Advertisement
ಸುದ್ದಿಗಳು

ಟರ್ಕಿಯಲ್ಲಿ ಅಡಿಕೆಯನ್ನು ಕೊಂಡೊಯ್ದ ವ್ಯಕ್ತಿ ಸೆರೆ…!

Share

ಪಾನ್‌ ಮೂಲಕ ಅಡಿಕೆಯನ್ನು ಜಗಿಯಲು ಕೊಂಡೊಯ್ದ ವ್ಯಕ್ತಿಯನ್ನು ಟರ್ಕಿಯಲ್ಲಿ ಬಂಧಿಸಲ್ಪಟ್ಟಿದ್ದಾರೆ. ಪಾಕಿಸ್ತಾನ ಮೂಲಕ ವ್ಯಕ್ತಿ ಟರ್ಕಿಗೆ ತೆರಳುವ ಸಂದರ್ಭ ಬೀಡಾವನ್ನು ಜೊತೆಯಲ್ಲಿ ಕೊಂಡೊಯ್ದಿದ್ದ. ಟರ್ಕಿ ದೇಶದ ನಿಯಮದ ಪ್ರಕಾರ ಅಡಿಕೆ ಬಳಕೆ ನಿಷೇಧ. ಹೀಗಾಗಿ ಕಾನೂನು ಉಲ್ಲಂಘಿಸಿದಕ್ಕಾಗಿ ವ್ಯಕ್ತಿಯನ್ನು ಬಂಧಿಸಿ 6 ತಿಂಗಳು ಜೈಲು ಶಿಕ್ಷೆಯನ್ನು ಟರ್ಕಿ ದೇಶ ವಿಧಿಸಿದೆ.

Advertisement

ಟರ್ಕಿಯಲ್ಲಿ ಪಾಕಿಸ್ತಾನಿ ವ್ಯಕ್ತಿಯ ಬಂಧನದ ನಂತರ, ಟರ್ಕಿಯಲ್ಲಿರುವ ಪಾಕಿಸ್ತಾನಿ ದೂತಾವಾಸವು ಟರ್ಕಿಗೆ ಆಗಮಿಸುವ ಎಲ್ಲಾ ನಾಗರಿಕರು ಜೊತೆಯಲ್ಲಿ ಅಡಿಕೆ ತಾರದಂತೆ ಪಾಕಿಸ್ತಾನದ ನಾಗರಿಕರಿಗೆ ಎಚ್ಚರಿಕೆ ನೀಡಿದೆ. ಲಾಹೋರ್ ನಿವಾಸಿ ಮುಹಮ್ಮದ್ ಓವೈಸ್ ಅವರನ್ನು ಖಾಸಗಿ ಕಂಪನಿಯಿಂದ ಟರ್ಕಿಗೆ ಕಳುಹಿಸಲಾಗಿತ್ತು. ಮುಹಮ್ಮದ್ ಓವೈಸ್ ಅವರು ತಮ್ಮ ಪ್ರವಾಸ ಸಂದರ್ಭ ಅಲ್ಲಿನ ಮಿತ್ರನಿಗೆ ಉಡುಗೊರೆಯಾಗಿ ಎರಡು ಪ್ಯಾಕೆಟ್ ಬೀಡಾ ಹಾಗೂ ಅಡಿಕೆಯನ್ನು ತಮ್ಮೊಂದಿಗೆ ಕೊಂಡೊಯ್ದಿದ್ದರು. ಅಡಿಕೆಯನ್ನು ಟರ್ಕಿಯಲ್ಲಿ ಡ್ರಗ್ಸ್ ಎಂದು ಪರಿಗಣಿಸಲಾಗುತ್ತದೆ. ಮೊಹಮ್ಮದ್ ಓವೈಸ್‌ಗೆ ಟರ್ಕಿಯ ಕಾನೂನಿನ ಬಗ್ಗೆ ಕಸ್ಟಮ್ಸ್ ಅಧಿಕಾರಿಗಳು ಹಾಗೂ ನಿಕಟವರ್ತಿಗಳು ಹೇಳಿರಲಿಲ್ಲ. ಕಾನೂನು ಅರಿಯದ ಕಾರಣ ಈ ಸಮಸ್ಯೆಯಾಗಿದೆ, ಹೀಗಾಗಿ ದೇಶದ ನಾಗರಿಕನ್ನು ಬಿಡುವಂತೆ ಇದೀಗ ಪಾಕಿಸ್ತಾನ ಪ್ರಧಾನಿ ಟರ್ಕಿಗೆ ಮನವಿ ಮಾಡಿದ್ದಾರೆ.

ಟರ್ಕಿಯಲ್ಲಿ ಅಡಿಕೆಯ ಬಳಕೆ ಕಾನೂನು ಬಾಹಿರವಾಗಿದೆ.  ಅಡಿಕೆಯಲ್ಲಿ ಉತ್ತೇಜಕ ಅರೆಕೋಲಿನ್ ಇದೆ ಎಂದು ಈ ದೇಶ ಅಡಿಕೆ ಬಳಕೆ ನಿಷೇಧ ಮಾಡಿದೆ. ಅದೇ ರೀತಿ ಹಲವು ದೇಶಗಳಲ್ಲಿ ಅಡಿಕೆ ಬಳಕೆ ನಿಷೇಧ ಇದೆ. ಇನ್ನೂ ಕೆಲವು ದೇಶಗಳಲ್ಲಿ ಅಡಿಕೆ ತಿಂದು ಉಗುಳುವುದರ ಮೇಲೆ ನಿರ್ಬಂಧ ಇದೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

Published by
ಮಿರರ್‌ ಡೆಸ್ಕ್‌

Recent Posts

ರಾಜ್ಯದಲ್ಲಿ ಸಿಡಿಲು ಮಿಂಚಿನ ಆರ್ಭಟ – 14 ವರ್ಷಗಳಲ್ಲಿ 1,026 ಸಾವು | ‘ದಾಮಿನಿ’ ಆ್ಯಪ್ ಬಳಸಿ ಮುನ್ನೆಚ್ಚರಿಕೆ ತೆಗೆದುಕೊಳ್ಳಿ

ರಾಜ್ಯದಲ್ಲಿ ಸಿಡಿಲು ಬಡಿತದಿಂದ 1,026 ಸಾವುಗಳು ದಾಖಲಾಗಿದೆ. ‘ದಾಮಿನಿ’ ಆ್ಯಪ್ ಬಳಸಿ ಮುನ್ನೆಚ್ಚರಿಕೆ…

36 minutes ago

ರಕ್ಷಾ ಸ್ವರ್ಣಪ್ರಾಶನ | ಮಕ್ಕಳ ರೋಗ ನಿರೋಧಕ ಶಕ್ತಿಗೆ ವಿಶೇಷ ಔಷಧಿ

ರಕ್ಷಾ ಆಯುರ್ವೇದವು ಏಪ್ರಿಲ್ 24ರಂದು ಸ್ವರ್ಣಪ್ರಾಶನ ಕಾರ್ಯಕ್ರಮ ಆಯೋಜಿಸಿದೆ. ಇದು ಮಕ್ಕಳ ರೋಗ…

1 hour ago

ಹವಾಮಾನ ವರದಿ | 19-04-2026 | ಇಂದಿನಿಂದ ಕರಾವಳಿ, ಮಲೆನಾಡಿನಲ್ಲಿ ಗುಡುಗು ಸಹಿತ ಮಳೆ ಆರಂಭ

ಕರ್ನಾಟಕದಲ್ಲಿ ಇಂದಿನಿಂದ ಪ್ರೀ-ಮಾನ್ಸೂನ್ ಮಳೆ ಚಟುವಟಿಕೆ ಆರಂಭವಾಗಲಿದೆ. ಕರಾವಳಿ, ಮಲೆನಾಡಿನಲ್ಲಿ ತಕ್ಷಣ ಮಳೆ,…

12 hours ago

ಜಾಗತಿಕ ಬಿಕ್ಕಟ್ಟಿನ ಪರಿಣಾಮ : ಬೆಂಗಳೂರಿಗೆ ಆಟೋ LPG ಪೂರೈಕೆ 300% ಹೆಚ್ಚಿಸಿದ ಇಂಡಿಯನ್ ಆಯಿಲ್

ಜಾಗತಿಕ ಬಿಕ್ಕಟ್ಟಿನಿಂದ ಆಟೋ LPG ಬೇಡಿಕೆ ಏರಿಕೆ ಕಂಡಿದ್ದು, ಇಂಡಿಯನ್ ಆಯಿಲ್ ಪೂರೈಕೆಯನ್ನು…

16 hours ago

ಕೃಷಿಗೆ ಹೊಸ ಚೈತನ್ಯ- ದೂರದರ್ಶನ ಚಂದನದಿಂದ “ರೈತ ರತ್ನ” ರಿಯಾಲಿಟಿ ಶೋ ಆರಂಭ

“ರೈತ ರತ್ನ” ರಿಯಾಲಿಟಿ ಶೋ ಮೂಲಕ ಕೃಷಿಕರ ಸಾಧನೆಗೆ ಹೊಸ ವೇದಿಕೆ ಸಿಕ್ಕಿದೆ.…

17 hours ago

ಮಿಜೋರಾಂನಲ್ಲಿ ಅಕ್ರಮವಾಗಿ ಅಡಿಕೆ ಸಾಗಾಟಕ್ಕೆ ತಡೆ – ₹54.88 ಲಕ್ಷ ಮೌಲ್ಯದ 98 ಚೀಲ ವಶ

ಮಿಜೋರಾಂದ ಚಾಂಫೈ ಜಿಲ್ಲೆಯಲ್ಲಿ ₹54.88 ಲಕ್ಷ ಮೌಲ್ಯದ 98 ಚೀಲ ಅಡಿಕೆ ವಶಪಡಿಸಲಾಗಿದೆ.…

1 day ago