MIRROR FOCUS

#RainRecord | ಈ ಬಾರಿ ಮಳೆ ಹೇಗಿದೆ ? | 5 ವರ್ಷಗಳಿಂದ ಮಳೆಯ ಬದಲಾವಣೆ ಹೇಗಾಗುತ್ತಿದೆ…?

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಮಳೆ ಹೇಗೆ ? ಮೊನ್ನೆಯವರೆಗೆ ಮಳೆ ಕಡಿಮೆ ಎನ್ನುತ್ತಿದ್ದವರೆಲ್ಲಾ ಈಗ ಎಂತಾ ಮಳೆ ಎಂದು  ಕರಾವಳಿ ಜಿಲ್ಲೆಗಳಲ್ಲಿ ಮಾತನಾಡಲು ಆರಂಭಿಸಿದ್ದಾರೆ. ಆದರೆ ನಮಗೆಲ್ಲಾ ಗೊತ್ತೇ ಇಲ್ಲದ ಹಾಗೆ ಕಳೆದ 5 ವರ್ಷಗಳಲ್ಲಿ ಮಳೆಯ ಅವಧಿ ಬದಲಾಗುತ್ತಿದೆ.  ಮಳೆ ದಾಖಲೀಕರಣ ಮಾಡುತ್ತಿರುವ ಸುಳ್ಯದ ಬಾಳಿಲದ ಪಿಜಿಎಸ್‌ಎನ್‌ ಪ್ರಸಾದ್‌ ಅವರ ಸೂಕ್ಷ್ಮವಾದ ಗಮನಿಸುವಿಕೆಯ ಮಾಹಿತಿಯ ಪ್ರಕಾರ ಮಳೆಯಲ್ಲಿ ಬದಲಾವಣೆ ಆಗುತ್ತಿದೆ…

Advertisement
Advertisement

ಕಳೆದ 48 ವರ್ಷಗಳಿಂದ ಮಳೆ ದಾಖಲೀಕರಣ ಮಾಡುತ್ತಿರುವ ಸುಳ್ಯದ ಪಿಜಿಎಸ್‌ಎನ್‌ ಪ್ರಸಾದ್‌ ಅವರ ಪ್ರಕಾರ ಕಳೆದ ವರ್ಷ ಜುಲೈ ತಿಂಗಳಲ್ಲಿ 2077 ಮಿಮೀ ಮಳೆಯಾಗಿತ್ತು.  ಹಿಂದೆ ಈ ಮಾದರಿ ಇರಲಿಲ್ಲ .ಕಳೆದ 5  ವರ್ಷಗಳಲ್ಲಿ ಜೂನ್‌ ವರೆಗೆ ಕಡಿಮೆಯಾಗಿ ನಂತರ ಜುಲೈ, ಆಗಸ್ಟ್‌ ತಿಂಗಳಲ್ಲಿ ಅಧಿಕ ಮಳೆಯಾಗುತ್ತಿದೆ.

ಈ ವರ್ಷ ಸುಮಾರು ಮೇ ಅಂತ್ಯದವರೆಗೆ ಮಳೆ ಕಡಿಮೆ ಇತ್ತು, ಒಮ್ಮೆ ಮಳೆಯಾಗಲಿ ಎನ್ನುವ ಭಾವ ಇತ್ತು. ಜೂನ್.‌6 ಕ್ಕೆ ಮುಂಗಾರು ಪ್ರವೇಶ ಆದರೂ ತೀರಾ ದುರ್ಬಲವಾಗಿತ್ತು. ಹೀಗಾಗಿ ಜೂನ್‌ ಅಂತ್ಯದವರೆಗೆ ಬಾಳಿಲದಲ್ಲಿ  728 ಮಿಮೀ ಮಳೆಯಷ್ಟೇ ಆಗಿತ್ತು. ಆದರೆ ಜುಲೈ ತಿಂಗಳಲ್ಲಿ ಮುಂಗಾರು ವೇಗ ಪಡೆಯಿತು, ಹೀಗಾಗಿ ಜುಲೈ ತಿಂಗಳಲಿ  1205 ಮಿಮೀ ಮಳೆ ಇದುವರೆಗೆ ಆಗಿದೆ. ಮಳೆ ಅಳತೆಯ ಕಾರಣದಿಂದ ಈ ಸೂಕ್ಷ್ಮಗಳನ್ನು ಗಮನಿಸಲಾಗಿದೆ. ಈ ವರ್ಷ  10% ಮಳೆ ಕಡಿಮೆ ಇರಬಹುದು ಎನ್ನುವ ಲೆಕ್ಕಾಚಾರ ಈಗಿನದು. ಆದರೆ ಈ ಲೆಕ್ಕಾಚಾರ ಪ್ರಕೃತಿಯ ಕಾರಣದಿಂದ ಬದಲಾಗುತ್ತಿದೆ ಎನ್ನುವುದು  ಗಮನಿಸಬೇಕಾದ ಅಂಶ.

ಪಿಜಿಎಸ್‌ಎನ್‌ ಪ್ರಸಾದ್, ಬಾಳಿಲ

ಜುಲೈ ಹಾಗೂ ಆಗಸ್ಟ್‌ ತಿಂಗಳಲ್ಲಿ ಮಳೆ ಜಾಸ್ತಿಯಾಗುತ್ತಿದೆ.  ಕೆಲವು  5 ವರ್ಷಗಳಿಂದ ಈ ರೀತಿ ಆಗುತ್ತಿದೆ ಈ ರೀತಿಯ ಬದಲಾವಣೆ  ಆಗುತ್ತಿದೆ.ಇದಕ್ಕೆ ಕಾರಣಗಳು ಹಲವಾರು, ಈ ಬಗ್ಗೆ ಅಧ್ಯಯನ ಆಗಬೇಕಿದೆ ಎನ್ನುವುದು  ಪಿಜಿಎಸ್‌ಎನ್‌ ಪ್ರಸಾದ್‌ ಅವರ ಅಭಿಪ್ರಾಯ.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

Published by
ಮಹೇಶ್ ಪುಚ್ಚಪ್ಪಾಡಿ

Recent Posts

ಉದ್ಯೋಗ | ಐಟಿಐ-ಡಿಪ್ಲೊಮಾ ಅಭ್ಯರ್ಥಿಗಳಿಗೆ ಇಲ್ಲಿದೆ ಅವಕಾಶ |

ಮೈಸೂರಿನಲ್ಲಿ ಕಾರ್ಯಾಚರಿಸುತ್ತಿರುವ ಇಲೆಕ್ಟ್ರಾನಿಕ್ಸ್‌  ಉತ್ಪನ್ನಗಳ ತಯಾರಿಕಾ ಕಂಪನಿ "ಬ್ರಿವೆರಾ"ದಲ್ಲಿ ಉದ್ಯೋಗಾವಕಾಶಗಳು ಇವೆ. ಐಟಿಐ,…

20 minutes ago

ಬಿಹಾರ ಸೇರಿ ಹಲವು ರಾಜ್ಯಗಳಲ್ಲಿ 2 ದಿನ ಭಾರಿ ಮಳೆ

ಕೊಂಕಣ, ಗೋವಾ, ಮಹಾರಾಷ್ಟ್ರ, ಕೇರಳ, ಕರ್ನಾಟಕ, ಚಂಡೀಗಢ, ಬಿಹಾರ ಸೇರಿದಂತೆ ಹಲವು ರಾಜ್ಯಗಳ…

57 minutes ago

ಒಂದೇ ಕುಟುಂಬದ ಮೂವರ ಮೃತ್ಯು | ತರಕಾರಿಗೆ ಸಿಂಪಡಿಸಿದ್ದ ಕ್ರಿಮಿನಾಶಕ ಜೀವಕ್ಕೇ ಕುತ್ತಾಯಿತೇ ?

ರಾತ್ರಿ ಊಟ ಮಾಡಿ ಮಲಗಿದ್ದ ಒಂದೇ ಕುಟುಂಬದ ಮೂವರು ಹೊಟ್ಟೆ ನೋವಿನಿಂದ ಸಾವನಪ್ಪಿದ …

1 hour ago

ಇಂದು ವಿಶ್ವ ಮಾವು ದಿನಾಚರಣೆ | ರಾಜ್ಯದ ಮಾವಿಗೆ ಜಗತ್ತಿನಾದ್ಯಂತ ಬೇಡಿಕೆ |

ಇಂದು ವಿಶ್ವ ಮಾವು ದಿನಾಚರಣೆ. ಪ್ರತೀ ವರ್ಷ  ಜುಲೈ 22 ರಂದು ಮಾವಿನಹಣ್ಣಿನ…

1 hour ago

ಜನನ-ಮರಣ 21 ದಿನಗಳೊಳಗೆ  ನೋಂದಣಿ ಕಡ್ಡಾಯ – ದ ಕ ಜಿಲ್ಲಾ ಅಪರ ಜಿಲ್ಲಾಧಿಕಾರಿ

ಪ್ರತಿಯೊಂದು ಜನನ ಮರಣದ ನೋಂದಣಿ ಕಡ್ಡಾಯವಾಗಿದ್ದು, ಘಟನೆ ಸಂಭವಿಸಿದ 21 ದಿನಗಳೊಳಗೆ ನಗರ/…

2 hours ago

ಸಸ್ಯ ಪರಿಚಯ – ಕಿರಾತಕಡ್ಡಿ | ಮನೆಯಲ್ಲಿರಬೇಕಾದ ಗಿಡಗಳಲ್ಲಿ ಇದೂ ಒಂದು |

ಈ ಗಿಡದ ಸಸ್ಯ ಶಾಸ್ತ್ರೀಯ ಹೆಸರು Andrographis Paniculata. ಕಿರಾತಕಡ್ಡಿಗೆ ನೆಲಬೇವು ಎಂಬ…

9 hours ago