ಪುತ್ತೂರಿನ ಪರ್ಲಡ್ಕ ಅಂಗನವಾಡಿ ಗೇಟ್ ಬಳಿ ಮಣ್ಣು ರಾಶಿ ಹಾಕಿ ತಿಂಗಳು ಕಳೆದರೂ , ಸಂಬಂಧಪಟ್ಟ ಇಲಾಖೆಗಳಿಗೆ , ನಗರಸಭೆಗೆ ತಿಳಿಸಿದರೂ ತೆರವುಗೊಳಿಸಿರಲಿಲ್ಲ. ಇದರಿಂದ ಅಂಗನವಾಡಿ ವಿದ್ಯಾರ್ಥಿಗಳಿಗೆ ನಡೆಯಲಾರದಂತಹ ಸ್ಥಿತಿ ನಿರ್ಮಾಣವಾಗಿತ್ತು.
ಇಲಾಖೆಗಳಿಗೆ ಹೇಳಿದರೂ ಯಾವುದೇ ಕ್ರಮವಾಗದ ಹಿನ್ನೆಲೆಯಲ್ಲಿ ಜು 15 ರಂದು ಪುತ್ತಿಲ ಪರಿವಾರದ ವತಿಯಿಂದ ಶ್ರಮದಾನ ಮೂಲಕ ಮಣ್ಣು ಸಮತಟ್ಟುಗೊಳಿಸಲಾಯಿತು. ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ, ಪ್ರಮುಖರಾದ ಸುಧೀರ್ ಆಚಾರ್ಯ, ಪ್ರವೀಣ್ ಭಂಡಾರಿ , ದೀಕ್ಷಿತ್ , ಅನ್ವಿತ್ ರೈ, ಅನಿಲ್ ತೆಂಕಿಲ, ಉಮೇಶ್ ಗೌಡ, ಸುದೀರ್ ರೈ, ಮನೀಷ್ , ಸನ್ಮಿತ್ ಮೊದಲಾದವರು ಶ್ರಮದಾನದಲ್ಲಿ ಭಾಗವಹಿಸಿದ್ದರು.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Rural Mirror Special |
Subscribe Our Channel