Advertisement
MIRROR FOCUS

ಬೀದಿ ಬದಿಗೆ ಬಂದ ಹೋರಿಗಳು | ವಾಹನ ಸವಾರರಿಗೂ ಸಂಕಷ್ಟ | ತೋಟದವರಿಗೂ ಕಾಟ…! |

Share

ಗೋವು ಉಳಿಯಬೇಕು, ಆದರೆ ನಮ್ಮ ಮನೆಯಲ್ಲಿ ಅಲ್ಲ.. ಪಕ್ಕದ ಮನೆಯಲ್ಲಿ…!, ಈಗ ಅದೂ ಅಲ್ಲ, ರಸ್ತೆ ಬದಿಯಲ್ಲಿ ಎಂಬ ಹಾಗೆ ಆಗಿದೆ ಕಾಲ. ರಸ್ತೆ ಬದಿಗಳಲ್ಲಿ ಹೋರಿಗಳು ಬಂದು ಇಳಿಯುತ್ತವೆ, ಸಮೀಪದ ಮನೆಗಳಿಗೆ, ತೋಟಗಳಿಗೂ ಈಗ ಸಂಕಷ್ಟ. ವಾಹನ ಸವಾರರಿಗೂ ಕಷ್ಟ ಕಷ್ಟ..!. ಈಚೆಗೆ ಸುಳ್ಯದ ಎಲಿಮಲೆ ಬಳಿಯಲ್ಲಿ ಕೆರೆಗೆ ಹೋರಿ ಬಿದ್ದು ಸಂಕಷ್ಟ ಅನುಭವಿಸಿದೆ.

ಸುಳ್ಯದ ಹಲವು ಕಡೆಗಳಲ್ಲಿ ಹೋರಿ ಕರುಗಳಲ್ಲಿ ರಸ್ತೆ ಬದಿ, ಕಾಡಿನ ಬದಿಗಳಲ್ಲಿ , ಪೇಟೆ ಬದಿಗಳಲ್ಲಿ ಬಿಟ್ಟು ಹೋಗುವವರ ಸಂಖ್ಯೆ ಹೆಚ್ಚಾಗಿದೆ. ಈಚೆಗೆ ಎಲಿಮಲೆ ಬಳಿಯ ಚಳ್ಳ ಗೋವಿಂದ ಭಟ್ ಅವರ ತೋಟದ ಕೆರೆಯಲ್ಲಿ ಹೋರಿ ಕರುವೊಂದು ಕೆರೆಗೆ ಬಿದ್ದಿತ್ತು. ನಂತರ ಸ್ಥಳೀಯರ ಸಹಕಾರದಿಂದ ಮೇಲಕ್ಕೆತ್ತಲಾಯಿತು.ಕೆಲವು ಸಮಯದ ಹಿಂದೆ ರಸ್ತೆ ಬದಿಯಲ್ಲಿದ್ದ ಹೋರಿಯೊಂದು ಗುತ್ತಿಗಾರು ಬಳಿಯ ವಳಲಂಬೆಯಲ್ಲಿ ಬ್ಯಾರೆಲ್‌ ಒಳಗೆ ತಲೆಹಾಕಿ ಒದ್ದಾಟ ನಡೆಸಿತ್ತು. ಬಳಿಕ ಅಟೋ ಚಾಲಕರು ತೆರವುಗೊಳಿಸಲು ಹರಸಾಹಸ ಪಟ್ಟಿದ್ದರು. ಕೆಲವು ಸಮಯದ ಹಿಂದೆ ಉಬರಡ್ಕದ ಬಳಿಯೂ ಹೊಳೆಯಲ್ಲಿ ಹೋರಿ ಕರು ಕೆಸರಿನಲ್ಲಿ ಹೋತು ಹೋಗಿ ಪರದಾಟ ನಡೆಸಿತ್ತು.

ಹೀಗೆ ಕೆಲವು ಹೋರಿ ಕರುಗಳನ್ನು ಅಲ್ಲಲ್ಲಿ  ಕೆಲವೊಂದು ಅನಾಮಧೇಯರು ಬಿಟ್ಟು ಹೋಗುತ್ತಿದ್ದಾರೆ. ಈ ಹೋರಿಗಳು ಸಂಧಿಗಳಲ್ಲಿ ನುಗ್ಗಿ, ತರಕಾರಿ ಹಾಗೂ ಕೃಷಿ ಕಾರ್ಯಗಳಿಗೆ ಹಾನಿ ಮಾಡುತ್ತಿದೆ. ರಸ್ತೆ ಬದಿ ವಾಹನಗಳಿಗೂ ಅಡ್ಡ ಬಂದ ದ್ವಿಚಕ್ರ ಸವಾರರಿಗೂ ಸಂಕಷ್ಟವಾಗಿದೆ. ಹೋರಿ ಸಾಕಲಾಗದೇ ರಸ್ತೆಯಲ್ಲಿ ಬಿಡುವವರ ಕಾಟ ಹೆಚ್ಚಾಗಿದೆ.

ಇದಕ್ಕಾಗಿ ಆಯಾ ಗ್ರಾಮ ಪಂಚಾಯತ್‌ ಆ ಭಾಗದ ಗೋಮಾಳವನ್ನು ಗುರುತಿಸಿ ಗೋಪಾಲಕರ ಅನುಕೂಲಕ್ಕೆ ಅನುವು ಮಾಡಿ ಕೊಡಬೇಕಾಗಿದೆ. ಕೆಲವು ಕಡೆ ಲಭ್ಯವಿರುವ 50 ಎಕರೆಯಷ್ಟು ಗೋಮಾಳ ಯಾರಿಗೂ ಉಪಕಾರಕ್ಕೆ ಇಲ್ಲದಂತಾಗಿದೆ. ರಸ್ತೆ ಬದಿ ಇರುವ ಗೋವುಗಳನ್ನು ಇಂತಹ ಗೋಮಳಗಳಲ್ಲಿ ಬಿಡಬಹುದಾಗಿದೆ. ಇದಕ್ಕಾಗಿ ಗೋಮಳಗಳ ರಕ್ಷಣೆ ಹಾಗೂ ರಸ್ತೆ ಬದಿ ಹೋರಿಗಳನ್ನು  ಬಿಡುವವರ ಸಂಖ್ಯೆಯೂ ಕಡಿಮೆ ಆಗಬೇಕಿದೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಅಡಿಕೆ ಎಲೆ ಚುಕ್ಕಿ ರೋಗ ನಿರ್ವಹಣೆ | ಗುತ್ತಿಗಾರಿನ ಪ್ರಾತ್ಯಕ್ಷಿಕೆ ತೋಟಕ್ಕೆ ಸಿಪಿಸಿಆರ್‌ಐ ನಿರ್ದೇಶಕರ ಭೇಟಿ | ವೈಜ್ಞಾನಿಕ ಕ್ರಮಗಳು ರೈತರಿಗೆ ಆಶಾಕಿರಣ

ಅಡಿಕೆ ಎಲೆಚುಕ್ಕಿ ರೋಗ ನಿಯಂತ್ರಣಕ್ಕೆ ಸಿಪಿಸಿಆರ್‌ಐ ಪ್ರಾತ್ಯಕ್ಷಿಕೆ ಮುಂದುವರಿದಿದೆ. ವೈಜ್ಞಾನಿಕ ಕ್ರಮಗಳು ಮತ್ತು…

4 hours ago

ದೇಶದ ಹಲವು ರಾಜ್ಯಗಳಲ್ಲಿ ಭಾರಿ ಮಳೆ – ಆಲಿಕಲ್ಲು ಮಳೆಯಿಂದ ರೈತರ ಬೆಳೆ ನಷ್ಟ

ದೇಶದ ಹಲವು ರಾಜ್ಯಗಳಲ್ಲಿ ಭಾರಿ ಮಳೆ ಮತ್ತು ಆಲಿಕಲ್ಲು ಮಳೆಯಿಂದ ಬೆಳೆಗಳಿಗೆ ಹಾನಿಯಾಗಿದೆ.…

16 hours ago

ಹವಾಮಾನ ವರದಿ | 05-04-2026 | ರಾಜ್ಯದಲ್ಲಿ ಮಳೆ ಕಡಿಮೆಯ ಸೂಚನೆ – ಕರಾವಳಿ-ಮಲೆನಾಡಿನಲ್ಲಿ ತುಂತುರು ಮಳೆ, ರಾಜ್ಯಾದ್ಯಂತ ಬಿಸಿಲು ಏರಿಕೆ..!

ಕರ್ನಾಟಕದಲ್ಲಿ ಏಪ್ರಿಲ್ 6ರಿಂದ ಮಳೆ ಕಡಿಮೆಯಾಗಲಿದೆ. ರಾಜ್ಯಾದ್ಯಂತ ಬಿಸಿಲು ಮತ್ತು ತಾಪಮಾನ ಏರಿಕೆ…

1 day ago

ಸಾರ್ವಜನಿಕ ಸ್ಥಳಗಳಲ್ಲಿ ಶಿಸ್ತು ಮತ್ತು ನಾಗರಿಕ ಸಂಸ್ಕೃತಿ – ಸಮಾಜದ ನಿಜವಾದ ಅಳತೆ

ಸಾರ್ವಜನಿಕ ಸ್ಥಳಗಳಲ್ಲಿ ಶಿಸ್ತು ಸಮಾಜದ ನಿಜವಾದ ಸಂಸ್ಕೃತಿಯನ್ನು ತೋರಿಸುತ್ತದೆ. ಸಣ್ಣ ಸಣ್ಣ ಸರಿಯಾದ…

2 days ago

ಗುಜ್ಜೆ-ಕಡಲೆ ಗಸಿ – ಸರಳ ಪದಾರ್ಥಗಳಿಂದ ಸೊಗಸಾದ ಸಾಂಪ್ರದಾಯಿಕ ಸವಿರುಚಿ!

ಗುಜ್ಜೆ ಮತ್ತು ಕಡಲೆ ಬಳಸಿ ತಯಾರಿಸುವ ಸಾಂಪ್ರದಾಯಿಕ ಗಸಿ ರುಚಿಕರ ಆಹಾರ. ಚಪಾತಿ…

3 days ago