Advertisement
ಧಾರ್ಮಿಕ

ಭಗವತ್ಕಾರುಣ್ಯವೇ ಜಗತ್ತಿಗೆ ಆಧಾರ : ರಾಘವೇಶ್ವರ ಶ್ರೀ

Share

ದೇವರು, ಗುರು, ತಂದೆ- ತಾಯಿಯ ಕಾರುಣ್ಯ ನಮ್ಮ ಜೀವನಕ್ಕೆ ಆಧಾರ. ಭಗವತ್ಕಾರುಣ್ಯವೇ ಜಗತ್ತಿಗೆ ಆಧಾರ ಎಂದು ಹೊಸನಗರ ಶ್ರೀ ರಾಮಚಂದ್ರಾಪುರ ಮಠದ  ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಹೇಳಿದರು.

ಗೋಕರ್ಣದ  ಅಶೋಕೆಯ ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಆವರಣದಲ್ಲಿ ಕೈಗೊಂಡಿರುವ ಗುರುಕುಲ ಚಾತುರ್ಮಾಸ್ಯದ ಅಂಗವಾಗಿ ಗುರುವಾರ ಆಶೀರ್ವಚನ ನೀಡಿದ ಅವರು, ಬಾಲ್ಯದಲ್ಲಿ ಅಸಹಾಯಕ ಸ್ಥಿತಿಯಲ್ಲಿರುವಾಗ ತಂದೆ ತಾಯಿಯ ಕರುಣೆ ನಮ್ಮನ್ನು ಬೆಳೆಸುತ್ತದೆ. ಅಂತೆಯೇ ಗುರು ನೀಡಿದ ಜ್ಞಾನದ ಬೆಳಕು ಇಡೀ ಬದುಕಿನಲ್ಲಿ ನಮಗೆ ದಾರಿದೀಪ. ವಿದ್ಯೆಯಿಂದ ಬರುವ ಜ್ಞಾನ ನಮ್ಮ ಇಡೀ ಬದುಕಿಗೆ ದಾರಿದೀಪ. ಆದರೆ ಅನ್ನ- ಆಹಾರದಿಂದ ನಮಗೆ ಸಿಗುವ ತೃಪ್ತಿ ಕ್ಷಣಿಕ ಎಂದು ಅಭಿಪ್ರಾಯಪಟ್ಟರು.

ಬದುಕಿಗೆ ಕರುಣೆಯೇ ನಮ್ಮ ಬದುಕಿಗೆ ಆಧಾರ. ಈಶ್ವರನ ಕರುಣೆಯಿಂದಲೇ ನಾವೆಲ್ಲರೂ ಇದ್ದೇವೆ. “ಇಳೆ ನಿಮ್ಮ ದಾನ, ಬೆಳೆ ನಿಮ್ಮ ದಾನ, ಸುಳಿದು ಸೂಸುವ ಗಾಳಿ ನಿಮ್ಮ ದಾನ, ನಿಮ್ಮ ದಾನವನುಂಡು ಅನ್ಯರ ಹೊಗಳುವ ಕುನ್ನಿಗಳನೇನೆಂಬೆ ರಾಮನಾಥ” ಎಂದು ದೇವರ ದಾಸಿಮಯ್ಯ ವಚನದಲ್ಲಿ ಬಣ್ಣಿಸಿದ್ದಾನೆ. ಈ ವಚನದ ಹಿಂದಿರುವುದು ದೇವರ ಕಾರುಣ್ಯದ ಬಣ್ಣನೆ ಎಂದರು.
ಗುರು, ದೇವರು, ತಾಯಿ- ತಂದೆಯ ಕರುಣೆಯ ಋಣವನ್ನು ನಾವ್ಯಾರೂ ತೀರಿಸಲಾಗದು; ನಾವು ಬದುಕಿನಲ್ಲಿ ತಪ್ಪು ಮಾಡಿದ ಬಳಿಕವಂತೂ ಕರುಣೆಯಿಂದಲೇ ಬದುಕುತ್ತೇವೆ. ಜೀವನದಲ್ಲಿ ತಪ್ಪು ಮಾಡದವನು ಯಾರೂ ಇಲ್ಲ; ತಪ್ಪು ಮಾಡದವರು ಇಲ್ಲಿಗೆ ಬರುವುದೇ ಇಲ್ಲ; ಪಾಪ- ಪುಣ್ಯ ಮಾಡಿದವರು ಮಾಡಿದವರು ಮಾತ್ರ ಮನುಷ್ಯ ಜನ್ಮ ಪಡೆಯುತ್ತಾರೆ. ಆದ್ದರಿಂದ ಎಲ್ಲರ ಬದುಕಿಗೂ ಕರುಣೆ ಆಧಾರ ಎಂದು ವಿಶ್ಲೇಷಿಸಿದರು.
ಎಲ್ಲ ಜೀವಗಳಲ್ಲಿ ದೇವರೇ ಇರುತ್ತಾನೆ ಎಂಬ ಭಾವವೊಂದಿದ್ದರೆ ನಾವು ಯಾರಿಗೂ ನೋವು ಮಾಡುವುದಿಲ್ಲ. ಯಾರನ್ನೇ ನೋಯಿಸಿದರೂ ನಾವು ದೇವರನ್ನು ನೋಯಿಸಿದಂತಾಗುತ್ತದೆ. ನಮಗೆ ಹೇಗೆ ನಮಗೆ ಇಷ್ಟವೋ ಎಲ್ಲ ಜೀವವೂ ಹಾಗೆಯೇ ಎಂಬ ಭಾವ ಇದ್ದರೆ ಸರ್ವತ್ರವೂ ದಯಾಭಾವ ಮೂಡುತ್ತದೆ ಎಂದು ಬಣ್ಣಿಸಿದರು.
ಹೊನ್ನಾವರದ ವಾಗ್ದೇವಿ ಭಜನಾ ಮಂಡಳಿಯಿಂದ ಭಜನಾ ಸೇವೆ ನಡೆಯಿತು. ಧಾರ್ಮಿಕ ಕಾರ್ಯಕ್ರಮದಲ್ಲಿ ರಾಮತಾರಕ ಹವನ, ರುದ್ರಹೋಮ ನೆರವೇರಿಸಲಾಯಿತು.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಮ್ಯಾನ್ಮಾರ್ ಅಡಿಕೆ ಕಳ್ಳಸಾಗಣೆ ವಿರುದ್ಧ ಮಿಜೋರಾಂ ಸರ್ಕಾರದ ಕಠಿಣ ಕ್ರಮ : 468 ಪ್ರಕರಣ ದಾಖಲು

ಮ್ಯಾನ್ಮಾರ್‌ನಿಂದ ಅಕ್ರಮ ಅಡಿಕೆ ಕಳ್ಳಸಾಗಣೆ ವಿರುದ್ಧ ಮಿಜೋರಾಂ ಸರ್ಕಾರ ಜಾರಿ ಕ್ರಮವನ್ನು ಬಿಗುಗೊಳಿಸಿದೆ.…

5 hours ago

ಸುಸ್ಥಿರ ಕೃಷಿ ಮತ್ತು ‘ತ್ಯಾಜ್ಯದಿಂದ ಸಂಪತ್ತು’ ಮಾದರಿಗೆ ಐಸಿಎಆರ್ ಸಭೆಯಲ್ಲಿ ಒತ್ತು

ಕೊಲ್ಕತ್ತಾದಲ್ಲಿ ನಡೆದ ಸಭೆಯಲ್ಲಿ ಸೆಣಬು ವಲಯ ಸುಧಾರಣೆ, ಸುಸ್ಥಿರ ಕೃಷಿ ಹಾಗೂ ಮೀನುಗಾರಿಕೆ…

6 hours ago

ಹೋಳಿ ಹಬ್ಬ: ಪ್ರಾಣಿ-ಪಕ್ಷಿಗಳಿಗೆ ಹಾನಿಯಾಗದಂತೆ ಆಚರಿಸಿ – ಮಂಡಳಿ ಮನವಿ

ಹೋಳಿ ಹಬ್ಬದ ಸಂದರ್ಭದಲ್ಲಿ ಪ್ರಾಣಿ ಮತ್ತು ಪಕ್ಷಿಗಳಿಗೆ ಹಾನಿಯಾಗದಂತೆ ಆಚರಿಸಲು ಭಾರತೀಯ ಪ್ರಾಣಿ…

7 hours ago

ಅಡಿಕೆ ಮಾರುಕಟ್ಟೆ ಸುದ್ದಿ | ಅಡಿಕೆ ಧಾರಣೆ ಇಳಿಕೆಯಿಂದ ಸ್ಥಿರತೆಯತ್ತ ಮುಂದುವರಿಕೆ

ದಕ್ಷಿಣ ಕನ್ನಡ ಮತ್ತು ಮಲೆನಾಡು ಭಾಗದ ಕೃಷಿ ಮಾರುಕಟ್ಟೆಯಲ್ಲಿ ಸಹಜ ಸ್ಥಿತಿಯಲ್ಲಿ ಕಂಡುಬಂದಿದೆ.…

14 hours ago

2030ರೊಳಗೆ 5 ಟ್ರಿಲಿಯನ್ ಆರ್ಥಿಕತೆ ಮೀರಿದ ರಾಷ್ಟ್ರವಾಗಲಿದೆ ಭಾರತ

2030ರೊಳಗೆ ಭಾರತ 5 ಟ್ರಿಲಿಯನ್ ಆರ್ಥಿಕತೆಯನ್ನು ಮೀರುತ್ತದೆ ಎಂದು ಪ್ರಲ್ಹಾದ ಜೋಶಿ ವಿಶ್ವಾಸ…

18 hours ago

ರೈತರ ಹಿತಕ್ಕಾಗಿ ಎರಡು ಮಹತ್ವದ ಸುಧಾರಣೆಗಳು | ಹೊಸ ಬೀಜ ಕಾಯ್ದೆ, ಪರಿಷ್ಕೃತ ಕೀಟನಾಶಕ ಕಾಯ್ದೆ ಜಾರಿಗೆ ಕೇಂದ್ರ ಸಿದ್ಧತೆ

ರೈತರ ಹಿತದೃಷ್ಟಿಯಿಂದ ಕೇಂದ್ರ ಸರ್ಕಾರ ಹೊಸ ಬೀಜ ಕಾಯ್ದೆ ಮತ್ತು ಪರಿಷ್ಕೃತ ಕೀಟನಾಶಕ…

18 hours ago