ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ನಡೆಯಲಿದೆ. ಈ ಸಂದರ್ಭ 9 ದಿನಗಳ ಕಾಲ ವಿವಿಧ ಕಲಾವಿದರಿಂದ ಕಲಾಸೇವೆ ನಡೆಯಲಿದೆ ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ತಿಳಿಸಿದೆ.
ಅ.15 ರಿಂದ 23 ವರೆಗೆ ಪಂಜ ಶ್ರೀ ದುರ್ಗಾಪರಮೇಶ್ವರೀ ಅಮ್ಮನವರ ಸನ್ನಿಧಿಯಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ವಿಶೇಷ ಪೂಜಾದಿಗಳು ಹಾಗೂ ವಿಶೇಷ ಕಲಾ ಪ್ರಕಾರಗಳ ಸೇವೆಗಳು ಜರಗಲಿದೆ.
ನವರಾತ್ರಿ ಪೂಜಾ ಸಮಯದಲ್ಲಿ ಅಮ್ಮನವರಿಗೆ ಕಲಾ ಸೇವೆ ಹಲವು ಮಂದಿ ನೀಡಲಿದ್ದಾರೆ. ಅ.15 ರಂದು ಚೆಂಡೆ : ಸುಬ್ರಹ್ಮಣ್ಯ ಭಟ್ ದೇವಸ್ಯ ಅವರಿಂದ, ಅ.16 ರಂದು ತಬಲಾ : ಎನ್.ಪಿ. ಪವನ್ ಆಚಾರ್ ಅವರಿಂದ, ಅ.17 ರಂದುವೇದಮಂತ್ರ : ವೈದಿಕರಿಂದ, ಅ.18 ರಂದು ಯಕ್ಷ-ಗಾನ : ಗೋಪಾಲಕೃಷ್ಣ ಭಟ್ ದೇವಸ್ಯ, ಸುಭಾಷ್ ಪಂಜ, ರಚನಾ ಚಿತ್ಕಲ್, ಸುಬ್ರಹ್ಮಣ್ಯ ಭಟ್ ದೇವಸ್ಯ, ಲಕ್ಷ್ಮೀಶ ಶಗ್ರಿತ್ತಾಯ, ಗಗನ್ ಪಂಜ ಮತ್ತು ಇತರರಿಂದ, ಅ.19 ರಂದು ಭರತನಾಟ್ಯ : ಸರಯು ವಿ. ಮುಚ್ಚಲ, ಶಂಖನಾದ : ಸುಂದರ ದೇವಾಡಿಗ, ಅ.20 ರಂದು ವೇಣುವಾದನ : ರಾಮಚಂದ್ರ ಕಲ್ಕಣ್ಣ ಮತ್ತು ತಂಡದವರು, ಅ.21 ರಂದು ಭರತನಾಟ್ಯ : ವಸುಧಾ ಬಿ. ಮುಚ್ಚಿಲ, ಸ್ತುತಿ ರೈ ಅಡ್ಡಬೈಲು ಅವರಿಂದ, ಅ.22 ರಂದು ಭಕ್ತಿ ಸಂಗೀತ : ಸುಮಾ ಕೋಟೆ ಅವರಿಂದ, ಅ.23 ರಂದು ಪುರಾಣ ವಾಚನ : ಕೃಷ್ಣ ಭಟ್ ಸಂಪ ಅವರಿಂದ ನಡೆಯಲಿದೆ.
16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಮಾಧ್ಯಮ ಬಳಕೆಯನ್ನು ನಿಷೇಧಿಸುವ ಮಹತ್ವದ ಘೋಷಣೆ ರಾಜ್ಯ…
ಕುಕ್ಕೆ ಸುಬ್ರಹ್ಮಣ್ಯ ಮತ್ತು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಗಳಿಗೆ ಅಭಿವೃದ್ಧಿ ಪ್ರಾಧಿಕಾರ ರಚಿಸುವ ಮಹತ್ವದ…
ರಾಜ್ಯ ಬಜೆಟ್ 2026-27ರಲ್ಲಿ ರೈತರಿಗೆ ಕೃಷಿ, ತೋಟಗಾರಿಕೆ, ಮೀನುಗಾರಿಕೆ ಹಾಗೂ ಗ್ರಾಮೀಣ ಅಭಿವೃದ್ಧಿಗೆ…
ರಾಜ್ಯ ಬಜೆಟ್ 2026-27ರಲ್ಲಿ ಕೃಷಿ, ತೋಟಗಾರಿಕೆ ಮತ್ತು ಮೀನುಗಾರಿಕೆ ಕ್ಷೇತ್ರಗಳಿಗೆ ಹಲವು ಹೊಸ…
ಕರಾವಳಿ ಜಿಲ್ಲೆಗಳಲ್ಲಿ ಮಧ್ಯಾಹ್ನದ ಬಳಿಕ ಮೋಡದ ವಾತಾವರಣ ಹೆಚ್ಚಾಗುವ ಸಾಧ್ಯತೆ ಇದೆ. ಘಟ್ಟದ…
ಕರ್ನಾಟಕದಲ್ಲಿ ಮುಂದಿನ ಕೆಲವು ದಿನಗಳವರೆಗೆ ಒಣ ಹವಾಮಾನ ಮುಂದುವರಿಯುವ ಸಾಧ್ಯತೆ ಇದೆ. ಗುಜರಾತ್…