ಸಂಬಾರ ಪದಾರ್ಥಗಳ ರಾಜ ಎಂದು ಕರೆಯಲ್ಪಡುವ ಕಾಳು ಮೆಣಸು ದಕ್ಷಿಣ ಭಾರತದ ಪ್ರಮುಖ ಬೆಳೆ.ಕಪ್ಪು ಬಂಗಾರವೆಂದು ಹೆಸರು ಪಡೆದಿರುವ ಇದು ಸಂಬಾರ ಪದಾರ್ಥಗಳಲ್ಲಿ ಶ್ರೇಷ್ಠವಾದದ್ದು.ಭಾರತದಲ್ಲಿ ಇದರ ಉತ್ಪಾದನೆ ಕರ್ನಾಟಕ, ಕೇರಳ, ತಮಿಳುನಾಡು,ಅಸ್ಸಾಂ,ಮೇಘಾಲಯ ಮುಂತಾದ ರಾಜ್ಯಗಳಲ್ಲಿ ಆಗುತ್ತಿದೆ.ಲಭ್ಯ ಇರುವ ಅಂಕಿ ಅಂಶಗಳ ಪ್ರಕಾರ ವಿಸ್ತೀರ್ಣ ಮತ್ತು ಉತ್ಪಾದನೆಯಲ್ಲಿ ಕರ್ನಾಟಕ ಮೊದಲನೇ ಸ್ಥಾನದಲ್ಲಿದ್ದು,ಬಳಿಕದ ಸ್ಥಾನಗಳು ಕೇರಳ,ತಮಿಳ್ನಾಡು ಅಸ್ಸಾಂಗಳದ್ದು ಆಗಿದೆ.…..ಮುಂದೆ ಓದಿ….
ಭಾರತದಲ್ಲಿ ಒಟ್ಟಾಗಿ ಸುಮಾರು ಎರಡು ಲಕ್ಷದ ಇಪ್ಪತ್ತೆಂಟು ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಇದರ ಕೃಷಿ ಆಗಿ ಉತ್ಪಾದನೆ ಸುಮಾರು ಅರುವತ್ತ ನಾಲ್ಕು ಸಾವಿರ ಟನ್ ಆಗಿದೆ.ಕಳೆದ ಸಾಲಿನಲ್ಲಿ ಇದರ ಉತ್ಪಾದನೆ ಹವಾಮಾನದ ವೈಪರೀತ್ಯದಿಂದಾಗಿ ಮತ್ತಷ್ಟು ಇಳಿಕೆ ಆಗಿದೆ.ಕೆಲವು ಪ್ರದೇಶಗಳಲ್ಲಿ ಕಾರ್ಮಿಕರ ಅಭಾವದಿಂದ ಮೆಣಸು ಕೊಯಿಯುವ ಕಾರ್ಯಗಳೂ ಸರಿಯಾಗಿ ಆಗಿಲ್ಲ.ಒಟ್ಟಾರೆಯಾಗಿ ಕಳೆದ ಸಾಲಿನಲ್ಲಿ ಉತ್ಪಾದನೆ ಮೊದಲಿನ ವರ್ಷಗಳಿಗೆ ಹೋಲಿಸಿದಾಗ ಇದು ತುಂಬಾ ಕಡಿಮೆ.
ಜಾಗತಿಕ ಮಟ್ಟದಲ್ಲಿ ಇದರ ಉತ್ಪಾದನೆಯಲ್ಲಿ ವಿಯೆಟ್ನಾಮ್ ಒಂದನೇ ಸ್ಥಾನದಲ್ಲಿದ್ದು,ಎರಡನೇ ಸ್ಥಾನದಲ್ಲಿ ಭಾರತವಿದೆ.ಇನ್ನುಳಿದಂತೆ ಇಂಡೋನೇಷಿಯಾ,ಬ್ರೆಜಿಲ್, ಮಲೇಶಿಯ,ಶ್ರೀಲಂಕಾ ಮುಂತಾದ ರಾಷ್ಟ್ರಗಳಲ್ಲಿ ಇದನ್ನು ಬೆಳೆಸಲಾಗುತ್ತಿದೆ.ಈ ಎಲ್ಲಾ ರಾಷ್ಟ್ರಗಳು ಇದನ್ನು ರಫ್ತು ಮಾಡುವುದರೊಂದಿಗೆ ಆಮದನ್ನು ಮಾಡುತ್ತಿವೆ.
ಬೆಲೆಯಲ್ಲಿ ಏಕೆ ಏರಿಳಿತ ? : ಕಾಳು ಮೆಣಸಿನ ಬೆಲೆ ಕಳೆದ ಹಲವು ತಿಂಗಳುಗಳಿಂದ ಏರು ಪ್ರವೃತ್ತಿಯನ್ನು ತೋರಿಸುತ್ತಾ ಬಂದು ಯುದ್ಧದ ಕಾರ್ಮೋಡ ಇದ್ದಾಗ ಇಳಿದು ಮತ್ತೆ ಏರಿ ಇದೀಗ ಇಳಿಕೆ ಹಾದಿ ಹಿಡಿದಿದೆ.ಈ ರೀತಿಯ ಪ್ರವೃತ್ತಿಗೆ ಹಲವು ಕಾರಣಗಳಿವೆ.
ಬೇಡಿಕೆ : ಜಾಗತಿಕ ಮಟ್ಟದಲ್ಲಿ ಇದರ ಬೇಡಿಕೆ ಸುಮಾರು ನಾಲ್ಕು ಲಕ್ಷದ ಅರುವತ್ತು ಸಾವಿರ ಟನ್.ಆಂತರಿಕವಾಗಿ ನಮ್ಮಲ್ಲಿರುವ ಬೇಡಿಕೆ ಸುಮಾರು ಎಪ್ಪತ್ತು ಸಾವಿರ ಟನ್.ನಮ್ಮಲ್ಲಿ ಇದಕ್ಕಿರುವ ಬೇಡಿಕೆ ಹಬ್ಬಗಳ ಸಮಯದಲ್ಲಿ ಜಾಸ್ತಿ.
ಪೂರೈಕೆ : ಕಳೆದ ಸಾಲಿನಲ್ಲಿ ಆದ ಉತ್ಪಾದನೆ ಜಾಗತಿಕ ಮಟ್ಟದಲ್ಲಿ ಕಡಿಮೆ. ಇದೇ ಸ್ಥಿತಿ ಭಾರತದ್ದು ಕೂಡಾ.ಪರಿಣಾಮವಾಗಿ ಇದರ ಬೆಲೆ ಏರಿಕೆಗೆ ಅವಕಾಶ ಆಯಿತು.ಹೀಗಿದ್ದರೂ ಈಗ ಬೆಲೆ ಯಾಕಾಗಿ ಹಿಮ್ಮುಖವಾಗಿ ಚಲಿಸುತ್ತಿದೆ ಎಂಬ ಪ್ರಶ್ನೆ ಮೂಡುವುದು ಸಹಜ.ಇದಕ್ಕೆ ಕೆಳಗೆ ಹೆಸರಿಸಿದ ಅಂಶಗಳಿಂದ ಉತ್ತರವನ್ನು ತಿಳಿದುಕೊಳ್ಳಬಹುದು.
ಪ್ರಾದೇಶಿಕ ಒಪ್ಪಂದದ ಪ್ರಭಾವ : ಭಾರತ ಮತ್ತು ಶ್ರೀಲಂಕಾದ ಒಳಗೆ 1998 ನಲ್ಲಿ ಆದ ಮುಕ್ತ ವ್ಯಾಪಾರ ಒಪ್ಪಂದ 2000 ದ ಸಮಯದಲ್ಲಿ ಕಾರ್ಯ ರೂಪಕ್ಕೆ ಬಂತು.ಇದರ ಪ್ರಕಾರ ಅಡಿಕೆ,ತೆಂಗು, ಕಾಳು ಮೆಣಸು ಇತ್ಯಾದಿಗಳನ್ನು ಆಮದು ಮಾಡಿಕೊಳ್ಳಬಹುದು.ಇಲ್ಲಿ ಕಾಳು ಮೆಣಸಿಗೆ ಸಂಬಂಧ ಪಟ್ಟಂತೆ ಶ್ರೀಲಂಕಾ ಇದನ್ನು ಭಾರತಕ್ಕೆ ರಫ್ತು ಮಾಡಬಹುದು. ಹೀಗಾಗಿ ಇಲ್ಲಿ…
ಸಾಮನ್ಯವಾಗಿ ಒಂದು ಉತ್ಪನ್ನದ ಉತ್ಪಾದನೆ ಕುಸಿದಾಗ ಅದರ ಬೆಲೆ ಏರಿಕೆ ಆಗುವುದು ಸಹಜ.ಇಲ್ಲಿ ಅದೇ ಆಗುತ್ತಿದ್ದರೂ ಇದೀಗ ಏರಿಳಿತಕ್ಕೆ ದಾರಿ ಆಗುತ್ತಿದೆ.ಕಾಳು ಮೆಣಸಿನ ಬೆಲೆ ಸಾಮಾನ್ಯವಾಗಿ ಜುಲೈನಿಂದ ಅಕ್ಟೋಬರ್,ನವೆಂಬರ್ ತನಕ ಏರು ಪ್ರವೃತ್ತಿಯನ್ನು ಈ ಮೊದಲು ತೋರಿಸುತ್ತಿದ್ದ ಕಾರಣ ಆ ಸಮಯದಲ್ಲಾದರೂ ಏರ ಬಹುದಾ ಎಂಬ ನಿರೀಕ್ಷೆ ಕೃಷಿಕರ ಮನದಲ್ಲಿದೆ.ಈಗಾಗಲೇ ಹೆಚ್ಚಿನ ಪ್ರಮಾಣದಲ್ಲಿ ಇದು ಮಾರುಕಟ್ಟೆಗೆ ಪ್ರವೇಶ ಮಾಡಿದ್ದು,ಆದ್ದರಿಂದ ಮುಂದೆ ಪೂರೈಕೆ ಪ್ರಮಾಣ ಕಡಿಮೆ ಆಗಿ ಬೆಲೆ ಏರಿಕೆಗೆ ಅವಕಾಶ ಆಗಬಹುದೋ ಎಂಬ ವಾತಾವರಣ ಮಾರುಕಟ್ಟೆಯಲ್ಲಿ ಮೂಡಿದೆ.
ಈ ಬಾರಿ ಮೇ ತಿಂಗಳಿನಿಂದಲೇ ಮಳೆ ಆರಂಭವಾಗಿದೆ. ಜೂನ್.10 ಕಳೆಯುವ ಹೊತ್ತಿಗೆ ವಾತಾವರಣ…
ಈಗಿನಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಉತ್ತಮ ಮಳೆಯ ಮುನ್ಸೂಚನೆ ಇದ್ದರೂ ನಿರೀಕ್ಷಿತ ಪ್ರಮಾಣದಲ್ಲಿ…
ಜೂನ್ 2025ರಲ್ಲಿ ಮಿಥುನ ರಾಶಿಯಲ್ಲಿ ಸೂರ್ಯ, ಬುಧ ಮತ್ತು ಗುರು ಗ್ರಹಗಳ ತ್ರಿಗ್ರಾಹಿ…
ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಎ.ಪಿ.ಎಂ.ಸಿ ಮಾರುಕಟ್ಟೆಯಲ್ಲಿ ಪ್ರತಿನಿತ್ಯ ಅಂದಾಜು 800 ರಿಂದ 900…
ದೇಶದ ಆರ್ಥಿಕತೆಯಲ್ಲಿ ತೋಟಗಾರಿಕೆಯಿಂದ ಹೆಚ್ಚಿನ ಜಿಡಿಪಿ ಬರುತ್ತಿದ್ದು, ಹೂ ಮತ್ತು ಔಷಧಿ ಸಸ್ಯಗಳಿಗೆ…
ಚಾಮರಾಜನಗರ ತಾಲೂಕು ಬೇಡುಗುಳಿ ಸಮೀಪದ ರಾಮಯ್ಯನ ಪೋಡುವಿನಲ್ಲಿ ಹುಲಿ ದಾಳಿಗೆ ರಂಗಮ್ಮ ಎಂಬ…