Advertisement
MIRROR FOCUS

ಎಲ್ಲಾ ಆಯ್ತು.. ಈಗ ಪಾನ್‌ ಉಗುಳುವುದು ಜಾಗತಿಕ ಸಮಸ್ಯೆಯಂತೆ…!

Share

ಸಾರ್ವಜನಿಕ ಆರೋಗ್ಯ ಮತ್ತು ಕಸದ ಸಮಸ್ಯೆ ಹಾಗೂ ಪಾನ್‌ ಉಗುಳುವ ಸಮಸ್ಯೆಯ ಕಾರಣದಿಂದ ತಂಬಾಕು ಮತ್ತು ಅಡಿಕೆ ಹೊಂದಿರುವ ಪಾನ್ ಉತ್ಪನ್ನಗಳನ್ನು ನಿಷೇಧಿಸುವಂತೆ ‌ ಬ್ರೆಂಟ್ ಕೌನ್ಸಿಲ್  ಬ್ರಿಟಿಷ್ ಸರ್ಕಾರವನ್ನು ಕೋರಿದೆ. ಸಮಸ್ಯೆಯನ್ನು ಸಮಗ್ರವಾಗಿ ಪರಿಹರಿಸಲು ರಾಷ್ಟ್ರೀಯ ನೀತಿ ಬದಲಾವಣೆಗಳನ್ನು ಒತ್ತಾಯಿಸುತ್ತದೆ ಎಂದು ಬ್ರಿಟಿಷ್‌ ಸರ್ಕಾರವನ್ನು ಒತ್ತಾಯಿಸಿದೆ. ಈ ಹಿಂದೆಯೂ ಸರ್ಕಾರವನ್ನು ಒತ್ತಾಯ ಮಾಡಲಾಗಿತ್ತು, ಇದೀಗ ಮತ್ತೆ ಅಡಿಕೆ ಹಾನಿಕಾರಕ ಎಂದೂ ಉಲ್ಲೇಖಿಸಿ ಮನವಿ ಮಾಡಲಾಗಿದೆ.

ದಕ್ಷಿಣ ಏಷ್ಯಾದ ಪಾರಂಪರಿಕ ಜನಸಂಖ್ಯೆಯನ್ನು ಹೊಂದಿರುವ ವಾಯುವ್ಯ ಲಂಡನ್‌ನ ಒಂದು ಪ್ರಾಂತ್ಯವು, ಹೆಚ್ಚುತ್ತಿರುವ ಪಾನ್ ಅಗಿಯುವ ಮತ್ತು ಉಗುಳುವ ಸಮಸ್ಯೆಯ ಬಗ್ಗೆ ಈಗ ಚರ್ಚೆ ಆರಂಭವಾಗಿದೆ. ಹೆಚ್ಚುತ್ತಿರುವ ಸಾರ್ವಜನಿಕ ಆರೋಗ್ಯದ ಅಪಾಯ ಮತ್ತು ಸ್ವಚ್ಛತೆಯ ಸಮಸ್ಯೆ ಕಾಡುತ್ತಿದೆ ಎನ್ನುವುದು ಸಮಸ್ಯೆಯ ಮೂಲ. ಲಂಡನ್‌ನ ವೆಂಬ್ಲಿಯಂತಹ ಪ್ರದೇಶಗಳಲ್ಲಿ ಪಾದಚಾರಿ ದಾರಿಗಳು ಕೆಂಪು ಬಣ್ಣಗಳಿಂದ ಕೂಡಿದೆ.  ಇದರ ಸ್ವಚ್ಛತೆಗಾಗಿ  ಪ್ರತಿ ವರ್ಷ 30,000 ಪೌಂಡ್‌ಗಳಿಗಿಂತ ಹೆಚ್ಚು (ರೂ. 35 ಲಕ್ಷ) ಖರ್ಚು ಮಾಡುತ್ತಿದೆ ಎಂದು ಪ್ರಾಧಿಕಾರವು ಹೇಳಿದೆ.

ವೆಂಬ್ಲಿ ಮತ್ತು ಈಲಿಂಗ್ ರಸ್ತೆಯಂತಹ ಪ್ರದೇಶಗಳನ್ನು ನೋಡಿಕೊಳ್ಳುವ ಬ್ರೆಂಟ್ ಕೌನ್ಸಿಲ್, ತಂಬಾಕು ಅಥವಾ ಅಡಿಕೆ ಹೊಂದಿರುವ ಪಾನ್ ಉತ್ಪನ್ನಗಳ ಮೇಲೆ ತಕ್ಷಣದ ರಾಷ್ಟ್ರೀಯ ನಿಷೇಧವನ್ನು ಕೋರಿ ಯುಕೆ ಸರ್ಕಾರದ ಪ್ರಮುಖ ಮಂತ್ರಿಗಳಿಗೆ ಪತ್ರ ಬರೆದಿದೆ. ಅಡಿಕೆ, ತಂಬಾಕು ಮತ್ತು ಮಸಾಲೆಗಳಯನ್ನು ಅಗಿಯುವುದು ಮತ್ತು ನಂತರ ಉಗುಳುವುದು,  ಶುಚಿಗೊಳಿಸುವ ಯಂತ್ರಗಳಿಗೆ ಸಹ ಸ್ವಚ್ಛತೆಗೆ ಸಮಸ್ಯೆಯಾಗುತ್ತದೆ ಎಂದು ಕೌನ್ಸಿಲ್ ಹೇಳಿದೆ.  ಲಂಡನ್‌ನಾದ್ಯಂತ ಪಾನ್ ಅಥವಾ ಗುಟ್ಕಾದ ಕಾರಣದಿಂದ ಫುಟ್‌ಪಾತ್‌ಗಳು, ಅಂಗಡಿ ಮುಂಗಟ್ಟುಗಳು ಮತ್ತು ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛಗೊಳಿಸಲು ಪ್ರತಿ ವರ್ಷ 30,000 ಪೌಂಡ್‌ಗಳಿಗೂ ಹೆಚ್ಚು (ರೂ. 35 ಲಕ್ಷ) ಖರ್ಚು ಮಾಡಲಾಗುತ್ತಿದೆ. ಈ ಸಮಸ್ಯೆ ಈಗ ಲಂಡನ್‌ನಾದ್ಯಂತ ಗೋಚರಿಸುತ್ತಿದೆ ಎಂದು ಗಮನ ಸೆಳೆದಿದೆ. ತಂಬಾಕು ಅಥವಾ ಅಡಿಕೆ ಹೊಂದಿರುವ ಪಾನ್ ಮಾರಾಟವನ್ನು ನಿಷೇಧಿಸಲು, ಅಕ್ರಮ ಪೂರೈಕೆ ಜಾಲಗಳನ್ನು ಹತ್ತಿಕ್ಕಲು ಕ್ರಮ ಕೈಗೊಳ್ಳಬೇಕು ಎಂದು ಬ್ರೆಂಟ್ ಕೌನ್ಸಿಲ್ ಸರ್ಕಾರವನ್ನು ಕೇಳಿದೆ. ಈಗ ಪಾನ್‌ ಉಗುಳುವುದು ಸ್ಥಳಿಯ ಸಮಸ್ಯೆಯಲ್ಲ, ಅದೊಂದು ಜಾಗತಿಕ ಸಮಸ್ಯೆಯಾಗುತ್ತಿದೆ ಎಂದೂ ಉಲ್ಲೇಖಿಸಿದೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಎಲೆಯ ಫೋಟೋ ತೆಗೆದರೆ AI ಕೀಟ ಯಾವುದೆಂದು ಹೇಳುತ್ತದೆ…! – 73 ಬೆಳೆಗಳ ಮೇಲೆ ಭಾರತದ ಹೊಸ ಕೃಷಿ ಕಣ್ಗಾವಲು

ಭಾರತದ ರಾಷ್ಟ್ರೀಯ ಕೀಟ ಕಣ್ಗಾವಲು ವ್ಯವಸ್ಥೆ ಈಗ 73 ಬೆಳೆಗಳು ಮತ್ತು 436…

36 minutes ago

ಹವಾಮಾನ ವರದಿ | 24-08-2026 | ಕರಾವಳಿಯಲ್ಲಿ ಮಳೆ ಮುಂದುವರಿಕೆ – ಕರ್ನಾಟಕದಲ್ಲಿ ಮಳೆ ಪರಿಸ್ಥಿತಿ ಹೇಗೆ..?

ಕರ್ನಾಟಕದ ಕರಾವಳಿ ಹಾಗೂ ಮಲೆನಾಡಿನಲ್ಲಿ ಆಗಸ್ಟ್ 26ರವರೆಗೆ ಮೋಡ ಮತ್ತು ಅಲ್ಲಲ್ಲಿ ಬಿಟ್ಟುಬಿಟ್ಟು…

11 hours ago

ಉದ್ಯೋಗಗಳಿಲ್ಲವೇ? ಅಥವಾ ಉದ್ಯೋಗಕ್ಕೆ ಬೇಕಾದ ಕೌಶಲ್ಯವಿರುವವರು ಇಲ್ಲವೇ?

ಭಾರತದಲ್ಲಿ ಸಮಸ್ಯೆ ಕೇವಲ ಉದ್ಯೋಗಗಳ ಕೊರತೆಯಲ್ಲ, ಉದ್ಯೋಗಕ್ಕೆ ಅಗತ್ಯವಾದ ಕೌಶಲ್ಯ ಹೊಂದಿದ ಅಭ್ಯರ್ಥಿಗಳ…

16 hours ago

ಅಡಿಕೆ ರೋಗ ನಿಯಂತ್ರಣಕ್ಕೆ ಕೇಂದ್ರದ ಬೆಂಬಲ – ಕ್ಯಾ. ಚೌಟಗೆ ಸಚಿವ ಶಿವರಾಜ್‌ ಸಿಂಗ್‌ ಚೌಹಾಣ್ ಭರವಸೆ

ಕರಾವಳಿ ಮತ್ತು ಮಲೆನಾಡಿನ ಅಡಿಕೆ ತೋಟಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಎಲೆಚುಕ್ಕೆ, ಹಳದಿ ಎಲೆ ಹಾಗೂ…

1 day ago

ಹವಾಮಾನ ವರದಿ | 23-08-2026 | ಆಗಸ್ಟ್ 25 ರವರೆಗೆ ಮಳೆ – ಕರಾವಳಿ-ಮಲೆನಾಡಿನಲ್ಲಿ ಉತ್ತಮ ಮಳೆ ಸಾಧ್ಯತೆ

ಕರ್ನಾಟಕದಲ್ಲಿ ಮುಂಗಾರು ಮತ್ತೆ ಚುರುಕಾಗಿದ್ದು, ಕರಾವಳಿ ಮತ್ತು ಮಲೆನಾಡಿನಲ್ಲಿ ಆಗಸ್ಟ್ 25ರವರೆಗೆ ಮಳೆ…

1 day ago