ಸಾವಯವ ತಾಲೂಕು ಎಂದು ಘೋಷಣೆ ಮಾಡಲು ಸಿದ್ಧವಾಗಿರುವ ಉತ್ತರಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನಲ್ಲಿ ಈಗ ಕೃಷಿಗೆ ಸಂಕಷ್ಟವಾಗಿದೆ. ಜೋಯಿಡಾ ತಾಲೂಕಿನಲ್ಲಿ ಗೆಡ್ಡೆ ಗೆಣಸುಗಳನ್ನು ಸಾವಯವ ಪದ್ಧತಿಯಲ್ಲಿ ಅನೇಕ ವರ್ಷಗಳಿಂದಲೂ ಸಾಂಪ್ರದಾಯಿಕವಾಗಿ ಬೆಳೆದುಕೊಂಡು ಬರಲಾಗಿದೆ. ಆದರೆ ಈಗ ಹಂದಿ ಮತ್ತು ಕಾಡು ಪ್ರಾಣಿಗಳ ಕಾಟದಿಂದ ರೈತರು ಹೈರಾಣಾಗಿ ಹೋಗಿದ್ದಾರೆ. ಅರಣ್ಯ ಇಲಾಖೆ ಹಾನಿಯಾದ ಬೆಳೆಗೆ ಯಾವುದೇ ಪರಿಹಾರವನ್ನು ನೀಡುತ್ತಿಲ್ಲ. ಇದನ್ನೇ ನಂಬಿದ ರೈತ ಕುಟುಂಬಗಳು ಗೆಡ್ಡೆ ಗೆಣಸು ಬೆಳೆಯುವುದನ್ನು ನಿಲ್ಲಿಸಲು ಮುಂದಾಗಿದ್ದಾರೆ.
ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವ ಪರಿಸ್ಥಿತಿ ಈಗ ಜೋಯಿಡಾ ತಾಲೂಕಿನಲ್ಲಿ ಉದ್ಭವವಾಗಿದೆ. ತಾಲೂಕಿನ ಗೆಡ್ಡೆ ಗೆಣಸು ಹಾಗೂ ಕೆಸು ಗಡ್ಡೆಗೆ ರಾಷ್ಟ್ರೀಯ ಪ್ರಶಸ್ತಿ ಬಂದ ನಂತರ ಇದಕ್ಕೆ ಹೆಚ್ಚಿನ ಬೇಡಿಕೆ ಇದೆ. ಅನೇಕ ರೈತರು ಕೇಸು ಮತ್ತು ಇತರೆ ಗೆಡ್ಡೆ ಗೆಣಸುಗಳಾದ ಕಣಂಗ, ಕಾಟೆಕಣಂಗ, ಚಿರಕೊ, ನವಲಕೋನ್, ಕೊನ್, ಕಾಸರ ಆಳು, ಧವೆ ಆಳು ಸೇರಿದಂತೆ 40 ಕ್ಕೂ ಹೆಚ್ಚು ವಿವಿಧ ಜಾತಿಯ ಗೆಡ್ಡೆ ಗೆಣಸು (ಕಂದ ಮುಳೆ) ಬೆಳೆದು ಕುಟುಂಬ ನಿರ್ವಹಣೆ ಮಾಡುತ್ತಿದ್ದಾರೆ.
ಗೆಡ್ಡೆ ಗೆಣಸು ವಿಶೇಷ : ಜೋಯಿಡಾ ತಾಲೂಕಿನ ಗೆಡ್ಡೆ ಗೆಣಸುಗಳಿಗೆ ರಾಷ್ಟ್ರೀಯ ಪ್ರಶಸ್ತಿ ಬಂದನಂತರ ಹೆಚ್ಚಾಗಿ ಬೆಳಸುತ್ತಾರೆ. ಹಂದಿ ಕಾಟ ಹೆಚ್ಚಾಗಿದೆ. ಎಕರೆ ಗಟ್ಟಲೆ ಕೇಸು ಬೆಳೆ ಹಂದಿ ಪಾಲಾಗಿದೆ. ವಿದ್ಯುತ್ ಬೇಲಿ ಉಪಯೋಗಿಸಿದರು ಹಂದಿ ಕಾಟ ನಿಯಂತ್ರಣ ಅಸಾಧ್ಯವಾಗಿದೆ.
ಹಂದಿ ಮತ್ತು ಕಾಡು ಪ್ರಾಣಿಗಳ ಕಾಟ ನಿಯಂತ್ರಣಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಕಾಡು ಹಂದಿ ಕಾಟ ಹೆಚ್ಚಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳನ್ನು ಕೇಳಿದರೆ ಪರಿಹಾರ ನೀಡಲು ಅವಕಾಶ ಇಲ್ಲ ಎನ್ನುತ್ತಾರೆ. ಬೆಳೆ ರಕ್ಷಣೆಗೆ ವಿದ್ಯುತ್ ಬೇಲಿ ಅಥವಾ ಸಿಮೆಂಟಿನ ಗೋಡೆ ನಿರ್ಮಿಸಿ ಕೊಡುವ ಅಗತ್ಯ ಇದೆ ಎಂದು ರೈತರು ಆಗ್ರಹಿಸಿದ್ದಾರೆ.
ಕೆಸುವಿನ ಗೆಡ್ಡೆಗೆ ಹಂದಿ ದಾಳಿಯಿಂದಾಗಿ ಲಕ್ಷಾಂತರ ರೂಪಾಯಿ ಹಾನಿಯಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಕೇಳಿದರೆ ಪರಿಹಾರ ನೀಡಲು ಅವಕಾಶ ಇಲ್ಲ ಎನ್ನುತ್ತಾರೆ. ನಾವು ಹೈರಾಣಾಗಿದ್ದೇವೆ. ಪರಿಹಾರ ನೀಡುವಂತೆ ಆಗ್ರಹಿಸುತ್ತೇನೆ ಎಂದು ಒತ್ತಾಯಿಸಿದ್ದಾರೆ ರೈತ ಮಂಜುನಾಥ ಬುದೊ ಕಾಲೇಕರ.
(ಮಾಹಿತಿ: ದೀಪಕ್, ಜೋಯಿಡಾ)
ಭಾರತದ ರಾಷ್ಟ್ರೀಯ ಕೀಟ ಕಣ್ಗಾವಲು ವ್ಯವಸ್ಥೆ ಈಗ 73 ಬೆಳೆಗಳು ಮತ್ತು 436…
ICAR 16 ಹೊಸ ಜಾನುವಾರು ಮತ್ತು ನಾಯಿ ತಳಿಗಳಿಗೆ ರಾಷ್ಟ್ರೀಯ ನೋಂದಣಿ ನೀಡಿದ್ದು,…
ಕರ್ನಾಟಕದ ಕರಾವಳಿ ಹಾಗೂ ಮಲೆನಾಡಿನಲ್ಲಿ ಆಗಸ್ಟ್ 26ರವರೆಗೆ ಮೋಡ ಮತ್ತು ಅಲ್ಲಲ್ಲಿ ಬಿಟ್ಟುಬಿಟ್ಟು…
ಭಾರತದಲ್ಲಿ ಸಮಸ್ಯೆ ಕೇವಲ ಉದ್ಯೋಗಗಳ ಕೊರತೆಯಲ್ಲ, ಉದ್ಯೋಗಕ್ಕೆ ಅಗತ್ಯವಾದ ಕೌಶಲ್ಯ ಹೊಂದಿದ ಅಭ್ಯರ್ಥಿಗಳ…
ಕರಾವಳಿ ಮತ್ತು ಮಲೆನಾಡಿನ ಅಡಿಕೆ ತೋಟಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಎಲೆಚುಕ್ಕೆ, ಹಳದಿ ಎಲೆ ಹಾಗೂ…
ಕರ್ನಾಟಕದಲ್ಲಿ ಮುಂಗಾರು ಮತ್ತೆ ಚುರುಕಾಗಿದ್ದು, ಕರಾವಳಿ ಮತ್ತು ಮಲೆನಾಡಿನಲ್ಲಿ ಆಗಸ್ಟ್ 25ರವರೆಗೆ ಮಳೆ…