ಪ್ಯಾರಾ ಮೆಡಿಕಲ್ ಕೋರ್ಸ್ನ ಕೌನ್ಸೆಲಿಂಗ್ ಕೂಡಾ ಆಗಿಲ್ಲ. ಮ್ಯಾನೇಜ್ಮೆಂಟ್ ಸೀಟ್ ಫುಲ್ ಮಾಡಲು ಅವಕಾಶ ಮಾಡಿಕೊಟ್ಟು ಕ್ಲಾಸ್ ಆರಂಭಿಸಿದ್ದಾರೆ. ಆದರೆ ಅಪ್ಲಿಕೇಶನ್ ಹಾಕಿ ಸೀಟಿಗಾಗಿ ಕಾಯುತ್ತಾ ಇರುವ ವಿದ್ಯಾರ್ಥಿಗಳು ಅತಂತ್ರರಾಗಿದ್ದಾರೆ ಎಂದು ಮಾಜಿ ಸಚಿವ ಯುಟಿ ಖಾದರ್ ಹೇಳಿದರು.
ಮಂಗಳೂರು ನಗರದ ಸರ್ಕ್ಯೂಟ್ ಹೌಸ್ ನಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಯು ಟಿ ಖಾದರ್, ಕೂಡಲೇ ಪ್ಯಾರಾ ಮೆಡಿಕಲ್, ನೀಟ್ ಕೌನ್ಸಿಲಿಂಗ್ ಮಾಡಲು ಸರ್ಕಾರ ತಕ್ಷಣ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.ದ್ವಿತೀಯ ಪಿಯುಸಿ ಪರೀಕ್ಷೆ ಆದ ನಂತರ ನಮ್ಮಲ್ಲಿ ಫಲಿತಾಂಶ ಲೇಟಾಗಿ ಬರುತ್ತದೆ. ಹೀಗಾಗಿ ಕೌನ್ಸಿಲಿಂಗ್ ಅಲ್ಲದವರು ಬೇರೆ ಕೋರ್ಸ್ ಗೆ ಹೋಗಲು ಆಗಲ್ಲ. ಆಗ ಕೇರಳ ವಿದ್ಯಾರ್ಥಿಗಳು ಇಲ್ಲಿಗೆ ಬಂದು ಅಡ್ಮಿಶನ್ ಮಾಡಿಸುತ್ತಾರೆ ಎಂದರು.ಹೀಗಾಗಿ ವಿದ್ಯಾರ್ಥಿಗಳ ನೋವನ್ನು ಸರ್ಕಾರ ಅರಿತುಕೊಳ್ಳಬೇಕು ಎಂದು ಯು.ಟಿ ಖಾದರ್ ಆಗ್ರಹಿಸಿದರು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel