ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಆಧುನಿಕ ತಂತ್ರಜ್ಞಾನದಿಂದಾಗಿ ಫಲಾನುಭವಿಗಳನ್ನು ಶೀಘ್ರವಾಗಿ ತಲುಪುವಲ್ಲಿ ಯಶಸ್ವಿಯಾಗಿದೆ. ಮನ್ರೇಗಾ ಯೋಜನೆ ಅಡಿ ಅನ್ ಲೈನ್ನಲ್ಲಿ ಮೊಬೈಲ್ ಹಾಗೂ ಕ್ಯೂ ಆರ್ ಕೋಡ್ ಸಹಾಯದಿಂದಾಗಿ ಫಲಾನುಭವಿಗಳು ಕಚೇರಿ ಸುತ್ತುವ ಮತ್ತು ಸಮಯ ಪೋಲಾಗುವ ಸಮಸ್ಯೆಗಳಿಗೆ ಮುಕ್ತಿ ದೊರಕಿದೆ.
ವೈಯಕ್ತಿಕ ವಿಭಾಗದಲ್ಲಿ ಇಂಗು ಗುಂಡಿ, ಗಿಡ ನೆಡುವಿಕೆ, ಬದು ನಿರ್ಮಾಣ ಇತ್ಯಾದಿ ಕಾಮಗಾರಿಗಳು ನಡೆದರೆ, ಸಮುದಾಯ ಕಾರ್ಯಕ್ರಮಗಳ ಅಡಿ ರಸ್ತೆ, ಚರಂಡಿ, ಕೆರೆ ಹೂಳೆತ್ತುವ ಕಾಮಗಾರಿಗಳು ನಡೆಯುತ್ತಿವೆ. ಅರ್ಹ ಫಲಾನುಭವಿಗಳು ಕೆಲಸದ ಬೇಡಿಕೆ, ಪೂರ್ಣವಾದ ಕಾಮಗಾರಿಗಳ ಮಾಹಿತಿಗಳನ್ನು ಈಗ ತಾವಿರುವ ಸ್ಥಳದಿಂದಲೇ ಸುಲಭವಾಗಿ ಕ್ಯೂ ಆರ್ ಕೋಡ್ ಮೂಲಕ ಸಲ್ಲಿಕೆ ಮಾಡಬಹುದಾಗಿದೆ.
ಕೋಲಾರ ಜಿಲ್ಲೆ ಮುಳಬಾಗಿಲು ತಾಲ್ಲೂಕು ಕೆಂಬೋಡಿ ಪಂಚಾಯಿತಿಯ ರೈತ ಶಿವಕುಮಾರ್, ತೈವಾನ್ ಸೀಬೆ ಕೃಷಿ ಕೈಗೊಂಡಿದ್ದು, ಮೊಬೈಲ್ ಮತ್ತು ಕ್ಯು ಆರ್ ಕೋಡ್ನಿಂದಾಗಿ ಕೆಲಸ ಸುಲಭವಾಗಿದೆ ಎನ್ನುತ್ತಾರೆ.
ಗುಡಿಪಲ್ಲಿ ಪಂಚಾಯಿತಿಯ ರೈತ ಅಶೋಕ, ಈಗ ಕೆಲಸದ ಬೇಡಿಕೆ ಸಲ್ಲಿಸಲು ಗ್ರಾಮಸಭೆ, ವಾರ್ಡ್ ಸಭೆಗಳಲ್ಲಿ ಭಾಗಿಯಾಗಬೇಕಿಲ್ಲ. ಮೊಬೈಲ್ ಮತ್ತು ಕ್ಯೂ ಆರ್ ಕೋಡ್ ಸಹಾಯದಿಂದ ತಾವಿರುವ ಸ್ಥಳದಲ್ಲೇ ಮಾಹಿತಿ ತುಂಬಬಹುದಾಗಿದೆ ಎನ್ನುತ್ತಾರೆ.
ಪಂಚಾಯ್ತಿಗಳಲ್ಲಿ ಮನ್ರೇಗಾ ಅತ್ಯಂತ ಪ್ರಚಲಿತ ಯೋಜನೆಯಾಗಿದೆ. 1 ಸಾವಿರದ 900ಕ್ಕೂ ಹೆಚ್ಚು ಕಾರ್ಡ್ ನೀಡಲಾಗಿದೆ. ವೈಯಕ್ತಿಕ, ಸಮುದಾಯ ಎರಡೂ ವಿಭಾಗದಲ್ಲಿ ಕಾಮಗಾರಿಗಳು ನಡೆಯುತ್ತಿವೆ ಎಂದು ಗುಡಿಪಲ್ಲಿ ಪಂಚಾಯಿತಿ ಪಿಡಿಒ ರಾಮೇಗೌಡ ಮಾಹಿತಿ ನೀಡಿದರು.
ಮಂಗಳೂರು-ಬೆಂಗಳೂರು ರೈಲು ಮಾರ್ಗದ ಶಿರಾಡಿ ಘಾಟಿಯ ಎಡಕುಮಾರಿ ಮತ್ತು ಶಿರಿಬಾಗಿಲು ನಿಲ್ದಾಣಗಳ ನಡುವೆ…
ಅಡಿಕೆ ಬೆಳೆಯಲ್ಲಿನ ವಿವಿಧ ಸಮಸ್ಯೆ ಭಾರತದಲ್ಲಿ ಮಾತ್ರವಲ್ಲ, ವಿವಿಧ ದೇಶಗಳಲ್ಲೂ ಈಗ ಕಾಣಿಸಿಕೊಳ್ಳಲು…
ಜೂನ್ 22, 2025 ರಂದು 6 ಗ್ರಹಗಳ ಮಹಾಗೋಚಾರ, ಸೂರ್ಯ, ಚಂದ್ರ, ಬುಧ,…
ಐಸ್ ಕ್ರೀಮ್ ಅಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಎಲ್ಲರಿಗೂ ಬೇಕು. ಹಲಸಿನ ಹಣ್ಣಿನ…
ಅಚ್ಚ ಹಸುರಿನ ಉರುಟುರುಟಾದ ರೂಪಾಯಿ ನಾಣ್ಯದಷ್ಟು ಗಾತ್ರದ ಎಲೆಗಳ ದಂಟುಗಳನ್ನು ಹೊಂದಿರುವ ಗಿಡ…
ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಭರ್ಜರಿಯಾಗಿ ಸುರಿದ ಮಳೆ ಈಗ ಸ್ವಲ್ಪ ವಿರಾಮ…