MIRROR FOCUS

#RainRecord | ಈ ಬಾರಿ ಮಳೆ ಹೇಗಿದೆ ? | 5 ವರ್ಷಗಳಿಂದ ಮಳೆಯ ಬದಲಾವಣೆ ಹೇಗಾಗುತ್ತಿದೆ…?

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಮಳೆ ಹೇಗೆ ? ಮೊನ್ನೆಯವರೆಗೆ ಮಳೆ ಕಡಿಮೆ ಎನ್ನುತ್ತಿದ್ದವರೆಲ್ಲಾ ಈಗ ಎಂತಾ ಮಳೆ ಎಂದು  ಕರಾವಳಿ ಜಿಲ್ಲೆಗಳಲ್ಲಿ ಮಾತನಾಡಲು ಆರಂಭಿಸಿದ್ದಾರೆ. ಆದರೆ ನಮಗೆಲ್ಲಾ ಗೊತ್ತೇ ಇಲ್ಲದ ಹಾಗೆ ಕಳೆದ 5 ವರ್ಷಗಳಲ್ಲಿ ಮಳೆಯ ಅವಧಿ ಬದಲಾಗುತ್ತಿದೆ.  ಮಳೆ ದಾಖಲೀಕರಣ ಮಾಡುತ್ತಿರುವ ಸುಳ್ಯದ ಬಾಳಿಲದ ಪಿಜಿಎಸ್‌ಎನ್‌ ಪ್ರಸಾದ್‌ ಅವರ ಸೂಕ್ಷ್ಮವಾದ ಗಮನಿಸುವಿಕೆಯ ಮಾಹಿತಿಯ ಪ್ರಕಾರ ಮಳೆಯಲ್ಲಿ ಬದಲಾವಣೆ ಆಗುತ್ತಿದೆ…

Advertisement
Advertisement

ಕಳೆದ 48 ವರ್ಷಗಳಿಂದ ಮಳೆ ದಾಖಲೀಕರಣ ಮಾಡುತ್ತಿರುವ ಸುಳ್ಯದ ಪಿಜಿಎಸ್‌ಎನ್‌ ಪ್ರಸಾದ್‌ ಅವರ ಪ್ರಕಾರ ಕಳೆದ ವರ್ಷ ಜುಲೈ ತಿಂಗಳಲ್ಲಿ 2077 ಮಿಮೀ ಮಳೆಯಾಗಿತ್ತು.  ಹಿಂದೆ ಈ ಮಾದರಿ ಇರಲಿಲ್ಲ .ಕಳೆದ 5  ವರ್ಷಗಳಲ್ಲಿ ಜೂನ್‌ ವರೆಗೆ ಕಡಿಮೆಯಾಗಿ ನಂತರ ಜುಲೈ, ಆಗಸ್ಟ್‌ ತಿಂಗಳಲ್ಲಿ ಅಧಿಕ ಮಳೆಯಾಗುತ್ತಿದೆ.

ಈ ವರ್ಷ ಸುಮಾರು ಮೇ ಅಂತ್ಯದವರೆಗೆ ಮಳೆ ಕಡಿಮೆ ಇತ್ತು, ಒಮ್ಮೆ ಮಳೆಯಾಗಲಿ ಎನ್ನುವ ಭಾವ ಇತ್ತು. ಜೂನ್.‌6 ಕ್ಕೆ ಮುಂಗಾರು ಪ್ರವೇಶ ಆದರೂ ತೀರಾ ದುರ್ಬಲವಾಗಿತ್ತು. ಹೀಗಾಗಿ ಜೂನ್‌ ಅಂತ್ಯದವರೆಗೆ ಬಾಳಿಲದಲ್ಲಿ  728 ಮಿಮೀ ಮಳೆಯಷ್ಟೇ ಆಗಿತ್ತು. ಆದರೆ ಜುಲೈ ತಿಂಗಳಲ್ಲಿ ಮುಂಗಾರು ವೇಗ ಪಡೆಯಿತು, ಹೀಗಾಗಿ ಜುಲೈ ತಿಂಗಳಲಿ  1205 ಮಿಮೀ ಮಳೆ ಇದುವರೆಗೆ ಆಗಿದೆ. ಮಳೆ ಅಳತೆಯ ಕಾರಣದಿಂದ ಈ ಸೂಕ್ಷ್ಮಗಳನ್ನು ಗಮನಿಸಲಾಗಿದೆ. ಈ ವರ್ಷ  10% ಮಳೆ ಕಡಿಮೆ ಇರಬಹುದು ಎನ್ನುವ ಲೆಕ್ಕಾಚಾರ ಈಗಿನದು. ಆದರೆ ಈ ಲೆಕ್ಕಾಚಾರ ಪ್ರಕೃತಿಯ ಕಾರಣದಿಂದ ಬದಲಾಗುತ್ತಿದೆ ಎನ್ನುವುದು  ಗಮನಿಸಬೇಕಾದ ಅಂಶ.

ಪಿಜಿಎಸ್‌ಎನ್‌ ಪ್ರಸಾದ್, ಬಾಳಿಲ

ಜುಲೈ ಹಾಗೂ ಆಗಸ್ಟ್‌ ತಿಂಗಳಲ್ಲಿ ಮಳೆ ಜಾಸ್ತಿಯಾಗುತ್ತಿದೆ.  ಕೆಲವು  5 ವರ್ಷಗಳಿಂದ ಈ ರೀತಿ ಆಗುತ್ತಿದೆ ಈ ರೀತಿಯ ಬದಲಾವಣೆ  ಆಗುತ್ತಿದೆ.ಇದಕ್ಕೆ ಕಾರಣಗಳು ಹಲವಾರು, ಈ ಬಗ್ಗೆ ಅಧ್ಯಯನ ಆಗಬೇಕಿದೆ ಎನ್ನುವುದು  ಪಿಜಿಎಸ್‌ಎನ್‌ ಪ್ರಸಾದ್‌ ಅವರ ಅಭಿಪ್ರಾಯ.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

Published by
ಮಹೇಶ್ ಪುಚ್ಚಪ್ಪಾಡಿ

Recent Posts

ಹೊಸರುಚಿ | ಹಲಸಿನ ಹಣ್ಣಿನ ಜಾಮ್

ಹಲಸಿನ ಹಣ್ಣಿನ ಜಾಮ್ ಗೆ ಬೇಕಾಗುವ ಸಾಮಗ್ರಿಗಳು : ಹಲಸಿನ ಹಣ್ಣು 3…

51 minutes ago

ಅಡಿಕೆ ಕ್ಷೇತ್ರದ ಸಮಸ್ಯೆಗಳ ಪರಿಹಾರಕ್ಕಾಗಿ ಸರಕಾರಗಳಿಂದ ರಚಿಸಲಾದ ಸಮಿತಿಗಳು ಏನು ಹೇಳಿವೆ..?

ಅಡಿಕೆಗೆ ಸಂಬಂಧಿಸಿ ಸುಮಾರು 7 ಸಮಿತಿಗಳು-ವರದಿಗಳು ಆಗಿವೆ. ಎಲ್ಲಾ ಸಂದರ್ಭದಲ್ಲೂ ಅಡಿಕೆಯ ಪರ್ಯಾಯ…

1 hour ago

ಮೇ ಕೊನೆಯ ವಾರದಂದು ಈ ಐದು ರಾಶಿಯವರಿಗೆ ಶುಕ್ರ ದೆಸೆ

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

2 hours ago

ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ಬಾಗಲಕೋಟೆ ಜಿಲ್ಲೆಯ  ಶೂರ್ಪಾಲಿಯ ಶ್ರೀಲಕ್ಷ್ಮೀ ನರಸಿಂಹ ದೇವಾಲಯ

ಕೆಲ ದೇವಾಲಯಗಳು ತಮ್ಮ ಶಿಲ್ಪಕಲೆ, ಇತಿಹಾಸ, ಸೌಂದರ್ಯಕ್ಕೆ ಹೆಸರಾದರೆ ಮತ್ತೆ ಕೆಲವು ಭಕ್ತರ…

11 hours ago

ಕಾಯಕ ಗ್ರಾಮ  ಯೋಜನೆ | ಹಿಂದುಳಿದ ಗ್ರಾಮಗಳನ್ನು ದತ್ತು ಸ್ವೀಕರಿಸುವಂತೆ ಸಲಹೆ

ʼಕಾಯಕ ಗ್ರಾಮʼ ಯೋಜನೆಯಡಿ ಹಿಂದುಳಿ ದಿರುವ  ಗ್ರಾಮ ಪಂಚಾಯತಿಯನ್ನು  ದತ್ತು ಸ್ವೀಕಾರ ಮಾಡಬೇಕೆಂದು…

11 hours ago

ಡೆಂಘೀ ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಅಗತ್ಯ ಕ್ರಮಕೈಗೊಳ್ಳಲು ಸರ್ಕಾರದ ಸೂಚನೆ

ಡೆಂಗ್ಯೂ ಸೇರಿದಂತೆ ಸಾಂಕ್ರಾಮಿಕ ರೋಗಗಳ ನಿಯಂತ್ರಣದ ದೃಷ್ಟಿಯಿಂದ ಅಗತ್ಯ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲು…

11 hours ago