Advertisement
ಸುದ್ದಿಗಳು

ಟರ್ಕಿಯಲ್ಲಿ ಅಡಿಕೆಯನ್ನು ಕೊಂಡೊಯ್ದ ವ್ಯಕ್ತಿ ಸೆರೆ…!

Share

ಪಾನ್‌ ಮೂಲಕ ಅಡಿಕೆಯನ್ನು ಜಗಿಯಲು ಕೊಂಡೊಯ್ದ ವ್ಯಕ್ತಿಯನ್ನು ಟರ್ಕಿಯಲ್ಲಿ ಬಂಧಿಸಲ್ಪಟ್ಟಿದ್ದಾರೆ. ಪಾಕಿಸ್ತಾನ ಮೂಲಕ ವ್ಯಕ್ತಿ ಟರ್ಕಿಗೆ ತೆರಳುವ ಸಂದರ್ಭ ಬೀಡಾವನ್ನು ಜೊತೆಯಲ್ಲಿ ಕೊಂಡೊಯ್ದಿದ್ದ. ಟರ್ಕಿ ದೇಶದ ನಿಯಮದ ಪ್ರಕಾರ ಅಡಿಕೆ ಬಳಕೆ ನಿಷೇಧ. ಹೀಗಾಗಿ ಕಾನೂನು ಉಲ್ಲಂಘಿಸಿದಕ್ಕಾಗಿ ವ್ಯಕ್ತಿಯನ್ನು ಬಂಧಿಸಿ 6 ತಿಂಗಳು ಜೈಲು ಶಿಕ್ಷೆಯನ್ನು ಟರ್ಕಿ ದೇಶ ವಿಧಿಸಿದೆ.

Advertisement
Advertisement

ಟರ್ಕಿಯಲ್ಲಿ ಪಾಕಿಸ್ತಾನಿ ವ್ಯಕ್ತಿಯ ಬಂಧನದ ನಂತರ, ಟರ್ಕಿಯಲ್ಲಿರುವ ಪಾಕಿಸ್ತಾನಿ ದೂತಾವಾಸವು ಟರ್ಕಿಗೆ ಆಗಮಿಸುವ ಎಲ್ಲಾ ನಾಗರಿಕರು ಜೊತೆಯಲ್ಲಿ ಅಡಿಕೆ ತಾರದಂತೆ ಪಾಕಿಸ್ತಾನದ ನಾಗರಿಕರಿಗೆ ಎಚ್ಚರಿಕೆ ನೀಡಿದೆ. ಲಾಹೋರ್ ನಿವಾಸಿ ಮುಹಮ್ಮದ್ ಓವೈಸ್ ಅವರನ್ನು ಖಾಸಗಿ ಕಂಪನಿಯಿಂದ ಟರ್ಕಿಗೆ ಕಳುಹಿಸಲಾಗಿತ್ತು. ಮುಹಮ್ಮದ್ ಓವೈಸ್ ಅವರು ತಮ್ಮ ಪ್ರವಾಸ ಸಂದರ್ಭ ಅಲ್ಲಿನ ಮಿತ್ರನಿಗೆ ಉಡುಗೊರೆಯಾಗಿ ಎರಡು ಪ್ಯಾಕೆಟ್ ಬೀಡಾ ಹಾಗೂ ಅಡಿಕೆಯನ್ನು ತಮ್ಮೊಂದಿಗೆ ಕೊಂಡೊಯ್ದಿದ್ದರು. ಅಡಿಕೆಯನ್ನು ಟರ್ಕಿಯಲ್ಲಿ ಡ್ರಗ್ಸ್ ಎಂದು ಪರಿಗಣಿಸಲಾಗುತ್ತದೆ. ಮೊಹಮ್ಮದ್ ಓವೈಸ್‌ಗೆ ಟರ್ಕಿಯ ಕಾನೂನಿನ ಬಗ್ಗೆ ಕಸ್ಟಮ್ಸ್ ಅಧಿಕಾರಿಗಳು ಹಾಗೂ ನಿಕಟವರ್ತಿಗಳು ಹೇಳಿರಲಿಲ್ಲ. ಕಾನೂನು ಅರಿಯದ ಕಾರಣ ಈ ಸಮಸ್ಯೆಯಾಗಿದೆ, ಹೀಗಾಗಿ ದೇಶದ ನಾಗರಿಕನ್ನು ಬಿಡುವಂತೆ ಇದೀಗ ಪಾಕಿಸ್ತಾನ ಪ್ರಧಾನಿ ಟರ್ಕಿಗೆ ಮನವಿ ಮಾಡಿದ್ದಾರೆ.

Advertisement

ಟರ್ಕಿಯಲ್ಲಿ ಅಡಿಕೆಯ ಬಳಕೆ ಕಾನೂನು ಬಾಹಿರವಾಗಿದೆ.  ಅಡಿಕೆಯಲ್ಲಿ ಉತ್ತೇಜಕ ಅರೆಕೋಲಿನ್ ಇದೆ ಎಂದು ಈ ದೇಶ ಅಡಿಕೆ ಬಳಕೆ ನಿಷೇಧ ಮಾಡಿದೆ. ಅದೇ ರೀತಿ ಹಲವು ದೇಶಗಳಲ್ಲಿ ಅಡಿಕೆ ಬಳಕೆ ನಿಷೇಧ ಇದೆ. ಇನ್ನೂ ಕೆಲವು ದೇಶಗಳಲ್ಲಿ ಅಡಿಕೆ ತಿಂದು ಉಗುಳುವುದರ ಮೇಲೆ ನಿರ್ಬಂಧ ಇದೆ.

Advertisement
Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

Published by
ಮಿರರ್‌ ಡೆಸ್ಕ್‌

Recent Posts

ವೆದರ್‌ ಮಿರರ್‌ | 03.05.2024 |ಮೇ. 4ರಿಂದ ಮೋಡ| ಮೇ.6 ರಿಂದ ಅಲ್ಲಲ್ಲಿ ಮಳೆ ನಿರೀಕ್ಷೆ

04.05.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು, ದಕ್ಷಿಣ…

7 hours ago

ವೆದರ್‌ ಮಿರರ್‌ | 2.05.2024 | ಮೋಡದ ವಾತಾವರಣ | ಮತ್ತೆ ದೂರವಾದ ಮಳೆ…!| ಮತ್ತೆ ಹೆಚ್ಚಳವಾಗುತ್ತಿರುವ ತಾಪಮಾನ |

03.05.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು ಸೇರಿದಂತೆ…

1 day ago

ಬಿದಿರು ಕೃಷಿ | ತರಕಾರಿ ಕೃಷಿಯಾಗಿ ಬಿದಿರು

ಬಿದಿರು ಕೃಷಿಯ ಬಗ್ಗೆ ಈಗ ಸಾಕಷ್ಟು ಅಧ್ಯಯನ ನಡೆಯುತ್ತಿದೆ. ಈ ನಡುವೆ ಪುತ್ತೂರು…

2 days ago

ಅಡಿಕೆ ಹಳದಿ ಎಲೆರೋಗ – ಚುನಾವಣೆ

ಅಡಿಕೆ ಕೂಡಾ ಇಂದು ಬಹುಮುಖ್ಯವಾದ ಚುನಾವಣಾ ವಿಷಯ. ಹೀಗಾಗಿ ಅಡಿಕೆ ಹಳದಿ ಎಲೆರೋಗ…

2 days ago

ವಾರದ ಅತಿಥಿ | ಸುಬ್ರಾಯ ಚೊಕ್ಕಾಡಿ ಮಾತು

https://youtu.be/Vh1tYlOKav0?si=M4grG9euj6dXmkE2 ರೂರಲ್ ಮಿರರ್‌ ವಾರದ ಅತಿಥಿಯಾಗಿ ಹಿರಿಯ ಕವಿ ಸುಬ್ರಾಯ ಚೊಕ್ಕಾಡಿ ಅವರು…

2 days ago

ಮಕ್ಕಳ ಹಬ್ಬ…

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಪಂಜದಲ್ಲಿ ಮಕ್ಕಳ ಬೇಸಿಗೆ ಶಿಬಿರ ಮಕ್ಕಳ…

2 days ago