Opinion

ಕಾಲಿಟ್ಟಲ್ಲೆಲ್ಲಾ ಕಸ ಕಸ ಕಸ…… ಇದಕ್ಕೆ ನಾವೇನು ಮಾಡಬಹುದು? | ನಮ್ಮ ಜವಾಬ್ದಾರಿ ಏನು..? |

Share

ಕಸ,ಕಸ, ಕಸ… ಕಂಡಲ್ಲೆಲ್ಲ ಕಸ. ಕಾಲಿಟ್ಟಲ್ಲೆಲ್ಲ ಕಸ, ಕಸ, ಕಸ, ನಾವು ಮಾಡುವ ಕಸ, ಪರಿಸರದಲ್ಲಿ ಹಾಕುವ ಕಸ ನಿರ್ವಹಣೆ ಆಡಳಿತದಲ್ಲಿ ಇರುವವರಿಗೆ ದೊಡ್ಡ ಸಮಸ್ಯೆ, ಸವಾಲು ಕೂಡ. ಈ ನಿಟ್ಟಿನಲ್ಲಿ ನಾವೇನು ಮಾಡಬಹುದು? ಬಹಳಷ್ಟು ಜವಾಬ್ದಾರಿ ನಮ್ಮ ಮೇಲಿದೆ. ಕರ್ತವ್ಯವೂ ನಮ್ಮದಿದೆ. ಯಾಕೆಂದರೆ ಕಸದ ಸಮಸ್ಯೆಗೆ ಮೂಲ ಕಾರಣಿಗರು ನಾವೇ ಅಲ್ಲವೇ? ಪ್ರಸ್ತುತ ನಾವು ನಮ್ಮ ದಿನಚರಿಯಲ್ಲಿ ದಿನ ನಿತ್ಯದ ಬದುಕಿನಲ್ಲಿ ನಮ್ಮ ಮನೆಗಳಲ್ಲಿ ಕಸ ಕಡಿಮೆ ಮಾಡುವುದು, ಆ ಕಸವನ್ನು ವಿಲೇವಾರಿ ಮಾಡುವುದು ಹೇಗೆಂದು ತಿಳಿದುಕೊಳ್ಳೋಣ. ವಿಚಾರ ಒಪ್ಪಿತವಾದರೆ ಆಚರಣೆಗೆ ತರೋಣ:

Advertisement

 1.ಹಸಿಕಸ : ಹಸಿಕಸ ಇದ್ದುದರಲ್ಲಿ ನಿರ್ವಹಣೆ ಸುಲಭ. ಅಂಗಳ ಅಥವಾ ಹಿತ್ತಲು ಇದ್ದಲ್ಲಿ, ಒಂದು ಗುಂಡಿ ತೋಡಿ ಅದರಲ್ಲಿ ಹಾಕುತ್ತಾ ಬಂದರೆ ನಿಧಾನವಾಗಿ ಗೊಬ್ಬರವಾಗಿ ಪರಿವರ್ತನೆ ಆಗುತ್ತದೆ ಮನೆಯಂಗಳ/ ಹಿತ್ತಲಲ್ಲಿ ಬೆಳೆದ ತರಕಾರಿ/ಹೂವಿನ ಗಿಡಗಳಿಗೆ ಹಾಕಬಹುದು. ಪೇಟೆಯ ಬದಿಯಲ್ಲಿ ಸ್ಥಳ ಇಲ್ಲದವರು ಎರಡು ಬಕೆಟ್‌ನಲ್ಲಿ (ಒಂದು ತುಂಬಿದ ನಂತರ ಇನ್ನೊಂದಕ್ಕೆ) ಹಾಕಿ ಗೊಬ್ಬರ/ಎರೆ ಗೊಬ್ಬರ ಮಾಡಬಹುದು, ಇಲ್ಲವೇ ದನಗಳಿಗೆ ನೀಡಬಹುದು. ಸಾಧ್ಯವಾದಷ್ಟೂ ಹಸಿಕಸವನ್ನು ಪುರಸಭೆ/ ಪಂಚಾಯತಿಯ ಕಸದ ಗಾಡಿಗೆ ನೀಡದಿರುವುದು ಒಳಿತು. ಕೊಡುವುದಾದರೂ ಪ್ರತ್ಯೇಕವಾಗಿ ಕೊಡಿ.

2. ಕಾಗದದ ಒಣಕಸ : ಬಳಕೆ ಕಡಿಮೆ ಮಾಡಲು ಸಾದ್ಯವೇ ಎಂದು ಪ್ರಯತ್ನಿಸಿ. ಸೌದೆ ಒಲೆ/ಬಚ್ಚಲೊಲೆ ಇದ್ದಲ್ಲಿ ಇದನ್ನು ಬಳಸೋಣ. ಅಕಸ್ಮಾತ್ ಕಸದ ಗಾಡಿಗೆ ಕೊಡಬೇಕಾದಲ್ಲಿ ಪ್ರತ್ಯೇಕವಾಗಿಯೇ ನೀಡೋಣ. ಕಾಗದ ತಯಾರಿಕೆಯಲ್ಲಿ ಮರಹನನ ಆಗುತ್ತದೆಂಬುದು ನಮ್ಮ ಗಮನದಲ್ಲಿರಲಿ.

3. ಗಾಜಿನ ಕಸ : ಈ ಕಸವನ್ನು ಮನೆಯಲ್ಲಿ ಪ್ರತ್ಯೇಕವಾಗಿ ತೆಗೆದಿರಿಸೋಣ. ಸ್ವಲ್ಪ ದೊಡ್ಡ ಪ್ರಮಾಣದಲ್ಲಿ ಸಂಗ್ರಹವಾದ ನಂತರದಲ್ಲಷ್ಟೆ ಕಸದ ಗಾಡಿಗೆ ನೀಡೋಣ. ಮನೆಯಲ್ಲಿ ಇದರ ವಿಲೇವಾರಿ ಕಷ್ಟವಾದ್ದರಿಂದ ಗಾಡಿಗೆ ನೀಡುವುದು ಒಳಿತು. ಗಾಡಿಗೆ ಕೊಡುವಾಗ ಗಾಜಿನ ಕಸದ ಚೀಲವಿದೆಂದು ಹೇಳಿ ಕೊಡಿ.

4. ಪ್ಲಾಸ್ಟಿಕ್ ಕಸ : ಕಸಗಳಲ್ಲಿ ಪ್ರಮುಖವಾದದ್ದು, ನಿಭಾಯಿಸಲು ಕಷ್ಟಕರವಾದದ್ದು, ಪ್ರಪಂಚದಾದ್ಯಂತ ತಲೆನೋವು ಉಂಟು ಮಾಡಿರುವ ಕಸ ಅಂದರೆ ಪ್ಲಾಸ್ಟಿಕ್ ಕಸ. ಪ್ಲಾಸ್ಟಿಕ್ ವಿಷಯದಲ್ಲಿ ಒಂದು ಸೂತ್ರ/ವಿಚಾರ ನಮಗೆ ತಿಳಿದಿರಲಿ. ಅದೇ ಇಂಗ್ಲಿಷಿನ R ಅಕ್ಷರದ ಸೂತ್ರ (ಕನ್ನಡದಲ್ಲಿ ತಿ ಮಿ ಹಿ ಮ ) ಅರ್ಥೈಸಿಕೊಳ್ಳೋಣ, ಪಾಲಿಸೋಣ. REJECT ತಿರಸ್ಕರಿಸು REDUCE ಮಿತಗೊಳಿಸು RETURN ಹಿಂತಿರುಗಿಸಿ RE-USE ಮರು ಬಳಸು ಇದರಲ್ಲಿ ಮೊದಲಿನದು REJECT. ಸದಾ ನಾವು ಪ್ಲಾಸ್ಟಿಕ್ ಅನ್ನು ತಿರಸ್ಕರಿಸೋಣ, ತಿರಸ್ಕರಿಸೋಣ, ತಿರಸ್ಕರಿಸೋಣ. ಸರಿ, ಆದಾಗ್ಯೂ ಮನೆಗೆ ಈ ದಿನಗಳಲ್ಲಿ ಬಂದೇ ಬರುವ ಪ್ಲಾಸ್ಟಿಕ್ ಅನ್ನು ಏನು ಮಾಡುವುದು?

  • ಅಡುಗೆ ಮನೆಯಲ್ಲೊಂದು ಕತ್ತರಿ ಇರಲಿ, ಕವರನ್ನು ನೀಟಾಗಿ ಕತ್ತರಿಸಿ ಧವಸ ಧಾನ್ಯ/ಆಹಾರ ಪದಾರ್ಥಗಳನ್ನು ಸ್ಟ್ಟೀಲ್ ಡಬ್ಬ/ಪಾತ್ರೆಗೆ ಹಾಕಿ ಕವರನ್ನು ತೊಳೆದು ಬಟ್ಟೆ ಒಣಗಿಸುವಂತೆ ಒಣಗಿಸಿ ತಂದಲ್ಲಿಗೆ ಮರುಬಳಕೆಯ ಶರ್ತ ದೊಂದಿಗೆ ಹಿಂತಿರುಗಿಸಿ. ಅದರ ಚೂರುಗಳನ್ನು ಮರು ಬಳಸಲಾಗದ್ದನ್ನು ಒಂದು ಡಬ್ಬ/ಚೀಲದಲ್ಲಿ ತುಂಬಿಸಿಡಿ. ಆ ಡಬ್ಬ/ಚೀಲ ತುಂಬಿದ ನಂತರ ಕಸದ ಗಾಡಿಗೆ ಕೊಡಿ.
  • ಮರುಬಳಸಬಹುದಾದ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಡಬ್ಬ, ಬಾಟಲಿ, ಆಟಿಕೆಗಳನ್ನು ಮತ್ತೊಂದು ಚೀಲದಲ್ಲಿ ತುಂಬಿಸಿಡಿ. ಗುಜರಿಯವರಿಗೆ ಕೊಡಿ.
  • ಹಾಲಿನ ಕವರನ್ನು ನೀಟಾಗಿ ಕತ್ತರಿಸಿ, (ಕತ್ತರಿಸಿದ ಭಾಗವು ಕವರಿನಲ್ಲೇ ಉಳಿಯುವಂತೆ) ಹಾಲನ್ನು ಬಗ್ಗಿಸಿದ ನಂತರ ತೊಳೆದು ಒಣಗಿಸಿ. ಗುಜರಿಯವರು ತೂಕದ ಲೆಕ್ಕದಲ್ಲಿ ತೆಗೆದುಕೊಳ್ಳುತ್ತಾರೆ. ಸದಾ ಎಲ್ಲರ ಮನೆಯಲ್ಲಿ 5 ಬಕೆಟ್/ಡಬ್ಬ/ಚೀಲಗಳಿರಲಿ.

ಹಸಿ ಕಸ , ಪೇಪರ್ ಕಸ , ಗಾಜಿನ ತ್ಯಾಜ್ಯ  ಹಾಗೂ ಕಸದ ಗಾಡಿಗೆ ಕೊಡಬಹುದಾದ ಪ್ಲಾಸ್ಟಿಕ್ ಕಸ,  ಮರುಬಳಕೆಯ/ ಗುಜರಿಗೆ ನೀಡಬಹುದಾದ ತ್ಯಾಜ್ಯ ಮೇಲಿನ ಬರವಣಿಗೆ ನಮ್ಮ ಮನೆಯಲ್ಲಿರುವ ಆಚರಣೆ, ಮತ್ತು ನಮ್ಮ ದಿನ ನಿತ್ಯದ ಭಾಗ. ಅದನ್ನು ದಾಖಲಿಸಿದ್ದೇನಷ್ಟೆ. ಕಸ ನಿಯಂತ್ರಣಕ್ಕೆ/ ವಿಲೇವಾರಿಗೆ ದಾರಿಗಳು ನೂರಾರು ಇರಬಹುದು. ಬಲ್ಲವರು  ಹಂಚಿಕೊಂಡರೆ ಪರಿಸರ ಜಾಗೃತಿಗೆ ಕಾರಣವಾಗುತ್ತದೆ. ಒಟ್ಟಾರೆ ಇಲ್ಲಿ ನಮ್ಮ ಮನಸ್ಥಿತಿ , ಪರಿಸರ ಪೂರಕ ವಿಚಾರ, ವಿಚಾರದಂತೆ ಜೀವನ ಶೈಲಿ ಮುಖ್ಯ, ಆಚರಿಸಲು ಬಿಗಿ ನಿಲುವು ಅವಶ್ಯ. ಸಮಾಜದ ಮದ್ಯೆ, ಸಮಾಜದೊಂದಿಗೆ, ಸಮಾಜಕ್ಕಾಗಿ, ಪರಿಶುದ್ಧ ಪರಿಸರಕ್ಕಾಗಿ ನಮ್ಮ ನಡವಳಿಕೆಯನ್ನು, ದಿನಚರಿಯನ್ನು ರೂಪಿಸಿಕೊಳ್ಳೋಣ. ತನ್ಮೂಲಕ ನಮಗಾಗಿ, ನಮ್ಮ ಮುಂದಿನ ಪೀಳಿಗೆಗಾಗಿ ಸುಂದರ, ಸ್ವಚ್ಛ, ಶುಭ್ರ ಪರಿಸರವನ್ನು ಉಳಿಸಿಕೊಳ್ಳೋಣ.

ಬರಹ :
ಬಿ ಸಂ, ಕೃಷ್ಣ
, ಬಾಲಗಡಿ ಕೊಪ್ಪ

The Rural Mirror concern :

As responsible members of society, it is imperative that we take our role in waste management seriously. Proper waste disposal and recycling practices are essential in preserving the environment and ensuring a sustainable future for generations to come. By implementing effective waste management strategies, we can reduce the negative impact of waste on our surroundings and promote a cleaner, healthier environment. It is our duty to educate ourselves and others on the importance of proper waste management techniques and to actively participate in initiatives that promote recycling and waste reduction. Together, we can make a significant difference in protecting our planet for future inhabitants.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಅಡಿಕೆ ಬೆಳೆಗಾರರಿಗೆ ನಿಜವಾದ ಸಮಸ್ಯೆ ಯಾವುದು ? ಮುಂದೆ ಇರುವ ಸವಾಲುಗಳು ಯಾವುದು ?

ಅಡಿಕೆ ಬೆಳೆ ರಾಜ್ಯದಲ್ಲಿ ಮಾತ್ರವಲ್ಲ ತಮಿಳುನಾಡು, ಆಂಧ್ರಪ್ರದೇಶ ಸೇರಿದಂತೆ ವಿವಿಧ ಕಡೆಗಳಲ್ಲಿ ವಿಸ್ತರಣೆ…

7 hours ago

ಭಾರತದಲ್ಲಿ ಪ್ರಪ್ರಥಮವಾಗಿ ಮುಳಿಯದ ಮತ್ತೊಂದು ಹೊಸತನ | ವಜ್ರಗಳ LGD ಟೆಸ್ಟಿಂಗ್ ಮಿಷನ್

ಶುದ್ಧತೆಯ ವಿಚಾರ ಬಂದಾಗ ನಂಬಿಕೆಯೂ ಮುಖ್ಯ. ಅದಕ್ಕಾಗಿ, 8 ದಶಕಗಳಿಂದ ನಿಮ್ಮ ಎದುರಿನಲ್ಲಿ…

15 hours ago

ಹವಾಮಾನ ಬದಲಾವಣೆಯ ಪರಿಣಾಮ | ಬಾಂಗ್ಲಾದಲ್ಲಿ ಹೆಚ್ಚಾಗಲಿರುವ ಚಂಡಮಾರುತ |

ಹವಾಮಾನ ಬದಲಾವಣೆ ಪ್ರಪಂಚದ ಎಲ್ಲೆಡೆಯೂ ಸವಾಲಾಗುತ್ತಿದೆ.ತಾಪಮಾನ ಏರಿಕೆಯ ಕಾರಣದಿಂದ ಚಂಡಮಾರುತಗಳ ಸಂಖ್ಯೆ  ಹೆಚ್ಚಾಗುವ…

16 hours ago

ಹವಾಮಾನ ವರದಿ | 15-04-2025 | ಕೆಲವು ಕಡೆ ತುಂತುರು ಮಳೆ | ಎ.19 ರಿಂದ ಕೆಲವು ಕಡೆ ಉತ್ತಮ ಮಳೆ ಸಾಧ್ಯತೆ |

ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಘಟ್ಟದ ಕೆಳಗಿನ ಪ್ರದೇಶಗಳಲ್ಲಿ ಅಲ್ಲಲ್ಲಿ ಸಂಜೆ…

18 hours ago

ಬುಧನ ಚಲನೆ | 3 ರಾಶಿಗೆ ಸಂಪತ್ತಿನ ಮಳೆ, ಯಶಸ್ಸು

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

22 hours ago

ಹರಿಯಾಣ | 800 ಮೆ.ವ್ಯಾ.ವಿದ್ಯುತ್ ಉತ್ಪಾದನಾ ಘಟಕಕ್ಕೆ ಪ್ರಧಾನಿ ಮೋದಿ ಚಾಲನೆ

ಹರಿಯಾಣ ಪ್ರವಾಸದಲ್ಲಿರುವ  ಪ್ರಧಾನಿ ನರೇಂದ್ರ ಮೋದಿ ಯಮುನಾ ನಗರದಲ್ಲಿ ಇಂದು ಧೀನಬಂಧು ಚೋಟು…

1 day ago