Advertisement
MIRROR FOCUS

QR ಕೋಡ್ ಬಳಸಿ ಕೆಲಸಕ್ಕೆ ಬೇಡಿಕೆ ಸಲ್ಲಿಕೆ | ಫಲಾನುಭವಿಗಳಿಗೆ ಶೀಘ್ರ ತಲುಪಲು ಸಹಕಾರಿ

Share

ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಆಧುನಿಕ ತಂತ್ರಜ್ಞಾನದಿಂದಾಗಿ ಫಲಾನುಭವಿಗಳನ್ನು ಶೀಘ್ರವಾಗಿ ತಲುಪುವಲ್ಲಿ ಯಶಸ್ವಿಯಾಗಿದೆ. ಮನ್ರೇಗಾ ಯೋಜನೆ ಅಡಿ ಅನ್ ಲೈನ್‌ನಲ್ಲಿ ಮೊಬೈಲ್ ಹಾಗೂ ಕ್ಯೂ ಆರ್ ಕೋಡ್ ಸಹಾಯದಿಂದಾಗಿ ಫಲಾನುಭವಿಗಳು ಕಚೇರಿ ಸುತ್ತುವ ಮತ್ತು ಸಮಯ ಪೋಲಾಗುವ ಸಮಸ್ಯೆಗಳಿಗೆ ಮುಕ್ತಿ ದೊರಕಿದೆ.

Advertisement
Advertisement
Advertisement
Advertisement

ವೈಯಕ್ತಿಕ ವಿಭಾಗದಲ್ಲಿ ಇಂಗು ಗುಂಡಿ, ಗಿಡ ನೆಡುವಿಕೆ, ಬದು ನಿರ್ಮಾಣ ಇತ್ಯಾದಿ ಕಾಮಗಾರಿಗಳು ನಡೆದರೆ, ಸಮುದಾಯ ಕಾರ್ಯಕ್ರಮಗಳ ಅಡಿ ರಸ್ತೆ, ಚರಂಡಿ, ಕೆರೆ ಹೂಳೆತ್ತುವ ಕಾಮಗಾರಿಗಳು ನಡೆಯುತ್ತಿವೆ. ಅರ್ಹ ಫಲಾನುಭವಿಗಳು ಕೆಲಸದ ಬೇಡಿಕೆ, ಪೂರ್ಣವಾದ ಕಾಮಗಾರಿಗಳ ಮಾಹಿತಿಗಳನ್ನು ಈಗ ತಾವಿರುವ ಸ್ಥಳದಿಂದಲೇ ಸುಲಭವಾಗಿ ಕ್ಯೂ ಆರ್ ಕೋಡ್ ಮೂಲಕ ಸಲ್ಲಿಕೆ ಮಾಡಬಹುದಾಗಿದೆ.

Advertisement

ಕೋಲಾರ ಜಿಲ್ಲೆ ಮುಳಬಾಗಿಲು ತಾಲ್ಲೂಕು ಕೆಂಬೋಡಿ ಪಂಚಾಯಿತಿಯ ರೈತ ಶಿವಕುಮಾರ್, ತೈವಾನ್ ಸೀಬೆ ಕೃಷಿ ಕೈಗೊಂಡಿದ್ದು, ಮೊಬೈಲ್ ಮತ್ತು ಕ್ಯು ಆರ್ ಕೋಡ್ನಿಂದಾಗಿ ಕೆಲಸ ಸುಲಭವಾಗಿದೆ ಎನ್ನುತ್ತಾರೆ.

ಗುಡಿಪಲ್ಲಿ ಪಂಚಾಯಿತಿಯ ರೈತ ಅಶೋಕ, ಈಗ ಕೆಲಸದ ಬೇಡಿಕೆ ಸಲ್ಲಿಸಲು ಗ್ರಾಮಸಭೆ, ವಾರ್ಡ್ ಸಭೆಗಳಲ್ಲಿ ಭಾಗಿಯಾಗಬೇಕಿಲ್ಲ. ಮೊಬೈಲ್ ಮತ್ತು  ಕ್ಯೂ ಆರ್ ಕೋಡ್ ಸಹಾಯದಿಂದ ತಾವಿರುವ ಸ್ಥಳದಲ್ಲೇ ಮಾಹಿತಿ ತುಂಬಬಹುದಾಗಿದೆ ಎನ್ನುತ್ತಾರೆ.

Advertisement

ಪಂಚಾಯ್ತಿಗಳಲ್ಲಿ ಮನ್ರೇಗಾ ಅತ್ಯಂತ ಪ್ರಚಲಿತ ಯೋಜನೆಯಾಗಿದೆ. 1 ಸಾವಿರದ  900ಕ್ಕೂ ಹೆಚ್ಚು ಕಾರ್ಡ್ ನೀಡಲಾಗಿದೆ. ವೈಯಕ್ತಿಕ, ಸಮುದಾಯ ಎರಡೂ ವಿಭಾಗದಲ್ಲಿ ಕಾಮಗಾರಿಗಳು ನಡೆಯುತ್ತಿವೆ ಎಂದು ಗುಡಿಪಲ್ಲಿ ಪಂಚಾಯಿತಿ ಪಿಡಿಒ ರಾಮೇಗೌಡ ಮಾಹಿತಿ ನೀಡಿದರು.

 

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಹವಾಮಾನ ವರದಿ | 21-02-2025 | ಮೋಡದ ವಾತಾವರಣ | ಇಂದೂ ಕೆಲವು ಕಡೆ ಮಳೆ ಸಾಧ್ಯತೆ |

ಹೆಚ್ಚಿನ ಭಾಗಗಳಲ್ಲಿ ಸಂಜೆ, ರಾತ್ರಿ ಮೋಡದ ವಾತಾವರಣದ ಮುನ್ಸೂಚೆನೆ ಇದ್ದು, ಘಟ್ಟದ ಕೆಳಗಿನ…

2 days ago

ಈ ಬಾರಿ ವರ್ಷದ ಮೊದಲ ಬೇಸಗೆ ಮಳೆ ಕೊಡಗಿನಲ್ಲಿ..!

ಕೊಡಗು ಜಿಲ್ಲೆಯ ಕಕ್ಕಬೆಯ ಕುಂಜಿಲ ಪ್ರದೇಶದಲ್ಲಿ ಮಳೆಯಾಗಿದೆ.

3 days ago

ಹವಾಮಾನ ವರದಿ | 20-02-2025 | ಅಧಿಕ ತಾಪಮಾನ- ಕೆಲವು ಕಡೆ ತುಂತುರು ಮಳೆ ಸಾಧ್ಯತೆ | ಫೆ.25 ರಿಂದ ಮೋಡ-ಬಿಸಿಲು |

ಅಧಿಕ ತಾಪಮಾನದೊಂದಿಗೆ ಮೋಡದ ವಾತಾವರಣದ ಮುನ್ಸೂಚನೆ ಇದೆ. ಸಂಜೆ, ರಾತ್ರಿಯ ವೇಳೆ ಘಟ್ಟದ…

3 days ago

ಸ್ವರ್ಗಕ್ಕಾಗಿ ಮೂರು ಕಾಲ್ತುಳಿತಗಳು

ಕಾಲ್ತುಳಿತ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಅಮಾಯಕರೇ ಸಾಯುತ್ತಾರೆ. ಅವರಿಗೆ ಯಾರು ಎಲ್ಲಿಂದ ಯಾಕೆ ತಳ್ಳುತ್ತಿದ್ದಾರೆಂದೇ…

3 days ago

ಅಡಿಕೆಗೆ ಮೈಟ್ | ಆತಂಕ ಬೇಡ, ಇರಲಿ ಎಚ್ಚರ | ವಿಜ್ಞಾನಿಗಳಿಂದ ಮಾಹಿತಿ |

ಅಡಿಕೆಯ ಮೈಟ್‌ ಬಗ್ಗೆ ಸಿಪಿಸಿಆರ್‌ಐ ನಿರ್ದೇಶಕರು ಮಾಹಿತಿ ಪ್ರಕಟಿಸಿದ್ದಾರೆ. ಈ ಬಾರಿ ಕೆಲವು…

3 days ago

ಬೆಂಗಳೂರಲ್ಲಿ ದಾಖಲೆ ತಾಪಮಾನ | ಬೇಸಿಗೆಯಲ್ಲಿ ಈ ಬಾರಿ ಉಷ್ಣಾಂಶ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ

ಈ ಬಾರಿ ಫೆಬ್ರವರಿ ತಿಂಗಳಲ್ಲಿ 34 ಡಿಗ್ರಿ ಉಷ್ಣಾಂಶ ದಾಖಲಾಗಿದೆ ಎಂದು ಹವಾಮಾನ…

3 days ago