ಹಳ್ಳ-ಕೊಳ್ಳ, ನದಿ,ಕೆರೆ ತುಂಬಿದ್ದರು ಕುಡಿಯೋಕೆ ನೀರಿಲ್ಲ | ಉತ್ತರ ಕನ್ನಡದಲ್ಲಿ ಪ್ರವಾಹ ಪರಿಸ್ಥಿತಿಯಿಂದ ಪರದಾಡುತ್ತಿರುವ ಜನತೆ

July 24, 2024
10:04 AM

ಕಳೆದ 10-12 ದಿನಗಳಲ್ಲಿ ಸುರಿದ ಭಾರಿ ಮಳೆಗೆ ಉತ್ತರ ಕನ್ನಡದ(Uttara Kannada) ಜನತೆ ನಲುಗಿದ್ದಾರೆ. ಈ ಮಧ್ಯೆ ಅಂಕೋಲದಲ್ಲಿ ನಡೆದ ಗುಡ್ಡ ಕುಸಿತ ದುರಂತ ಎಲ್ಲರನ್ನೂ ಬೆಚ್ಚಿ ಬೀಳುವಂತೆ ಮಾಡಿತ್ತು. ಇದೀಗ ಉತ್ತರ ಕನ್ನಡದಲ್ಲಿ ಮಳೆ(Rain) ಅಬ್ಬರ ಕಮ್ಮಿಯಾಗಿ ನದಿ, ತೊರೆ, ಬಾವಿಗಳು ನೀರಿನಿಂದ ತುಂಬಿದ್ದರು, ಕೆಲ ಊರಿನ ಜನಕ್ಕೆ ಕುಡಿಯಲು(Drinking water) ಹಾಗೂ ದಿನ ಬಳಕೆಗೆ ನೀರಿಲ್ಲದೆ ಪರದಾಡುವಂತಾಗಿದೆ. ಜಿಲ್ಲೆಯಲ್ಲಿ ನೆರೆ ಬಂದು ಜನರ ಜೀವನ ದಿಕ್ಕಾಪಾಲಾಗಿದೆ. ಸದ್ಯ ಕುಮಟಾದ ಹಲವೆಡೆ ಜನರಿಗೆ ಕುಡಿಯಲು ನೀರಿಲ್ಲ ಎಂಬುದು ನಿಜಕ್ಕೂ ವಿಪರ್ಯಾಸ. ಹೌದು, ಅಘನಾಶಿನಿಯ (Aghanashini) ನೆರೆಗೆ ಸಿಕ್ಕಿ ನಲುಗುತ್ತಿರುವ ಕುಮಟಾದ ಹೆಗಡೆ ಗ್ರಾಮಸ್ಥರಿಗೆ ಕುಡಿಯಲು ನೀರಿಲ್ಲ.

Advertisement

ನೀರು ಪೂರೈಕೆ : ಅಣ್ಣಪ್ಪ ಎಂಬುವವರ ನೇತೃತ್ವದಲ್ಲಿ ಯುವಾಬ್ರಿಗೇಡ್‌ನ 10 ಜನರ ತಂಡವೊಂದು ಕುಮಟಾ ತಾಲೂಕಿನ ಹೆಗಡೆಯ ಗ್ರಾಮದ 40 ಮನೆಗಳಿಗೆ ಹಗಲು- ರಾತ್ರಿ ಎನ್ನದೇ ನೀರು ಪೂರೈಕೆ ಮಾಡಿದೆ. ಕಳೆದ ಮೂರು ದಿನಗಳಿಂದ ಕುಡಿಯುವ ನೀರಿನ ಪೂರೈಕೆಯನ್ನು ಮಚಗೋಣದಿಂದ ತಂದು ಈ ತಂಡ ಪೂರೈಸುತ್ತಿದೆ. ಈಗಾಗಲೇ ಗ್ರಾಮಸ್ಥರಿಗಾಗಿ 12,000 ಲೀಟರ್‌ನಷ್ಟು ನೀರನ್ನು ಹಂಚಿದೆ. ಎರಡು ಪಿಕಪ್‌ ವಾಹನಗಳಲ್ಲಿ ತಂಡದ ಸದಸ್ಯರು 40 ಕುಟುಂಬದ 200 ಕ್ಕೂ ಹೆಚ್ಚು ಜನರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದಾರೆ. ಒಟ್ಟಿನಲ್ಲಿ ಸಮುದ್ರ ತುಂಬಾ ನೀರಿದ್ರೂ, ಕುಡಿಯೋಕೆ ಆಗಲ್ಲ ಅನ್ನೋ ಹಾಗೆ ಉತ್ತರ ಕನ್ನಡದ ಹಲವೆಡೆ ಮನೆ ಸುತ್ತಮುತ್ತ ನೀರಿದ್ರೂ ನೆರೆಯ ನಡುವೆ ಕುಡಿಯುವ ನೀರಿಗಾಗಿ ಬವಣೆ ಎದುರಿಸುವಂತಾಗಿದೆ.

ನೆರೆಯಿಂದಾಗಿ ನೀರಿನಲ್ಲಿ ಕೆಸರು ಹಾಗೂ ಮಣ್ಣು ಮಿಶ್ರಣಗೊಂಡಿರುವುದರಿಂದ ಗೃಹ ಬಳಕೆಗೆ ಉಪಯೋಗಿಸಲಾಗಂತಾಗಿದೆ. ಇದರಿಂದ ಊರ ಜನ ನೀರಿಗಾಗಿ ಪರದಾಡುವಂತಾಗಿದೆ. ಜನ ಪ್ರತಿನಿಧೀಗಳು ಮಾಡಬೇಕಾದ ಕೆಲಸವನ್ನು ಯುವಾ ಬ್ರಿಗೇಡ್‌ ಮಾಡಿ ಊರ ಜನರ ನೀರಿನ ಬವಣೆಯನ್ನು ನೀಗಿಸುತ್ತಿದೆ.

  • ಅಂತರ್ಜಾಲ ಮಾಹಿತಿ
Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಬಾಗಲಕೋಟೆ ಮುಧೋಳ ಸೇಬು ಬೆಳೆಗಾರನ ಬಗ್ಗೆ ಮನ್ ಕೀ ಬಾತ್ ನಲ್ಲಿ ಪ್ರಧಾನಿ ಮೋದಿ ಮೆಚ್ಚುಗೆ
April 28, 2025
7:02 AM
by: The Rural Mirror ಸುದ್ದಿಜಾಲ
“ದ ಹಿಂದೂ ಮ್ಯಾನಿಫ್ಯಾಸ್ಟೋ” ಕೃತಿ ಬಿಡುಗಡೆ | ಅಹಿಂಸೆಯೇ ಭಾರತದ ನೈಜ ಧರ್ಮ-ಮೋಹನ್ ಭಾಗವತ್
April 28, 2025
6:53 AM
by: ದ ರೂರಲ್ ಮಿರರ್.ಕಾಂ
ಕಾಶ್ಮೀರದ ಪಹಲ್ಗಾಮ್ ನಲ್ಲಿ ಉಗ್ರ ದಾಳಿ ಹಿನ್ನೆಲೆ | ಭಾರತದಲ್ಲಿ ಪಾಕ್ ಸರ್ಕಾರದ ಸಾಮಾಜಿಕ ಜಾಲತಾಣ ನಿಷೇಧ
April 28, 2025
6:49 AM
by: ದ ರೂರಲ್ ಮಿರರ್.ಕಾಂ
ರಾಜ್ಯದಲ್ಲಿ ಒಂದು ವಾರ ಗುಡುಗು ಸಹಿತ ಮಳೆ ಸಾಧ್ಯತೆ | 19 ಜಿಲ್ಲೆಗಳಿಗೆ ಎಲ್ಲೋ ಅಲರ್ಟ್ ಘೋಷಣೆ
April 28, 2025
6:44 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror