Advertisement
The Rural Mirror ವಾರದ ವಿಶೇಷ

ಪುತ್ತೂರಿನ ಸಂಗೀತ ಸಾಧಕಿ – ಪವಿತ್ರಾ ರೂಪೇಶ್

Share

ಅದು ತೊದಲು ನುಡಿಯಲ್ಲಿ ಮಾತನಾಡುತ್ತಾ ಅಕ್ಷರಗಳನ್ನು ಕಲಿಯುವ ಪ್ರಾಯ. ಆದರೆ ಅದಾಗಲೇ ಸರಸ್ವತಿ ದೇವಿ ಆ ಪುಟ್ಟ
ಹುಡುಗಿಯ ಬಾಯಲ್ಲಿ ತಾಳ-ರಾಗ-ಲಯಬದ್ಧವಾಗಿ ಹಾಡಲು ಆಶೀರ್ವಾದಿಸಿ ಆಗಿತ್ತು.

ತನ್ನ ಮೂರನೇ ವಯಸ್ಸಿನಲ್ಲಿಯೇ ವಿದ್ವಾನ್ ಶ್ರೀ ಮಧೂರ್ ಪಿ. ಬಾಲಸುಬ್ರಹ್ಮಣ್ಯಂ ರಿಂದ ಸಂಗೀತಾಭ್ಯಾಸ ಮಾಡಿ ಕನಕದಾಸ ವಾಧಿರಾಜರ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದವರೇ  ಪವಿತ್ರಾ ರೂಪೇಶ್. ಪುತ್ತೂರಿನ ಪ್ರತಿಷ್ಟಿತ ಉದ್ಯಮಿ ರೂಪೇಶ್ ಸೇಟ್‍ ಅವರ ಧರ್ಮಪತ್ನಿ. ಮಣಿಪಾಲದ ಫಾರ್ಮಸಿ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಡಾ.ಎನ್.ಉಡುಪ ಹಾಗೂ ವಿಜಯಲಕ್ಷ್ಮೀ .ಕೆ. ದಂಪತಿಗಳ ಸುಪುತ್ರಿಯಾಗಿರುವ ಪವಿತ್ರಾರವರಿಗೆ ಸಣ್ಣ ವಯಸ್ಸಿನಿಂದಲೇ ಸಂಗೀತ, ಹಾಡುಗಾರಿಕೆಯಲ್ಲಿ ವಿಶೇಷ ಆಸಕ್ತಿ. ವಿದುಷಿ  ಶುಭಾ ರಾವ್ ಹಾಗು ವಿದುಷಿ  ಶಕುಂತಳಾ ಭಟ್ ಮೊದಲಾದವರಿಂದ ಸಂಗೀತ ಅಭ್ಯಾಸ ಮಾಡಿ, ಸಂಗೀತದಲ್ಲಿ ಜ್ಯೂನಿಯರ್ ಹಾಗೂ ಸೀನಿಯರ್ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಪಡೆದು ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದರು. 2005ರಲ್ಲಿ ಕರ್ನಾಟಕ ಸರಕಾರ ನಡೆಸಿದ ವಿದ್ವತ್ ಪರೀಕ್ಷೆಯಲ್ಲಿ ಪ್ರಥಮ ಸ್ಥಾನವನ್ನು ತನ್ನ ಮುಡಿಗೇರಿಸಿ
ಸಂಗೀತದಲ್ಲಿ ವಿದುಷಿಯಾದರು. ಇದಲ್ಲದೆ ಸಿ.ಸಿ.ಆರ್,ಟಿ. ವಿದ್ಯಾರ್ಥಿವೇತನವನ್ನು ಏಳು ವರ್ಷ ಪಡೆದುಕೊಂಡ ಗಟ್ಟಿಗಾತಿ ಇವರು.  ತಮ್ಮ ಸ್ವರ ಮಾಧುರ್ಯದಿಂದಾಗಿ ಮಂಗಳೂರು ಆಕಾಶವಾಣಿಯಲ್ಲಿ “ಎ” ಗ್ರೇಡ್ ಕಲಾವಿದರಾಗಿ ಸೇವೆ ಸಲ್ಲಿಸಿದ ಅನುಭವವಿದೆ. 2007ರಲ್ಲಿ ಝೀ ಕನ್ನಡ ವಾಹಿನಿ ಗೃಹಿಣಿಯರಿಗಾಗಿ ನಡೆಸಿದ ಸರಿಗಮಪ ಸೀಸನ್‍ನಲ್ಲಿ ಅಂತಿಮ
ಹಂತದವರೆಗೂ ಪುತ್ತೂರನ್ನು ಪ್ರತಿನಿಧಿಸಿದ ಇವರು ತಮ್ಮ ಮನೆಯಲ್ಲಿ ಸುಮಾರು 40ಕ್ಕೂ ಹೆಚ್ಚು ಮಕ್ಕಳಿಗೆ ಸಂಗೀತ ಹಾಗೂ
ಸುಗಮ ಸಂಗೀತ ಹೇಳಿಕೊಡುತ್ತಿದ್ದಾರೆ.

 

ಮಂಗಳೂರು, ಉಡುಪಿ, ಪುತ್ತೂರು, ಬೆಂಗಳೂರು, ಮೈಸೂರು, ಉಡುಪಿ ಶ್ರೀ ಕೃಷ್ಣಮಠ, ಮಂಗಳೂರಿನ ಕರಾವಳಿ ಉತ್ಸವ,
ದೇವಸ್ಥಾನಗಳು ಹಾಗೂ ಬೇರೆ ಬೇರೆ ಪ್ರಸಿದ್ದ ಸ್ಥಳಗಳಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ಹಾಗು ಸುಗಮ ಸಂಗೀತ ಕಾರ್ಯಕ್ರಮಗಳನ್ನು ನೀಡಿರುವ ಪವಿತ್ರಾ ರೂಪೇಶ್‍ರವರು ತಮ್ಮ ಊರಾದ ಪುತ್ತೂರಿನಲ್ಲಿ “ಕಾಮಾಕ್ಷಿ ಸಂಗೀತ ಪಾಠಶಾಲೆ” ಯ ಮುಖ್ಯಸ್ಥರಾಗಿದ್ದಾರೆ. ಸದ್ಯ ತಮ್ಮದೇ ಒಂದು ಯೂ ಟ್ಯೂಬ್‌ ಚಾನೆಲ್ 

  ಪ್ರಾರಂಭಿಸಿರುವ ಪವಿತ್ರಾ ರೂಪೇಶ್ ತಮ್ಮ “ಮಿಲೇ ಹೋ ತುಮ್” ಹಿಂದಿ ಆಲ್ಬಮ್ ಹಾಡನ್ನು ಬಿಡುಗಡೆಗೊಳಿಸಿದ್ದಾರೆ. ಶಾಸ್ತ್ರೀಯ ಹಾಗೂ ಫಿಲ್ಮಿ ಮ್ಯೂಸಿಕ್ ಎರಡರಲ್ಲೂ ಸೈ ಎನಿಸಿಕೊಂಡಿರುವ ಪವಿತ್ರಾ ರೂಪೇಶ್ ತಮ್ಮ ಈ ಯಶಸ್ಸಿಗೆ ತಂದೆ- ತಾಯಿ, ಪತಿ, ಅತ್ತೆ- ಮಾವನ, ಬಂಧು-ಬಳಗದವರ ಪ್ರೋತ್ಸಾಹವೇ ಕಾರಣ ಎನ್ನುತ್ತಾರೆ.  ಪುತ್ತೂರಿನ ಈ ಸಂಗೀತ ಸಾಧಕಿಯ ಮುಂದಿನ ಪಯಣಕ್ಕೆ ಶುಭ ಹಾರೈಸೋಣ.

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

Published by
ಮಿರರ್‌ ಡೆಸ್ಕ್‌

Recent Posts

ಹವಾಮಾನ ವರದಿ | 24-08-2026 | ಕರಾವಳಿಯಲ್ಲಿ ಮಳೆ ಮುಂದುವರಿಕೆ – ಕರ್ನಾಟಕದಲ್ಲಿ ಮಳೆ ಪರಿಸ್ಥಿತಿ ಹೇಗೆ..?

ಕರ್ನಾಟಕದ ಕರಾವಳಿ ಹಾಗೂ ಮಲೆನಾಡಿನಲ್ಲಿ ಆಗಸ್ಟ್ 26ರವರೆಗೆ ಮೋಡ ಮತ್ತು ಅಲ್ಲಲ್ಲಿ ಬಿಟ್ಟುಬಿಟ್ಟು…

11 minutes ago

ಉದ್ಯೋಗಗಳಿಲ್ಲವೇ? ಅಥವಾ ಉದ್ಯೋಗಕ್ಕೆ ಬೇಕಾದ ಕೌಶಲ್ಯವಿರುವವರು ಇಲ್ಲವೇ?

ಭಾರತದಲ್ಲಿ ಸಮಸ್ಯೆ ಕೇವಲ ಉದ್ಯೋಗಗಳ ಕೊರತೆಯಲ್ಲ, ಉದ್ಯೋಗಕ್ಕೆ ಅಗತ್ಯವಾದ ಕೌಶಲ್ಯ ಹೊಂದಿದ ಅಭ್ಯರ್ಥಿಗಳ…

6 hours ago

ಅಡಿಕೆ ರೋಗ ನಿಯಂತ್ರಣಕ್ಕೆ ಕೇಂದ್ರದ ಬೆಂಬಲ – ಕ್ಯಾ. ಚೌಟಗೆ ಸಚಿವ ಶಿವರಾಜ್‌ ಸಿಂಗ್‌ ಚೌಹಾಣ್ ಭರವಸೆ

ಕರಾವಳಿ ಮತ್ತು ಮಲೆನಾಡಿನ ಅಡಿಕೆ ತೋಟಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಎಲೆಚುಕ್ಕೆ, ಹಳದಿ ಎಲೆ ಹಾಗೂ…

17 hours ago

ಹವಾಮಾನ ವರದಿ | 23-08-2026 | ಆಗಸ್ಟ್ 25 ರವರೆಗೆ ಮಳೆ – ಕರಾವಳಿ-ಮಲೆನಾಡಿನಲ್ಲಿ ಉತ್ತಮ ಮಳೆ ಸಾಧ್ಯತೆ

ಕರ್ನಾಟಕದಲ್ಲಿ ಮುಂಗಾರು ಮತ್ತೆ ಚುರುಕಾಗಿದ್ದು, ಕರಾವಳಿ ಮತ್ತು ಮಲೆನಾಡಿನಲ್ಲಿ ಆಗಸ್ಟ್ 25ರವರೆಗೆ ಮಳೆ…

21 hours ago

ಅಳಿವಿನಂಚಿನಲ್ಲಿದ್ದ ಪೆರಿಯಾರ್ ಹಸುವಿಗೆ ರಾಷ್ಟ್ರೀಯ ತಳಿ ಮಾನ್ಯತೆ – ಕೇರಳದ ಎರಡನೇ ದೇಶಿ ಗೋತಳಿ

ಅಳಿವಿನಂಚಿನಲ್ಲಿದ್ದ ಕೇರಳದ ಪೆರಿಯಾರ್ ಕುಳ್ಳನ್ ಹಸುವಿಗೆ ಭಾರತೀಯ ಕೃಷಿ ಸಂಶೋಧನಾ ಮಂಡಳಿಯ ರಾಷ್ಟ್ರೀಯ…

22 hours ago

ಪಿಒಪಿ ಗಣಪತಿಗೆ ಬ್ರೇಕ್..? ಕರಾವಳಿಯ 90–95% ಪರಿಸರ ಸ್ನೇಹಿ ಮಾದರಿ ರಾಜ್ಯಕ್ಕೆ ಪಾಠ

ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಪರಿಸರ ಸ್ನೇಹಿ ಗಣಪತಿ ಮೂರ್ತಿಗಳನ್ನೇ ಪ್ರತಿಷ್ಠಾಪಿಸಿ ಗಣೇಶೋತ್ಸವ ಆಚರಿಸುವಂತೆ…

1 day ago