ಇಂಡಿಯನ್ ನ್ಯಾಷನಲ್ ಟ್ರಸ್ಟ್ ಫಾರ್ ಆರ್ಟ್ ಅಂಡ್ ಕಲ್ಚರಲ್ ಹೆರಿಟೇಜ್ ನ ಬಾಂಧವಗಢ ರಾಷ್ಟ್ರೀಯ ಉದ್ಯಾನವನದಲ್ಲಿ ವಿಷ್ಣುವಿನ ಮರಳುಗಲ್ಲಿನ ಶಿಲ್ಪವನ್ನು ದುರಸ್ತಿ ಮಾಡಲಾಗಿದೆ. ಇದು ಅತ್ಯಂತ ಪ್ರಮುಖವಾದ ಹಾಗೂ ಜನಪ್ರಿಯವಾದ ಶೇಷ ಶಯ್ಯ ಎಂದು ಕರೆಯಲ್ಪಡುವ ಶಿಲ್ಪವಾಗಿದೆ.
ಹಲವು ವರ್ಷಗಳಿಂದ ಉದ್ಯಾನವನದಲ್ಲಿ ಇರುವುದರಿಂದ ಇದು ಪಾಚಿಗಳಿಂದ ಮುಚ್ಚಲ್ಪಟ್ಟಿತ್ತು. ಈ ಅಪರೂಪದ ವಿಗ್ರಹವು ಮಧ್ಯಪ್ರದೇಶದಲ್ಲಿ ಇನ್ಟ್ಯಾಚ್ ನ ಮೊದಲ ಸಂರಕ್ಷಣೆ ಮತ್ತು ಪನರ್ ಸ್ಥಾಪನೆಯ ಯೋಜನೆಯಾಗಿತ್ತು. ಕಳೆದ ಎರಡು ವರ್ಷ ಆಡಳಿತದಿಂದ ಅನುಮೋದನೆ ಪಡೆದು ಯೋಜನೆ ಆರಂಭಿಸಲಾಗಿತ್ತು. 1000 ವರ್ಷಗಳಷ್ಟು ಹಳೆಯದಾದ 40 ಅಡಿ ಉದ್ದದ ಮತ್ತು ಪ್ರಸಿದ್ಧ ಹುಲಿ ಸಂರಕ್ಷಿತ ಪ್ರದೇಶವಾದ ತಾಲಾ ವಲಯದಲ್ಲಿ ಇದು ನೆಲೆಗೊಂಡಿದೆ ಎಂದು ಸಂಸ್ಥೆಯ ರಾಜ್ಯ ಗವರ್ನರ್ ಮದನ್ ಮೋಹನ್ ಉಪಧ್ಯಾಯ ಹೇಳಿದರು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel