Advertisement
MIRROR FOCUS

ನಿಯಂತ್ರಣಕ್ಕೆ ಬಾರದ ದೆಹಲಿ ವಾಯು ಮಾಲಿನ್ಯ | ಹೊಗೆ ಮತ್ತು ಮಂಜಿನಿಂದ ಆವೃತವಾದ ತಾಜ್​ ಮಹಲ್​ |ಪ್ರವಾಸಿಗರಿಗೆ ನಿರಾಸೆ

Share

ರಾಷ್ಟ್ರ ರಾಜಧಾನಿ ದೆಹಲಿಯ ವಾತಾವರಣ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ನಿಯಂತ್ರಣಕ್ಕೆ ತರಲು ಅನೇಕ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆಯಾದರೂ ಕೈ ಮೀರಿ ಹೋಗುತ್ತಿದೆ. ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಇದೀಗ ದೆಹಲಿಯಲ್ಲಿನ ವಾಯು ಮಾಲಿನ್ಯ ತಾಜ್​ಮಹಲ್​ಗೂ ತಟ್ಟಿದೆ. ತಾಜ್​ಮಹಲ್​ ನೋಡಲೆಂದು ಆಗ್ರಾ ಗೆ ಹೋಗುವ ತಮ್ಮ ಪ್ಲಾನ್‌ ಅನ್ನು ಕೊಂಚ ಮುಂದಕ್ಕೆ ಹಾಕಿ.

ದೆಹಲಿಯಲ್ಲಿ ವಾತಾವರಣ ಕುರಿತು ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ನೀಡಿದ ಮಾಹಿತಿ ಪ್ರಕಾರ ದೆಹಲಿಯ ಒಟ್ಟಾರೆ ವಾಯು ಗುಣಮಟ್ಟ ಸೂಚ್ಯಂಕ (AQI) ತೀವ್ರವಾಗಿ ಇಳಿಕೆ ಕಂಡಿದೆ. ಇನ್ನು ರಾಷ್ಟ್ರೀಯ ರಾಜಧಾನಿ ಪ್ರದೇಶದ (NCR) ಇತರ ಭಾಗಗಳಲ್ಲಿನ ಗಾಳಿಯ ಗುಣಮಟ್ಟವು ದೆಹಲಿಯಂತೆಯೇ ಇಳಿಕೆ ಕಂಡಿದೆ ಎನ್ನಲಾಗಿದೆ. ದೆಹಲಿ-ಎನ್‌ಸಿಆರ್‌ನಲ್ಲಿ ಗಾಳಿಯ ಗುಣಮಟ್ಟ ತೀವ್ರವಾಗಿ ಇಳಿಕೆಯಾಗಿರುವುದರಿಂದ, ಸೌಂದರ್ಯದಿಂದಲೇ ವಿಶ್ವವಿಖ್ಯಾತ ಕಟ್ಟಡವಾಗಿರುವ ಆಗ್ರಾದ ತಾಜ್ ಮಹಲ್ ಸೌಂದರ್ಯವೂ ಈ ಮಾಲಿನ್ಯದಿಂದ ಹದಗೆಟ್ಟಿದೆ. ದೆಹಲಿಯಲ್ಲಿನ ವಾಯು ಮಾಲಿನ್ಯ ತಾಜ್​ಮಹಲ್​ಗೂ ತಟ್ಟಿದೆ. ಹೊಗೆ ಮತ್ತು ಹಿಮದಿಂದಾಗಿ ತಾಜ್ ಮಹಲ್​ನ ಸೌಂದರ್ಯವೇ ಕಾಣುತ್ತಿಲ್ಲ. ದೂರದಿಂದ ನೋಡಿದ್ರೆ ತಾಜ್ ಮಹಲ್ ಸಂಪೂರ್ಣವಾಗಿ ಧೂಳು ಮತ್ತು ಹೊಗೆಯಿಂದ ಆವೃತವಾಗಿದೆ.
ದೆಹಲಿ NCR ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಮಾಲಿನ್ಯದ ಪರಿಣಾಮವು ಆಗ್ರಾದಲ್ಲಿನ ಸ್ಮಾರಕಗಳ ಮೇಲೂ ಗೋಚರಿಸುತ್ತಿದೆ. ತಾಜ್ ಮಹಲ್‌ನ ನೈಜ ಸೌಂದರ್ಯ ಮಾಲಿನ್ಯದಿಂದಾಗಿ ಮುಚ್ಚಿಹೋಗಿದೆ. ಇನ್ನು ದೀಪಾವಳಿಗೂ ಮುನ್ನವೇ ಆಗ್ರಾ ನಗರದಲ್ಲಿ ವಾಯು ಮಾಲಿನ್ಯ ತೀವ್ರವಾಗಿ ಹೆಚ್ಚಾಗಿದೆ. ಗಾಳಿಯಲ್ಲಿ ಧೂಳಿನ ಕಣಗಳು ಮತ್ತು ಹೊಗೆಯ ಪ್ರಮಾಣ ನಿರಂತರವಾಗಿ ಹೆಚ್ಚುತ್ತಿದೆ. ಮಾಧ್ಯಮ ವರದಿಗಳ ಪ್ರಕಾರ, ದೆಹಲಿ ಎನ್‌ಸಿಆರ್, ಹರಿಯಾಣ, ಗುರ್‌ಗಾಂವ್‌ನಿಂದ ಮಾಲಿನ್ಯದ ಹೊಗೆಯು ಆಗ್ರಾ ಕಡೆಗೆ ಚಲಿಸುತ್ತಿದೆ. ದೀಪಾವಳಿಗೆ ಮುಂಚಿತವಾಗಿ, ಆಗ್ರಾದ ವಾಯು ಗುಣಮಟ್ಟ ಸೂಚ್ಯಂಕ (AQI) 200 ದಾಟಿದೆ. ಗಾಳಿಯಲ್ಲಿರುವ ಸೂಕ್ಷ್ಮ ಕಣಗಳ ಸಂಖ್ಯೆ PM 2.5 ಆಗಿದೆ.

ವ್ಯೂ ಪಾಯಿಂಟ್‌ನಿಂದಲೂ ನೀವು ತಾಜ್‌ನ ಸೌಂದರ್ಯವನ್ನು ನೋಡಿ ಆನಂದಿಸಲು ಸಾಧ್ಯವಿಲ್ಲ. ತಾಜ್‌ಮಹಲ್‌ನ ಸೌಂದರ್ಯವನ್ನು ನೋಡಲು ಪ್ರತಿದಿನ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ವ್ಯೂ ಪಾಯಿಂಟ್‌ಗೆ ಭೇಟಿ ನೀಡುತ್ತಾರೆ. ಪ್ರವಾಸಿಗರು ಮೆಹ್ತಾ ಬಾಗ್ ವ್ಯೂ ಪಾಯಿಂಟ್, ಯಮುನಾ ತೆಂಡಾರಿ, ದಸರಾ ಘಾಟ್‌ನಿಂದ ತಾಜ್ ಮಹಲ್‌ನ ಸೌಂದರ್ಯವನ್ನು ನೋಡಬಹುದು. ಆದ್ರೆ ಈಗ ಅದೂ ಸಾಧ್ಯವಿಲ್ಲ. ಬೆಳಗ್ಗಿನ ವೇಳೆಯೂ ತಾಜ್​ಮಹಲ್ ಹೊಗೆ ಮತ್ತು ಮಂಜಿನಿಂದ ಸಂಪೂರ್ಣವಾಗಿ ಆವೃತವಾಗಿರುತ್ತದೆ. ದೀಪಾವಳಿ ನಂತರ ಪರಿಸ್ಥಿತಿ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ದೀಪಾವಳಿಗೆ ಇನ್ನು ಒಂದು ವಾರವೂ ಇಲ್ಲ. ಈ ಅವಧಿಯಲ್ಲಿ ಜನರು ಪಟಾಕಿಗಳನ್ನು ಸಹ ಸುಡುತ್ತಾರೆ. ಇದರಿಂದ ಮಾಲಿನ್ಯ ಹೆಚ್ಚಾಗಲಿದೆ. ಆಗ್ರಾದಲ್ಲಿ ಐದು ದಿನಗಳ ಕಾಲ ಪಟಾಕಿ ಸಿಡಿಸಲಾಗುತ್ತದೆ. ಹೀಗಾಗಿ ವಾತಾವರಣ ಹೊಗೆಯಿಂದ ತುಂಬುವ ಸಾಧ್ಯತೆಗಳಿರುತ್ತದೆ. ತಾಪಮಾನ ಕಡಿಮೆಯಾದಾಗ ಮಂಜು ಕೂಡ ಹೆಚ್ಚಾಗುತ್ತದೆ.

According to the information provided by the Central Pollution Control Board about the atmosphere in Delhi, the overall air quality index of Delhi has decreased drastically. As the air quality in Delhi-NCR has drastically decreased, the beauty of Agra's Taj Mahal, a world famous building for its beauty, has also deteriorated due to this pollution. Due to smoke and snow, the beauty of Taj Mahal is not visible. From a distance, the Taj Mahal is completely covered in dust and smoke.
- ಅಂತರ್ಜಾಲ ಮಾಹಿತಿ
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಕೃಷಿ ಇನ್ನು ಕೇವಲ ಬೆಳೆ ಬೆಳೆಯುವುದಲ್ಲ – ಯುವಕರಿಗೆ ಸ್ಟಾರ್ಟ್‌ಅಪ್ ಕ್ಷೇತ್ರ

ಕೃಷಿ ಮತ್ತು ಕೃಷಿ ಸಂಬಂಧಿತ ಕ್ಷೇತ್ರಗಳು ಯುವ ಉದ್ಯಮಶೀಲತೆಗೆ ಮುಂದಿನ ದೊಡ್ಡ ಅವಕಾಶಗಳಾಗಿದ್ದು,…

1 hour ago

ಬರಪೀಡಿತ ಪ್ರದೇಶಗಳ ರೈತರಿಗೆ ಗುಡ್‌ನ್ಯೂಸ್ ; ಬೆಳೆ ವಿಮೆ ನೋಂದಣಿ ಅವಧಿ ವಿಸ್ತರಣೆ

ಕರ್ನಾಟಕದ ಬರಪೀಡಿತ ಪ್ರದೇಶಗಳಲ್ಲಿ ಬೆಳೆ ವಿಮೆ ನೋಂದಣಿ ಹಾಗೂ ಪ್ರೀಮಿಯಂ ಕಡಿತದ ಅವಧಿಯನ್ನು…

10 hours ago

ರಾಜ್ಯದ 102 ತಾಲೂಕುಗಳಲ್ಲಿ ಬರದ ಛಾಯೆ – ತಿಂಗಳಾಂತ್ಯಕ್ಕೆ ಕೇಂದ್ರಕ್ಕೆ ವರದಿ ಸಲ್ಲಿಕೆ

ಕರ್ನಾಟಕದ 102 ತಾಲೂಕುಗಳಲ್ಲಿ ಬರ ಪರಿಸ್ಥಿತಿ ಉಂಟಾಗಿದ್ದು, ಈ ತಿಂಗಳಾಂತ್ಯಕ್ಕೆ ಕೇಂದ್ರ ಸರ್ಕಾರಕ್ಕೆ…

10 hours ago

ಮಂಗಳೂರಿನ ಅಶ್ಮಿತ್ ಎ.ಜೆ. ಅವರಿಗೆ ‘ಸರಿಗಮಪ 2026’ರ ಕಿರೀಟ

ಮಂಗಳೂರಿನ ಅಶ್ಮಿತ್ ಎ.ಜೆ. ಅವರು ಝೀ ಕನ್ನಡದ ‘ಸರಿಗಮಪ 2026’ರ ವಿಜೇತರಾಗಿ ₹20…

11 hours ago

ಮಲೆನಾಡು ತಪ್ಪಲಲ್ಲಿ ಧಾರಾಕಾರ ಮಳೆ – ಹಲವು ಕಡೆ ಕೆಲವೇ ಗಂಟೆಯಲ್ಲಿ 100 ಮಿಮೀ ದಾಟಿದ ಮಳೆ

ದಕ್ಷಿಣ ಕನ್ನಡದ ಮಲೆನಾಡು ತಪ್ಪಲಿನ ಸುಬ್ರಹ್ಮಣ್ಯ, ಸುಳ್ಯ, ಕಡಬ ಸೇರಿದಂತೆ ಹಲವು ಪ್ರದೇಶಗಳಲ್ಲಿ…

19 hours ago

ಹವಾಮಾನ ವರದಿ |25-08-2026 | ಕರಾವಳಿ, ಮಲೆನಾಡಿನಲ್ಲೂ ಬಿಡುವಿನ ಅವಧಿ ಹೆಚ್ಚಳ -ಕೆಲವೆಡೆ ಉತ್ತಮ ಮಳೆ – ರಾಜ್ಯದಲ್ಲಿ ಮಳೆ ಪರಿಸ್ಥಿತಿ ಹೇಗೆ..?

ಆಗಸ್ಟ್ 26ರಿಂದ ಕರ್ನಾಟಕದ ಬಹುತೇಕ ಭಾಗಗಳಲ್ಲಿ ಮಳೆಯ ಪ್ರಮಾಣ ಕಡಿಮೆಯಾಗುವ ಲಕ್ಷಣಗಳಿದ್ದು, ಕರಾವಳಿ…

19 hours ago