MIRROR FOCUS

#KSRTC | KSRTCಗೆ ಹೆಮ್ಮೆಯ ಗರಿ | ಏಷ್ಯಾದಲ್ಲೇ ಅತ್ಯುತ್ತಮ ಉದ್ಯೋಗದಾತ ಸಂಸ್ಥೆ ನಮ್ಮ KSRTC

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಕರ್ನಾಟಕ ರಸ್ತೆ ಸಾರಿಗೆ ನಿಗಮ #KSRTC ಇದು ರಾಜ್ಯದ ಜೀವ ನಾಡಿ. ಪ್ರತಿ ದಿನ ಲಕ್ಷ ಲಕ್ಷ ಜನರನ್ನು ಒಂದೂರಿಂದ ಮತ್ತೊಂದು ಊರಿಗೆ ಕೊಂಡೊಯ್ಯುವ ಕೆಲಸವನ್ನು ಮಾಡುತ್ತದೆ. ಅದರಲ್ಲಿ ದುಡಿಯುವ ಉದ್ಯೋಗಿಗಳಂತು ಲಕ್ಷಗಟ್ಟಲೆ. ಅವರು ಅವರ ಜೀವನವನ್ನು ಕಟ್ಟಿಕೊಂಡು, ಇತರರ ಜೀವ ಕಾಪಾಡುವ ಜವಾಬ್ದಾರಿಯನ್ನು ಹೊಂಂದಿರುತ್ತಾರೆ. ಈವರ ಸೇವೆಯನ್ನು ಮನಗಂಡು ನಮ್ಮ ಹೆಮ್ಮೆಯ ಕೆಎಸ್ಸಾರ್ಟಿಸಿ 2023ನೇ ಸಾಲಿನ ಏಷ್ಯಾದ ಅತ್ಯುತ್ತಮ ಉದ್ಯೋಗದಾತ ಬ್ರ್ಯಾಂಡ್ ಪ್ರಶಸ್ತಿಗೆ ಆಯ್ಕೆಯಾಗಿದೆ.

Advertisement

ಎಷ್ಟೋ ಜನ#KSRTC ಸೇವೆಯನ್ನು ನಂಬಿಕೊಂಡಿದ್ದಾರೆ. ದಿನ ನಿತ್ಯ ಸಾಕಷ್ಟು ಜನ ಓಡಾಡುತ್ತಾರೆ. ಇಂತಹ KSRTCಗೆ ಮತ್ತೊಂದು ಗರಿ ಲಭಿಸಿದೆ. ಹೌದು 2023ನೇ ಸಾಲಿನ ಏಷ್ಯಾದ ಅತ್ಯುತ್ತಮ ಉದ್ಯೋಗದಾತ ಬ್ರ್ಯಾಂಡ್‍  ಆಯ್ಕೆಯಾಗಿದೆ. ಶಕ್ತಿ ಯೋಜನೆ ಬಳಿಕ KSRTC ಎಲ್ಲೆಡೆ ಸದ್ದು ಮಾಡ್ತಿದೆ. ಉದ್ಯೋಗ ಕಲ್ಪಿಸುವ ಉತ್ತಮ ಬ್ರ್ಯಾಂಡ್ ಆಗಿಯೂ KSRTC ಗುರುತಿಸಿಕೊಂಡಿದೆ. KSRTCಯು 2023 ನೇ ಸಾಲಿನ ಏಷ್ಯಾದ ಅತ್ಯುತ್ತಮ ಉದ್ಯೋಗದಾತ ಬ್ರಾಂಡ್ ಪ್ರಶಸ್ತಿಗೆ ಆಯ್ಕೆಯಾಗಿರುವ ಬಗ್ಗೆ, ಕರ್ನಾಟಕ ರಾಜ್ಯ ಸಾರಿಗೆ ನಿಗಮ ಟ್ವೀಟ್ ಮಾಡಿದೆ.

 

 

‘KSRTC 2023ನೇ ಸಾಲಿನ ಏಷ್ಯಾದ ಅತ್ಯುತ್ತಮ ಉದ್ಯೋಗದಾತ ಬ್ರಾಂಡ್ ಪ್ರಶಸ್ತಿಗೆ ಅತ್ಯುತ್ತಮ ಮಾನವ ಸಂಪನ್ಮೂಲ ಉಪಕ್ರಮಗಳ ಅನುಷ್ಠಾನ ವರ್ಗದಲ್ಲಿ ಆಯ್ಕೆಯಾಗಿರುತ್ತದೆ’. ಎಂದು ಟ್ವೀಟ್ ಮಾಡಿದೆ ಸಂಸ್ಥೆ. ಅಲ್ಲದೇ, ‘ಇಂದು 14ನೇ ಆವೃತ್ತಿಯ 18ನೇ ಉದ್ಯೋಗದಾತ ಬ್ರಾಂಡಿಂಗ್ ಪ್ರಶಸ್ತಿ ಪ್ರಕಟಿಸಲಾಗಿದ್ದು ನಿಗಮ ಈ ಪ್ರಶಸ್ತಿಗೆ ಆಯ್ಕೆಯಾಗಿರುತ್ತದೆ. ಪ್ರಶಸ್ತಿ ಪ್ರದಾನ ಸಮಾರಂಭವು ಆಗಸ್ಟ್ 17ರಂದು ಸಿಂಗಾಪೂರ್ ನಲ್ಲಿ ನಡೆಯಲಿದೆ.’ ಎಂದು ಟ್ವೀಟ್ ಮಾಡಿದೆ. KSRTC ಸಂಸ್ಥೆಯೂ ಕೋಟ್ಯಾಂತರ ಜನರಿಗೆ ಆಸರೆಯಾಗಿದೆ. ಅದೇ ರೀತಿ . ಉದ್ಯೋಗ ಕಲ್ಪಿಸುವ ಉತ್ತಮ ಬ್ರ್ಯಾಂಡ್ ಆಗಿಯೂ ಹೊರಹೊಮ್ಮಿದೆ. ಅದಕ್ಕೆ ಸಂಸ್ಥೆ ಖುಷಿಯಲ್ಲಿದೆ. KSRTC ಜನರಿಗೆ ಇದೇ ರೀತಿ ಸೇವೆ ಮುಂದುವರಿಸಲಿ. ಇನ್ನು ಹೆಚ್ಚು ಗುರುತಿಸಿಕೊಳ್ಳಲಿ ಎಂದು ಸಾರ್ವಜನಿಕರು ಹೇಳಿದ್ದಾರೆ. ವಿಶ್ ಮಾಡಿದ್ದಾರೆ.

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ದೇವಸ್ಥಾನದ ಬ್ರಹ್ಮಕಲಶೋತ್ಸವಗಳಲ್ಲಿ “ರಾಜಕೀಯದ ಚಪ್ಪಲು” ಹೊರಗಿಡಬೇಕು |

ಒಂದು ದೇವಸ್ಥಾನದ ಎಂದರೆ ಶ್ರದ್ಧೆಯ ಕೇಂದ್ರ, ಒಂದು ಊರಿನ ದೇವಸ್ಥಾನ ಎಂದರೆ ಸೌಹಾದರ್ತೆಯ…

2 minutes ago

ಮಲ್ಲಿಗೆ ಕೃಷಿ ತರಬೇತಿ ಕಾರ್ಯಾಗಾರ

ಅಜ್ಜಾವರ ಪಂಚಾಯತ್ ಸಭಾಂಗಣದಲ್ಲಿ ಮಲ್ಲಿಗೆ ಕೃಷಿ ತರಬೇತಿ ನಡೆಯಿತು.

8 hours ago

ಅಡಿಕೆ ಕಳ್ಳಸಾಗಾಣಿಕೆಯ ಮತ್ತೊಂದು ಪ್ರಕರಣ ಪತ್ತೆ | ಹೆಚ್ಚುತ್ತಿರುವ ಬರ್ಮಾ ಅಡಿಕೆ ಸಾಗಾಟ |

ಮಿಜೋರಾಂನ ಚಂಫೈ ಜಿಲ್ಲೆಯ ಕಾಡಿನಲ್ಲಿ ದಾಸ್ತಾನು ಇರಿಸಿದ್ದ 321 ಚೀಲ ಅಡಿಕೆಯನ್ನು ಅಸ್ಸಾಂ…

10 hours ago

ಯೇನೆಕಲ್ಲು ಬಚ್ಚನಾಯಕ ನಮ್ಮ ಕಾರ್ಣಿಕದ ಆರಾಧ್ಯ ಶಕ್ತಿ

ಕಡಬ ತಾಲೂಕಿನ ಯೇನೆಕಲ್ಲು ಬಚ್ಚನಾಯಕ ದೈವಸ್ಥಾನದಲ್ಲಿ ವಾರ್ಷಿಕ ನೇಮ ನಡೆಯುತ್ತಿದೆ. ಈ ಸಂದರ್ಭಹವ್ಯಾಸಿ…

11 hours ago

2030ರ ವೇಳೆಗೆ 170 ಮಿಲಿಯನ್ ಉದ್ಯೋಗ ಸೃಷ್ಟಿ | ಇಂಧನ ಕ್ಷೇತ್ರದಲ್ಲಿ ಭಾರತ ಮೂರನೇ ಅತಿದೊಡ್ಡ ರಾಷ್ಟ್ರ

ನವೀಕರಿಸಬಹುದಾದ  ಇಂಧನ ಕ್ಷೇತ್ರದಲ್ಲಿ ಭಾರತ ಮೂರನೇ ಅತಿದೊಡ್ಡ ರಾಷ್ಟ್ರವಾಗಿದ್ದು, ಹಸಿರು ಪರಿವರ್ತನೆಯಂತಹ  ಕ್ಷೇತ್ರದಲ್ಲಿ…

16 hours ago