Advertisement
MIRROR FOCUS

ಏರಿದ ಈರುಳ್ಳಿ ಬೆಲೆ | ಗ್ರಾಹಕ ಹಾಗೂ ರೈತ ಇಬ್ಬರಿಗೂ ಕಣ್ಣೀರು | ಬಂಪರ್ ಬೆಲೆ ಇದ್ದಾಗಲೇ ಇಳುವರಿ ಕುಸಿತ |

Share

ಕಳೆದ 3-4 ತಿಂಗಳ ಹಿಂದೆ ಟೊಮೇಟೊ ಬೆಲೆ ಗಗನಕ್ಕೇರಿ ಗ್ರಾಹಕರ ನಿದ್ದೆ ಕೆಡಿಸಿತ್ತು. ಆದರೆ ರೈತನ ಪಾಲಿಗೆ ವರವಾಗಿ ಪರಿಣಮಿಸಿತ್ತು. ಇದೀಗ ಈರುಳ್ಳಿಯ ಸರದಿ. ಬೆಲೆ ಏರಿದ್ರು ರೈತನಿಗೆ ಯಾವ ಲಾಭನೂ ಸಿಕ್ತಿಲ್ಲ. ಈರುಳ್ಳಿಗೆ ಈಗ ಬಂಪರ್ ಬೆಲೆ(Onion Prices) ಸಿಕ್ತಾ ಇದೆ. ಆದರೆ ಅನ್ನದಾತನ ನೋವು, ಸಂಕಷ್ಟ ಮಾತ್ರ ಇನ್ನೂ ನಿಂತಿಲ್ಲ. ಬಂಪರ್ ಬೆಲೆ ಸಿಕ್ಕ ಖುಷಿ ಇದ್ರೂ ನಗುವ ಹಾಗಿಲ್ಲ. ಹೀಗಾಗಿ ಈರುಳ್ಳಿಗೆ(Onion) ಬಂಪರ್ ರೇಟ್ ಇದ್ರೂ ರೈತರು(Farmers) ಕಣ್ಣೀರು ಹಾಕುವಂತಾಗಿದೆ. ಹೌದು, ಒಂದು ಎಕರೆಗೆ 40-50 ಪಾಕೇಟ್ ಈರುಳ್ಳಿ ಸಿಗುತ್ತಿದ್ದಲ್ಲಿ ಈ ಬಾರಿ ರೈತರಿಗೆ ಸಿಕ್ಕಿದ್ದು ಕೇವಲ 10-15 ಪಾಕೇಟ್ ಮಾತ್ರ. ಹೀಗಾಗಿ ಈರುಳ್ಳಿಗೆ ಖರ್ಚು ಮಾಡಿದಷ್ಟು ಹಣ ಕೂಡ ರೈತನಿಗೆ ದಕ್ಕಿಲ್ಲ.

ಗ್ರಾಹಕರ ಕಣ್ಣಲ್ಲಿ ಮಾತ್ರವಲ್ಲ, ಈಗ ರೈತರ ಕಣ್ಣಲ್ಲೂ ಈರುಳ್ಳಿ ನೀರು ತರಿಸುತ್ತಿದೆ. ಹೌದು, ಬೆಲೆ ಹೆಚ್ಚಳದ ಹೊರತಾಗಿಯೂ ರೈತರು ಬೇಸರದಿಂದ ಇರುವುದು ಗದಗ ಎಪಿಎಂಸಿ ಆವರಣದಲ್ಲಿ ಕಂಡುಬಂತು. ಮಾರ್ಕೆಟ್ ನಲ್ಲಿ 60 ರಿಂದ 70 ರೂಪಾಯಿ ಕೆಜಿ ಈರುಳ್ಳಿ ಮಾರಾಟ ಆಗ್ತಾಯಿದೆ. ಇದು ಗ್ರಾಹಕರ ಕಣ್ಣಲ್ಲೂ ನೀರು ತರಿಸುತ್ತಿದೆ. ಆದ್ರೆ, ಬಂಪರ್ ಬೆಲೆ ಇದ್ರೂ ಕೂಡ ಕಷ್ಟಪಟ್ಟು ಈರುಳ್ಳಿ ಬೆಳೆದ ರೈತನ ಕಣ್ಣಲ್ಲೂ ನೀರು ತರಿಸುತ್ತಿದೆ. ಗದಗ ಎಪಿಎಎಂಸಿಯಲ್ಲಿ ಇವತ್ತು ರೈತರ ಈರುಳ್ಳಿಗೆ ಬಂಪರ್ ರೇಟ್ ಸಿಕ್ಕಿದೆ. ಕ್ವಿಂಟಾಲ್ ಈರುಳ್ಳಿಗೆ 4 ರಿಂದ 5 ಸಾವಿರ ರೂಪಾಯಿಗೆ ಹರಾಜಾಗಿದೆ. ಆದ್ರೂ ರೈತರ ಮುಖದಲ್ಲಿ ಸಂತಸ ಇಲ್ಲ. ಕಾರಣ ಒಂದು ಎಕರೆಗೆ ಕನಿಷ್ಠ 40 ರಿಂದ 50 ಪಾಕೇಟ್ ಬರಬೇಕಿದ್ದ ಈರುಳ್ಳಿ ಭೀಕರ ಬರಕ್ಕೆ ಕೇವಲ 10 ರಿಂದ 15 ಪಾಕೇಟ್ ಮಾತ್ರ ಬಂದಿದೆ. ಈ ಕುರಿತು ಅಂತ ರೈತರು ಅಳಲು ತೋಡಿಕೊಂಡಿದ್ದಾರೆ. ಹೀಗಾಗಿ 5 ಸಾವಿರ ರೇಟ್ ಇದ್ರೂ ನಮಗೆ ಲಾಭವಿಲ್ಲ ಅಂತ ಗೋಳಾಡುತ್ತಿದ್ದಾರೆ. ನಾವು ಬಿತ್ತನೆ ಮಾಡಿದ್ದ, ಕೂಲಿ ಹಾಗೂ ಮಾರ್ಕೆಟ್ ಗೆ ತರುವ ಖರ್ಚು ವೆಚ್ಚವೂ ಬರಲ್ಲ ಅಂತ ರೈತರಾದ ಮಾಧವರೆಡ್ಡಿ, ಉಮೇಶ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಳೆದ ಎರಡು ವರ್ಷ ಅತಿಯಾದ ಮಳೆಯಿಂದ ಭೂಮಿಯಲ್ಲೇ ಈರುಳ್ಳಿ ಕೊಳೆತು ಹಾಳಾಗಿ ಹೋಗಿದೆ. ಹೀಗಾಗಿ ಈ ವರ್ಷವಾದ್ರೂ ಉತ್ತಮ ಇಳುವರಿ ಬರುತ್ತೆ ಅಂದ್ಕೊಂಡ ರೈತರಿಗೆ ಮಳೆರಾಯ ಕೈಕೊಟ್ಟಿದ್ದಾನೆ. ಭೀಕರ ಬರದಿಂದ ಇಳುವರಿ ಸಂಪೂರ್ಣ ಕುಸಿದು ಹೋಗಿದೆ. ಎಕರೆಗೆ 40-50 ಚೀಲ್ ಬೆಳೆಯುತ್ತಿದ್ದ ರೈತರು ಈಗ 10-15 ಚೀಲ್ ಬೆಳೆದು ಕಂಗಾಲಾಗಿದ್ದಾರೆ. ಈ ಈರುಳ್ಳಿ ಈಗ ಗ್ರಾಹಕರ ಕಣ್ಣಲ್ಲಿ ಮಾತ್ರ ನೀರು ತರಿಸಿಲ್ಲ. ಅನ್ನದಾತರ ಕಣ್ಣಲ್ಲೂ ನೀರು ತರಿಸಿದೆ. ಬೆಲೆ ಹೆಚ್ಚಾಗಿದೆ ಅಂತ ಎಲ್ಲರೂ ಬೊಬ್ಬೆ ಹೊಡೀತಾರೆ. ಆದ್ರೆ, ರೈತನ ಕಷ್ಟ ಕೇಳೋ ಯಾರೂ ಅಂತ ರಾಜ್ಯ, ಕೇಂದ್ರ ಸರ್ಕಾರದ ವಿರುದ್ಧ ರೈತರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿಜವಾಗ್ಲೂ ರೈತರ ಬಗ್ಗೆ ಕಾಳಜಿ ಇದ್ರೆ, ಸರ್ಕಾರಕ್ಕೆ ಜನ ಬೇಕಿದ್ರೆ ರೈತರ ಬೆಳೆಗಳಿಗೆ ಬೆಂಬಲ ಬೆಲೆ ಕೊಡ್ಲಿ. ಗ್ರಾಹಕರಿಗೆ ಎಷ್ಟು ಬೇಕಾದಷ್ಟು ರೇಟ್ ನಲ್ಲಿ ಮಾರಾಟ ಮಾಡ್ಲಿ ಅಂತ ಕಿಡಿಕಾರಿದ್ದಾರೆ.

Onion prices are now at bumper prices. But the breadwinner's pain and suffering has not stopped yet. Even if you are happy to get a bumper price, you should not laugh. Thus, even though there is a bumper rate for Onion, farmers are in tears. Yes, if they used to get 40-50 pockets of onions per acre, this time the farmers got only 10-15 pockets. Therefore, the farmer does not get the money he spent on onions.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ದೇಶೀಯ ಗ್ರಾಹಕರಿಗೆ ಇಂಧನ ಕೊರತೆ ಇಲ್ಲ: CNG – PNG ಪೂರೈಕೆ ನಿರಂತರ – ಸಚಿವ ಹರ್ದೀಪ್ ಸಿಂಗ್ ಪುರಿ

ದೇಶೀಯ ಗ್ರಾಹಕರಿಗೆ ಸಿಎನ್ಜಿ, ಪಿಎನ್ಜಿ ಹಾಗೂ ಎಲ್‌ಪಿಜಿ ಇಂಧನ ಪೂರೈಕೆಯಲ್ಲಿ ಯಾವುದೇ ಕೊರತೆ…

9 minutes ago

ಪೆಟ್ರೋಲಿಯಂಗೆ ಪರ್ಯಾಯದತ್ತ : ಕೃಷಿ ಸಂಪನ್ಮೂಲಗಳಿಂದ ಬಯೋ ಉತ್ಪನ್ನಗಳತ್ತ ಆದ್ಯತೆ

Bio Innovations APAC 2026 ಸಮಾವೇಶದಲ್ಲಿ ಗೋಡಾವರಿ ಬಯೋರೆಫೈನರೀಸ್ ತನ್ನ ಜೈವಿಕ ಉತ್ಪಾದನಾ…

13 minutes ago

ಗೋವಾದಲ್ಲಿ ಹಲಸು ಉತ್ಪಾದನೆ ಕುಸಿತ ಇಲ್ಲ | ಉತ್ತಮ ದರಕ್ಕಾಗಿ ಓಪನ್‌ ಮಾರ್ಕೆಟ್‌ಗೆ ರೈತರ ಒಲವು

ಗೋವಾದಲ್ಲಿ ಹಲಸು ಉತ್ಪಾದನೆ ಕುಸಿತವಾಗಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಉತ್ತಮ ದರದ ಕಾರಣ…

18 minutes ago

ರಾಜ್ಯದಲ್ಲಿ ಅಡುಗೆ ಅನಿಲ ಕೊರತೆ ಇಲ್ಲ | ಪ್ರತಿ 25 ದಿನಕ್ಕೊಂದು ಸಿಲಿಂಡರ್‌ ಪೂರೈಕೆ – ಸಚಿವ ಮುನಿಯಪ್ಪ ಭರವಸೆ

ರಾಜ್ಯದಲ್ಲಿ ಗೃಹಬಳಕೆಯ ಅಡುಗೆ ಅನಿಲ ಪೂರೈಕೆಯಲ್ಲಿ ಯಾವುದೇ ಕೊರತೆ ಇಲ್ಲ ಎಂದು ಸಚಿವ…

21 minutes ago

ಅಡಿಕೆ ಬೆಳೆಗಾರರಿಗೆ ಎಚ್ಚರಿಕೆ | ರೋಗ ನಿರ್ವಹಣೆ ತಪ್ಪಿದರೆ ಇಳುವರಿ ಕುಸಿತ..! – ಅಡಿಕೆ ಸಮೀಕ್ಷೆ ವರದಿ

ಅಡಿಕೆ ಇಳುವರಿ ಕುಸಿತಕ್ಕೆ ಎಲೆಚುಕ್ಕೆ, ಕೊಳೆ ರೋಗ ಹಾಗೂ ಹವಾಮಾನ ವೈಪರೀತ್ಯ ಪ್ರಮುಖ…

25 minutes ago

ಬಿಸಿ ಆಹಾರ ಪಾರ್ಸೆಲ್‌ಗೆ ಪ್ಲಾಸ್ಟಿಕ್‌, ಪತ್ರಿಕೆ ನಿಷೇಧ…! : ಸಾರ್ವಜನಿಕ ಧೂಮಪಾನಕ್ಕೆ ₹1000 ದಂಡ ಎಚ್ಚರಿಕೆ

ಹೋಟೆಲ್‌ಗಳಲ್ಲಿ ಪ್ಲಾಸ್ಟಿಕ್ ಹಾಗೂ ಪತ್ರಿಕೆಗಳಲ್ಲಿ ಬಿಸಿ ಆಹಾರ ಪಾರ್ಸೆಲ್‌ ಮಾಡುವುದನ್ನು ನಿಷೇಧಿಸಲು ಅಧಿಕಾರಿಗಳಿಗೆ…

10 hours ago