ಗಿಡ ನೆಡುವುದು ಬಿಡಿ, ಗಿಡ ಉಳಿಸುವುದಕ್ಕೂ ಮನಸ್ಸು ಮಾಡದ ಯುಗ ಇದು.ಅಂತಹದ್ದರಲ್ಲಿ ನಿರಂತರ ಗಿಡ ಬೆಳೆಸುತ್ತಿರುವ ಪವರ್ಮ್ಯಾನ್ ಈಗ ಗಮನ ಸೆಳೆದಿದ್ದಾರೆ. ಸುಮಾರು 10,000 ಗಿಗಳನ್ನು ದಕ್ಷಿಣ ಕನ್ನಡ ಜಿಲ್ಲೆಯ 10 ಕಡೆಗಳಲ್ಲಿ ಬೆಳೆಸುವ ಮೂಲಕ ವಿಶೇಷವಾದ ಪರಿಸರ ಪ್ರೇಮವನ್ನು ಬೆಳೆಸಿದ್ದಾರೆ.
ಅಭಿವೃದ್ಧಿಯ ಹೆಸರಿನಲ್ಲಿ ಸಾಲು ಸಾಲು ಮರಗಳನ್ನು ಕಡಿದು ನಾಶ ಮಾಡುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಎನ್ನುವ ಆರೋಪದ ನಡುವೆಯೇ ಸಾಲು ಸಾಲು ಗಿಡಗಳನ್ನು ನೆಟ್ಟು ಅರಣ್ಯೀಕರಣ ಮಾಡಲು ಪಣತೊಟ್ಟಿದ್ದಾರೆ ದುರ್ಗಾಸಿಂಗ್. ಮೆಸ್ಕಾಂ ಇಲಾಖೆಯ ಗೋಳಿತೊಟ್ಟು ವಿಭಾಗದ ಪವರ್ ಮ್ಯಾನ್ ದುರ್ಗಾ ಸಿಂಗ್ ಈ ಸಾಧನೆಯ ರೂವಾರಿ.
ಕೆಲ ವರ್ಷಗಳ ಹಿಂದೆ ವಿದ್ಯುತ್ ಇಲಾಖೆಯಿಂದ ಹೊಸ ತಂತಿಗಳ ಸಂಪರ್ಕದ ಬಗ್ಗೆ ಕಾರ್ಯಗಳು ನಡೆಯುತ್ತಿತ್ತು. ಈ ಸಂದರ್ಭ ಅನೇಕ ಮರಗಳ ತೆರವಿನ ಪರಿಸ್ಥಿತಿ ಎದುರಾಯಿತು. ಆಗ ಮರಗಳ ಅಳಿವಿನ ಬಗ್ಗೆ ಯೋಚಿಸಿದ ಪವರ್ ಮ್ಯಾನ್ ಅವುಗಳನ್ನು ಉಳಿಸುವ ಹಾಗೂ ಹೊಸದಾಗಿ ಸಸಿ ನೆಟ್ಟು ಬೆಳೆಸುವ ಬಗ್ಗೆ ಯೋಚಿಸಿದರು. ಸ್ವತಃ ಇಲಾಖೆಯ ವಿರುದ್ಧವೇ ಕಾದಾಡಿ ಮರಗಳನ್ನು ರಕ್ಷಿಸಿ ವಿದ್ಯುತ್ ಕಂಬಗಳನ್ನು ಮತ್ತು ತಂತಿಗಳನ್ನು ಬೇರೆ ಕಡೆಯಿಂದ ವರ್ಗಾಯಿಸಿಕೊಂಡು ಹೋಗುವಂತೆ ಒತ್ತಾಯಿಸುತ್ತಿದ್ದರು. ಆ ಮೂಲಕ ಅವರ ಪರಿಸರ ಜಾಗೃತಿಯ ಅರಿವನ್ನು ಇತರರಿಗೆ ಮೂಡಿಸುತ್ತಿದ್ದರು. ಆ ಬಳಿಕ ಯೂಟ್ಯೂಬ್ ನಲ್ಲಿ ಮಿಯಾವಾಕಿ ಅರಣ್ಯಗಳ ಬಗ್ಗೆ ಅಧ್ಯಯನ ನಡೆಸಿದರು. ವೃತ್ತಿಯಲ್ಲಿ ಪವರ್ ಮ್ಯಾನ್ ಆಗಿರುವ ಇವರು ತಮ್ಮ ವರ್ಷದ ಆದಾಯದಲ್ಲಿ 30,000 ರೂಪಾಯಿಯನ್ನು ಈ ಪರಿಸರ ರಕ್ಷಣೆಗಾಗಿಯೇ ಮೀಸಲಿಟ್ಟಿದ್ದಾರೆ.
ಇಂದು ಹೆಚ್ಚಿನ ಎಲ್ಲಾ ಕಡೆ ಕಾಡನ್ನು ನಾಶಗೊಳಿಸುವ ವಿಚಾರಗಳೇ ಕೇಳಿ ಬರುತ್ತಿರುವ ನಡುವೆ ದುರ್ಗಾ ಸಿಂಗ್ ಮಾಡುತ್ತಿರುವ ಮಿಯವಾಕಿ ಪದ್ಧತಿಯ ಅರಣ್ಯೀಕರಣ ಮಾದರಿ ಕಾರ್ಯವಾಗಿದೆ. ತಮಗೆ ಲಭ್ಯ ಇರುವ ಜಾಗದಲ್ಲಿ ಅನೇಕ ಪ್ರಭೇದಗಳ ಅತಿ ಹೆಚ್ಚು ಗಿಡಗಳನ್ನು ನೆಟ್ಟು ಮನುಷ್ಯರಿಗೆ ಮಾತ್ರವಲ್ಲದೆ ಪ್ರಾಣಿ ಪಕ್ಷಿ ಕೀಟಗಳಿಗೂ ಆಸರೆಯ ತಾಣವನ್ನು ಸೃಷ್ಟಿ ಮಾಡುತ್ತಿರುವುದು ಶ್ಲಾಘನೀಯ ವಿಚಾರವಾಗಿದೆ.
ಜಪಾನಿನ ಸಸ್ಯಶಾಸ್ತ್ರಜ್ಞ ಅಭಿವೃದ್ಧಿಪಡಿಸಿದ ಈ ಮಿಯಾವಾಕಿ ವಿಧಾನವು ಸ್ಥಳೀಯ ಪ್ರಭೇದಗಳ ಗಿಡಗಳನ್ನು ನೆಟ್ಟು ಅಲ್ಪಸಮಯದಲ್ಲಿ ಬೆಳೆಸುವ ರೀತಿಯಾಗಿದೆ. ಮಿಯಾವಾಕಿ ವಿಧಾನವು ಸ್ಥಳೀಯ ಸಸ್ಯಗಳ ವೇಗವಾಗಿ ಬೆಳೆಯುವ ತೋಪುಗಳನ್ನು ಬೆಳೆಸಲು ಅರಣ್ಯೀಕರಣದ ತಂತ್ರವಾಗಿದೆ. ಮೂಲತಃ ಜಪಾನಿನ ಪರಿಸರಶಾಸ್ತ್ರಜ್ಞ ಅಕಿರಾ ಮಿಯಾವಾಕಿ ಅವರು ನಿಪ್ಪಾನ್ ಸ್ಟೀಲ್ಗಾಗಿ 1970 ರ ದಶಕದ ಆರಂಭದಲ್ಲಿ ಅಭಿವೃದ್ಧಿಪಡಿಸಿದರು, ಈ ವಿಧಾನವನ್ನು ವಿವಿಧ ಜಪಾನಿನ ನಿಗಮಗಳು ಅಳವಡಿಸಿಕೊಂಡಿವೆ.
ಕಡಿಮೆ ಜಾಗದಲ್ಲಿ ಅಕ್ಕ ಪಕ್ಕ ಗಿಡಗಳನ್ನು ನೆಡುವ ಮೂಲಕ ಹೆಚ್ಚು ಹೆಚ್ಚು ಮರಗಳನ್ನು ಬೆಳೆಸುವ ವಿಧಾನ ಇದಾಗಿದೆ. ನಗರೀಕರಣದ ವ್ಯಾಮೋಹದಲ್ಲಿ ಕಾಡು ನಾಶಗೊಳ್ಳುವ ಪ್ರಸ್ತುತ ಸಮಯದಲ್ಲಿ ಈ ವಿಧಾನದಿಂದಾಗಿ ಪರಿಸರದಲ್ಲಿರುವ ಇಂಗಾಲದ ಡೈ ಆಕ್ಸೈಡ್ ಅನ್ನು ಇಲ್ಲಿರುವ ಗಿಡಗಳು ಬೇಗನೆ ಹೀರಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದ್ದು, ಆಮ್ಲಜನಕವನ್ನು ಹೊರ ಸೂಸುತ್ತವೆ. ಪರಿಸರ ಸ್ವಚ್ಛತೆಯೊಂದಿಗೆ ಪ್ರಾಣಿ ಪಕ್ಷಿಗಳಿಗೂ ಇಲ್ಲಿನ ಮರಗಳು ಆಹಾರದ ಭದ್ರತೆಯನ್ನು ನೀಡುತ್ತವೆ.
ಭಾರತದ ರಾಷ್ಟ್ರೀಯ ಕೀಟ ಕಣ್ಗಾವಲು ವ್ಯವಸ್ಥೆ ಈಗ 73 ಬೆಳೆಗಳು ಮತ್ತು 436…
ICAR 16 ಹೊಸ ಜಾನುವಾರು ಮತ್ತು ನಾಯಿ ತಳಿಗಳಿಗೆ ರಾಷ್ಟ್ರೀಯ ನೋಂದಣಿ ನೀಡಿದ್ದು,…
ಕರ್ನಾಟಕದ ಕರಾವಳಿ ಹಾಗೂ ಮಲೆನಾಡಿನಲ್ಲಿ ಆಗಸ್ಟ್ 26ರವರೆಗೆ ಮೋಡ ಮತ್ತು ಅಲ್ಲಲ್ಲಿ ಬಿಟ್ಟುಬಿಟ್ಟು…
ಭಾರತದಲ್ಲಿ ಸಮಸ್ಯೆ ಕೇವಲ ಉದ್ಯೋಗಗಳ ಕೊರತೆಯಲ್ಲ, ಉದ್ಯೋಗಕ್ಕೆ ಅಗತ್ಯವಾದ ಕೌಶಲ್ಯ ಹೊಂದಿದ ಅಭ್ಯರ್ಥಿಗಳ…
ಕರಾವಳಿ ಮತ್ತು ಮಲೆನಾಡಿನ ಅಡಿಕೆ ತೋಟಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಎಲೆಚುಕ್ಕೆ, ಹಳದಿ ಎಲೆ ಹಾಗೂ…
ಕರ್ನಾಟಕದಲ್ಲಿ ಮುಂಗಾರು ಮತ್ತೆ ಚುರುಕಾಗಿದ್ದು, ಕರಾವಳಿ ಮತ್ತು ಮಲೆನಾಡಿನಲ್ಲಿ ಆಗಸ್ಟ್ 25ರವರೆಗೆ ಮಳೆ…