Advertisement
ರಾಷ್ಟ್ರೀಯ

ಪ್ಲುಟೊ ಗ್ರಹ ನಿರ್ಜೀವವಲ್ಲ| ಅಮೆರಿಕದ ನಾಸಾ ಬಾಹ್ಯಾಕಾಶ ಸಂಸ್ಥೆ ಮಾಹಿತಿ

Share

ಪ್ಲುಟೊ ಗ್ರಹವನ್ನು ಸಂಪೂರ್ಣ ನಿಷ್ಕ್ರಿಯ ಎಂದು ವಿಜ್ಞಾನಿಗಳು ಕರೆದಿದ್ದರು. ಆದರೆ ಅದಕ್ಕೀಗ ಜೀವ ಬಂದಿದೆ, ಇದಕ್ಕೆ ಕಾರಣ ಅಮೆರಿಕದ ನಾಸಾ ಬಾಹ್ಯಾಕಾಶ ಸಂಸ್ಥೆಯ ಹಾರಿಝನ್‌ ಮಿಷನ್‌ ಕಳುಹಿಸಿರುವ ಚಿತ್ರಗಳು.
ಇದರ ಆಧಾರದಲ್ಲಿ ವಿಜ್ಞಾನಿಗಳು ನೇಚರ್‌ ಕಮ್ಯುನಿಕೇಶನ್ಸ್‌ ಎಂಬ ನಿಯತಕಾಲಿಕೆಯಲ್ಲಿ ಲೇಖನವೊಂದನ್ನು ಪ್ರಕಟಿಸಿದ್ದಾರೆ.

Advertisement

ಈ ಗ್ರಹದ ಕೆಲವು ಭಾಗಗಳಲ್ಲಿ ಪರ್ವತಗಳಿವೆ, ಕಣಿವೆಗಳಿವೆ, ಸಮತಟ್ಟು ಜಾಗವಿದೆ, ಹಾಗೆಯೇ ಅಮೋನಿಯ, ನೀರು ಗಡ್ಡೆ ಕಟ್ಟಿರುವ ಜ್ವಾಲಾಮುಖಿಗಳಿವೆ. ದೊಡ್ಡ ದೊಡ್ಡ ಗುಮ್ಮಟಗಳಂತೆ ಇವು ರೂಪತಳೆದಿವೆ. ವಿಜ್ಞಾನಿಗಳ ಅಂದಾಜಿನ ಪ್ರಕಾರ ಪ್ಲುಟೊದ 1.2 ಲಕ್ಷ ಕಿ.ಮೀ. ಆಳದಲ್ಲಿ ಭಾರೀ ನೀರಿನ ಸಮುದ್ರಗಳೇ ಇವೆ, ಅಂದಾಜಿನ ಪ್ರಕಾರ ಪ್ಲುಟೊ ಒಳರಚನೆಯಲ್ಲಿ ಉಷ್ಣಾಂಶವಿದೆ, ಅದರ ಪರಿಣಾಮ ಒಳಗಿರುವ ಹಿಮಗಡ್ಡೆಗಳು ಮೇಲೆ ಬರುತ್ತಿವೆ. ಮೇಲ್ಮೈಯಲ್ಲಿ ಹರಡಿಕೊಳ್ಳುತ್ತಿವೆ. ಈಗ ಸಿಕ್ಕಿರುವ ಹೊಸ ಕುರುಹುಗಳು ಪ್ಲುಟೊ ಜೀವಂತವಿರುವುದಕ್ಕೆ ಸಿಕ್ಕ ಸಾಕ್ಷ್ಯಗಳು.

ಪ್ಲುಟೊ ಗ್ರಹದಲ್ಲಿ ಬೃಹತ್‌ ಹಿಮಗಡ್ಡೆಗಳ ಜ್ವಾಲಾಮುಖಿಯನ್ನೇ ಗುರುತಿಸಿದ್ದು, ಇವು ಯಾವಾಗ ಬೇಕಾದರೂ ಸಿಡಿಯಬಹುದು ಎಂಬ ಮಾಹಿತಿಯನ್ನು ವಿಜ್ಞಾನಿಗಳು ತಿಳಿಸಿದ್ದಾರೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

Published by
ಮಿರರ್‌ ಡೆಸ್ಕ್‌

Recent Posts

ಮಂಗಳೂರು ಅಡಿಕೆ ಮಾರುಕಟ್ಟೆ ‘ಸೈಕಲಾಜಿಕಲ್ ಬಫರ್’ ಹಂತಕ್ಕೆ…!

ಮಂಗಳೂರಿನ ಅಡಿಕೆ ಮಾರುಕಟ್ಟೆಯು ಪ್ರಸ್ತುತ ಕೇವಲ ಬೆಲೆ ಏರಿಳಿತದ ಕೇಂದ್ರವಾಗಿ ಉಳಿದಿಲ್ಲ; ಬದಲಾಗಿ…

9 hours ago

ಗೇರು ಹಣ್ಣಿನಿಂದ ಆದಾಯಕ್ಕೆ ಹೊಸ ದಾರಿ | ಮಾ.11 ರಂದು ICAR–ಗೇರು ಸಂಶೋಧನಾ ನಿರ್ದೇಶನಾಲಯದಲ್ಲಿ ಉದ್ಯಮ–ವಿಜ್ಞಾನಿಗಳ ಸಂವಾದ

ಪುತ್ತೂರಿನ ICAR–ಗೇರು ಸಂಶೋಧನಾ ನಿರ್ದೇಶನಾಲಯದಲ್ಲಿ ಮಾರ್ಚ್‌ 11ರಂದು ಗೋಡಂಬಿ ಹಣ್ಣಿನ ಮೌಲ್ಯವರ್ಧನೆ ಕುರಿತು…

1 day ago

ಪರರನ್ನು ಮೆಟ್ಟಿಲಾಗಿಸಿದ ಸಾಧನೆ ಶಾಶ್ವತವಲ್ಲ: ಆತ್ಮವಂಚನೆಯ ಅಂಧಕಾರದತ್ತ ಕರೆದೊಯ್ಯುವ ಮಾರ್ಗ

ಇತರರ ಪರಿಶ್ರಮವನ್ನು ಮೆಟ್ಟಿಲಾಗಿಸಿಕೊಂಡ ಸಾಧನೆ ತಾತ್ಕಾಲಿಕವಾಗಿದ್ದು, ನಿಜವಾದ ಯಶಸ್ಸು ಸ್ವಪರಿಶ್ರಮ, ಸತ್ಯ ಮತ್ತು…

1 day ago

ಹಿರಿಯರ ಪರಿಶ್ರಮದ ಫಲ ಮಕ್ಕಳಿಗೆ ಪರವಾನಗಿ ಆಗಬಾರದು

ಇತ್ತೀಚೆಗೆ (13.02.2026) ಬೆಂಗಳೂರಿನ ಆರು ಮಂದಿ ಎಳೆಯ ಗೆಳೆಯರು (ಎಲ್ಲರೂ 16 ರಿಂದ …

1 day ago

ವಿಕಸಿತ ಭಾರತಕ್ಕೆ ಕೃತಕ ಬುದ್ಧಿಮತ್ತೆ ಅಡಿಪಾಯ : ಉತ್ಪಾದಕತೆ ಹೆಚ್ಚಳಕ್ಕೆ AI ಸಹಕಾರಿ

ಕೃತಕ ಬುದ್ಧಿಮತ್ತೆ (AI) ವಿಕಸಿತ ಭಾರತದ ನಿರ್ಮಾಣಕ್ಕೆ ಅಡಿಪಾಯವಾಗಿದ್ದು, ಉತ್ಪಾದಕತೆ, ಸ್ಪರ್ಧಾತ್ಮಕತೆ ಹಾಗೂ…

1 day ago

ಸಫಾರಿ ಆರಂಭಿಸಲು ಮತ್ತೆ ಅನುಮತಿ | ಸಮಯ ಕಡಿತ, GPS-ಡ್ಯಾಶ್ ಕ್ಯಾಮ್ ಕಡ್ಡಾಯ – ಸಚಿವ ಈಶ್ವರ್ ಖಂಡ್ರೆ

ಬಂಡಿಪುರ ಮತ್ತು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಸಫಾರಿಯನ್ನು ಮತ್ತೆ ಆರಂಭಿಸಲು ಅನುಮತಿ…

1 day ago