ಗುಡ್ಡದಲ್ಲಿ ಕೃಷಿ ಮಾಡಿ ವಿಶೇಷ ಸಾಧನೆ ಮಾಡಿರುವ ದಕ್ಷಿಣ ಕನ್ನಡ ಜಿಲ್ಲೆಯ ಪ್ರಗತಿಪರ ಕೃಷಿಕ ಅಮೈ ಮಹಾಲಿಂಗ ನಾಯ್ಕ್ ಅವರಿಗೆ ಈ ಸಾಲಿನ ಪದ್ಮಶ್ರೀ ಪ್ರಶಸ್ತಿ ಘೋಷಣೆಯಾಗಿದೆ. ರಾಜ್ಯದ ಒಟ್ಟು ಐವರಿಗೆ ಪದ್ಮಶ್ರೀ ಪ್ರಶಸ್ತಿ ಘೋಷಣೆಯಾಗಿದೆ.
ಪದ್ಮಶ್ರೀ ಪ್ರಶಸ್ತಿ ಘೋಷಣೆಯಾಗಿದ್ದು ರಾಜ್ಯದ ವಿಜ್ಞಾನ ಹಾಗೂ ತಂತ್ರಜ್ಞಾನದ ಕ್ಷೇತ್ರ ಸಾಧನೆಗೆ ಸುಬ್ಬಣ್ಣ ಅಯ್ಯಪ್ಪನ್ , ಕಲೆ ಎಚ್ ಆರ್ ಕೇಶವ ಮೂರ್ತಿ, ಸೇರಿದಂತೆ ಅಬ್ದುಲ್ ಖಾದರ್, ಸಿದ್ದಲಿಗಯ್ಯ ಅವರಿಗೆ ಪ್ರಶಸ್ತಿ ಘೋಷಣೆಯಾಗಿದೆ.
ಪ್ರಗತಿಪರ ಕೃಷಿಕ ಅಮೈ ಮಹಾಲಿಂಗ ನಾಯ್ಕ್ ಅವರು 77 ವರ್ಷದ ಕೃಷಿಕ. ಗುಡ್ಡದಲ್ಲಿ ಏಕಾಂಗಿಯಾಗಿ ಕೃಷಿ ಮಾಡಿ ಸುರಂಗ ಕೊರೆದು ಜಲ ಸಂಪನ್ಮೂಲ ವೃದ್ಧಿಸಿಕೊಂಡು ಸಮೃದ್ಧ ಕೃಷಿ ಮಾಡಿದ್ದರು. ಕೂಲಿ ಕಾರ್ಮಿಕರಾಗಿದ್ದ ಅವರು ಹಂತ ಹಂತವಾಗಿ ತಾವೇ ಸ್ವತ: ಕೃಷಿ ಮಾಡಿ ಸಾಧನೆ ಮಾಡಿದ್ದರು.

Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel