ಪುತ್ತೂರು ಬಾಲವನ ಉನ್ನತ ಕಲಾ ಕೇಂದ್ರವಾಗಿಸಲು ಒತ್ತಾಯ | ರಂಗಾಯಣದ ಐದನೇ ಘಟಕ ಬಾಲವನದಲ್ಲಾಗಲಿ |

August 28, 2021
12:18 PM

ಪುತ್ತೂರು: ನಾಡಿನ ಹೆಸರಾಂತ ಪ್ರದೇಶ ಪುತ್ತೂರಿನ ಡಾ.ಶಿವರಾಮ ಕಾರಂತ ಬಾಲವನವು ಸಾಂಸ್ಕೃತಿಕ ಚಟುವಟಿಕೆಗಳ ಕೇಂದ್ರವಾಗಬೇಕು, ಪುತ್ತೂರಿನ ಕಲಾವಿದರನ್ನು ಗುರುತಿಸಿ ,ಅವರಿಗೆ ಉತ್ತಮ ಅವಕಾಶಗಳನ್ನು ಕೊಡುವಲ್ಲಿ ಹಾಗೂ ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುವ ಹಾಗೆ ಈ ತಾಣವನ್ನು ಉನ್ನತ ಕಲಾ ಕೇಂದ್ರವಾಗಿ ಮಾಡಬೇಕು ಮಾತ್ರವಲ್ಲ ಕರ್ನಾಟಕ ರಂಗಾಯಣದ ಐದನೇ ಘಟಕವನ್ನು ಪುತ್ತೂರಿನ ಬಾಲವನದಲ್ಲಾಗಬೇಕು ಎಂದು ವಿವೇಕಾನಂದ ಪದವಿ ಕಾಲೇಜು ಪುತ್ತೂರು, ಕರ್ನಾಟಕ ಸಂಘ ಪುತ್ತೂರು, ವಿದ್ಯಾರಶ್ಮಿ ವಿದ್ಯಾಸಂಸ್ಥೆ ಸವಣೂರು  , ಕಾಡು ಬಳಗ ಪುತ್ತೂರು, ಗಾನಸಿರಿ ಕಲಾ ಕೇಂದ್ರ ಪುತ್ತೂರು, ವರ್ಣಕುಟೀರ ಕಲಾ ಸಂಸ್ಥೆ ಪುತ್ತೂರು, ರಂಗ ದೀಪ ತಂಡ ಪುತ್ತೂರು ಇವರ ತಂಡ ಶಾಸಕ ಸಂಜೀವ ಮಟಂದೂರು ಅವರಿಗೆ ಮನವಿ ಸಲ್ಲಿಸಿದ್ದಾರೆ.

ಬಾಲವನದಲ್ಲಿ ರಂಗಾಸಕ್ತರಲ್ಲಿ ರಂಗ ಚಟುವಟಿಕೆಗಳನ್ನು ತರಬೇತಿ ಮಾಡವ ಸಲುವಾಗಿ ,ಸ್ಥಳೀಯ ಕಲಾವಿದರನ್ನು ಒಳಗೊಂಡ ಸಮಿತಿಯನ್ನು ರಚಿಸಬೇಕೆಂದು ಹಾಗೂ ಕರ್ನಾಟಕ ರಂಗಾಯಣದ ಐದನೇ ಘಟಕವನ್ನು ಪುತ್ತೂರಿನ ಬಾಲವನಕ್ಕೆ ತರಿಸಬೇಕು,ಉತ್ತಮ ಕಲಾವಿದರನ್ನು ಪುತ್ತೂರಿನಿಂದ ರೂಪಿಸಲು ಅವಕಾಶಗಳನ್ನು ಮಾಡಿಕೊಡಬೇಕು ಎಂಬುದು ಎಲ್ಲರ ಬೇಡಿಕೆಯಾಗಿದೆ ಎಂದು  ಈ ತಂಡ ಒತ್ತಾಯಿಸಿದೆ.

ಈ ಸಂಧರ್ಭದಲ್ಲಿ ನಗರ ವಂಡಲ ಬಿ. ಜೆ. ಪಿ ಅಧ್ಯಕ್ಷ ರಾದ ಪಿ. ಜಿ. ಜಗನ್ನಿವಾಸ್ ರಾವ್ ,ರಾಘವೇಂದ್ರ ಎ ಎಂ, ನ್ಯಾಯವಾದಿ ಶಶಿಧರ್ ಬಿ ಎನ್, ಕಿರಣ್ ಕುಮಾರ್ ಗಾನಸಿರಿ, ಪ್ರವೀಣ್ ವರ್ಣಕುಟೀರ, ವೀಣಾ ತಂತ್ರಿ, ಯಶೋದ , ಹಾಗೂ ವಸಂತ ಲಕ್ಷ್ಮಿ ಮೊದಲಾದವರಿದ್ದರು.

 

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಸರ್ಕಾರಿ ವೈದ್ಯರು ಆಸ್ಪತ್ರೆಗಳಲ್ಲಿ ಬೆಳಗ್ಗೆ 9 ಗಂಟೆಯಿಂದ 4 ಗಂಟೆಯವರೆಗೆ ಇರಬೇಕು- ಸಚಿವ ಶರಣಪ್ರಕಾಶ್ ಪಾಟೀಲ್
March 12, 2025
7:19 AM
by: The Rural Mirror ಸುದ್ದಿಜಾಲ
 ಕೃಷಿ ಉತ್ಪನ್ನಗಳ ದೇಸಿ ತಳಿಗಳು ಪೋಷಕಾಂಶಗಳಲ್ಲಿ ಸಮೃದ್ಧ
March 12, 2025
7:13 AM
by: The Rural Mirror ಸುದ್ದಿಜಾಲ
ಕೆಂಪು ಮೆಣಸಿನಕಾಯಿ ಬೆಳೆಗಾರರಿಗೆ ಸಂಕಷ್ಟ | ಬೆಂಬಲ ಬೆಲೆ ಯೋಜನೆ ರಾಜ್ಯಕ್ಕೂ ವಿಸ್ತರಿಸುವಂತೆ ಮುಖ್ಯಮಂತ್ರಿ ಪತ್ರ | ಕೇಂದ್ರದ ಗಮನ ಸೆಳೆದ ಸಚಿವರು |
March 12, 2025
7:10 AM
by: The Rural Mirror ಸುದ್ದಿಜಾಲ
ಅಕ್ರಮ ಮರಳು ಗಣಿಗಾರಿಕೆ | 5 ವರ್ಷಗಳಲ್ಲಿ 47 ಕೋಟಿ ರೂಪಾಯಿ ದಂಡ ಸಂಗ್ರಹ
March 12, 2025
6:58 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror