Opinion

‘ಸಾವಯವ’ ಪರಸ್ಪರ ಪೋಷಿಸುವ ಪ್ರಾಕೃತಿಕ ಸ್ವರೂಪ | ಅದನ್ನು ರಾಸಾಯನಿಕ ಜೊತೆ ಮಿಳಿತಗೊಳಿಸದಿರಿ..

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

‘ಅಪಾಯಕಾರಿ ರಾಸಾಯನಿಕಗಳ(Chemical) ಬದಲು ಹಲವು ಸಾವಯವ(Organic) ಪರ್ಯಾಯಗಳಿವೆ’ ಎಂಬ ಮಾತು ಸಾವಯವ ಚಿಂತನಗಳಲ್ಲಿ ಕೇಳುತ್ತೇವೆ. ಕೃತಕ ಅಪಾಯಕಾರಿ(Danger) ರಾಸಾಯನಿಕಗಳ ಬದಲು ಅಷ್ಟೇ ಅಪಾಯಕಾರಿಯಾಗಿರುವ ಸಾವಯವ ಪರ್ಯಾಯಗಳನ್ನು ಹುಡುಕುವುದು ಸಾವಯವದ ಮೂಲ ಆಶಯ ಅಲ್ಲ. ‘ಸಾವಯವ’ ಪರಸ್ಪರ ಪೋಷಿಸುವ ಪ್ರಾಕೃತಿಕ ಸ್ವರೂಪ(Natural).

Advertisement

‘ಸಾವಯವ’ ಅನ್ನುವುದು ಪ್ರಾಕೃತಿಕ ಸಂಬಂಧಗಳನ್ನು -ಗುಣಗಳನ್ನು ಅರಿವಿಗೆ ತರುವ-ಅವೆಲ್ಲವುಗಳ ಜೊತೆ ಅವಿನಾಭಾವತೆ ಅರಳಿಸುವ-ಉಳಿಸುವ ವಿಶಿಷ್ಠ ಜೀವಕಲೆ. – ಗೋಮೂತ್ರ-ಗೋಮಯವನ್ನೇ ಹಾಕಿ ಬೆಳೆದು ಕೊನೆಯಲ್ಲಿ ‘ನಾನೇ ಬೆಳೆದದ್ದು’, ‘ನನ್ನ ಕ್ಷೇತ್ರದ ಇಳುವರಿ ಇಷ್ಟು’ ಎಂದು ಬೀಗುವ ಮಾತು ‘ಸಾವಯವ’ ಆದೀತೆ ? – ‘ನಾವು ಬೆಳೆದೆವು-ನಮ್ಮಲ್ಲಿ ಬೆಳೆಯಿತು – ಪ್ರಕೃತಿ ಬೆಳೆಸಿತು’ ಎನ್ನುವ ಮಾತುಗಳು ‘ಸಾವಯವ’. ಉಪಕೃತಭಾವದ ಮಾತು ‘ಸಾವಯವ’. – ವಿನೀತಭಾವದಿಂದ ಬೆಳೆದ ಬೆಳೆಗೆ ಪ್ರಕೃತಿ ಕೊಡುವ ಪ್ರಮಾಣ ‘ಸಾವಯವ’. – ‘ರಾಸಾಯನಿಕ ರಹಿತ’ ಎನ್ನುವುದಷ್ಟಕ್ಕೆ ‘ಸಾವಯವ’ ಸೀಮಿತವಾದ್ದಲ್ಲ. – ‘ಸಾವಯವ’ ಎನ್ನುವುದು ನಮ್ಮನ್ನು ಹಿರಿದು ಮಾಡುವ ಮಾತು. ಎಲ್ಲದರೊಳಗೊಂದು ಮಾಡುವ ಮಾತು. ‘ನಾನು’ ಎಂಬ ಭಾವವನ್ನು ಅಳಿಸುವ ಮಾತು. ‘ನಾವು’ ಎಂಬ ಪ್ರಜ್ಞೆಯನ್ನು ಪೋಷಿಸುವ ಮಾತು. – ‘ನಾನು’ ಎನ್ನುವುದೆ ರಾಸಾಯನಿಕ. ‘ನಾವು’ ಎನ್ನುವುದು ‘ಸಾವಯವ’. ದೃಷ್ಟಿ ಸರಿಯಿರದೆ ನೋಟ ಸರಿಯಾಗುವುದೆ ? ಎಂಬ ಪ್ರಶ್ನೆ ಹಲವು ಸಾವಯವ ಗೋಷ್ಠಿಗಳಲ್ಲಿ ಕಾಡುತ್ತಿರುತ್ತದೆ…

ಬರಹ :
ಆನಂದ ಆ. ಶ್ರೀ.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಮುಂಗಾರು ಮೇ 27 ರಂದು ಆರಂಭ | ನಿಗದಿತ ಸಮಯಕ್ಕಿಂತ ಮೊದಲೇ ಮಳೆಗಾಲ ಆರಂಭ | ಕೇರಳದಲ್ಲಿ ಇಂದು ಮಳೆ ಸಾಧ್ಯತೆ |

ಭಾರತದ ಮೇಲೆ ನೈಋತ್ಯ ಮಾನ್ಸೂನ್‌ನ ಆರಂಭದ ದಿನಾಂಕಗಳ ಪ್ರಕಾರ ಸಾಮಾನ್ಯವಾಗಿ ಮೇ.21 ಅಥವಾ…

23 hours ago

ಈ ರಾಶಿಯವರಿಗೆ, ಮುಟ್ಟಿದ್ದೆಲ್ಲ ಚಿನ್ನ ಆ ರಾಶಿಗಳು ಯಾವುದು ತಿಳಿಯೋಣ

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 953515649

23 hours ago

ಆಪರೇಷನ್ ಸಿಂದೂರ್ ಕೇವಲ ಹೆಸರಲ್ಲ, ಅದು ದೇಶದ ಜನರ ಸಾಮೂಹಿಕ ಭಾವನೆ – ಪ್ರಧಾನಿ ನರೇಂದ್ರ ಮೋದಿ

ಭಾರತವು ಭಯೋತ್ಪಾದನೆಯನ್ನು ಸಹಿಸುವುದಿಲ್ಲ, ಪ್ರತಿಕ್ರಿಯಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

1 day ago

ಹವಾಮಾನ ವರದಿ | 12-05-2025 | ಇಂದು ರಾಜ್ಯದಾದ್ಯಂತ ಅಲ್ಲಲ್ಲಿ ಮಳೆಯ ಮುನ್ಸೂಚನೆ

ಮುಂಗಾರು ಅವಧಿಗೂ ಮುನ್ನವೇ ಆರಂಭವಾಗುವ ವರದಿಗಳು ಬರುತ್ತಿವೆ. ಈಗಾಗಲೇ ಹಿಂದುಮಹಾಸಾಗರ ಭಾಗದಿಂದ ಅರಬ್ಬಿ…

2 days ago

ಕೃಷಿ ಅಕಾಡೆಮಿ ರಚನೆ – ಮುಳಿಯ ಕೃಷಿ ಗೋಷ್ಟಿಯಲ್ಲಿ ಕೇಶವ ಪ್ರಸಾದ್ ಮುಳಿಯ |

ಕೃಷಿ ಕ್ಷೇತ್ರ ಅಭಿವೃದ್ಧಿಗಾಗಿ ಮುಳಿಯದ ಸಂಸ್ಥೆ ಸಹಯೋಗದಲ್ಲಿ ಕೃಷಿ ಅಕಾಡೆಮಿ ರಚನೆ ಮಾಡುವ…

2 days ago

ರಾಶಿಗಳಿಗೆ ಲಕ್ಷ್ಮಿದೇವಿ ಆಶೀರ್ವಾದದಿಂದ ಅಪಾರ ಸಂಪತ್ತು ಪ್ರಾಪ್ತಿ | ಏನು ಮಾಡ್ಬೇಕು? |

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

2 days ago