ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಆಧುನಿಕ ತಂತ್ರಜ್ಞಾನದಿಂದಾಗಿ ಫಲಾನುಭವಿಗಳನ್ನು ಶೀಘ್ರವಾಗಿ ತಲುಪುವಲ್ಲಿ ಯಶಸ್ವಿಯಾಗಿದೆ. ಮನ್ರೇಗಾ ಯೋಜನೆ ಅಡಿ ಅನ್ ಲೈನ್ನಲ್ಲಿ ಮೊಬೈಲ್ ಹಾಗೂ ಕ್ಯೂ ಆರ್ ಕೋಡ್ ಸಹಾಯದಿಂದಾಗಿ ಫಲಾನುಭವಿಗಳು ಕಚೇರಿ ಸುತ್ತುವ ಮತ್ತು ಸಮಯ ಪೋಲಾಗುವ ಸಮಸ್ಯೆಗಳಿಗೆ ಮುಕ್ತಿ ದೊರಕಿದೆ.
ವೈಯಕ್ತಿಕ ವಿಭಾಗದಲ್ಲಿ ಇಂಗು ಗುಂಡಿ, ಗಿಡ ನೆಡುವಿಕೆ, ಬದು ನಿರ್ಮಾಣ ಇತ್ಯಾದಿ ಕಾಮಗಾರಿಗಳು ನಡೆದರೆ, ಸಮುದಾಯ ಕಾರ್ಯಕ್ರಮಗಳ ಅಡಿ ರಸ್ತೆ, ಚರಂಡಿ, ಕೆರೆ ಹೂಳೆತ್ತುವ ಕಾಮಗಾರಿಗಳು ನಡೆಯುತ್ತಿವೆ. ಅರ್ಹ ಫಲಾನುಭವಿಗಳು ಕೆಲಸದ ಬೇಡಿಕೆ, ಪೂರ್ಣವಾದ ಕಾಮಗಾರಿಗಳ ಮಾಹಿತಿಗಳನ್ನು ಈಗ ತಾವಿರುವ ಸ್ಥಳದಿಂದಲೇ ಸುಲಭವಾಗಿ ಕ್ಯೂ ಆರ್ ಕೋಡ್ ಮೂಲಕ ಸಲ್ಲಿಕೆ ಮಾಡಬಹುದಾಗಿದೆ.
ಕೋಲಾರ ಜಿಲ್ಲೆ ಮುಳಬಾಗಿಲು ತಾಲ್ಲೂಕು ಕೆಂಬೋಡಿ ಪಂಚಾಯಿತಿಯ ರೈತ ಶಿವಕುಮಾರ್, ತೈವಾನ್ ಸೀಬೆ ಕೃಷಿ ಕೈಗೊಂಡಿದ್ದು, ಮೊಬೈಲ್ ಮತ್ತು ಕ್ಯು ಆರ್ ಕೋಡ್ನಿಂದಾಗಿ ಕೆಲಸ ಸುಲಭವಾಗಿದೆ ಎನ್ನುತ್ತಾರೆ.
ಗುಡಿಪಲ್ಲಿ ಪಂಚಾಯಿತಿಯ ರೈತ ಅಶೋಕ, ಈಗ ಕೆಲಸದ ಬೇಡಿಕೆ ಸಲ್ಲಿಸಲು ಗ್ರಾಮಸಭೆ, ವಾರ್ಡ್ ಸಭೆಗಳಲ್ಲಿ ಭಾಗಿಯಾಗಬೇಕಿಲ್ಲ. ಮೊಬೈಲ್ ಮತ್ತು ಕ್ಯೂ ಆರ್ ಕೋಡ್ ಸಹಾಯದಿಂದ ತಾವಿರುವ ಸ್ಥಳದಲ್ಲೇ ಮಾಹಿತಿ ತುಂಬಬಹುದಾಗಿದೆ ಎನ್ನುತ್ತಾರೆ.
ಪಂಚಾಯ್ತಿಗಳಲ್ಲಿ ಮನ್ರೇಗಾ ಅತ್ಯಂತ ಪ್ರಚಲಿತ ಯೋಜನೆಯಾಗಿದೆ. 1 ಸಾವಿರದ 900ಕ್ಕೂ ಹೆಚ್ಚು ಕಾರ್ಡ್ ನೀಡಲಾಗಿದೆ. ವೈಯಕ್ತಿಕ, ಸಮುದಾಯ ಎರಡೂ ವಿಭಾಗದಲ್ಲಿ ಕಾಮಗಾರಿಗಳು ನಡೆಯುತ್ತಿವೆ ಎಂದು ಗುಡಿಪಲ್ಲಿ ಪಂಚಾಯಿತಿ ಪಿಡಿಒ ರಾಮೇಗೌಡ ಮಾಹಿತಿ ನೀಡಿದರು.
ಅಕ್ರಮವಾಗಿ ಸುಮಾರು 68 ಟನ್ ಅಡಿಕೆ ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಅಸ್ಸಾಂ ಪೊಲೀಸರು…
ಬದುಕಿನ ಒಂದೊಂದು ಅಂಗವೂ ‘ಕಲಾತ್ಮಕ’. ಒದಗುವ ಸುಭಗತನವು ಅನುಭವವೇದ್ಯ. ಅಡುಗೆ ಮನೆಯು ಬರೇ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರಾದ ಜೋತಿಷಿಗಳನ್ನು ಸಂಪರ್ಕಿಸಿ 9535156490
ಬೇಸಿಗೆ ತಾಪಮಾನ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮೃಗಾಲಯದ ಪ್ರಾಣಿಗಳು ಸುಡುಬಿಸಿಲಿಗೆ ಕಂಗಾಲಾಗಿದ್ದು, ಮಧ್ಯಾಹ್ನದ ವೇಳೆಯಲ್ಲಿ…
ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಎಫ್.ಎ.ಕ್ಯೂ ಗುಣಮಟ್ಟದ ತೊಗರಿ ಉತ್ಪನ್ನವನ್ನು ಖರೀದಿಸುವ…
ತಾಂತ್ರಿಕ ಸಮಸ್ಯೆ ಹಿನ್ನೆಲೆಯಲ್ಲಿ ಏಕೀಕೃತ ಪಾವತಿ ಇಂಟರ್ ಫೇಸ್ - ಯುಪಿಐ ಸೇವೆಯ…