧಿಕಾರಿಗಳ ಗಮನಕ್ಕೆ ತಂದ ತಕ್ಷಣ ಸ್ಪಂದಿಸಿದ ಅಧಿಕಾರಿಗಳು  ಸ್ಥಳಕ್ಕೆ ಭೇಟಿಕೊಟ್ಟು ಪರಿಶೀಲಿಸಿದಾಗ ಕಾಮಗಾರಿಯ ಗುಣಮಟ್ಟ ಕೆಳದರ್ಜೆಯಲ್ಲಿರುವುದು ಕಂಡುಬಂದಿದೆ.ಇಂಜಿನಿಯರ್ ಹಾಗೂ ಗುತ್ತಿಗೆದಾರರನ್ನು ಊರಿನವರು ತರಾಟೆಗೆ ತೆಗೆದುಕೊಂಡರು.

ಅಧಿಕಾರಿಗಳಿಂದ ಪರಿಶೀಲನೆ

ಇಂಜಿನಿಯರ್ ಅವರಿಗೆ ಕಳಪೆ ಕಾಮಗಾರಿ ಬಗ್ಗೆ ನಿರಂತರ ದೂರು ನೀಡುತ್ತಿದ್ದ ಉದಯ ಶಿವಾಲ ಅವರ  ಮೊಬೈಲ್ ನಂಬರ್ ಅನ್ನು ಬ್ಲಾಕ್ ಮಾಡಿರುವ ಬಗ್ಗೆ ಉದಯ ಶಿವಾಲ ಪ್ರಶ್ನಿಸಿದರು.ಸಮಸ್ಯೆಗಳನ್ನು ಪ್ರಶ್ನಿಸುವವರಿಂದ ತಪ್ಪಿಸಿಕೊಳ್ಳುವ ಬಗ್ಗೆ ಸಾರ್ವಜನಿಕರು ಹೇಳಿದರು.

ನಾವು ಕಳಪೆ ಕಾಮಗಾರಿ ಎಂದು ತಿಳಿಸಿದ ತಕ್ಷಣ ಇಂಜಿನಿಯರ್ ಜವಾಬ್ದಾರಿಯಿಂದ‌ ಕೆಲಸ ಮಾಡಿದರೆ  ಇಲ್ಲಿಗೆ ಭೇಟಿ ನೀಡಿ ಸಮಸ್ಯೆ ಬಗೆಹರಿಸುವ ಕೆಲಸ‌ ಇರಲಿಲ್ಲ.ಮೇಲಾಧಿಕಾರಿಗಳು ಸ್ಪಂದಿಸುವ ರೀತಿ ಇಂಜಿನಿಯರ್ ಸ್ಪಂದಿಸಿದರೆ  ರಸ್ತೆಯೂ ಕಳಪೆಯಾಗುತ್ತಿರಲಿಲ್ಲ
ಉದಯ ಶಿವಾಲ , ಗ್ರಾಮಸ್ಥ
Advertisement

ತಕ್ಷಣವೇ ಕಳಪೆಯಾದ ಕಾಮಗಾರಿಯನ್ನು ಸಂಪೂರ್ಣವಾಗಿ‌ ತೆಗೆದು ಹೊಸ ಕಾಮಗಾರಿ ನಡೆಸಿಕೊಡುವಂತೆ ಎಕ್ಸ್ ಕ್ಯೂಟಿವ್ ಇಂಜಿನಿಯರ್ ಸೂಚಿಸಿದರು. ಸಾರ್ವಜನಿಕರೊಂದಿಗೆ ನಾನು ಖಂಡಿತ ಇರುತ್ತೇನೆ ನೀವು ಭಯ ಪಡುವ ಅಗತ್ಯವಿಲ್ಲ ಎಂದು ತಿಳಿಸಿದರು.

ನಾವು ಕಾಮಗಾರಿ ನಡೆಯುವ ವೇಳೆ ಗುತ್ತಿಗೆದಾರಿಗೆ ನಮ್ಮಿಂದ ಆದಷ್ಟು ಸಾಹಯ ಮಾಡಿ ಮನವಿಯತೆಯನ್ನು ತೋರಿಸಿದ್ದೇವೆ.ಆದರೂ ಇಂತಹ ಕಳಪೆ ರಸ್ತೆ ನಿರ್ಮಿಸಿಕೊಟ್ಟು ಹೋದ ಗುತ್ತಿಗೆದಾರರು ಆಮೇಲೆ ಕರೆಯನ್ನು ಸ್ವೀಕರಿಸಲಿಲ್ಲ
ನವೀನ್ ಕೊಪ್ಪಡ್ಕ, ಗ್ರಾಮಸ್ಥ

ಕಾಮಗಾರಿ ಪೂರ್ತಿಗೊಂಡ ಬಳಿಕ ಇನ್ನೊಮ್ಮೆ ಪರಿಶೀಲನೆ ನಡೆಸಲಾಗುತ್ತದೆ. ಕಳಪೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು  ಎಂದು ಹಿರಿಯ ಇಂಜಿನಿಯರ್‌ ವೇಣುಗೋಪಾಲ್‌ ಭರವಸೆ ನೀಡಿದರು.

ಕಾಮಗಾರಿ ಪರಿಶೀಲನೆ
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಬದುಕು ಪುರಾಣ | ‘ಅವನೇನು.. ಹರಿಶ್ಚಂದ್ರನೋ!’

ನುಡಿದಂತೆ ನಡೆದಾತ ‘ರಾಜಾ ಹರಿಶ್ಚಂದ್ರ’. ಸತ್ಯಕ್ಕಾಗಿ ಸರ್ವಸ್ವವನ್ನೂ ತ್ಯಾಗ ಮಾಡಿದ ತ್ಯಾಗಿ. ಅನೃತವನ್ನಾಡದೆ…

3 hours ago

ಗುರು ಆದಿತ್ಯ ರಾಜಯೋಗ | ಯಾರಿಗೆಲ್ಲಾ ಕುಬೇರ ಯೋಗ..?

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

3 hours ago

ಸೆ.30 ವರೆಗೆ ಆಗುಂಬೆ ಘಾಟಿಯಲ್ಲಿ ಭಾರೀ ವಾಹನ ಸಂಚಾರ ನಿರ್ಬಂಧ

ಸಾರ್ವಜನಿಕ ಹಿತದೃಷ್ಠಿಯಿಂದ ಆಗುಂಬೆ ಘಾಟಿಯ ಮೂಲಕ ನಾಳೆಯಿಂದ ಸೆಪ್ಟಂಬರ್ 30 ರವರೆಗೆ ಲಘು…

11 hours ago

ಕೃಷಿ ಸಂಸ್ಕರಣಾ ಘಟಕ | 15 ಲಕ್ಷ ರೂಪಾಯಿ ಸಹಾಯಧನ ನೀಡಲು ಸರ್ಕಾರ  ನಿರ್ಧಾರ

ಕೃಷಿ ಸಂಸ್ಕರಣಾ ಘಟಕ ಸ್ಥಾಪಿಸುವ ರೈತರಿಗೆ ಈ ವರ್ಷದಿಂದ ರಾಜ್ಯ ಸರ್ಕಾರ 9…

11 hours ago

ಚಿಕ್ಕಮಗಳೂರು ಜಿಲ್ಲೆಯಲ್ಲಿ  ಧಾರಾಕಾರ ಮಳೆ | ಧಾರವಾಡ ಜಿಲ್ಲೆಯಲ್ಲಿ 130 ಮನೆಗಳಿಗೆ ಭಾಗಶಃ ಹಾನಿ

ಚಿಕ್ಕಮಗಳೂರು  ಜಿಲ್ಲೆಯಲ್ಲಿ ಸಾಧಾರಣದಿಂದ ಹೆಚ್ಚು ಮಳೆಯಾಗುತ್ತಿದೆ. ಹೆಚ್ಚು ಮಳೆಯಿಂದಾಗಿ  ಜಿಲ್ಲೆಯ ಮುಳ್ಳಯ್ಯನಗಿರಿ ರಸ್ತೆಯೆ…

11 hours ago

ಜೂ. 16-18 ದಾವಣಗೆರೆಯಲ್ಲಿ ಮಾವು ಮೇಳ

ದಾವಣಗೆರೆ ಜಿಲ್ಲಾ ಪಂಚಾಯತ್, ತೋಟಗಾರಿಕೆ ಇಲಾಖೆ ಸಹಯೋಗದೊಂದಿಗೆ ಜೂನ್.16 ರಿಂದ 18  ವರೆಗೆ…

11 hours ago