#PositiveJournalism | ಪತ್ರಕರ್ತ ಯೋಚಿಸುವ ರೀತಿ ಸಮಾಜಮುಖಿಯಾಗಿರಬೇಕು | ಉಮೇಶ್‌ ಕುಮಾರ್‌ ಶಿಮ್ಲಡ್ಕ

October 8, 2023
10:46 AM
ರೂರಲ್‌ ಮಿರರ್‌ ಡಿಜಿಟಲ್‌ ಮೀಡಿಯಾ ಹಾಗೂ ಪುತ್ತೂರಿನ ಅಂಬಿಕಾ ಮಹಾವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಸಹಯೋಗದೊಂದಿಗೆ ನಡೆಯುವ ಸಕಾರಾತ್ಮಕ ಪತ್ರಿಕೋದ್ಯಮದ ಎರಡನೇ ಉಪನ್ಯಾಸ ಕಾರ್ಯಕ್ರಮ ನಡೆಯಿತು. ಹಿಂದುಸ್ತಾನ್‌ ಟೈಮ್ಸ್‌ನ ಸುದ್ದಿ ಸಂಪಾದಕ ಉಮೇಶ್‌ ಕುಮಾರ್‌ ಶಿಮ್ಲಡ್ಕ ಮಾತನಾಡಿದರು.

ಸಮಾಜದಲ್ಲಿ ಜನಸಾಮಾನ್ಯ ಜನರು ಯೋಚಿಸುವ ರೀತಿಗೂ, ಪತ್ರಕರ್ತ ಯೋಚಿಸುವ ರೀತಿಗೂ ವ್ಯತ್ಯಾಸ ಇರುತ್ತದೆ. ಪತ್ರಕರ್ತ ಸಮಾಜದಲ್ಲಿನ ಒಳ್ಳೆಯ ಅಂಶಗಳ ಕಡೆಗೆ ಗಮನಹರಿಸಬೇಕಾಗಿದೆ, ಸಮಾಜಮುಖಿ ಸ್ಪಂದನೆಯ ಕಡೆಗೆ ಯೋಚಿಸಬೇಕು ಎಂದು ಹಿಂದುಸ್ತಾನ್‌ ಟೈಮ್ಸ್‌ನ ಸುದ್ದಿ ಸಂಪಾದಕ ಉಮೇಶ್‌ ಕುಮಾರ್‌ ಶಿಮ್ಲಡ್ಕ ಹೇಳಿದರು.

Advertisement

ರೂರಲ್‌ ಮಿರರ್‌ ಡಿಜಿಟಲ್‌ ಮೀಡಿಯಾ ಹಾಗೂ ಪುತ್ತೂರಿನ ಅಂಬಿಕಾ ಮಹಾವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಸಹಯೋಗದೊಂದಿಗೆ ನಡೆಯುವ ಸಕಾರಾತ್ಮಕ ಪತ್ರಿಕೋದ್ಯಮದ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಈಗ ಪತ್ರಿಕಾ ಕಚೇರಿಗಳಲ್ಲಿಯೂ ಪತ್ರಕರ್ತನ ಯೋಚನೆಗಳಿಗೆ , ಸ್ಕಿಲ್‌ ಗಳಿಗೇ ಮಾನ್ಯತೆ ಇದೆ. ಮಾಧ್ಯಮ ಕ್ಷೇತ್ರ ಹತ್ತಾರು ವಿಭಾಗಗಳಲ್ಲಿ ಬೆಳೆದಿದೆ.ಪತ್ರಿಕಾ ಕಚೇರಿಗಳಲ್ಲಿ, ದೃಶ್ಯ ಮಾಧ್ಯಮಗಳಲ್ಲಿ ಮಾತ್ರವೇ ಇಂದು ಉದ್ಯೋಗ ಎಂಬ ಭಾವನೆ ಬೇಕಾಗಿಲ್ಲ. ಡಿಜಿಟಲ್ ಮಾಧ್ಯಮ, ಪೊಡಾಕಾಸ್ಟ್ , ರೀಸರ್ಚ್ ಜರ್ನಲಿಸಂ, ಡಾಟಾ ಜರ್ನಲಿಸ್ಟ ಹೀಗೇ ಹತ್ತಾರು ವಿಭಾಗದಲ್ಲಿ ಬೆಳೆದಿದೆ. ವಿದ್ಯಾರ್ಥಿಗಳು ತನ್ನ ಸ್ಕಿಲ್‌ ಬೆಳೆಸಿಕೊಂಡು ತಾನೇ ಒಂದು ಬ್ರಾಂಡ್‌ ಆಗಿದ್ದಾಗ ಅವಕಾಶಗಳು ಲಭಿಸುತ್ತದೆ ಎಂದರು. ಸಕಾರಾತ್ಮಕವಾದ ಭಾವನೆ ಇದ್ದರೆ ಮಾತ್ರವೇ ವಿದ್ಯಾರ್ಥಿಗಳು ತನ್ನನ್ನು ಬ್ರಾಂಡ್‌ ಮಾಡಿಕೊಳ್ಳಲು, ಕೇಳಿಸಿಕೊಳ್ಳುವ ಪ್ರವೃತ್ತಿ ಬೆಳೆಯುತ್ತದೆ ಎಂದು  ಉಮೇಶ್‌ ಹೇಳಿದರು.

ರೂರಲ್‌ ಮಿರರ್‌ ಡಿಜಿಟಲ್‌ ಮೀಡಿಯಾ ಸ್ಥಾಪಕ ಮಹೇಶ್‌ ಪುಚ್ಚಪ್ಪಾಡಿ, ಪುತ್ತೂರಿನ ಅಂಬಿಕಾ ಮಹಾವಿದ್ಯಾಲಯದ ಪ್ರಾಂಶುಪಾಲ ರಾಕೇಶ್‌ ಕುಮಾರ್‌ ಕಮ್ಮಜೆ ಉಪಸ್ಥಿತರಿದ್ದರು.

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಸಂಜೀವಿನಿ ಸ್ವ ಸಹಾಯ ಸಂಘಗಳ ಸದಸ್ಯರ ಉತ್ಪನ್ನಗಳ ಪ್ರದರ್ಶನ ಮಾರಾಟ ಮೇಳ | ಜಿಲ್ಲೆಯ ಅತ್ಯುತ್ತಮ ಕೃಷಿ ಸಖಿ ಪ್ರಶಸ್ತಿ ಸಂಪಾಜೆ ಮೋಹಿನಿ ವಿಶ್ವನಾಥ್ ಅವರಿಗೆ
April 24, 2025
9:47 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 24-04-2025 | ಎ.26 ರಿಂದ ರಾಜ್ಯದ ವಿವಿದೆಡೆ ಮಳೆ ಪ್ರಮಾಣ ಹೆಚ್ಚಳ |
April 24, 2025
9:22 PM
by: ಸಾಯಿಶೇಖರ್ ಕರಿಕಳ
ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸ್ವಚ್ಛತಾ ಅಭಿಯಾನ | 3570 ಟನ್ ಕಟ್ಟಡ ತ್ಯಾಜ್ಯ ತೆರವು
April 24, 2025
6:45 AM
by: The Rural Mirror ಸುದ್ದಿಜಾಲ
ಇಂದು ಶೂನ್ಯ  ನೆರಳಿನ ದಿನ | ಪಿಲಿಕುಳದಲ್ಲಿ  ಪ್ರಾತ್ಯಕ್ಷಿಕೆ
April 24, 2025
6:29 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group