ದೀರ್ಘಕಾಲಿಕ ಚರ್ಮಕಾಯಿಲೆ ಸೋರಿಯಾಸಿಸ್ ನಿಂದ ಬಳಲುತ್ತಿದ್ದೀರಾ..? | ಈ ಕಾಯಿಲೆಗಿದೆ ಆಯುರ್ವೇದದಲ್ಲಿ ಚಿಕಿತ್ಸೆ |

August 12, 2023
3:01 PM
ಸೋರಿಯಾಸಿಸ್ ರೋಗದಲ್ಲಿ ಹಲವು ಪ್ರಕಾರಗಳಿದ್ದು, ದೇಹದ ಯಾವುದೇ ಭಾಗದಲ್ಲಿ ಎಲ್ಲಾ ವಯಸ್ಸಿನಲ್ಲೂ ಕಾಣಿಸಿಕೊಳ್ಳಬಹುದು. ಸಾಮಾನ್ಯವಾಗಿ ತಲೆಬುರುಡೆಯ ಮೇಲೆ ಬೆನ್ನು ಹೊಟ್ಟೆಯ ಮೇಲೆ ಹಾಗೂ ಮೊಣಕೈ ಮೊಣಕಾಲುಗಳಲ್ಲಿ ಈ ಚರ್ಮ ವ್ಯಾಧಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ

ಸೋರಿಯಾಸಿಸ್ #Psoriasis ದೀರ್ಘಕಾಲಿಕವಾಗಿ ಕಾಡುವ ಚರ್ಮ ರೋಗಗಳಲ್ಲಿ ಒಂದು ಕಾಯಿಲೆಯಾಗಿದೆ. ಈ ರೋಗವು ಚರ್ಮವನ್ನು ವಿರೂಪಗೊಳಿಸಿ, ರೋಗಿ ಮಾನಸಿಕ ಖಿನ್ನತೆಗೆ ಒಳಗಾಗಿಸುವುದು. ಸೋರಿಯಾಸಿಸ್ ರೋಗಕ್ಕೆ ಯಾವುದೇ ನಿರ್ದಿಷ್ಟವಾದ ಕಾರಣ ತಿಳಿದು ಬಂದಿಲ್ಲ. ಆದರೂ ಹಲವಾರು ಕಾರಣಗಳಿಂದ ರೋಗದ ಲಕ್ಷಣವು ಉಲ್ಬಣಿಸುಸುತ್ತದೆ.

Advertisement

ಸೋರಿಯಾಸಿಸ್ ರೋಗದಲ್ಲಿ ಹಲವು ಪ್ರಕಾರಗಳಿದ್ದು, ದೇಹದ ಯಾವುದೇ ಭಾಗದಲ್ಲಿ ಎಲ್ಲಾ ವಯಸ್ಸಿನಲ್ಲೂ ಕಾಣಿಸಿಕೊಳ್ಳಬಹುದು.  ಸಾಮಾನ್ಯವಾಗಿ ತಲೆಬುರುಡೆಯ ಮೇಲೆ ಬೆನ್ನು ಹೊಟ್ಟೆಯ ಮೇಲೆ ಹಾಗೂ ಮೊಣಕೈ ಮೊಣಕಾಲುಗಳಲ್ಲಿ ಈ ಚರ್ಮ ವ್ಯಾಧಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.  ಈ ರೋಗದಲ್ಲಿ ಚರ್ಮಕಣಗಳ ಉತ್ಪತ್ತಿಯ ವೇಗವು ಹೆಚ್ಚಾಗಿ ಚರ್ಮವು ಕೆಂಪಾಗಿ ಒಣಗಿದಂತಾಗಿ ಅತಿಯಾದ ತುರಿಕೆಯೊಂದಿಗೆ ಚರ್ಮದ ಮೇಲ್ಭಾಗದಲ್ಲಿ ಹೊಟ್ಟಿನಂತ ಪದರ ಉಂಟಾಗುತ್ತದೆ. ಸಣ್ಣದೊಂದು ಗುಳ್ಳೆ ಅಥವಾ ಗಾಯದ ಹಾಗೆ ಪ್ರಾರಂಭವಾಗಿ ಕ್ರಮೇಣ ತನ್ನ ಗಾತ್ರವನ್ನು ವಿಸ್ತಾರ ಗೊಳಿಸುತ್ತಾ ದೇಹದ ಇತರ ಭಾಗಗಳಿಗೆ ಹರಡುತ್ತದೆ. ಕೆಲವೊಮ್ಮೆ ಅತಿಯಾಗಿ ಕೆರೆದುಕೊಂಡಾಗ ರಕ್ತ ಬರುವ ಸಾಧ್ಯತೆ ಇದೆ. ಚಿಕಿತ್ಸೆ ಪಡೆಯದೇ ಇದ್ದಲ್ಲಿ ಬಹಳ ಸಮಯದ ನಂತರ ಉಗುರುಗಳನ್ನು ಹಾಗೂ ಮೂಳೆಯ ಸಂಧಿಗಳನ್ನು ಹಾನಿ ಮಾಡಿ ಸೋರಿಯಾಟಿಕ್ ಆರ್ಥ್ರೈಟಿಸ್ ಸಂಭವಿಸಬಹುದು.ಕೆಲವು ಔಷಧಿಗಳ ಸೇವನೆಯಿಂದ ಹಾಗೂ ಶ್ವಾಸಕೋಶದಲ್ಲಿ ಸೊಂಕಿನಿಂದ ಸೋರಿಯಾಸಿಸ್ ರೋಗ ಉಲ್ಬಣಗೊಳ್ಳುವುದು.

ಅನುವಂಶಿಕ ಅಥವಾ ಜೆನೆಟಿಕ್ಅಂಶ ಸಾಧ್ಯತೆ ಈ ರೋಗದಲ್ಲಿ ಕಡಿಮೆಯಾದರೂ ತಂದೆ ಅಥವಾ ಅಥವಾ ತಾಯಿ ಒಬ್ಬರಲ್ಲಿ ಸೋರಿಯಾಸಿಸ್ ರೋಗಿಯಾಗಿದ್ದರೆ ಶೇಕಡ 15% ಮತ್ತು ಇಬ್ಬರು ಸೋರಿಯಾಸಿಸ್ ಸ್ಪೀಡಿತರಾಗಿದ್ದಲ್ಲಿ ಶೇಕಡ 50% ರೋಗವು ಮಕ್ಕಳಿಗೆ ಬರುವ ಸಾಧ್ಯತೆಗಳಿವೆ.

ಈ ರೋಗದಲ್ಲಿ ಆಹಾರ ಪದ್ಧತಿ ಹಾಗೂ ಸೇವಿಸುವ ಕ್ರಮವು ಮಹತ್ವ ಪಾತ್ರವನ್ನು ವಹಿಸುತ್ತದೆ. ಅತಿಯಾದ ಮಾಂಸಾಹಾರ ಸೇವನೆ,ಜಿಡ್ಡಿನ ಪದಾರ್ಥ,ನಂಜಿನ ಪದಾರ್ಥಗಳಾದ ಬದನೆಕಾಯಿ, ಮೂಲಂಗಿ, ಮೀನು, ಮೊಟ್ಟೆ, ಮಾಂಸ, ಹುರುಳಿಕಾಳುಗಳು, ಕಫ ವೃದ್ಧಿಸುವ ಪದಾರ್ಥಗಳಾದ ಮೊಸರು ಉದ್ದು ವಿರುದ್ಧ ಆಹಾರ. ಉದಾಹರಣೆಗೆ ಮೊಸರಿನೊಟ್ಟಿಗೆ ಅಥವಾ ಹಾಲಿನೊಟ್ಟಿಗೆ ಮೀನಿನ ಸೇವನೆ, ಅತಿಯಾದ ಬಿಸಿ ಅನ್ನದ ಜೊತೆಗೆ ಐಸ್ ಕ್ರೀಮ್ ಸೇವನೆ. ಮಾನಸಿಕ ಒತ್ತಡ ,ಧೂಮಪಾನ ಮದ್ಯಪಾನ, ಈ ಎಲ್ಲಾ ಕಾರಣಗಳಿಂದ ದೇಹದಲ್ಲಿ ಕಫ ಮತ್ತು ವಾತ ದೋಷದ ವೃದ್ಧಿಯಾಗಿ ದೇಹದಲ್ಲಿ ಅಸಮತೋಲನ ಉಂಟಾಗಿ ಸರ್ವಧಾತುಗಳಲ್ಲಿ ಕಲ್ಮಶಗಳು ಶೇಖರಣೆಗೊಂಡು ಸೋರಿಯಾಸಿಸ್ ರೋಗವನ್ನು ಉತ್ಪತ್ತಿ ಮಾಡುತ್ತದೆ.

ಚಿಕಿತ್ಸೆ: ದೀರ್ಘಕಾಲಿಕವಾಗಿ ಮತ್ತೆ ಮತ್ತೆ ಕಾಡುವ ಈ ರೋಗಕ್ಕೆ ದೀರ್ಘಕಾಲ ಚಿಕಿತ್ಸೆ ಅಗತ್ಯ.ರೋಗದ ಪ್ರಾರಂಭದ ಅವಸ್ಥೆಯಲ್ಲಿ ಚಿಕಿತ್ಸೆ ತೆಗೆದುಕೊಳ್ಳುವುದು ಉತ್ತಮ. ಆಯುರ್ವೇದದಲ್ಲಿ ಯಾವುದೇ ಅಡ್ಡ ಪರಿಣಾಮವಿಲ್ಲದೆ ಪರಿಣಾಮಕಾರಿ ಚಿಕಿತ್ಸೆ ಸಾಧ್ಯವಿದ್ದು ವಿಶೇಷವಾಗಿ ದೇಹವನ್ನು ಶುದ್ಧೀಕರಿಸುವ ಪಂಚಕರ್ಮ ಚಿಕಿತ್ಸೆಯನ್ನು ಮಾಡುವುದರಿಂದ ಈ ರೋಗವನ್ನು ನಿಯಂತ್ರಿಸಬಹುದು. ಇದರಿಂದ ದೇಹದಲ್ಲಿರುವ ಕಲ್ಮಶಗಳನ್ನು ಹೊರ ಹಾಕುವುದರ ಮೂಲಕ ರೋಗದ ಪುನರುತ್ಪತ್ತಿಯನ್ನು ತಡೆಯಬಹುದು. ರೋಗದ ಸ್ಥಿತಿ ಹಾಗೂ ಲಕ್ಷಣಗಳಿಗೆ ಅನುಸಾರವಾಗಿ ಇತರ ಬಾಹ್ಯ ಚಿಕಿತ್ಸೆಗಳಾದ ತಕ್ರದಾರ, ಗಿಡಮೂಲಿಕೆಗಳ ಲೇಪನ, ಘ್ರತಪಾನ,( ಔಷಧಗಳಿಂದ ಸಂಸ್ಕಾರಿತ ತುಪ್ಪದ ಸೇವನೆ) ಕಷಾಯ ಪರಿಸೇಕ,ತೈಲಾoಭ್ಯಗ, ವಿರೇಚನ ಮೊದಲಾದ ಉತ್ತಮ ಚಿಕಿತ್ಸಾ ವಿಧಾನಗಳಿವೆ. ಪಥ್ಯಾಹಾರ ಸೇವನೆಯಿಂದ ರೋಗದ ಪುನರುತ್ಪತ್ತಿಯನ್ನು ತಡೆಗಟ್ಟಬಹುದು.

*ಸೋರಿಯಾಸಿಸ್ ನಲ್ಲಿ ಪಥ್ಯಾಹಾರ
*ಶುದ್ಧವಾದ ನೀರು ಎಳನೀರು ಮಜ್ಜಿಗೆ ಗಂಜಿ ಸೇವನೆ ಉತ್ತಮ
* ಸೌತೆಕಾಯಿ ಬೂದುಗುಂಬಳಕಾಯಿ ಹಾಗಲಕಾಯಿ ಪಡುವಲ ಕಾಯಿ ಸೋರೆಕಾಯಿ ಹೀರೆಕಾಯಿ ಒಂದೆಲಗ ಇವುಗಳನ್ನು ಉಪಯೋಗಿಸಬಹುದು
* ಹೆಸರು ಕಾಳು ಹೆಸರುಬೇಳೆ ಗೋಧಿ ಕೆಂಪು ಅಕ್ಕಿ ಹಳೆ ಅಕ್ಕಿ ಸೇವನೆ ಉತ್ತಮ
* ಅರಶಿನ ನೆಲ್ಲಿಕಾಯಿ ಕಲ್ಲಂಗಡಿ ಪಪ್ಪಾಯ ಹಣ್ಣುಗಳ ಸೇವನೆ
* ನಿತ್ಯ ತೈಲಾಭ್ಯಾಂಜನ ನಿತ್ಯ ಸ್ನಾನ ಸಮಯಕ್ಕೆ ಸರಿಯಾಗಿ ಹಿತಮಿತ ಆಹಾರ ಸೇವನೆ
* ಉತ್ತಮ ವ್ಯಾಯಾಮ ಯೋಗಾಸನ ಪ್ರಾಣಯಾಮ ಇವಳನ್ನು ದಿನನಿತ್ಯ ಅಳವಡಿಸುವುದರಿಂದ ಸೋರಿಯಾಸಿಸ್ ತಡೆಗಟ್ಟಬಹುದು
*ಸೋರಿಯಾಸಿಸ್ ನಲ್ಲಿ ಅಪಥ್ಯ * ಹುಳಿ, ಸಿಹಿ ಪದಾರ್ಥ,ಉಪ್ಪಿನ ಪದಾರ್ಥಗಳನು ಹೆಚ್ಚು ಸೇವಿಸಬಾರದು.ಬದನೆಕಾಯಿ ಮೂಲಂಗಿ ಬೆಂಡೆಕಾಯಿ ಅಣಬೆ ಮೀನು ಮೊಟ್ಟೆ ಮಾಂಸ ಉದ್ದು ಹುರುಳಿಕಾಳು ಪನ್ನೀರು ಮೊಸರು ಸೋರಿಯಾಸಿಸ್ ರೋಗಿಗಳು ಸೇವಿಸಬಾರದು
* ಹಗಲಿನಲ್ಲಿ ನಿದ್ರೆ ಮಾಡಬಾರದು
* ಸುಲಭ ಜೀರ್ಣವಲ್ಲದ ಆಹಾರವನ್ನು ಸೇವಿಸಬಾರದು ಹಾಗೂ ಆಹಾರ ಜೀರ್ಣವಾಗುವ ಮೊದಲೇ ಪುನಃ ಆಹಾರ ಸೇವನೆ ಮಾಡುವುದು. ಬಿಸಿಲಿನಲ್ಲಿ ಆಯಾಸಗೊಂಡ ತಕ್ಷಣ ತುಂಬಾ ತಣ್ಣನೆಯ ನೀರಿನ ಸೇವನೆ ತಂಪು ಪಾನೀಯಗಳ ಸೇವನೆ ತಣ್ಣೀರಿನ ಸ್ನಾನ ಮಾಡುವುದು ಒಳ್ಳೆಯದಲ್ಲ
ಬಾಳೆಹಣ್ಣು ಮಾವಿನ ಹಣ್ಣು ಹಲಸಿನ ಹಣ್ಣು ಸೀತಾಫಲ ಕಿತ್ತಳೆ ಇವು ಸಹ ಸೋರಿಯಾಸಿಸ್ ರೋಗಿಗಳಿಗೆ ಅಪಥ್ಯ.
ಸೋರಿಯಾಸಿಸ್ ರೋಗವನ್ನು ತಡೆಗಟ್ಟಲು ಆರಂಭದಲ್ಲೇ ವೈದ್ಯರ ಸಲಹೆ ಮೇರೆಗೆ ಚಿಕಿತ್ಸೆಯನ್ನು ತೆಗೆದುಕೊಳ್ಳುವುದು ಉತ್ತಮ.

Info : Dr.Jyothi K, Ayurvedic, Mangaluru

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಕುರುವಾವ್ ಕರುಪ್ ಆಜ್ಞೆಯಂತೆ ಅಗ್ನಿ ಸೇವೆ ಮಾಡುವ ಮಹಾವಿಷ್ಣುಮೂರ್ತಿ
April 12, 2025
12:31 PM
by: ದ ರೂರಲ್ ಮಿರರ್.ಕಾಂ
ಜೇನು ಕುಟುಂಬ ಉಳಿಸುವ ಅಭಿಯಾನ | ನಾಶವಾಗುವ ಮುನ್ನ ಎಚ್ಚೆತ್ತುಕೊಳ್ಳೋಣ
April 9, 2025
11:00 AM
by: ಎ ಪಿ ಸದಾಶಿವ ಮರಿಕೆ
ಸಾರ್ವಜನಿಕ ಬದುಕಿನಲ್ಲಿ ನಿರಾಸೆಯ ಸ್ಫೋಟ…
April 2, 2025
6:40 AM
by: ರಮೇಶ್‌ ದೇಲಂಪಾಡಿ
15 ದಶಲಕ್ಷ ಮಹಿಳೆಯರಿಗೆ ಸ್ತನ ಕ್ಯಾನ್ಸರ್ ತಪಾಸಣೆ | 200 ಡೇ-ಕೇರ್ ಕ್ಯಾನ್ಸರ್ ಕೇಂದ್ರ ಸ್ಥಾಪನೆ
April 1, 2025
8:20 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group