Advertisement
ಸುದ್ದಿಗಳು

ಚಿಪ್ಸ್, ನೂಡಲ್ಸ್, ಸಂಸ್ಕರಿಸಿದ ಆಹಾರದಿಂದ ಅಕಾಲಿಕ ಮರಣ | ವಿಶ್ವ ಆರೋಗ್ಯ ಸಂಘಟನೆ ವರದಿ

Share

ಈಗಿನ ಮಕ್ಕಳಿಗೆ, ಹಾಗೆ ಯುವಕರಿಗೂ ಜಂಕ್ ಫುಡ್ ಒಂದು ಬಿಟ್ರೆ ಬೇರೆ ತಿನಿಸುಗಳೆಲ್ಲಾ ತಿನಿಸೇ ಅಲ್ಲ. ಅಷ್ಟರ ಮಟ್ಟಿಗೆ ಇದಕ್ಕೆ ಜೋತು ಬಿದ್ದಿದ್ದಾರೆ. ಇದನ್ನು ತಿನ್ನುವ ಅಭ್ಯಾಸ  ಇರುವವರಿಗೆ ಇಲ್ಲಿದೆ ಎಚ್ಚರಿಕೆಯ ಸುದ್ದಿ.

ದೇಹದಲ್ಲಿನ ನೀರು ಮತ್ತು ಖನಿಜಗಳ ಸಮತೋಲನವನ್ನು ಕಾಪಾಡಿಕೊಳ್ಳಲು ಸೋಡಿಯಂ ಪ್ರಮುಖ ಪೋಷಕಾಂಶವಾಗಿದೆ. ಸೋಡಿಯಂ ಅಂದರೆ ಉಪ್ಪಿನ ಅಧಿಕ ಸೇವನೆಯು ಅನೇಕ ದೀರ್ಘಕಾಲದ ಕಾಯಿಲೆಯ ಅಪಾಯವನ್ನು ಹೆಚ್ಚಿಸುತ್ತದೆ.

ದೇಹದ ಸಮತೋಲನವನ್ನು ಕಾಪಾಡಿಕೊಳ್ಳಲು ಸೋಡಿಯಂ ಪ್ರಮುಖ ಪೋಷಕಾಂಶವಾಗಿದ್ದರೂ, ಹೆಚ್ಚಿನ ಪ್ರಮಾಣದ ಸೋಡಿಯಂ ಸೇವನೆಯು ಅನೇಕ ದೀರ್ಘಕಾಲದ ಕಾಯಿಲೆಯ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ಇದು ಅಕಾಲಿಕ ಮರಣದ ಅಪಾಯವನ್ನು ಉಂಟುಮಾಡುತ್ತದೆ. ಹೆಚ್ಚು ಉಪ್ಪನ್ನು ತಿನ್ನುವುದರಿಂದ ಇದು ನಮ್ಮ ಹೃದಯದ ಕಾಯಿಲೆ, ಪಾರ್ಶ್ವವಾಯು ಮತ್ತು ಅಕಾಲಿಕ ಮರಣದ ಅಪಾಯವನ್ನು ಹೆಚ್ಚಿಸುತ್ತದೆ.

ವಿಶ್ವಸಂಸ್ಥೆಯ ವಿಶ್ವ ಆರೋಗ್ಯ ಸಂಘಟನೆಯ ಸೋಡಿಯಂ ಸೇವನೆಯ ಕಡಿತದ ಕುರಿತ ಮೊದಲ ಜಾಗತಿಕ ವರದಿಯು 2025ರ ವೇಳೆಗೆ ಪ್ರಪಂಚವು ಸೋಡಿಯಂ ಸೇವನೆಯನ್ನು 30% ನಷ್ಟು ಕಡಿಮೆ ಮಾಡುವ ಜಾಗತಿಕ ಗುರಿಯನ್ನು ಸಾಧಿಸಲು ಹೊರಗುಳಿದಿದೆ ಎಂದು ತೋರಿಸುತ್ತದೆ. ಹಾಗೂ WHO ಸದಸ್ಯ ರಾಷ್ಟ್ರಗಳಲ್ಲಿ 5% ಮಾತ್ರ ಕಡ್ಡಾಯ ಹಾಗೂ ಸಮಗ್ರ ಸೋಡಿಯಂ ನೀತಿಯನ್ನು ಜಾರಿಗೊಳಿಸಲಾಗಿದೆ ಎಂದು ವರದಿ ಹೇಳಿದೆ.

ದೇಹದಲ್ಲಿನ ನೀರು ಮತ್ತು ಖನಿಜಗಳ ಸಮತೋಲನವನ್ನು ಕಾಪಾಡಿಕೊಳ್ಳಲು ಸೋಡಿಯಂ ಪ್ರಮುಖ ಪೋಷಕಾಂಶವಾಗಿದೆ. ಸೋಡಿಯಂ ಅಂದರೆ ಉಪ್ಪಿನ ಅಧಿಕ ಸೇವನೆಯು ಅನೇಕ ದೀರ್ಘಕಾಲದ ಕಾಯಿಲೆಯ ಅಪಾಯವನ್ನು ಹೆಚ್ಚಿಸುತ್ತದೆ ಹಾಗೂ ಅಕಾಲಿಕ ಮರಣಕ್ಕೂ ಕಾರಣವಾಗುತ್ತದೆ.

ಸೋಡಿಯಂನ ಮುಖ್ಯ ಮೂಲವೆಂದರೆ ಪುಡಿ ಉಪ್ಪು (ಸೋಡಿಯಂ ಕ್ಲೋರೈಡ್), ಆದರೆ ಇದು ಸೋಡಿಯಂ ಗ್ಲುಟಮೇಟ್‌ನಂತಹ ಇತರ ಅಂಶಗಳನ್ನೂ ಹೊಂದಿದೆ. ಫಾಸ್ಟ್ ಫುಡ್, ಚಿಪ್ಸ್, ಸಂಸ್ಕರಿಸಿದ ತಿಂಡಿಗಳು, ಸೂಪ್‌ಗಳು, ಸಂಸ್ಕರಿಸಿದ ಮಾಂಸಗಳು, ಇನ್‌ಸ್ಟೆಂಟ್ ನೂಡಲ್ಸ್ ಇವೆಲ್ಲವೂ ಹೆಚ್ಚಾಗಿ ಸೋಡಿಯಂ ಗ್ಲುಟಮೇಟ್‌ನ್ನು ಹೊಂದಿರುತ್ತದೆ. ಹಾಗೂ ಇಂತಹ ಆಹಾರ ಪದಾರ್ಥಗಳ ನಿಯಮಿತ ಸೇವನೆಯು ನಮ್ಮ ಆರೋಗ್ಯದ ಮೇಲೆ ಹಾನಿಯುಂಟುಮಾಡುತ್ತವೆ.

ಹೆಚ್ಚಿನ ಪ್ರಮಾಣದ ಸೋಡಿಯಂ ಸೇವನೆಯು ಗ್ಯಾಸ್ಟಿಕ್, ಕ್ಯಾನ್ಸರ್, ಸ್ಥೂಲಕಾಯತೆ, ಆಸ್ಟಿಯೊಪೊರೋಸಿಸ್ ಮತ್ತು ಮೂತ್ರಪಿಂಡದ ಕಾಯಿಲೆಯಂತಹ ಆರೋಗ್ಯ ಸಂಬಂಧಿ ಕಾಯಿಲೆಗಳು ಕಾಣಿಸಿಕೊಳ್ಳಬಹುದು ಎಂದು ವರದಿ ಹೇಳುತ್ತದೆ. ಆರೋಗ್ಯಕರವಲ್ಲದ ಆಹಾರಗಳ ಸೇವನೆಯು ಹಾಗೂ ಅತಿಯಾದ ಸೋಡಿಯಂ ಸೇವನೆಯು ಜಾಗತಿಕ ಮಟ್ಟದಲ್ಲಿ ಅಕಾಲಿಕ ಮರಣ ಮತ್ತು ಸಾವುಗಳಿಗೆ ಮುಖ್ಯ ಕಾರಣ ಎಂದು WHO ನ ಮಹಾನಿರ್ದೇಶಕ ಡಾ. ಟೆಡ್ರೋಸ್ ಅಧಾನಮ್ ಘೆಬ್ರೆಯೆಸಸಸ್ ಹೇಳಿದರು.

ಹೆಚ್ಚಿನ ದೇಶಗಳಲ್ಲಿ ಇನ್ನೂ ಯಾವುದೇ ಕಡ್ಡಾಯ ಸೋಡಿಯಂ ಕಡಿತ ನೀತಿಗಳನ್ನು ಅಳವಡಿಸಿಲ್ಲ ಎಂದು WHO ವರದಿ ಹೇಳುತ್ತದೆ. ರಾಷ್ಟ್ರಗಳು ಕಠಿಣ ಕ್ರಮಗಳನ್ನು ಅನುಸರಿಸದೆ ತಮ್ಮ ಜನರನ್ನು ಹೃದಯಾಘಾತ, ಪಾರ್ಶ್ವವಾಯು ಮತ್ತು ಇತರ ಆರೋಗ್ಯ ಸಮಸ್ಯೆಗಳ ಅಪಾಯಕ್ಕೆ ಸಿಲುಕಿಸುತ್ತಿದೆ ಎಂದು ಹೇಳಿದೆ. ಸೋಡಿಯಂ ಸೇವನೆ ಕಡಿತಕ್ಕಾಗಿ ‘ಬೆಸ್ಟ್ ಬೈಸ್’ನ್ನು ಜಾರಿಗೆ ತರಲು WHO ಎಲ್ಲಾ ದೇಶಗಳಿಗೆ ಕರೆ ನೀಡಿದೆ. ಮತ್ತು ಆಹಾರ ತಯಾರಕರ ಮೇಲೆ ಸೋಡಿಯಂ ಮಟ್ಟದ ಮಾನದಂಡವನ್ನು ಅಳವಡಿಸಲು ಕೆಲವೊಂದು ನೀತಿಗಳನ್ನು ಜಾರಿಗೆ ತಂದಿದೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಯುವಕರ ಮೊದಲ ಆದ್ಯತೆ ಏನಿರಬೇಕು? ರಾಜಕೀಯವಲ್ಲ, ಆರ್ಥಿಕ ಸ್ವಾವಲಂಬನೆ!

ಯುವಕರ ಮೊದಲ ಆದ್ಯತೆ ರಾಜಕೀಯವಲ್ಲ, ಕೌಶಲ್ಯ ಮತ್ತು ಆರ್ಥಿಕ ಸ್ವಾವಲಂಬನೆ ಆಗಿರಬೇಕು ಎಂಬುದು…

14 hours ago

ಹವಾಮಾನ ವರದಿ | 15-07-2026 | ರಾಜ್ಯದಲ್ಲಿ ಮಳೆ ಯಾಕೆ ಕಡಿಮೆಯಾಗಿದೆ ? ಜುಲೈ 16 ರಿಂದ ಎಲ್ಲೆಲ್ಲಿ ಮಳೆ ಆರಂಭವಾಗಲಿದೆ?

ಜುಲೈ 16ರಿಂದ ಕರಾವಳಿ ಹಾಗೂ ಮಲೆನಾಡಿನ ಕೆಲವು ಭಾಗಗಳಲ್ಲಿ ಅಲ್ಲಲ್ಲಿ ಸಾಮಾನ್ಯ ಮಳೆ…

21 hours ago

ಕರ್ನಾಟಕದ ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್…! ಕಾರಣ..?

ರಾಜ್ಯದ ಕರಾವಳಿ ಹಾಗೂ ಒಳನಾಡಿನ ಕೆಲವು ಜಿಲ್ಲೆಗಳಿಗೆ IMD ಯೆಲ್ಲೋ ಅಲರ್ಟ್ ಘೋಷಿಸಿದೆ.…

1 day ago

ಕಸದ ತೆಂಗಿನಕಾಯಿಯೂ ಈಗ ರೈತರ ಸಂಪತ್ತು…! ಭುವನೇಶ್ವರದ ‘ವೇಸ್ಟ್ ಟು ವೆಲ್ತ್’ ಮಾದರಿ

ಭುವನೇಶ್ವರದಲ್ಲಿ ಪ್ರತಿದಿನ ಸಾವಿರಾರು ತೆಂಗಿನಕಾಯಿ ತ್ಯಾಜ್ಯವನ್ನು ಕೊಕೊಪೀಟ್, ಹಗ್ಗ ಹಾಗೂ ಚಾಪೆಗಳಾಗಿ ಪರಿವರ್ತಿಸಿ…

2 days ago

ರಾಜ್ಯದಲ್ಲಿ ಬರದ ಛಾಯೆ- ರೈತರಿಗೆ ಎಕರೆಗೆ ₹50 ಸಾವಿರ ಪರಿಹಾರ ನೀಡಿ

ರಾಜ್ಯದಲ್ಲಿ ಮಳೆಯ ಕೊರತೆಯಿಂದ ಬರದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ರೈತರಿಗೆ ಎಕರೆಗೆ ₹50 ಸಾವಿರ…

2 days ago

ಹುಲಿ-ಚಿರತೆ ಹಾವಳಿ ನಿಯಂತ್ರಣಕ್ಕೆ ಆಗ್ರಹ – ಚಾಮರಾಜನಗರದಲ್ಲಿ ಅರಣ್ಯ ಇಲಾಖೆ ವಿರುದ್ಧ ರೈತ ಸಂಘಟನೆಗಳ ಪ್ರತಿಭಟನೆ

ಚಾಮರಾಜನಗರ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಹುಲಿ-ಚಿರತೆ ಹಾವಳಿಯಿಂದ ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ ರೈತ…

2 days ago