ಮಳೆ ಇಲ್ಲ ಎಂದು ನೊಂದಿದ್ದ ರೈತರಿಗೆ ಮಳೆಯಾದರೆ ಸಾಕು ಎಂಬ ಪ್ರಾರ್ಥನೆ ಇತ್ತು. ಆದರೆ ಇದೀಗ 3 ದಿನಗಳ ಮಳೆ ಈರುಳ್ಳಿ ಬೆಳೆದ ರೈತರಿಗೆ ಸಂಕಷ್ಟ ಈಡು ಮಾಡಿದೆ. ಈರುಳ್ಳಿ ಕಟಾವು ಹಂತಕ್ಕೆ ಬರುವಾಗ ಧಾರಾಕಾರ ಮಳೆ ಸುರಿದು ಕೊಳೆಯುವ ಹಂತಕ್ಕೆ ಬಂದಿದೆ. ಹೀಗಾಗಿ ಬೆಳೆದ ಬೆಳೆ ನಾಶವಾಗುವ ಸ್ಥಿತಿ ಬಂದಿದೆ.ಕೊಪ್ಪಳ ಜಿಲ್ಲೆಯ ಕೆಲವು ಭಾಗದ ರೈತರು ಈಗಾಗಲೇ ಈರುಳ್ಳಿ ಕಟಾವು ಮಾಡಿದ್ದರು. ಆದರೆ ಹಲವು ರೈತರು ಇನ್ನೂ ಕಟಾವು ಮಾಡಲು ಬಾಕಿ ಇದ್ದಾರೆ. ಕಿತ್ತು ಹಾಕಿರುವ ಈರುಳ್ಳಿ ಕೆಲವೆಡೆ ನೆಲದ ಮೇಲೆ ಬಿದ್ದಿತ್ತು ಧಾರಾಕಾರ ಮಳೆಯಾಗಿರುವುದರಿಂದಾಗಿ ಕೊಳೆತಿದೆ.
ಎಕರೆಗೆ ಸುಮಾರು 40 – 50 ಸಾವಿರ ರೂಪಾಯಿಗೂ ಅಧಿಕ ಹಣ ಖರ್ಚು ಮಾಡಿ, ಉತ್ತಮ ಬೆಳೆ ಬಂದಿತ್ತು. ಆದರೆ ಕಟಾವು ವೇಳೆ ಮಳೆ ಬಂದು ಈರುಳ್ಳಿ ಬೆಳೆ ಕೊಳೆಯುವಂತೆ ಮಾಡಿದೆ ಎಂದು ರೈತರು ಹೇಳಿದ್ದಾರೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel