Advertisement
Opinion

‘ಸಾವಯವ’ ಪರಸ್ಪರ ಪೋಷಿಸುವ ಪ್ರಾಕೃತಿಕ ಸ್ವರೂಪ | ಅದನ್ನು ರಾಸಾಯನಿಕ ಜೊತೆ ಮಿಳಿತಗೊಳಿಸದಿರಿ..

Share

‘ಅಪಾಯಕಾರಿ ರಾಸಾಯನಿಕಗಳ(Chemical) ಬದಲು ಹಲವು ಸಾವಯವ(Organic) ಪರ್ಯಾಯಗಳಿವೆ’ ಎಂಬ ಮಾತು ಸಾವಯವ ಚಿಂತನಗಳಲ್ಲಿ ಕೇಳುತ್ತೇವೆ. ಕೃತಕ ಅಪಾಯಕಾರಿ(Danger) ರಾಸಾಯನಿಕಗಳ ಬದಲು ಅಷ್ಟೇ ಅಪಾಯಕಾರಿಯಾಗಿರುವ ಸಾವಯವ ಪರ್ಯಾಯಗಳನ್ನು ಹುಡುಕುವುದು ಸಾವಯವದ ಮೂಲ ಆಶಯ ಅಲ್ಲ. ‘ಸಾವಯವ’ ಪರಸ್ಪರ ಪೋಷಿಸುವ ಪ್ರಾಕೃತಿಕ ಸ್ವರೂಪ(Natural).

‘ಸಾವಯವ’ ಅನ್ನುವುದು ಪ್ರಾಕೃತಿಕ ಸಂಬಂಧಗಳನ್ನು -ಗುಣಗಳನ್ನು ಅರಿವಿಗೆ ತರುವ-ಅವೆಲ್ಲವುಗಳ ಜೊತೆ ಅವಿನಾಭಾವತೆ ಅರಳಿಸುವ-ಉಳಿಸುವ ವಿಶಿಷ್ಠ ಜೀವಕಲೆ. – ಗೋಮೂತ್ರ-ಗೋಮಯವನ್ನೇ ಹಾಕಿ ಬೆಳೆದು ಕೊನೆಯಲ್ಲಿ ‘ನಾನೇ ಬೆಳೆದದ್ದು’, ‘ನನ್ನ ಕ್ಷೇತ್ರದ ಇಳುವರಿ ಇಷ್ಟು’ ಎಂದು ಬೀಗುವ ಮಾತು ‘ಸಾವಯವ’ ಆದೀತೆ ? – ‘ನಾವು ಬೆಳೆದೆವು-ನಮ್ಮಲ್ಲಿ ಬೆಳೆಯಿತು – ಪ್ರಕೃತಿ ಬೆಳೆಸಿತು’ ಎನ್ನುವ ಮಾತುಗಳು ‘ಸಾವಯವ’. ಉಪಕೃತಭಾವದ ಮಾತು ‘ಸಾವಯವ’. – ವಿನೀತಭಾವದಿಂದ ಬೆಳೆದ ಬೆಳೆಗೆ ಪ್ರಕೃತಿ ಕೊಡುವ ಪ್ರಮಾಣ ‘ಸಾವಯವ’. – ‘ರಾಸಾಯನಿಕ ರಹಿತ’ ಎನ್ನುವುದಷ್ಟಕ್ಕೆ ‘ಸಾವಯವ’ ಸೀಮಿತವಾದ್ದಲ್ಲ. – ‘ಸಾವಯವ’ ಎನ್ನುವುದು ನಮ್ಮನ್ನು ಹಿರಿದು ಮಾಡುವ ಮಾತು. ಎಲ್ಲದರೊಳಗೊಂದು ಮಾಡುವ ಮಾತು. ‘ನಾನು’ ಎಂಬ ಭಾವವನ್ನು ಅಳಿಸುವ ಮಾತು. ‘ನಾವು’ ಎಂಬ ಪ್ರಜ್ಞೆಯನ್ನು ಪೋಷಿಸುವ ಮಾತು. – ‘ನಾನು’ ಎನ್ನುವುದೆ ರಾಸಾಯನಿಕ. ‘ನಾವು’ ಎನ್ನುವುದು ‘ಸಾವಯವ’. ದೃಷ್ಟಿ ಸರಿಯಿರದೆ ನೋಟ ಸರಿಯಾಗುವುದೆ ? ಎಂಬ ಪ್ರಶ್ನೆ ಹಲವು ಸಾವಯವ ಗೋಷ್ಠಿಗಳಲ್ಲಿ ಕಾಡುತ್ತಿರುತ್ತದೆ…

ಬರಹ :
ಆನಂದ ಆ. ಶ್ರೀ.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಹವಾಮಾನ ವರದಿ | 25.03.2026 | ಕರಾವಳಿಯಲ್ಲಿ ಇಂದು ಸಂಜೆ ಮಳೆ ಸಾಧ್ಯತೆ | ಏಪ್ರಿಲ್‌ 5ರವರೆಗೆ ಬೇಸಿಗೆ ಮಳೆ ಸಕ್ರಿಯ!

26.03.2026ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ರಾಜ್ಯದ ವಿವಿಧ…

5 hours ago

ಹವಾಮಾನ ವರದಿ | 24-03-2026 | ಕರ್ನಾಟಕದಲ್ಲಿ ಮತ್ತೆ ಮಳೆ ಅಲರ್ಟ್‌ | ಈ ದಿನದಿಂದ ಮಳೆ ವ್ಯಾಪ್ತಿ ಹೆಚ್ಚಳ ಸಾಧ್ಯತೆ..!

ರಾಜ್ಯದ ಹಲವು ಭಾಗಗಳಲ್ಲಿ ಸಂಜೆ ಗುಡುಗು ಸಹಿತ ಮಳೆಯ ಸಾಧ್ಯತೆ ಮುಂದುವರಿದಿದೆ. ಮಾರ್ಚ್‌…

1 day ago

ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ 4 ಸಾವಿರ ಹುದ್ದೆಗಳು ಖಾಲಿ – ಆರಂಭದಲ್ಲಿ 1 ಸಾವಿರ ಹುದ್ದೆಗಳ ಭರ್ತಿಗೆ ಕ್ರಮ

ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಸರ್ಕಾರ ಕ್ರಮ ಕೈಗೊಂಡಿದೆ. ಮಾನವ–ಆನೆ…

1 day ago

ಇನ್ಸ್ಪೈರ್ ಅವಾರ್ಡ್ ಗೆ ಅಜ್ಜಾವರ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಆಯ್ಕೆ

ಅಜ್ಜಾವರ ಸರ್ಕಾರಿ ಪ್ರೌಢಶಾಲೆಯ ಇಬ್ಬರು ವಿದ್ಯಾರ್ಥಿಗಳು INSPIRE Award ಗೆ ಆಯ್ಕೆಯಾಗಿದ್ದಾರೆ. ವೈಜ್ಞಾನಿಕ…

2 days ago

ನೆಮ್ಮದಿಗಾಗಿ ಬದುಕಿ; ಹಣ-ಅಧಿಕಾರಕ್ಕಾಗಿ ಅಲ್ಲ

ನೆಮ್ಮದಿಗಾಗಿ ಬದುಕಬೇಕು, ಹಣ-ಅಧಿಕಾರಕ್ಕಾಗಿ ಅಲ್ಲ ಎಂದು ರಾಮಚಂದ್ರಾಪುರ ಶ್ರೀಗಳು ಕರೆ ನೀಡಿದರು. ಸಂನ್ಯಾಸ…

2 days ago

ಅಡಿಕೆ ಆಮದು ಎಂಬ ‘ಮಾಯಾಜಾಲ’: ನಡೆಯುತ್ತಿದೆಯೇ ಬೆಳೆಗಾರರ ಮೇಲೆ ಸೈಕಲಾಜಿಕಲ್ ಅಟ್ಯಾಕ್…!?

ಅಡಿಕೆ ದರ ಇಳಿಕೆಗೆ ಆಮದುಗಿಂತ ಅಡಿಕೆ ಕೊಯ್ಲು ಕಾಲದ ಸರಬರಾಜು ಒತ್ತಡ ಮತ್ತು…

2 days ago