Advertisement
MIRROR FOCUS

#BlackPepper | ಕಾಳುಮೆಣಸು ಧಾರಣೆ ಏರಿಕೆ | 500+ ಧಾರಣೆಗೆ ಕಾಳುಮೆಣಸು ಖರೀದಿ | ಏಕೆ ಬೇಡಿಕೆ ಹೆಚ್ಚಾಯ್ತು… ? | ಹೇಗಿದೆ ಮಾರುಕಟ್ಟೆ ಟ್ರೆಂಡ್…?‌ |

Share

ಅನೇಕ ಸಮಯಗಳ ಬಳಿಕ ಕಾಳುಮೆಣಸು ಧಾರಣೆಯಲ್ಲಿ ಚೇತರಿಕೆ ಕಾಣುತ್ತಿದೆ. ವಾರದಿಂದ ವಾರಕ್ಕೆ ಧಾರಣೆಯಲ್ಲಿ  ಏರಿಕೆ ಕಾಣುತ್ತಿದೆ. ಇದೀಗ 530 ರೂಪಾಯಿವರೆಗೂ ಖರೀದಿ ನಡೆದಿದೆ. 

ಕಳೆದ ಅನೇಕ ವರ್ಷಗಳಿಂದ ಕಾಳುಮೆಣಸು ಧಾರಣೆ ಏರಿಕೆ ಕಾಣಲಿಲ್ಲ. 450 ರೂಪಾಯಿ ಆಸುಪಾಸಿನಲ್ಲಿ ಕಾಳುಮೆಣಸು ಧಾರಣೆ ಸ್ಥಿರವಾಗಿತ್ತು. ಇದೀಗ ಕಳೆದ ಒಂದು ತಿಂಗಳಿನಿಂದ ಕಾಳುಮೆಣಸು ಧಾರಣೆ ಚೇತರಿಕೆ ಕಾಣುತ್ತಿತ್ತು. ಈಗ 500 + ಧಾರಣೆಯ ಮೂಲಕ ಮತ್ತೆ ಕೃಷಿಕರ ಗಮನ ಸೆಳೆದಿದೆ. ಕೆಲವು ವರ್ಷಗಳ ಹಿಂದೆ 700 ರೂಪಾಯಿವರೆಗೂ ತಲಪಿದ್ದ ಧಾರಣೆಯ ಮೂಲಕ ಕೃಷಿಕರ ಕಪ್ಪುಚಿನ್ನ ಎಂದೇ ಗುರುತಿಸಿಕೊಂಡಿತ್ತು. ಅದಾಗಿ ಇಳಿಕೆಯಾದ ಮಾರುಕಟ್ಟೆ ಚೇತರಿಕೆ ಕಂಡಿರಲಿಲ್ಲ. ಇದೀಗ ಮತ್ತೆ ಚೇತರಿಕೆ ಕಾಣುತ್ತಿದೆ.

ಸದ್ಯದ ಮಾರುಕಟ್ಟೆ ಮಾಹಿತಿ ಪ್ರಕಾರ, ಮಾರುಕಟ್ಟೆಯಲ್ಲಿ ಕಾಳುಮೆಣಸು ಕೊರತೆ ಕಂಡುಬಂದಿದೆ. ವಿದೇಶಗಳಲ್ಲೂ ಏರುಗತಿಯ ಮಾರುಕಟ್ಟೆ ವಾತಾವರಣ ಇದೆ. ವಿಯೆಟ್ನಾಂನಂತಹ ದೇಶದಲ್ಲಿ ಕೂಡಾ ಕಾಳುಮೆಣಸು ಬೇಡಿಕೆ ಶುರುವಾಗಿದೆ. ಧಾರಣೆ ಇಳಿಕೆಯ ಕಾರಣದಿಂದ ದೇಶೀಯ ಮಾರುಕಟ್ಟೆಯಲ್ಲಿ ಕೃಷಿಕರು ಕಾಳುಮೆಣಸು ಮಾರುಕಟ್ಟೆಗೆ ಬಿಡುತ್ತಿರಲಿಲ್ಲ. ದಾಸ್ತಾನು ಇರಿಸಿಕೊಂಡರೆ, ಅಲ್ಪಸ್ವಲ್ಪ ಪ್ರಮಾಣದಲ್ಲಿ ಕೃಷಿಕರು ಕಾಳುಮೆಣಸು ಮಾರುಕಟ್ಟೆಗೆ ಬಿಡುತ್ತಿದ್ದರು.

ದೇಶದ ಕಾಳುಮೆಣಸು ಉತ್ಪಾದನೆ 70 ಸಾವಿರ ಟನ್‌ ಇದೆ. ಆದರೆ ಅದರಲ್ಲಿ ಕರ್ನಾಟಕದ ಉತ್ಪಾದನೆಯೇ 33 ಸಾವಿರ ಟನ್‌.  ಕೇರಳದಲ್ಲಿ 28 ಸಾವಿರ ಟನ್‌ ಬೆಳೆಯಲಾಗುತ್ತದೆ. ಕಾಳುಮೆಣಸನ್ನು ಭಾರತದಲ್ಲಿ ಪ್ರಮುಖವಾಗಿ ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರ ಪ್ರದೇಶ, ಒಡಿಶಾ, ಮಹಾರಾಷ್ಟ್ರ, ಗೋವಾ, ಅಸ್ಸಾಂ, ಮೇಘಾಲಯ ಹಾಗೂ ತ್ರಿಪುರಾಗಳಲ್ಲಿ ಬೆಳೆಯಲಾಗುತ್ತದೆ. ಈಚೆಗೆ ಧಾರಣೆ ಹಾಗೂ ರೋಗದ ಸಮಸ್ಯೆಯಿಂದ ಕಾಳುಮೆಣಸು ಗಿಡ ಅಪಾರ ಪ್ರಮಾಣದಲ್ಲಿ ನಷ್ಟವಾಗಿದೆ.

ಇದೀಗ ಔಷಧಿ ಸಹಿತ ಸಾಂಬಾರ ವಸ್ತುವಾಗಿ ಕಾಳುಮೆಣಸು ಮತ್ತೆ ಬೇಡಿಕೆ ಶುರುವಾಗಿದೆ. ಪ್ರತೀ ಕೆಜಿಗೆ 500 ರೂಪಾಯಿ ತಲುಪಿದರೂ ಮಾರುಕಟ್ಟೆಗೆ ಕಾಳುಮೆಣಸು ಪ್ರವೇಶವಾಗುತ್ತಿಲ್ಲ. ಹೀಗಾಗಿ ಧಾರಣೆ ಏರಿಕೆಯ ಹಾದಿಯಲ್ಲಿ ಸಾಗುತ್ತಿದೆ. ಇದೇ ವೇಳೆ ಕಾಳುಮೆಣಸು ಬೆಳೆಯಲ್ಲೂ ಕೊರತೆ ಇದೆ. ಹೀಗಾಗಿ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗಿದೆ.

ಕಳೆದ ಬೆಳೆಯಲ್ಲೂ ಕಾಳುಮೆಣಸು ಇಳುವರಿ ಕೊರತೆಯಾಗಿತ್ತು. ಈ ಬಾರಿ ಕೂಡಾ ಸುಮಾರು 5-8 ಸಾವಿರ ಟನ್‌ ಕಾಳುಮೆಣಸು ಕೊರತೆ ಉಂಟಾಗಿದೆ. ವಿದೇಶಗಳಲ್ಲಿ ಕೂಡಾ ಕಾಳುಮೆಣಸು ಇಳುವರಿಯಲ್ಲಿ  ಕೊರತೆ ಕಂಡುಬಂದಿದೆ. ಮುಂದಿನ ಋತುವಿನಲ್ಲಿ ಇಂಡೋನೇಷ್ಯಾದಲ್ಲಿ ಬೆಳೆ ಕಡಿಮೆ ಆಗಲಿದೆ ಎಂದು ಅಂದಾಜಿಸಲಾಗಿದೆ.  ಜಾಗತಿಕ ಬೆಲೆಗಳು ಸಹ ಏರಿಕೆಯ ಸಾಧ್ಯತೆಯಿದೆ. ಆದರೆ ವಿಯೆಟ್ನಾಂನಲ್ಲಿ ಕಾಳುಮೆಣಸು ಉತ್ಪಾದನೆಯು ಕಳೆದ ವರ್ಷ 1.30 ಲಕ್ಷ ಟನ್‌ಗೆ ಹತ್ತಿರದಲ್ಲಿದೆ ಎಂದು ಅಂದಾಜಿಸಲಾಗಿದೆ.

ಹೀಗಾಗಿ ಸದ್ಯ ಕಾಳುಮೆಣಸು ದರ ಏರಿಕೆಯ ನಿರೀಕ್ಷೆ ಇದೆ. ಆದರೆ ಇದೇ ಟ್ರೆಂಡ್‌ ಮುಂದುವರಿಯುವ ಲಕ್ಷಣಗಳ ಬಗ್ಗೆ ಕಾಳುಮೆಣಸು ಮಾರುಕಟ್ಟೆ ವಲಯವು ಯಾವ ಸ್ಪಷ್ಟತೆಯನ್ನೂ ನೀಡುವುದಿಲ್ಲ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

Published by
ಮಹೇಶ್ ಪುಚ್ಚಪ್ಪಾಡಿ

Recent Posts

ಉದ್ಯೋಗಗಳಿಲ್ಲವೇ? ಅಥವಾ ಉದ್ಯೋಗಕ್ಕೆ ಬೇಕಾದ ಕೌಶಲ್ಯವಿರುವವರು ಇಲ್ಲವೇ?

ಭಾರತದಲ್ಲಿ ಸಮಸ್ಯೆ ಕೇವಲ ಉದ್ಯೋಗಗಳ ಕೊರತೆಯಲ್ಲ, ಉದ್ಯೋಗಕ್ಕೆ ಅಗತ್ಯವಾದ ಕೌಶಲ್ಯ ಹೊಂದಿದ ಅಭ್ಯರ್ಥಿಗಳ…

1 hour ago

ಅಡಿಕೆ ರೋಗ ನಿಯಂತ್ರಣಕ್ಕೆ ಕೇಂದ್ರದ ಬೆಂಬಲ – ಕ್ಯಾ. ಚೌಟಗೆ ಸಚಿವ ಶಿವರಾಜ್‌ ಸಿಂಗ್‌ ಚೌಹಾಣ್ ಭರವಸೆ

ಕರಾವಳಿ ಮತ್ತು ಮಲೆನಾಡಿನ ಅಡಿಕೆ ತೋಟಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಎಲೆಚುಕ್ಕೆ, ಹಳದಿ ಎಲೆ ಹಾಗೂ…

12 hours ago

ಹವಾಮಾನ ವರದಿ | 23-08-2026 | ಆಗಸ್ಟ್ 25 ರವರೆಗೆ ಮಳೆ – ಕರಾವಳಿ-ಮಲೆನಾಡಿನಲ್ಲಿ ಉತ್ತಮ ಮಳೆ ಸಾಧ್ಯತೆ

ಕರ್ನಾಟಕದಲ್ಲಿ ಮುಂಗಾರು ಮತ್ತೆ ಚುರುಕಾಗಿದ್ದು, ಕರಾವಳಿ ಮತ್ತು ಮಲೆನಾಡಿನಲ್ಲಿ ಆಗಸ್ಟ್ 25ರವರೆಗೆ ಮಳೆ…

17 hours ago

ಅಳಿವಿನಂಚಿನಲ್ಲಿದ್ದ ಪೆರಿಯಾರ್ ಹಸುವಿಗೆ ರಾಷ್ಟ್ರೀಯ ತಳಿ ಮಾನ್ಯತೆ – ಕೇರಳದ ಎರಡನೇ ದೇಶಿ ಗೋತಳಿ

ಅಳಿವಿನಂಚಿನಲ್ಲಿದ್ದ ಕೇರಳದ ಪೆರಿಯಾರ್ ಕುಳ್ಳನ್ ಹಸುವಿಗೆ ಭಾರತೀಯ ಕೃಷಿ ಸಂಶೋಧನಾ ಮಂಡಳಿಯ ರಾಷ್ಟ್ರೀಯ…

18 hours ago

ಪಿಒಪಿ ಗಣಪತಿಗೆ ಬ್ರೇಕ್..? ಕರಾವಳಿಯ 90–95% ಪರಿಸರ ಸ್ನೇಹಿ ಮಾದರಿ ರಾಜ್ಯಕ್ಕೆ ಪಾಠ

ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಪರಿಸರ ಸ್ನೇಹಿ ಗಣಪತಿ ಮೂರ್ತಿಗಳನ್ನೇ ಪ್ರತಿಷ್ಠಾಪಿಸಿ ಗಣೇಶೋತ್ಸವ ಆಚರಿಸುವಂತೆ…

20 hours ago

ಪಶ್ಚಿಮ ಘಟ್ಟ ಸಂರಕ್ಷಣೆ ಹೆಸರಿನಲ್ಲಿ ಕೃಷಿಕರಿಗೆ ನಿರ್ಬಂಧ ಬೇಡ – ಕಸ್ತೂರಿ ರಂಗನ್ ವರದಿ ಸಂಪೂರ್ಣ ತಿರಸ್ಕರಿಸಲು ಆಗ್ರಹ

ಪಶ್ಚಿಮ ಘಟ್ಟ ಸಂರಕ್ಷಣೆಯ ಹೆಸರಿನಲ್ಲಿ ಕೃಷಿಕರ ಜೀವನೋಪಾಯಕ್ಕೆ ನಿರ್ಬಂಧ ಹೇರಬಾರದು, ಕಸ್ತೂರಿ ರಂಗನ್…

20 hours ago