ಮಾಗುವುದು ಸಾಧನೆ ಬೀಗುವುದು ಸುಮ್ಮನೆ

September 16, 2025
7:14 AM
ಜಯಪ್ರಕಾಶ್ ಎ ನಾಕೂರು ಅವರ ಕವನ | ಕವನದ ಶೀರ್ಷಿಕೆ - ಮಾಗುವುದು ಸಾಧನೆ- ಬೀಗುವುದು ಸುಮ್ಮನೆ

ಬೀಗುವಿಕೆಗಿಂತ ಮಾಗುವಿಕೆಯದು ಉತ್ತಮ
ಮಾಗಿಯೂ ಬೀಗದಿರುವಿಕೆಯು ಅತ್ಯುತ್ತಮ
ಮಾಗದೆ ಮಾಗಿರುವಂತೆ ಬೀಗುವುದು ವ್ಯಸನ
ಮಾಗದೆ ಬೀಗುವುದಕೆ ವೇಷವೇ ಸಾಧನ
ಮಾಗಿದವ ಬೀಗಲಾರ
ಬೀಗುವವ ಮಾಗಲಾರ
ಮಾಗುವುದು ಸಾಧನೆ
ಬೀಗುವುದು ಸುಮ್ಮನೆ ||

ಮಾಗಲೋಸುಗ ಕಳಚಬೇಕು ಮುಖವಾಡವನು
ಮಾಗಲೋಸುಗ ತೆರೆಯಬೇಕಂತಃಚಕ್ಷುವನು
ಮಾಗಲೋಸುಗ ಸವೆಸಬೇಕು ಕಾಯವನು
ಮಾಗಲೋಸುಗ ಬಳಸಬೇಕಂತಃಕರಣವನು
ಪಂಚಜ್ಞಾನೇಂದ್ರಿಯ ಪಂಚಕರ್ಮೇಂದ್ರಿಯಂ
ಗಳನು ಸರಿಯಾದ ಕ್ರಮದಿಂದ ಬಳಸುತಲಿ
ಧರ್ಮಮಾರ್ಗವೆ ಸಾಧುಮಾರ್ಗವೆಂದರಿತು ಸನ್ಮಾರ್ಗದಲಿ ಮನುಜ ಸಾಗುವುದು ಒಳಿತು ||

ದೇಹ ತೊಳೆಯಲು ಬೇಕು ಸ್ನಾನ
ಮನವ ತೊಳೆಯಲು ಬೇಕು ಧ್ಯಾನ
ಬುದ್ಧಿ ಬೆಳೆಯಲು ಬೇಕು ಚಿಂತನ
ಬಾಹ್ಯ ಅಭ್ಯಂತರದಿ ಪಾಲಿಸಲು ಶೌಚವನು
ತೊಲಗುವುದು ಬೇಡದಾ ಕಳೆಯು
ಹುಲುಸಾಗಿ ಬೆಳೆಯುವುದು ಬೆಳೆಯು ||

ಫಲತುಂಬಿದಾ ವೃಕ್ಷ ಬಾಗುವುದು ದಿಟವು
ಬಾಗಿದಾ ವೃಕ್ಷವದು ಮಾಗಿದ ಸಂಕೇತವು ಬಾಗಬೇಕಾದಲ್ಲಿ ಬಾಗುವಾ ಕಾಯವದು
ಬೀಗದೆಂದೆಂದೂ ಮಾಗುವುದು ದಿಟವು
ಬಾಗಬೇಕಾದದ್ದು ಕಾಯ
ಮಾಗಬೇಕಾದದ್ದು ನ್ಯಾಯ ||

ಬೀಗುವವ ಬಾಗಲಾರ
ಬಾಗದವ ಮಾಗಲಾರ
ಮಾಗಿದವ ಬೀಗಲಾರ
ಬೀಗುವವ ಮಾಗಲಾರ
ಮಾಗುವುದು ಸಾಧನೆ
ಬೀಗುವುದು ಸುಮ್ಮನೆ ||‌

✍️ ಜಯಪ್ರಕಾಶ್ ಎ ನಾಕೂರು

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಅಡಿಕೆ ಮಾರುಕಟ್ಟೆ ಏಕೆ ನಿಂತಿತು..? ಸವಾಲು ಮತ್ತು ರೈತರ ಭವಿಷ್ಯದ ಪ್ರಶ್ನೆಗಳು ಏನು…?
May 18, 2026
9:44 AM
by: ಮಹೇಶ್ ಪುಚ್ಚಪ್ಪಾಡಿ
ಗೋಮಯದಿಂದ ಗ್ರೀನ್‌ ಎನರ್ಜಿ | ದೆಹಲಿಯಲ್ಲಿ 300 ಟನ್ ಜೈವಿಕ ಅನಿಲ ಘಟಕ – ಯಮುನಾ ಮಾಲಿನ್ಯ ತಡೆಗೆ ಮೆಗಾ ಪ್ಲಾನ್‌
May 18, 2026
9:36 AM
by: ದ ರೂರಲ್ ಮಿರರ್.ಕಾಂ
ಇಂಡೋ ಫಾಲಿ, ಬರ್ಮಾ ಗೋಟಾ ಹಾವಳಿ : ಮಂಗಳೂರು ಚಾಲಿ ಅಡಿಕೆ ಮಾರುಕಟ್ಟೆಗೆ ನಿಜವಾಗಿಯೂ ಎಷ್ಟು ಹೊಡೆತ?
May 17, 2026
9:00 PM
by: ಅರುಣ್‌ ಕುಮಾರ್ ಕಾಂಚೋಡು
ವೈಜ್ಞಾನಿಕ ಕೃಷಿಗೆ ಕೇಂದ್ರದ ಒತ್ತು | ರಾಜ್ಯವಾರು ಕೃಷಿ-ಹವಾಮಾನ ಮಾರ್ಗಸೂಚಿ ಸಿದ್ಧಕ್ಕೆ ವೇಗ
May 17, 2026
8:03 PM
by: ಮಿರರ್‌ ಡೆಸ್ಕ್

You cannot copy content of this page - Copyright -The Rural Mirror