Opinion

ಮಕ್ಕಳ ಪರೀಕ್ಷೆಯ ಒತ್ತಡಕ್ಕೆ ಸಿಲುಕಿ ಪಾಲಕರಿಗೂ ಆತಂಕ, ಕೆಲಸಗಳನ್ನು ಮಾಡಿ ಈ ಅಂಶಗಳನ್ನು ಗಮನಿಸಿ | ಪರೀಕ್ಷೆಗಳು ಸುಲಭವಾಗುತ್ತವೆ…

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಮಕ್ಕಳ ಶೈಕ್ಷಣಿಕ(Children Education) ಬೆಳವಣಿಗೆಯಲ್ಲಿ ಶಾಲಾ ಪರೀಕ್ಷೆಗಳು(Exam) ಪ್ರಮುಖ ಹಂತವಾಗಿದೆ. ಮಕ್ಕಳ ಪರೀಕ್ಷೆ ಒಂದರ್ಥದಲ್ಲಿ ಪೋಷಕರ(Parents) ಪರೀಕ್ಷೆ. ಮಕ್ಕಳಿಗೆ ಓದುವ ಒತ್ತಡ ಅವರಿಗಿರುವಷ್ಟೇ ಪೋಷಕರಿಗೂ ಇರುತ್ತದೆ. ವರ್ಷವಿಡೀ ಚೆನ್ನಾಗಿ ಓದುವ ಮಗು ಇದ್ದರೆ ಪರವಾಗಿಲ್ಲ, ಇಲ್ಲದಿದ್ದರೆ, ಪರೀಕ್ಷೆಗಳು ಹತ್ತಿರವಾದಾಗ ಒತ್ತಡದಲ್ಲಿ ಓದುವುದರಿಂದ ಮಕ್ಕಳಿಗೆ ಏನೂ ಅರ್ಥವಾಗುವುದಿಲ್ಲ ಮತ್ತು ಪರೀಕ್ಷೆಯಲ್ಲಿ ಪ್ರಶ್ನೆಗಳಿಗೆ ಮಕ್ಕಳು ಹೇಗೆ ಉತ್ತರಿಸುತ್ತಾರೆ ಎಂದು ಪಾಲಕರು ಚಿಂತಿಸತೊಡಗುತ್ತಾರೆ.

Advertisement
Advertisement

10, 12ನೇ(SSLC, PUC) ತರಗತಿಯಂತಹ ಮಹತ್ವದ ಪರೀಕ್ಷೆಗಳಿದ್ದರೆ ಪೋಷಕರಿಗೆ ಹೆಚ್ಚು ಒತ್ತಡವಿರುತ್ತದೆ. ಇದನ್ನು ತಡೆಯಲು ಮತ್ತು ಕೊನೆಯ ಹಂತದಲ್ಲಿ ಅಂದರೆ ಅಂತಿಮ ಪರೀಕ್ಷೆಯ ಸಂದರ್ಭದಲ್ಲಿ, ಮಕ್ಕಳ ಆರೋಗ್ಯ ಮತ್ತು ಮಾನಸಿಕ ಆರೋಗ್ಯವು ಉತ್ತಮವಾಗಿ ಉಳಿಯಲು ಪೋಷಕರು ಕೆಲವು ವಿಷಯಗಳತ್ತ ಗಮನ ಹರಿಸಬೇಕು. ಅವು ಏನೆಂದು ನೋಡೋಣ…

1. ಆಹಾರ ಪದ್ಧತಿ : ಪರೀಕ್ಷೆಯ ಅವಧಿಯಲ್ಲಿ ಮಕ್ಕಳ ಆಹಾರವು ಸಾಧ್ಯವಾದಷ್ಟು ಪೌಷ್ಟಿಕವಾಗಿರಬೇಕು. ಈ ಆಹಾರವು ತಾಜಾ ಮತ್ತು ಹಗುರವಾಗಿರುವಂತೆ ಎಚ್ಚರಿಕೆ ವಹಿಸಬೇಕು. ಆಹಾರದ ಕಾರಣದಿಂದಾಗಿ ಜೀರ್ಣಕಾರಿ ಸಮಸ್ಯೆಗಳು ಆಗದಂತೆ ಎಚ್ಚರಿಕೆ ವಹಿಸಬೇಕು. ನಿಮ್ಮ ಆಹಾರದಲ್ಲಿ ನೀರು ಮತ್ತು ದ್ರವಗಳನ್ನು ಸೇರಿಸಲು ಮರೆಯದಿರಿ.

2. ನಿದ್ರೆ : ಸಾಮಾನ್ಯವಾಗಿ, ಅಧ್ಯಯನದ ಒತ್ತಡ ಬಂದಾಗ, ಮಕ್ಕಳು ತಡ ರಾತ್ರಿಯವರೆಗೂ ಎಚ್ಚರವಾಗಿರುತ್ತಾರೆ ಅಥವಾ ಬೆಳಿಗ್ಗೆ ಬೇಗ ಎದ್ದು ಅಧ್ಯಯನ ಮಾಡುತ್ತಾರೆ. ಇದರಿಂದ ಓದುತ್ತಿದ್ದರೂ ಸರಿಯಾಗಿ ಪರೀಕ್ಷೆಯ ಸಮಯದಲ್ಲಿ ನಿದ್ದೆ ಬರುವ ಸಾಧ್ಯತೆ ಇರುತ್ತದೆ. ಆದ್ದರಿಂದ, ಮಕ್ಕಳು ರಾತ್ರಿಯಲ್ಲಿ 7 ರಿಂದ 8 ಗಂಟೆಗಳ ಪೂರ್ಣ ನಿದ್ರೆ ಪಡೆಯುತ್ತಾರೆ ಎಂದು ಖಚಿತಪಡಿಸಿಕೊಳ್ಳಿ. ತಡರಾತ್ರಿ ಹಾಗೂ ನಸುಕಿನಲ್ಲಿ ಜಾಗರಣೆ ಮಾಡಿದರೆ ಮಾತ್ರ ಚೆನ್ನಾಗಿ ಓದಿದಂತೆ ಎಂಬ ತಪ್ಪು ಕಲ್ಪನೆ ಬೇಡ.

3. ಮಾನಸಿಕ ಒತ್ತಡ: ಮಕ್ಕಳೊಂದಿಗೆ ಸಂವಹನವನ್ನು ಮುಂದುವರಿಸಿ ಇದರಿಂದ ಅವರು ಪರೀಕ್ಷೆಗಳ ಬಗ್ಗೆ ಒತ್ತಡಕ್ಕೆ ಒಳಗಾಗುವುದಿಲ್ಲ ಮತ್ತು ಉತ್ತಮ ಅಂಕಗಳನ್ನು ಪಡೆಯುತ್ತಾರೆ. ಮಕ್ಕಳ ಆತ್ಮವಿಶ್ವಾಸ ಹೆಚ್ಚುತ್ತದೆ, ಪರೀಕ್ಷೆಗಳು ಚೆನ್ನಾಗಿರುತ್ತವೆ. ಸಕಾರಾತ್ಮಕ ಭಾವನೆಯನ್ನು ಸೃಷ್ಟಿಸಲು ಸಕಾರಾತ್ಮಕ ವಿಷಯಗಳನ್ನು ಚರ್ಚಿಸಿ.

Advertisement

4. ಓದಿನ ಹೊರೆತು ಬಿಡುವಿನ ಸಮಯ: ಪರೀಕ್ಷೆ ಇದೆ ಎಂದ ಮಾತ್ರಕ್ಕೆ 24 ಗಂಟೆಗಳ ಕಾಲ ಮಕ್ಕಳ ಕಣ್ಣ ಮುಂದೆ ಪುಸ್ತಕ ಇರಬೇಕಿಲ್ಲ. ಆದ್ದರಿಂದ 2 ರಿಂದ 3 ಗಂಟೆಗಳ ಕಾಲ ನಿರಂತರವಾಗಿ ಅಧ್ಯಯನ ಮಾಡಿದ ನಂತರ, ಅರ್ಧ ಗಂಟೆ ವಿರಾಮವನ್ನು ತೆಗೆದುಕೊಳ್ಳುವುದು ಅವಶ್ಯಕ. ಅಂತಹ ವಿರಾಮ ತೆಗೆದುಕೊಂಡರೆ ಮಾತ್ರ ಅಧ್ಯಯನದತ್ತ ಗಮನ ಹರಿಸಬಹುದು. ಇಲ್ಲವಾದರೆ, ಕಣ್ಣೆದುರು ಸತತ ಪಠ್ಯಪುಸ್ತಕಗಳಿದ್ದರೆ ಅಧ್ಯಯನ ನಡೆಯುವುದಿಲ್ಲ ಮಾತ್ರವಲ್ಲ, ವಿನಾಕಾರಣ ಒತ್ತಡವೂ ಮುಂದುವರಿಯುತ್ತದೆ. ಮಕ್ಕಳೊಂದಿಗೆ ಆಟವಾಡುವುದು, ಬೇರೆ ಬೇರೆ ವಿಷಯದ ಮೇಲೆ ಹರಟೆ ಹೊಡೆಯುವುದು, ಬಯಲಿನಲ್ಲಿ ವಿಹಾರಕ್ಕೆ ಹೋಗುವುದು ಅತ್ಯಗತ್ಯ. ಇದನ್ನು ಮಾಡಬೇಕು.

5. ಸಿದ್ಧತೆಯಲ್ಲಿ ವಿವಿಧತೆ ಇರಲಿ: ಮಕ್ಕಳು ಓದಿಗಾಗಿ ಬೇರೆ ಬೇರೆ ಪದ್ಧತಿಗಳನ್ನು ರೂಢಿಸಿಕೊಳ್ಳಲಿ. ಉದಾಹರಣೆಗೆ, ಕೆಲ ಸಮಯ ಸ್ವತಃ ಒಂಟಿಯಾಗಿ ಓದುವುದು, ಸ್ವಲ್ಪ ಹೊತ್ತು ನಿಮ್ಮ ಮುಂದೆ ಅಂದರೆ ತಂದೆ, ತಾಯಿ ಅಥವಾ ಅಣ್ಣ-ಅಕ್ಕಂದಿರ ಮುಂದೆ ಗಟ್ಟಿಯಾಗಿ ಓದುವುದು, ಸಹಪಾಠಿಗಳೊಂದಿಗೆ ಓದಿದ್ದನ್ನು ಚರ್ಚಿಸುವುದು, ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸುವುದು, ಇತ್ಯಾದಿ. ಇದರಿಂದ ಪಾಠಗಳು ಸರಿಯಾಗಿ ಅರ್ಥವಾಗುತ್ತವೆ ಹಾಗೂ ಜ್ಞಾಪಿಸಿಕೊಳ್ಳಲು ಸಹಾಯವಾಗುತ್ತದೆ.

6. ಪರೀಕ್ಷೆಗಳ ಉದ್ದೇಶ ತಿಳಿದುಕೊಳ್ಳುವುದು: ಕೇವಲ ಪರೀಕ್ಷೆಗಾಗಿ ಓದುವ ಉದ್ದೇಶಕ್ಕಿಂತಲೂ ವಿಷಯಗಳನ್ನು ಅರ್ಥಮಾಡಿಕೊಳ್ಳುವ ಉದ್ದೇಶದಿಂದ ಓದುವುದನ್ನು ರೂಢಿಸಿಕೊಳ್ಳಬೇಕು.

7. ಪರೀಕ್ಷೆಗಳ ಬಗ್ಗೆ ಆತಂಕ ಬೇಡ: ಪರೀಕ್ಷೆಗಳ ಬಗ್ಗೆ ಮಕ್ಕಳ ಮನಸ್ಸಿನಲ್ಲಿ ಭಯ, ಆತಂಕ ಹುಟ್ಟಿಸಬೇಡಿ. ಪರೀಕ್ಷೆಗಳು ಒತ್ತಡದ ಹಾಗೂ ವಲ್ಲದ ಸಮಯಗಳೆಂದು ಪರಿಗಣಿಸದೆ ಅವುಗಳು ತಮ್ಮನ್ನು ತಾವು ರೂಪಿಸಿಕೊಳ್ಳಲು ಉತ್ತಮ ಅವಕಾಶ ಎಂಬುದನ್ನು ಮಕ್ಕಳ ಮನಸ್ಸಿನಲ್ಲಿ ಬಿಂಬಿಸಿ. ಕ್ರಿಕೆಟ್ ಸ್ಪರ್ಧೆಗಾಗಿ ಮಕ್ಕಳು ಹೇಗೆ ಉತ್ಸಾಹದಿಂದ ಸಿದ್ಧತೆಗಳನ್ನು ಮಾಡಿ ಸ್ಪರ್ಧೆಗಳನ್ನು ಕ್ರೀಡಾತ್ಮಕವಾಗಿ ಆನಂದಿಸುತ್ತಾರೋ ಹಾಗೆಯೇ ಪರೀಕ್ಷೆಗಳನ್ನು ಕೂಡ ಪರಿಗಣಿಸಬೇಕು.

ಸಂಗ್ರಹ ಮತ್ತು ಸಂಕಲನೆ: ಡಾ. ಪ್ರ. ಅ. ಕುಲಕರ್ಣಿ

Advertisement
 
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ರಾಜ್ಯದ ಹಲವೆಡೆ ಮುಂದುವರೆದ ಮಳೆ | ಕೊಡಗು ಜಿಲ್ಲೆಯಲ್ಲಿ ಸತತ 7 ದಿನಗಳಿಂದ ಧಾರಾಕಾರ ಮಳೆ | ಕರಾವಳಿ ಜಿಲ್ಲೆಗಳಲ್ಲಿ ರೆಡ್ ಅಲರ್ಟ್

ರಾಜ್ಯಾದ್ಯಂತ ಮಳೆ ಮುಂದುವರೆದಿದೆ. ಕೊಡಗು ಜಿಲ್ಲೆಯಲ್ಲಿ ಸತತ 7 ದಿನಗಳಿಂದ ಸುರಿಯುತ್ತಿರುವ  ಧಾರಾಕಾರ…

3 hours ago

ಈ 3 ಗಣೇಶ ಮಂತ್ರವನ್ನು ಪಠಿಸುವುದರಿಂದ ನಿಮ್ಮ ಜೀವನದಲ್ಲಿ ಏನಾಗುತ್ತದೆ…?

ಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

3 hours ago

ಹವಾಮಾನ ವರದಿ |29.05.2025 | ಮೇ.31ರಿಂದ ಮಳೆ ಪ್ರಮಾಣ ಕಡಿಮೆ

30.05.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ :…

20 hours ago

ರಾಜ್ಯಾದ್ಯಂತ ಭಾರೀ ಮಳೆ  ಹಿನ್ನೆಲೆ | ಜಿಲ್ಲಾ ಸಚಿವರು,ಕಾರ್ಯದರ್ಶಿಗಳಿಗೆ ಮುಖ್ಯಮಂತ್ರಿ ಆದೇಶ

ರಾಜ್ಯಾದ್ಯಂತ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ತಕ್ಷಣ ಪ್ರವಾಹ ಬಾಧಿತ ಪ್ರದೇಶಗಳಿಗೆ ತೆರಳಿ ಪರಿಹಾರ…

1 day ago

ಇಂದು ದೇಶಾದ್ಯಂತ ವಿಕಸಿತ ಕೃಷಿ ಸಂಕಲ್ಪ ಅಭಿಯಾನ

ಕೇಂದ್ರ ಸರ್ಕಾರದ ಕೃಷಿ ಮಂತ್ರಾಲಯದ ವತಿಯಿಂದ ದೇಶಾದ್ಯಂತ ನಾಳೆಯಿಂದ ವಿಕಸಿತ ಕೃಷಿ ಸಂಕಲ್ಪ…

1 day ago