ಪಂಜದ ಕುಡಿಯುವ ನೀರಿನ ಟ್ಯಾಂಕ್‌ ಸಮಸ್ಯೆ | ಜನರ ಹೋರಾಟಕ್ಕೆ ಸಿಕ್ಕಿದ ಮಾನ್ಯತೆ | ಪೈಪ್‌ ಲೈನ್‌ ಸರ್ವೆ ಕಾರ್ಯ ನಡೆಸಿದ ಇಲಾಖೆ | |

September 19, 2021
10:02 PM

ಸುಳ್ಯ ತಾಲೂಕಿನ ಪಂಜದ ಅಳ್ಪೆ ಚಿಂಗಾಣಿಗುಡ್ಡೆಯಲ್ಲಿ ಅನೇಕ ವರ್ಷಗಳ ಹಿಂದೆ ಕುಡಿಯುವ ನೀರಿನ ಟ್ಯಾಂಕ್‌ ನಿರ್ಮಾಣ ಮಾಡಲಾಗಿತ್ತು. ಆದರೆ ಟ್ಯಾಂಕ್‌ ಗೆ  ನೀರು ಸರಬರಾಜು ಆಗದೆ ಇಡೀ ಯೋಜನೆ ವಿಫಲವಾಗಿತ್ತು. ಹೀಗಾಗಿ ಚಿಂಗಾಣಿ ಗುಡ್ಡೆಯ ನಾಗರಿಕರು ಹಾಗೂ ಸಾಮಾಜಿಕ ಹೋರಾಟಗಾರ ಜಿನ್ನಪ್ಪ  ಅಳ್ಪೆ ಅವರು  ಈ ಬಗ್ಗೆ ಹೋರಾಟ ನಡೆಸಿದ್ದರು. ಇದೀಗ ಪೈಪ್‌ ಲೈನ್‌ ಸರ್ವೆ ಕಾರ್ಯ ಆರಂಭವಾಗಿದೆ.

ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮೂಲಕ ಪಂಜದಲ್ಲಿ  ನೀರಿನ ಟ್ಯಾಂಕ್‌ ರಚನೆಯಾಗಿ ಅದಕ್ಕೆ ಪುಳಿಕುಕ್ಕು ಬಳಿಯಲ್ಲಿ ಹಾದುಹೋಗುವ ಕುಮಾರಧಾರೆಯಿಂದ ನೀರು ಹಾಯಿಸುವುದು  ಯೋಜನೆಯ ಉದ್ದೇಶವಾಗಿತ್ತು. ಆದರೆ ಕಾಮಗಾರಿಗೂ ಮುನ್ನ ಸರಿಯಾದ ಯೋಜನೆ ರೂಪಿಸಿದ ಹಿನ್ನೆಲೆಯಲ್ಲಿ  ಇಡೀ ಯೋಜನೆ ವಿಫಲವಾಗಿತ್ತು, ನೀರಿನ ಟ್ಯಾಂಕ್‌ ಗೆ ಕುಮಾರಧಾರಾ ನದಿಯಿಂದ ನೀರು ಹಾಯಿಸಲು ಸಾಧ್ಯವಾಗಿರಲಿಲ್ಲ. ತಾಂತ್ರಿಕ ಕಾರಣವನ್ನು  ತಿಳಿಸಲಾಗಿತ್ತು. ಹೀಗಾಗಿ ಈ ಬಗ್ಗೆ ಹಲವು ವರ್ಷಗಳಿಂದ ಸ್ಥಳೀಯರು ವಿವಿಧ ಇಲಾಖೆಗಳಿಗೆ ಮನವಿ ಸಲ್ಲಿಸಿದ್ದರು. ಹಾಗಿದ್ದರೂ ಯಾವುದೇ ಫಲ ನೀಡದ ಹಿನ್ನೆಲೆಯಲ್ಲಿ  ಕಳೆದ ಬಾರಿಯ ಗ್ರಾ ಪಂ ಚುನಾವಣೆಯ ಸಂದರ್ಭದಲ್ಲೂ ವಿರೋಧ ಬಂದು ವಿವಿಧ ಬೇಡಿಕೆಗಳನ್ನಿಟ್ಟು ನಾಗರಿಕರು  ತಂಡ ಕಟ್ಟಿ ಗ್ರಾಮಸ್ವರಾಜ್ಯ ತಂಡ ಕಟ್ಟಿ ಸ್ಫರ್ಧೆ ಮಾಡಿದ್ದರು. ಯಾವುದೇ ಕಾರಣಕ್ಕೂ ಈ ನೀರಿನ ಯೋಜನೆ ವಿಫಲವಾಗಬಾರದು ಎಂದು  ಸತತ ಹೋರಾಟ ನಡೆಸುತ್ತಿದ್ದರು. ಇಲಾಖೆಗಳಿಗೆ ಮನವಿ ಮಾಡಿ ಹೋರಾಟ ನಡೆಸುವುದಾಗಿ ತಿಳಿಸಿದ್ದರು.

ಇದೀಗ 7  ವರ್ಷಗಳ ಹಿಂದೆ ರಚನೆಯಾದ ಈ ಯೋಜನೆಗೆ ನೀರು ಹಾಯಿಸುವ ಉದ್ದೇಶದಿಂದ ಪುಳಿಕುಕ್ಕಿನಿಂದ ಪೈಪ್‌ ಲೈನ್‌ ಅಳವಡಿಕೆಗೆ ಸರ್ವೆ ಕಾರ್ಯ ನಡೆದಿದೆ. ಈ ಬಾರಿ ಟ್ಯಾಂಕ್‌ ಗೆ ನೀರು ಹಾಯಿಸುವ ಕೆಲಸ ಮಾಡಲಾಗುತ್ತದೆ ಎಂದು ನೀರು ಸರಬರಾಜು ಇಲಾಖೆಯ ಇಂಜಿನಿಯರ್ ಸುಂದರಯ್ಯ ತಿಳಿಸಿದ್ದಾರೆ.

ಅನೇಕ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಯೋಜನೆಯೊಂದು ಸಾರ್ವಜನಿಕರ ಹಾಗೂ ಸಾಮಾಜಿಕ ಕಾರ್ಯಕರ್ತರ ಹೋರಾಟದ ಫಲವಾಗಿ ಮತ್ತೆ ಯೋಜನೆ ಚಾಲೂ ಆಗುವ ಸ್ಥಿತಿಗೆ ಬಂದಿದೆ.

 

 

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಉತ್ತರ ಒಳನಾಡಿನಲ್ಲಿ ಬಿಸಿಹವೆ – ಹವಾಮಾನ ಇಲಾಖೆ ಮುನ್ಸೂಚನೆ
March 18, 2025
7:40 PM
by: The Rural Mirror ಸುದ್ದಿಜಾಲ
ಕಾಶ್ಮೀರದಲ್ಲಿ ಹಿಮಪಾತ ಆರಂಭ | ಮಧ್ಯಭಾರತ ಹಾಗೂ  ಉತ್ತರ ಭಾರತದಲ್ಲಿ  ತಾಪಮಾನ ಗಣನೀಯ ಪ್ರಮಾಣದಲ್ಲಿ  ಏರಿಕೆ
March 18, 2025
7:32 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 18-03-2025 | ಅಲ್ಲಲ್ಲಿ ತುಂತುರು ಮಳೆ ನಿರೀಕ್ಷೆ | ಮಾ.25 ರ ನಂತರ ವಿವಿದೆಡೆ ಮಳೆ ಸಾಧ್ಯತೆ |
March 18, 2025
2:03 PM
by: ಸಾಯಿಶೇಖರ್ ಕರಿಕಳ
ಹವಾಮಾನ ವರದಿ | 17-03-2025 | ಕೆಲವೆಡೆ ತುಂತುರು ಮಳೆ ನಿರೀಕ್ಷೆ | ಮಾರ್ಚ್ ಕೊನೆಯ ವಾರದಲ್ಲಿ ಮಳೆ ಆರಂಭವಾಗುವ ಲಕ್ಷಣ |
March 17, 2025
3:33 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror