Advertisement
MIRROR FOCUS

ಟರ್ಕಿ ದೇಶದ ಸಜ್ಜೆ ಬೆಳೆದ ರೈತ | ಪ್ರಯೋಗದಲ್ಲಿ ಯಶಸ್ಸು ಕಂಡ ರೈತ |

Share

ತನ್ನ ಜಮೀನಿನಲ್ಲಿ ಟರ್ಕಿ ದೇಶದ ಸಜ್ಜೆ ಬೆಳೆದು ಉತ್ತಮ ಫಸಲು ಕಾಣುತ್ತಿರುವ ಯಶಸ್ವಿ ರೈತ ಈಗ ಮಾದರಿಯಾಗಿದ್ದಾರೆ. ಯಲಬುರ್ಗಾ ತಾಲೂಕಿನ ಮಾರನಾಳ ಗ್ರಾಮದ ರೈತ ಯೋಗೇಶ್ ಬರವನ್ನೂ ಮೆಟ್ಟಿನಿಂತು ತಮ್ಮ ಜಮೀನಿನಲ್ಲಿ ಪ್ರಯೋಗಾರ್ಥವಾಗಿ ಟರ್ಕಿ ದೇಶದ ಸಜ್ಜೆ ಬೆಳೆದು ಮಾದರಿ ಆಗಿರುವ ರೈತ.…..ಮುಂದೆ ಓದಿ….

Advertisement
Advertisement

ಸಾಮಾನ್ಯವಾಗು ರೈತರು ದೇಶೀಯ ಸಜ್ಜೆಯನ್ನು ನಾಟಿ ಮಾಡುತ್ತಾರೆ.  ಸ್ವದೇಶಿ ತಳಿಯ ಸಜ್ಜೆ ಹಾಕಿದರೆ ಗಿಡ ಮೂರರಿಂದ ನಾಲ್ಕು ಅಡಿ ಬೆಳೆಯುತ್ತದೆ. ಸಜ್ಜೆ ಒಂದು ಗಿಡಕ್ಕೆ ಒಂದು ತೆನೆ ಬರುತ್ತದೆ. ಈ ತೆನೆ ಒಂದರಿಂದ ಒಂದೂವರೆ ಅಡಿ ಮಾತ್ರ ದೊಡ್ಡದಿರುತ್ತದೆ. ಆದರೆ ಟರ್ಕಿ ದೇಶದ ಸಜ್ಜೆಯ ಗಿಡದ ಬಹುಪಾಲು ತೆನೆಯೇ ಇರಲಿದೆ. ಇದರ ಒಂದೊಂದು ತೆನೆಯೂ ಮೂರರಿಂದ ಐದು ಅಡಿ ಎತ್ತರವಿರಲಿದೆ. ಇಷ್ಟು ದೊಡ್ಡ ತೆನೆ ಸಂಪೂರ್ಣವಾಗಿ ಕಾಳುಕಟ್ಟಿದ್ದು, ಎಕರೆಗೆ 13 ರಿಂದ 15 ಕ್ವಿಂಟಲ್ ಇಳುವರಿ ಬರುವ ಸಾಧ್ಯತೆ ಇದೆ.

Advertisement

ಹೊಸ ಪ್ರಯೋಗ ಮಾಡಿರುವ ರೈತ ಯೋಗೇಶ್‌ ಅವರು ಹೇಳುವ ಪ್ರಕಾರ,  ಟರ್ಕಿ ದೇಶದಲ್ಲಿ ಸಜ್ಜೆಯು ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯ ಬರುವ ಫಸಲುಗಳಲ್ಲಿ ಒಂದಾಗಿದೆ. ಟರ್ಕಿ ತಳಿ ರೈತರಿಗೆ ವರದಾನವಾಗಿದೆ ಎನ್ನುತ್ತಾರೆ.

Advertisement

ಯೋಗೇಶ್‌ ಅವರ ಪ್ರಯತ್ನವನ್ನು ವೀಕ್ಷಿಸಿದ ಸ್ಥಳೀಯ ರೈತರು ಸಂತಸ ವ್ಯಕ್ತಪಡಿಸಿದ್ದಾರೆ. ಇದೇ ಮೊದಲ ಬಾರಿಗೆ ಈ ಮಾದರಿಯ ತಳಿ ನೋಡಿರುವುದು ಎನ್ನುತ್ತಾರೆ ರೈತ ಮರ್ತುಜಾಸಾಬ್.  ಸಜ್ಜೆಯ ಹೊಸ ತಳಿ ಪರಿಚಯವಾಗಿರುವದು ರೈತರಿಗೆ ಅನುಕೂಲವಾಗಿದ್ದು, ಈ ತಳಿಯಿಂದ ಪ್ರತಿ ಎಕರೆಗೆ 10 ರಿಂದ 12 ಕ್ವಿಂಟಾಲ್ ಇಳುವರಿ ಪಡೆಯುವ ನಿರೀಕ್ಷೆ ಇದೆ ಎಂದು  ರೈತ ಕೋಟೇಶ ಹೇಳುತ್ತಾರೆ.…..ಮುಂದೆ ಓದಿ….

Advertisement

ಈ ನಡುವೆ  ಚಿಕ್ಕಜೋಗಿಹಳ್ಳಿ ಸಮೀಪದ ಸಿದ್ದಾಪುರ ಗ್ರಾಮದ ನಾಲ್ವರು ರೈತರು ಕಡಿಮೆ ಮಳೆಗೆ ಬೆಳೆಯುವ ಟರ್ಕಿ ದೇಶದ ಸಜ್ಜೆ ಬೆಳೆದು ಬರಗಾಲಕ್ಕೆ ಸೆಡ್ಡು ಹೊಡೆದಿದ್ದಾರೆ. ರೈತರಾದ ಶೇಖರಪ್ಪ 5 ಎಕರೆ, ಪ್ರದೀಪ್ 2 ಎಕರೆ, ಮನೋಹರ್ 2 ಎಕರೆ, ಮಹಾಂತೇಶ್ ಗೌಡ 2 ಎಕರೆಯಲ್ಲಿ ಟರ್ಕಿ ಸಜ್ಜೆ ಬೆಳೆದು ಯಶಸ್ವಿಯಾಗಿದ್ದಾರೆ.ಮನೋಹರ್ ಅವರು ಈಗಾಗಲೇ 2 ಎಕರೆ ಸಜ್ಜೆ ಬೆಳೆಯನ್ನು ಕಟಾವು ಮಾಡಿದ್ದಾರೆ. ಇನ್ನೂ ಮೂವರು ರೈತರು ಕಟಾವು ಮಾಡುವ ಹಂತದಲ್ಲಿದ್ದಾರೆ. ನಮ್ಮ ಪಾರಂಪರಿಕ ಸಜ್ಜೆ ಬೆಳೆ ಬೆಳೆಯಲು ಕನಿಷ್ಠ ಮೂರು ತಿಂಗಳು ಬೇಕು. ಈ ಟರ್ಕಿ ಸಜ್ಜೆ ಬೆಳೆಯಲು ಮೂರುವರೆ ತಿಂಗಳು ತೆಗೆದುಕೊಳ್ಳುತ್ತದೆ

ಕೃಷಿಯಲ್ಲಿ ಹೊಸಪ್ರಯೋಗ ಮಾಡಿ ಯಶಸ್ಸು ಕಂಡಿರುವ ರೈತ ಯೋಗೇಶ ಈಗ ಇತರ ರೈತರಿಗೂ ಮಾದರಿಯಾಗಿದ್ದಾರೆ. ಕಡಿಮೆ ಜಾಗದಲ್ಲಿ ಹೆಚ್ಚು ಇಳುವರಿ ಪಡೆಯುವ ಇಂತಹ ಪ್ರಯತ್ನಗಳು ಹೆಚ್ಚಾಗಬೇಕಿದೆ.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಲಂಚ ಕೇಳಿದರೆ ನನ್ನ ವಿಳಾಸಕ್ಕೆ ಪತ್ರ ಬರೆಯಿರಿ |ಉಪಮುಖ್ಯಮಂತ್ರಿ ಡಿ .ಕೆ. ಶಿವಕುಮಾರ್

ಸರ್ಕಾರಿ ಸೌಲಭ್ಯ ಕೊಡಿಸುತ್ತೇವೆ, ಕೆಲಸ ಮಾಡಿಕೊಡುತ್ತೇವೆ ಎಂದು ಅಧಿಕಾರಿಗಳು ಮತ್ತು ಮುಖಂಡರು ಜನರ…

3 hours ago

ಅಡಿಕೆ ಆಮದು ಚರ್ಚೆಯಾಗುತ್ತಿದ್ದಂತೆಯೇ ಬರ್ಮಾ ಅಡಿಕೆ ಕಳ್ಳಸಾಗಾಣಿಕೆ ಪತ್ತೆ | ಅಸ್ಸಾಂ ಗಡಿಯಲ್ಲಿ 2 ಕೋಟಿ ರೂಪಾಯಿ ಮೌಲ್ಯದ ಅಡಿಕೆ ವಶಕ್ಕೆ |

ಅಡಿಕೆ ಆಮದು ಚರ್ಚೆಯಾಗುತ್ತಿರುವಂತೆಯೇ ಬರ್ಮಾ ಅಡಿಕೆ ಕಳ್ಳಸಾಗಾಣಿಕೆಯ ಇನ್ನೊಂದು ಪ್ರಕರಣ ಅಸ್ಸಾಂನಲ್ಲಿ ಪತ್ತೆಯಾಗಿದೆ.…

3 hours ago

ಹವಾಮಾನ ವರದಿ | 28.09.2024 | ರಾಜ್ಯದಾದ್ಯಂತ ಗುಡುಗು ಸಹಿತ ಮಳೆ ಸಾಧ್ಯತೆ

29.09.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು ಸೇರಿದಂತೆ…

11 hours ago

ಕುತ್ಲೂರು ಗ್ರಾಮಕ್ಕೆ ಅತ್ಯುತ್ತಮ ಪ್ರವಾಸೋದ್ಯಮ ರಾಷ್ಟ್ರೀಯ ಪ್ರಶಸ್ತಿ ಪ್ರದಾನ | ಗ್ರಾಮೀಣ ಭಾಗಕ್ಕೆ ಹೆಮ್ಮೆಯ ಗರಿ |

ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿರುವ ಕುತ್ಲೂರು ಗ್ರಾಮ ಪ್ರಾಕೃತಿಕ ಸೌ೦ದರ್ಯವನ್ನೇ ಹೊದ್ದು ಮಲಗಿದೆ. ಇಂತಹ…

1 day ago

ಇಂಗುಗುಂಡಿ ನಿರ್ಮಿಸಿದ ಮಹಿಳಾ ತಂಡ | 6 ಮಂದಿ ಮಹಿಳೆಯರಿಂದ 236 ಕ್ಕೂ ಹೆಚ್ಚು ಇಂಗುಗುಂಡಿ |

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲಮುಡ್ನೂರು ಗ್ರಾಮ ಪಂಚಾಯಿತಿಯ ಚಿಗುರು ಸಂಜೀವಿನಿ…

1 day ago