ಅಡಿಕೆಯ ನಾಡು ದಕ್ಷಿಣ ಕನ್ನಡ. ಒಂದು ಕಾಲದಲ್ಲಿ ಭತ್ತದ ನಾಡಾಗಿತ್ತು. ಕಾಲ ಕ್ರಮೇಣ ಅಡಿಕೆ, ರಬ್ಬರ್ ಊರಾಗಿ ಬೆಳೆಯಿತು. ಈ ನಡುವೆಯೇ ಇಲ್ಲೊಬ್ಬರು ನೇಗಿಲ ಯೋಗಿಯಾದರು. ಅದಕ್ಕೆ ಅವರು ಆಯ್ಕೆ ಮಾಡಿದ್ದು ಮನೆಯಂಗಳ. ಅಂಗಳದಲ್ಲಿ ಬೇಸಾಯ ಮಾಡಿ ಅದರಲ್ಲಿ ಯಶಸ್ಸನ್ನು ಕಂಡಿದ್ದಾರೆ. ಈ ಯಶಸ್ಸು ಮಾದರಿಯೂ ಹೌದು, ಏಕೆಂದರೆ ಅವರು ಗ್ರಾ ಪಂ ಅಧ್ಯಕ್ಷ…!
ಮಳೆಗಾಲ ಪೂರ್ತಿ ಖಾಲಿ ಬಿದ್ದಿರುವ 5 ಸೆಂಟ್ಸ್ ಅಂಗಳವನ್ನು ದಕ್ಷಿಣ ಕನ್ನಡ ಜಿಲ್ಲೆಯ ಕೊಕ್ಕಡ ಗ್ರಾಮ ಪಂಚಾಯತ್ ಅಧ್ಯಕ್ಷ ಯೋಗೀಶ್ ಆಲಂಬಿಲ ಅವರು ಸದುಪಯೋಗಪಡಿಸಿಕೊಂಡು ಅದರಲ್ಲಿ ಬೇಸಾಯವನ್ನು ಮಾಡಿ ಒಂದೂವರೆ ಕ್ವಿಂಟಲ್ ಭತ್ತವನ್ನು ಕಟಾವು ಮಾಡಿಸಿದ್ದಾರೆ.
ಕರಾವಳಿ ಜಿಲ್ಲೆಯ ಕೃಷಿಕರ ಅಂಗಳದಲ್ಲಿ ನವೆಂಬರ್ ತಿಂಗಳಿನಿಂದ ಮೇ ತಿಂಗಳ ತನಕ ಅಡಿಕೆಯನ್ನು ಒಣಗಿಸುವ ಪದ್ಧತಿ ಇದೆ. ಆದರೆ ಅಥವಾ ಜೂನ್ ತಿಂಗಳ ಆರಂಭದಿಂದ ಅಕ್ಟೋಬರ್ ತನಕ ಅಂಗಳದಲ್ಲಿ ಅಡಿಕೆಯನ್ನು ಒಣಗಿಸುವ ಪದ್ಧತಿ ತೀರ ಕಡಿಮೆ. ಅತಿಯಾದ ಮಳೆ ಹಾಗೂ ಅಂಗಳದಲ್ಲಿ ಹುಲ್ಲು ಬೆಳೆಯುವ ಕಾರಣ ಅಡಿಕೆ ಒಣಗಿಸುವುದಕ್ಕೆ ಪರ್ಯಾಯ ವ್ಯವಸ್ಥೆಯನ್ನು ಇಲ್ಲಿನವರು ಕಂಡುಕೊಂಡಿದ್ದಾರೆ.
ಮೊದಲಿಗೆ ಅಂಗಳಕ್ಕೆ ದಪ್ಪನಾಗಿ ಅಡಿಕೆಯ ಸೋಗೆಯನ್ನು ಹಾಸಿ ಎರಡು ಮಳೆಗೆ ಬಿಡುತ್ತಾರೆ. ನಂತರ ಮೊಳಕೆಬರಿಸಿದ ಭತ್ತವನ್ನು ಅದಕ್ಕೆ ಬಿತ್ತುತ್ತಾರೆ. ಬಿತ್ತಿದ್ದನ್ನು ಹಕ್ಕಿಗಳು ಅಥವಾ ಸಣ್ಣ ಪ್ರಾಣಿಗಳು ತಿನ್ನದಂತೆ ಅದರ ಮೇಲೆ ಒಣಗಿದ ಅಡಿಕೆ ಸಿಪ್ಪೆಯನ್ನು ತೆಳುವಾಗಿ ಹರಡುತ್ತಾರೆ. ಇಲ್ಲಿಗೆ ಬಿತ್ತುವ ಕಾರ್ಯ ಮುಗಿಯಿತು. ಒಂದು ವಾರದಲ್ಲಿ ಗಿಡ ಬೆಳೆಯಲಾರಂಭಿಸುತ್ತದೆ. ಯಾವುದೇ ಗೊಬ್ಬರಗಳ ಅವಶ್ಯಕತೆ ಇದಕ್ಕೆ ಇರುವುದಿಲ್ಲ. ಜೂನ್ ತಿಂಗಳಲ್ಲಿ ಬಿತ್ತಿದ ಬೆಳೆಯು ಅಕ್ಟೋಬರ್ ಕೊನೆಯ ವಾರ ಅಥವಾ ನವೆಂಬರ್ ತಿಂಗಳಿನಲ್ಲಿ ಕಟಾವಿಗೆ ಬರುತ್ತದೆ.
ಗದ್ದೆಯಲ್ಲಿ ಮೂರು ತಿಂಗಳು ಅಥವಾ ನಾಲ್ಕು ತಿಂಗಳಿಗೆ ಒಂದು ಬೆಳೆಯನ್ನು ಬೆಳೆದರೆ ಇಲ್ಲಿ ಒಂದು ತಿಂಗಳು ಹೆಚ್ಚು ಅವಧಿ ನಿರೀಕ್ಷಿಸಬಹುದು. ಆದರೆ ಗದ್ದೆಯಲ್ಲಿ ಬೆಳೆದ ಬೆಳೆಗು ಅಂಗಳದಲ್ಲಿ ಬೆಳೆದ ಬೆಳೆಗು ಯಾವುದೇ ವ್ಯತ್ಯಾಸವಿರುವುದಿಲ್ಲ. ಕಳೆದ ಆರು ವರ್ಷಗಳಿಂದ ಇವರು ಇದನ್ನು ಆಸಕ್ತಿಯಿಂದ ಮಾಡಿಕೊಂಡು ಬರುತ್ತಿದ್ದಾರೆ.
ಕೃಷಿ ಮತ್ತು ಕೃಷಿ ಸಂಬಂಧಿತ ಕ್ಷೇತ್ರಗಳು ಯುವ ಉದ್ಯಮಶೀಲತೆಗೆ ಮುಂದಿನ ದೊಡ್ಡ ಅವಕಾಶಗಳಾಗಿದ್ದು,…
ಕರ್ನಾಟಕದ ಬರಪೀಡಿತ ಪ್ರದೇಶಗಳಲ್ಲಿ ಬೆಳೆ ವಿಮೆ ನೋಂದಣಿ ಹಾಗೂ ಪ್ರೀಮಿಯಂ ಕಡಿತದ ಅವಧಿಯನ್ನು…
ಕರ್ನಾಟಕದ 102 ತಾಲೂಕುಗಳಲ್ಲಿ ಬರ ಪರಿಸ್ಥಿತಿ ಉಂಟಾಗಿದ್ದು, ಈ ತಿಂಗಳಾಂತ್ಯಕ್ಕೆ ಕೇಂದ್ರ ಸರ್ಕಾರಕ್ಕೆ…
ಮಂಗಳೂರಿನ ಅಶ್ಮಿತ್ ಎ.ಜೆ. ಅವರು ಝೀ ಕನ್ನಡದ ‘ಸರಿಗಮಪ 2026’ರ ವಿಜೇತರಾಗಿ ₹20…
ದಕ್ಷಿಣ ಕನ್ನಡದ ಮಲೆನಾಡು ತಪ್ಪಲಿನ ಸುಬ್ರಹ್ಮಣ್ಯ, ಸುಳ್ಯ, ಕಡಬ ಸೇರಿದಂತೆ ಹಲವು ಪ್ರದೇಶಗಳಲ್ಲಿ…
ಆಗಸ್ಟ್ 26ರಿಂದ ಕರ್ನಾಟಕದ ಬಹುತೇಕ ಭಾಗಗಳಲ್ಲಿ ಮಳೆಯ ಪ್ರಮಾಣ ಕಡಿಮೆಯಾಗುವ ಲಕ್ಷಣಗಳಿದ್ದು, ಕರಾವಳಿ…