Advertisement
Opinion

ಜೀವ ಜಗತ್ತಿನ ಮಾರಿ ಈ ಪ್ಲಾಸ್ಟಿಕ್‌ | ಮದುವೆಯ ಉದ್ದೇಶ ಸಂತಾನವಲ್ಲ, ಸಂತಾನ ಹೀನತೆ..! | ‌ ಪ್ಲಾಸ್ಟಿಕ್‌ ಎಷ್ಟು ಅಪಾಯಕಾರಿ…!

Share

ಕಾಲಜ್ಞಾನದಲ್ಲಿ ಒಂದು ಮಾತು ಹೇಳಿದೆಯಂತೆ , “ಮನುಷ್ಯ(Human) ಒಂದು ವಸ್ತುವನ್ನು ಅದರ ಕೆಟ್ಟ ಪರಿಣಾಮಗಳನ್ನು ಅರಿಯದೆ ಹೆಚ್ಚು ಹೆಚ್ಚು ಬಳಸುತ್ತಾ ಹೋಗುತ್ತಾನೆ. ಆ ವಸ್ತುವೇ ಅವನ ವಿನಾಶಕ್ಕೆ ಕಾರಣವಾಗುತ್ತದೆ”. ಅದುವೇ ಪ್ಲಾಸ್ಟಿಕ್(Plastic) ಎಂಬುದು ವಿಜ್ಞಾನಿಗಳ(Scientist) ಅಭಿಮತ. ಪ್ಲಾಸ್ಟಿಕ್ ಉತ್ಪತ್ತಿಯಾಗುವುದು ಪೆಟ್ರೋಲಿಯಂ(Petroleum) ನಿಂದ. ಹೀಗಾಗಿ ಆ ವಸ್ತು ಪೆಟ್ರೋಲಿಯಂ, ಎಂಬುದು ಸರಿಯಾದ ಉತ್ತರ ಆದೀತು.

Advertisement
Advertisement

ನಮ್ಮ ಹಿರಿಯರು ಹೇಳುತ್ತಿದ್ದರು, ಭೂಮಿಗೆ ಕನ್ನ ಕೊರೆಯಬೇಡಿ. ಅದು ಪಾತಾಳ ಲೋಕ ಅಲ್ಲಿ ಸಿಗುವುದೆಲ್ಲ ವಿಷವೇ. ನಾಗಲೋಕ ಎಂದು ಕೂಡ ಅದನ್ನು ಕರೆದರು. ಹಿರಿಯರ ಈ ಮಾತು ಇಂದು ನಿಜವಾಗುತ್ತಿದೆ. ಜರ್ಮನಿಯ ಇಬ್ಬರು ವಿಜ್ಞಾನಿಗಳ ಜೊತೆ ನಾನು ಬೆಂಗಳೂರಿನಲ್ಲಿ ಕಾರಿನಲ್ಲಿ ಹೋಗುತ್ತಿದ್ದೆ. ಮುಂದೆ ಒಂದು ಲಾರಿ ಹೊಗೆ ಬಿಡುತ್ತಿತ್ತು. ಅದರ ಹಿಂದೆ ಸಾಲಾಗಿ ಹತ್ತಾರು ಜನ ಬೈಕ್ ಸವಾರರು ಆ ಹೊಗೆ ಕುಡಿಯುತ್ತಿದ್ದರು! ಒಬ್ಬರೂ ಮಾಸ್ಕ್ ಹಾಕಿರಲಿಲ್ಲ. ಆ ವಿಜ್ಞಾನಿ ಒಬ್ಬರು ನನಗೆ ಹೇಳಿದರು, ಬದಾಮಿ, ಈ ಜನರೆಲ್ಲಾ ವಿದ್ಯಾವಂತರು ಎಂದೆನಿಸುತ್ತಾರೆ. ಆದರೆ ಅವರಾರಿಗೂ ಈ ಹೊಗೆ ಕ್ಯಾನ್ಸರ್ ತರಿಸುತ್ತದೆ, ತಮ್ಮ ಸಾವಿಗೆ ಕಾರಣವಾಗುತ್ತದೆ, ಎಂದು ಗೊತ್ತಿಲ್ಲವಲ್ಲ, ಅದು ಎಂಥ ವಿದ್ಯಾವಂತರಿವರು ನಿಜಕ್ಕೂ ಎಂಥ ದುರಂತ.

Advertisement

ನಾವಿಂದು ಬಳಸುವ ಎಲ್ಲ ಪ್ಲಾಸ್ಟಿಕ್ ಸಮುದ್ರ ಸೇರುತ್ತದೆ. ಸಮುದ್ರದ ಉಪ್ಪಿನ ಜೊತೆ, ಮತ್ತೇ ನಮ್ಮ ಮನೆಗೇ ಬರುತ್ತದೆ! ಪ್ರತಿಯೊಬ್ಬರ ದೇಹದಲ್ಲೂ ಇಂದು ಪ್ಲಾಸ್ಟಿಕ್ ಇದೆ..!! ಈ ಪ್ಲಾಸ್ಟಿಕ್ ಬಳಕೆ ಖಂಡಿತವಾಗಿಯೂ ಕ್ಯಾನ್ಸರ್ ತರಿಸುತ್ತದೆ. ಹೆಚ್ಚುತ್ತಿರುವ ನರರೋಗಗಳು, ಸಂತಾನ ಹೀನತೆ, ಹೃದಯದ ಕಾಯಿಲೆಗಳು, ಸಕ್ಕರೆ ಕಾಯಿಲೆ, ಬೊಜ್ಜು, ಇವುಗಳಿಗೂ ಕಾರಣವಾಗಿದೆ. ಜಗತ್ತಿನ ಉದ್ದಕ್ಕೂ ನಡೆದ ಒಂದು ಲಕ್ಷಕ್ಕೂ ಹೆಚ್ಚು ಸಂಶೋಧನೆಗಳು ಇದನ್ನು ಸ್ಪಷ್ಟಪಡಿಸಿವೆ. ಮಕ್ಕಳಿಗೆ, ಗರ್ಭಿಣಿಯರಿಗೆ ಇದು ಅತ್ಯಂತ ಅಪಾಯಕಾರಿ.

ವಿಚಿತ್ರವೆಂದರೆ ನಾವು ಮಕ್ಕಳಿಗೆ ತಿನಿಸುವ ಚಾಕಲೇಟ್, ಬಿಸ್ಕೆಟ್, ಮುಂತಾದ ಹೊರಗಿನ ತಿಂಡಿಗಳು ಪ್ಲಾಸ್ಟಿಕ್ ನಲ್ಲಿ ಇರುತ್ತವೆ. ಶಾಲೆಗಳಲ್ಲೂ ಬರ್ತಡೇ ಎಂದು ಮಕ್ಕಳಿಗೆ ಪ್ಲಾಸ್ಟಿಕ್ ನಲ್ಲಿ ಸುತ್ತಿದ ಚಾಕಲೇಟ್ ಕೊಡಿಸುತ್ತಾರೆ! ನಮ್ಮ ಮನೆಯಲ್ಲಿ ಬಳಸುವ ಎಲ್ಲ ವಸ್ತುಗಳೂ ಪ್ಲಾಸ್ಟಿಕ್ ನದ್ದೇ. ಕುರ್ಚಿ ಪ್ಲಾಸ್ಟಿಕ್. ಏಕೆ? ಅತಿಥಿಗಳು ನೆಲದಲ್ಲಿ ಚಾಪೆ ಮೇಲೆ ಮೇಲೆ ಕೂತರೆ ನಮಗೆ ಅವಮಾನ..! ನಮ್ಮ ಹುಡುಗಿಯರಿಗೆ ಪಿಸಿಓಡಿ (ಸರಿಯಾಗಿ ಮುಟ್ಟಾಗದಿದ್ದರೆ), ನಮ್ಮ ಹುಡುಗರು ಷoಡರಾದರೆ, ನಮ್ಮ ಮನೆಯಲ್ಲಿ ಮೊಮ್ಮಕ್ಕಳು ಹುಟ್ಟದಿದ್ದರೆ, ಅದು ಅವಮಾನವಲ್ಲ!

Advertisement

ಎಂಥಾ ಮನಸ್ಥಿತಿಯ ಜನ ನಾವಾಗಿದ್ದೇವೆ? : ನಾವು ನೀರು ಸಂಗ್ರಹಿಸುವುದು ಪ್ಲಾಸ್ಟಿಕ್ ನಲ್ಲಿ. ಆ ನೀರಿನ ಜೊತೆ ಪ್ರತಿನಿತ್ಯ ಪ್ಲಾಸ್ಟಿಕ್ ದೇಹ ಸೇರುತ್ತಿದೆ. ಅಡಿಗೆ ಮನೆಯಲ್ಲಿ ಬೇಳೆ, ಕಾಳು, ಚಟ್ನಿ, ಉಪ್ಪಿನಕಾಯಿ, ಎಲ್ಲವೂ ಪ್ಲಾಸ್ಟಿಕ್. ಬೀದಿ ಬದಿಯ ಮತ್ತು ಸ್ಟಾರ್ ಹೋಟೆಲ್ ಗಳಲ್ಲಿನ ಊಟವೂ ಪ್ಲಾಸ್ಟಿಕ್ ತಟ್ಟೆಯಲ್ಲಿ. ಮದುವೆಗಳಂತೂ ಸಂಪೂರ್ಣ ಪ್ಲಾಸ್ಟಿಕ್ ಮಯ.! ವಧು- ವರರು ತಮ್ಮ ಜೀವಮಾನದಲ್ಲೇ ಸಂತಾನಹೀನತೆ ಉಂಟುಮಾಡುವ ರಾಸಾಯನಿಕಗಳನ್ನು ತಮ್ಮ ದೇಹಕ್ಕೆ ಹೆಚ್ಚು ಸೇವಿಸುವುದು ಅವರ ಮದುವೆಯ ದಿನ!!

ಅಂದರೆ ಮದುವೆಯ ಉದ್ದೇಶ ಸಂತಾನವಲ್ಲ, ಸಂತಾನ ಹೀನತೆ..! ಎಂತಹ ನೀಚ ಜನ ನಾವಾದೆವು..!? :  ನಾವು ಪಾಲಿಸುವ ಹೆಚ್ಚಿನ ಮಠಾಧೀಶರು, ರಾಜಕಾರಣಿಗಳು, ಶ್ರೀಮಂತರು, ವಿದ್ಯಾವಂತರು, ಎಲ್ಲರ ಬಳಕೆ ಪ್ಲಾಸ್ಟಿಕ್! ಬಡವರದೇನು ತಪ್ಪು? ಅವರು ಇವರನ್ನು ಅನುಸರಿಸುತ್ತಾರೆ. ಒಟ್ಟಿನಲ್ಲಿ ಜಗತ್ತು ಪ್ಲಾಸ್ಟಿಕ್ ಮಯ. ಸರ್ಕಾರ ಕಣ್ಣು ಮುಚ್ಚಿ ಕುಳಿತಿದೆ. ಜೀವ ಜಗತ್ತನ್ನು ಬಹುಶ: ಯಾರೂ ಉಳಿಸಲಾರರು. ನೀರಲ್ಲಿ ಪ್ರಾರಂಭವಾದ ಜೀವಲೋಕ, ಪ್ಲಾಸ್ಟಿಕ್ ನ ಬಳಕೆಯಿಂದ ಮೊಟ್ಟಮೊದಲಿಗೆ ಸಮುದ್ರಗಳಲ್ಲಿ ಅಂದರೆ ನೀರಿನಲ್ಲೇ ಅವಸಾನಗೊಳ್ಳುತ್ತದೆ. ಪ್ರತಿ ವರ್ಷ ಮಿಲಿಯನ್ ಗಟ್ಟಲೆ ಪ್ರಾಣಿಗಳು ನಮ್ಮ ಸಮುದ್ರಗಳಲ್ಲಿ ಪ್ಲಾಸ್ಟಿಕ್ ನುಂಗಿ ಸಾಯುತ್ತಿವೆ. ಆ ಪಾಪ ನಮ್ಮನ್ನು ಸುತ್ತಿಕೊಳ್ಳುತ್ತಿದೆ. ನಂತರದ್ದು ನಮ್ಮ ಸರದಿ.

Advertisement

ಒಟ್ಟಿನಲ್ಲಿ ಅಳಿಯಲು ಸಿದ್ದರಾಗಬೇಕಿದೆ. ಪ್ಲಾಸ್ಟಿಕ್ ಬದಲು ಬಳಸಲು ನಮ್ಮ ದೇಶದಲ್ಲಿ ಬಟ್ಟೆ, ಗಾಜು, ಸ್ಟೀಲ್, ಮಣ್ಣು, ಹೀಗೆ ಬೇಕಾದಷ್ಟು ಅವಕಾಶಗಳಿವೆ. ಬಳಸುವವರಾರು? ಜಾಣರಾಗಿ. ನಿಮ್ಮ ಮನೆಯಿಂದಲಾದರೂ ಎಲ್ಲ ಪ್ಲಾಸ್ಟಿಕ್ ವಸ್ತುಗಳನ್ನು ಹೊರಹಾಕಿ. ನಿಮ್ಮ ಸಂತಾನವನ್ನು ರಕ್ಷಿಸಿಕೊಳ್ಳಿ. ಕ್ಯಾನ್ಸರ್ ನಿಮ್ಮ ಮನೆಗೆ ಬರುವುದು ಬೇಡ. ರಾಸಾಯನಿಕ ಮುಕ್ತ, ಆರೋಗ್ಯಕರ, ಭಾರತದ ನಿರ್ಮಾಣದಲ್ಲಿ ಸಹಕರಿಸಿ.

ಬರಹ :
ಡಾ. ಶ್ರೀಶೈಲ ಬದಾಮಿ,
, M. Pharm, PhD., ಧಾರವಾಡ,
Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಆಗುಂಬೆ ಘಾಟಿಯಲ್ಲಿ ಸುರಂಗ ಮಾರ್ಗ ನಿರ್ಮಾಣ : ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಗ್ರೀನ್‌ ಸಿಗ್ನಲ್‌ : ಪರಿಸರದ ಮೇಲಾಗುವ ಪರಿಣಾಮಗಳೇನು..?

ಸರ್ಕಾರಗಳು(Govt) ಅಭಿವೃದ್ಧಿ(Developments) ಕಾರ್ಯಗಳನ್ನು ಕೈಗೊಳ್ಳಬೇಕಾದ್ದು ಅನಿವಾರ್ಯ. ಆದರೆ ಪರಿಸರಕ್ಕೆ(Environment) ಹಾನಿಯಾಗದಂತೆ ಕೈಗೊಳ್ಳುವುದು ಅತಿ…

5 hours ago

ರಹಸ್ಯ ಕಥೆಗಳನ್ನು ಹೇಳುವ ಭೀಮ್’ಕುಂಡ್ : ಭೀಮ ನಿರ್ಮಿಸಿದ ಈ ಕೆರೆಯ ವಿಶೇಷತೆ ಏನು ಗೊತ್ತಾ..? ಇದು ಬರೀ ಬಾವಿಯಲ್ಲ…

ಭೀಮ್'ಕುಂಡ್..(Bheem Kund) ಈ ಕೆರೆಯನ್ನು(Lake) ನಿರ್ಮಿಸಿದವನು ಭೀಮನಂತೆ(Bheema)... ಇದರ ಆಳ(Depth) ಎಷ್ಟಿದೆಯೆಂದು ಯಾರಿಗೂ…

6 hours ago

ಭಾರತದಲ್ಲಿ ಕೃಷಿ ಅರಣ್ಯ : ಆದ್ಯತೆ ಮತ್ತು ಪರಿಸರಕ್ಕಾಗುವ ಲಾಭ

ಕೃಷಿ ಅರಣ್ಯಶಾಸ್ತ್ರವು(Agroforestry) ಸಾಂಪ್ರದಾಯಿಕ(Cultural) ಮತ್ತು ಆಧುನಿಕ ಭೂ-ಬಳಕೆಯ(Modern land-use) ವ್ಯವಸ್ಥೆಗಳನ್ನು ವಿವರಿಸುತ್ತದೆ, ಅಲ್ಲಿ ಮರದ…

6 hours ago

ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಒಂದೆಲಗ : ಕೈ ತೋಟಗಳಲ್ಲಿ ಸಿಗುವ ಸುಲಭೌಷಧಿ

ಒಂದೆಲಗ(Brahmi) ಗದ್ದೆ, ತೋಟಗಳಲ್ಲಿ ಕಂಡುಬರುವ, ಬಳ್ಳಿಯಂತೆ ನೆಲದಲ್ಲಿ ಹಬ್ಬಿ ಬೆಳೆಯುವ ಸಸ್ಯ(Plant). ಅದು…

6 hours ago

ಕರಾವಳಿ ಭಾಗದಲ್ಲಿ ಉತ್ತಮ ಮಳೆ | ಮಂಗಳೂರಿನ ಸಮುದ್ರ ತೀರದಲ್ಲಿ ಎಚ್ಚರಿಕೆ |

ಕಳೆದ ಒಂದು ವಾರದಿಂದ ಕರಾವಳಿ(Coastal), ಮಲೆನಾಡು(Malenadu) ಸೇರಿದಂತೆ ಕೆಲ ಭಾಗಗಳಲ್ಲಿ ಉತ್ತಮ ಮಳೆಯಾಗುತ್ತಿದೆ(Heavy…

6 hours ago