#PriceHike | ಬೇಳೆ ಕಾಳು,ಟೋಮ್ಯಾಟೋ, ತರಕಾರಿ ಬೆನ್ನಲ್ಲೇ ಮೀನುಗಳ ಬೆಲೆ ಏರಿಕೆ | ಅಡಕತ್ತರಿಯಲ್ಲಿ ಗ್ರಾಹಕರ ಜೀವನ

July 13, 2023
11:10 AM
ತರಕಾರಿ ಬೆಲೆ ಹೆಚ್ಚಳ ಆಗಿದ್ದು ಮಾತ್ರವಲ್ಲ, ಇದೀಗ ಮೀನುಗಳ ಬೆಲೆ ಸಹ ಏರಿಕೆಯಾಗಿದೆ. ಕಳೆದ ತಿಂಗಳಿಗೆ ಹೋಲಿಕೆ ಮಾಡಿದ್ರೆ ಶೇ.30-40 ರಷ್ಟು ಬೆಲೆ ಏರಿಕೆ ಕಂಡಿದೆ.

ಮನುಷ್ಯನಾಗಿ ಹುಟ್ಟಿದ ಮೇಲೆ ಏನಾದ್ರು ತಿಂದು ಬದುಕಲೇ ಬೇಕು. ಆದರೆ ಈಗಿನ ಪರಿಸ್ಥಿತಿಯಲ್ಲಿ ಯಾವುದನ್ನು ತಿನ್ನುವುದು ಅನ್ನೋದೇ ದೊಡ್ಡ ತಲೆ ನೋವಾಗಿದೆ. ಯಾವುದನ್ನು ಮುಟ್ಟುವಂಗಿಲ್ಲ. ಬೆಲೆ ಗಗನಕ್ಕೇರಿ ಕುಳಿತಿದೆ. ಹಣ್ಣು, ತರಕಾರಿ, ಬೇಳೆಕಾಳು.. ಈಗ ಮೀನು ಬೆಲೆಯೂ ಏರಿಕೆ ಕಂಡಿದೆ.

Advertisement
Advertisement

ತರಕಾರಿ ಬೆಲೆ#Vegetable Price ಹೆಚ್ಚಳ ಆಗಿದ್ದು, ಜನರ ಜೇಬು ಸುಡುತ್ತಿದೆ. ಅದರಲ್ಲಿಯೂ ಟೊಮೆಟೊಗಳು#Tomato ನೋಡಲು ಮಾತ್ರ ಸುಂದರವಾಗಿ ಕಾಣುತ್ತಿವೆ. ಖರೀದಿ ಮಾಡಲು ಹೋದಾಗ ಕೆಂಡದಂತೆ ಸುಡುತ್ತಿವೆ. ಇದೀಗ ಮೀನು#Fish ಗಳ ಬೆಲೆ#Price ಸಹ ಏರಿಕೆಯಾಗಿದೆ. ಕಳೆದ ತಿಂಗಳಿಗೆ ಹೋಲಿಕೆ ಮಾಡಿದ್ರೆ ಶೇ.30-40 ರಷ್ಟು ಬೆಲೆ ಏರಿಕೆ ಕಂಡಿದೆ ಎಂದು ಮಾರಾಟಗಾರರು ಹೇಳುತ್ತಾರೆ. ಜೂನ್ ನಿಂದ ಆಗಸ್ಟ್ ತಿಂಗಳಲ್ಲಿ ಮೀನುಗಳು ಮರಿ ಸಮಯವಾಗಿರುತ್ತೆ. ಈ ಅವಧಿಯಲ್ಲಿ ಆಳ ಸಮುದ್ರ ಮೀನುಗಾರಿಕೆಗೆ ನಿಷೇಧ ಹಾಕಲಾಗಿರುತ್ತದೆ.

Advertisement

ಈ ಮೂರು ತಿಂಗಳಿನಲ್ಲಿ ಫೂರೈಕೆಯ ಪ್ರಮಾಣವು ಕಡಿಮೆ ಇದೆ. ಆದ್ರೆ ಬೇಡಿಕೆಯ ಪ್ರಮಾಣ ಶೇ.30ಕ್ಕಿಂತ ಹೆಚ್ಚಿದೆ. ಈ ಹಿನ್ನೆಲೆ ಮೀನು ಬೆಲೆ ಏರಿಕೆಯಾಗಿದೆ. ರಾಜ್ಯಕ್ಕೆ ಹೊರ ರಾಜ್ಯಗಳಿಂದ‌ ಮೀನು ರಫ್ತು ಬರಬೇಕಿದೆ. ಸದ್ಯ ಒರಿಸ್ಸಾ, ವಿಶಾಖಪಟ್ಟಣಂ, ನಾಗಪಟ್ಟಣಂ, ಕನ್ಯಾಕುಮಾರಿ, ಕೇರಳ ಭಾಗದಿಂದ ಮೀನು ಬರುತ್ತಿದೆ. ಈ ಹಿಂದೆ ಮಂಗಳೂರು, ಮಲ್ಪೆ, ಕಾರವಾರ, ದಂಗೊಡ್ಡಿ, ಭಟ್ಕಳ ಭಾಗದಿಂದ ಬರುತ್ತಿತ್ತು. ಮೀನುಗಾರಿಕೆಗೆ ನಿರ್ಬಂಧ ಹಿನ್ನೆಲೆ ಹೊರ ರಾಜ್ಯಗಳಿಂದ ಮೀನು ತರಿಸಿಕೊಳ್ಳಲಾಗುತ್ತಿದೆ.

ಯಾವ್ಯವ ಫಿಶ್ ಎಷ್ಟೆಷ್ಟು ದರ? 

Advertisement
ಮೀನಿನ ತಳಿಗಳು ಇಂದಿನ ದರ (ಕೆಜಿ- ರೂ.ಗಳಲ್ಲಿ) ಹಳೆಯ ದರ (ಕೆಜಿ- ರೂ.ಗಳಲ್ಲಿ)
ಬಂಗುಡೆ 350 120
ಬೂತಾಯಿ 250 140
ಕಪ್ಪು ಮಾಂಜಿ 1000 600
ಬಿಳಿ ಮಾಂಜಿ 1020 600
ಮದಿಮಾಲ್ 570 250
ಕೊಡ್ಡಾಯಿ 450 250
ಕಾಣಿ 600 400
ಇಂಡಿಯನ್ ಸಾಲ್ಮನ್ 910 650
ಸೀ ಪ್ರಾನ್ಸ್​ 650 500
ಟ್ಯೂನಾ 380 250
ಕ್ರಾಬ್ 450 300
ಸಿಲ್ವರ್ ಫಿಶ್ 250 180
ಕೆರೆ ಮೀನು 200 180
ಬರಗುಡ 450 300

ಹೋಟೆಲ್ ಊಟ ತಿಂಡಿ ದುಬಾರಿ – ಟೊಮೆಟೊ ರೇಟ್‌‌ ಕೇಜಿಗೆ 100ರಿಂದ 120ರ ಗಡಿ ದಾಟಿದೆ. ಹೀಗಾಗಿ ಬೆಂಗಳೂರಲ್ಲಿ ಹೋಟೆಲ್ ಊಟ-ತಿಂಡಿ ದರ ಕೂಡ ದುಬಾರಿ ಆಗ್ತಿದೆ. ಊಟ ತಿಂಡಿ ದರ ಶೇಕಡಾ 10ರಷ್ಟು ಏರಿಸಲು ಹೋಟೆಲ್ ಮಾಲೀಕರ ಸಂಘ ನಿರ್ಧರಿಸಿದೆ. ಟೊಮೆಟೊ ಬೆಲೆ ಇಳಿಕೆ ಆಗೋವರೆಗೂ ಹೋಟೆಲ್‌‌‌ಗಳಲ್ಲಿ ಟೊಮೆಟೊ ಬಾತ್ ಹಾಗೂ ಕೆಚೆಪ್ ಸ್ಥಗಿತಗೊಳಿಸಲಾಗಿದೆ. ಬೆಂಗಳೂರಿನ 24 ಸಾವಿರ ಹೋಟೆಲ್‌‌ಗಳಲ್ಲಿ ಬೆಲೆ ಏರಿಕೆ ಆಗಲಿದೆ.

ಟೊಮೆಟೊ ಬೆಳೆಗೆ ಕಾವಲು – ಟೊಮೆಟೊ ಬೆಲೆ ಹೆಚ್ಚಾಗಿರುವ ಕಾರಣ ಹಲವೆಡೆ ಟೊಮೆಟೊ ಕಳ್ಳತನ ಪ್ರಕರಣಗಳು ವರದಿ ಆಗ್ತಿವೆ. ಹೀಗಾಗಿ ಅಂಗಡಿ ಮಂಡಿಯಲ್ಲೂ ಟೊಮೆಟೊಗೆ ಭಾರೀ ಭದ್ರತೆ ಒದಗಿಸಲಾಗಿದೆ. ಕೋಲಾರದಲ್ಲಿ ಹಗಲು ರಾತ್ರಿ ಜಮೀನಿನಲ್ಲೇ ಟೆಂಟ್‌ ಹಾಕಿಕೊಂಡು ರೈತರು ಕಾವಲು ಕಾಯುತ್ತಿದ್ದಾರೆ.

Advertisement
Advertisement
Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ನಿಮಗಿದು ಗೊತ್ತೇ? : ಆರೋಗ್ಯಕ್ಕಾಗಿ ಭೂ ವಿದ್ಯುತ್ ಆಯಸ್ಕಾಂತದ ಮಹತ್ವ… : ಅರ್ಥಿಂಗ್/ಗ್ರೌಂಡಿಂಗ್ ಹಾಗೂ ಆರೋಗ್ಯ!
April 29, 2024
3:30 PM
by: The Rural Mirror ಸುದ್ದಿಜಾಲ
ಎರಡನೇ ಹಂತದ ಮತದಾನಕ್ಕೆ ರಾಜ್ಯದಲ್ಲಿ ಭರ್ಜರಿ ತಯಾರಿ : ಭಾರತ ವಿಶ್ವದ ಟಾಪ್ 3 ಸ್ಥಾನಕ್ಕೇರಿಸುವ ಶಕ್ತಿ ನಿಮ್ಮ ಮತಕ್ಕಿದೆ : ಮೋದಿ
April 29, 2024
2:51 PM
by: The Rural Mirror ಸುದ್ದಿಜಾಲ
ರೈತರ ಪಾಲಿಗೆ ನೆರವಾದ ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆ : 17ನೇ ಕಂತಿನ ಹಣ ರೈತರ ಖಾತೆಗೆ ಯಾವಗ ಬರುತ್ತೆ..?
April 29, 2024
2:40 PM
by: The Rural Mirror ಸುದ್ದಿಜಾಲ
ಇವರು ಎಲ್ಲಾ ಕುಂದುಕೊರತೆಗಳ ನಡುವೆಯೂ ಮತದಾನ ಮಾಡ್ತಾರೆ…! | ಅವರು ಎಲ್ಲಾ ಸೌಕರ್ಯ ಇದ್ದರೂ ಮತದಾನ ಮಾಡಲಾರರು..!
April 29, 2024
1:59 PM
by: ಪ್ರಬಂಧ ಅಂಬುತೀರ್ಥ

You cannot copy content of this page - Copyright -The Rural Mirror