Advertisement
ಧಾರ್ಮಿಕ

ಭಗವತ್ಕಾರುಣ್ಯವೇ ಜಗತ್ತಿಗೆ ಆಧಾರ : ರಾಘವೇಶ್ವರ ಶ್ರೀ

Share

ದೇವರು, ಗುರು, ತಂದೆ- ತಾಯಿಯ ಕಾರುಣ್ಯ ನಮ್ಮ ಜೀವನಕ್ಕೆ ಆಧಾರ. ಭಗವತ್ಕಾರುಣ್ಯವೇ ಜಗತ್ತಿಗೆ ಆಧಾರ ಎಂದು ಹೊಸನಗರ ಶ್ರೀ ರಾಮಚಂದ್ರಾಪುರ ಮಠದ  ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಹೇಳಿದರು.

ಗೋಕರ್ಣದ  ಅಶೋಕೆಯ ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಆವರಣದಲ್ಲಿ ಕೈಗೊಂಡಿರುವ ಗುರುಕುಲ ಚಾತುರ್ಮಾಸ್ಯದ ಅಂಗವಾಗಿ ಗುರುವಾರ ಆಶೀರ್ವಚನ ನೀಡಿದ ಅವರು, ಬಾಲ್ಯದಲ್ಲಿ ಅಸಹಾಯಕ ಸ್ಥಿತಿಯಲ್ಲಿರುವಾಗ ತಂದೆ ತಾಯಿಯ ಕರುಣೆ ನಮ್ಮನ್ನು ಬೆಳೆಸುತ್ತದೆ. ಅಂತೆಯೇ ಗುರು ನೀಡಿದ ಜ್ಞಾನದ ಬೆಳಕು ಇಡೀ ಬದುಕಿನಲ್ಲಿ ನಮಗೆ ದಾರಿದೀಪ. ವಿದ್ಯೆಯಿಂದ ಬರುವ ಜ್ಞಾನ ನಮ್ಮ ಇಡೀ ಬದುಕಿಗೆ ದಾರಿದೀಪ. ಆದರೆ ಅನ್ನ- ಆಹಾರದಿಂದ ನಮಗೆ ಸಿಗುವ ತೃಪ್ತಿ ಕ್ಷಣಿಕ ಎಂದು ಅಭಿಪ್ರಾಯಪಟ್ಟರು.

ಬದುಕಿಗೆ ಕರುಣೆಯೇ ನಮ್ಮ ಬದುಕಿಗೆ ಆಧಾರ. ಈಶ್ವರನ ಕರುಣೆಯಿಂದಲೇ ನಾವೆಲ್ಲರೂ ಇದ್ದೇವೆ. “ಇಳೆ ನಿಮ್ಮ ದಾನ, ಬೆಳೆ ನಿಮ್ಮ ದಾನ, ಸುಳಿದು ಸೂಸುವ ಗಾಳಿ ನಿಮ್ಮ ದಾನ, ನಿಮ್ಮ ದಾನವನುಂಡು ಅನ್ಯರ ಹೊಗಳುವ ಕುನ್ನಿಗಳನೇನೆಂಬೆ ರಾಮನಾಥ” ಎಂದು ದೇವರ ದಾಸಿಮಯ್ಯ ವಚನದಲ್ಲಿ ಬಣ್ಣಿಸಿದ್ದಾನೆ. ಈ ವಚನದ ಹಿಂದಿರುವುದು ದೇವರ ಕಾರುಣ್ಯದ ಬಣ್ಣನೆ ಎಂದರು.
ಗುರು, ದೇವರು, ತಾಯಿ- ತಂದೆಯ ಕರುಣೆಯ ಋಣವನ್ನು ನಾವ್ಯಾರೂ ತೀರಿಸಲಾಗದು; ನಾವು ಬದುಕಿನಲ್ಲಿ ತಪ್ಪು ಮಾಡಿದ ಬಳಿಕವಂತೂ ಕರುಣೆಯಿಂದಲೇ ಬದುಕುತ್ತೇವೆ. ಜೀವನದಲ್ಲಿ ತಪ್ಪು ಮಾಡದವನು ಯಾರೂ ಇಲ್ಲ; ತಪ್ಪು ಮಾಡದವರು ಇಲ್ಲಿಗೆ ಬರುವುದೇ ಇಲ್ಲ; ಪಾಪ- ಪುಣ್ಯ ಮಾಡಿದವರು ಮಾಡಿದವರು ಮಾತ್ರ ಮನುಷ್ಯ ಜನ್ಮ ಪಡೆಯುತ್ತಾರೆ. ಆದ್ದರಿಂದ ಎಲ್ಲರ ಬದುಕಿಗೂ ಕರುಣೆ ಆಧಾರ ಎಂದು ವಿಶ್ಲೇಷಿಸಿದರು.
ಎಲ್ಲ ಜೀವಗಳಲ್ಲಿ ದೇವರೇ ಇರುತ್ತಾನೆ ಎಂಬ ಭಾವವೊಂದಿದ್ದರೆ ನಾವು ಯಾರಿಗೂ ನೋವು ಮಾಡುವುದಿಲ್ಲ. ಯಾರನ್ನೇ ನೋಯಿಸಿದರೂ ನಾವು ದೇವರನ್ನು ನೋಯಿಸಿದಂತಾಗುತ್ತದೆ. ನಮಗೆ ಹೇಗೆ ನಮಗೆ ಇಷ್ಟವೋ ಎಲ್ಲ ಜೀವವೂ ಹಾಗೆಯೇ ಎಂಬ ಭಾವ ಇದ್ದರೆ ಸರ್ವತ್ರವೂ ದಯಾಭಾವ ಮೂಡುತ್ತದೆ ಎಂದು ಬಣ್ಣಿಸಿದರು.
ಹೊನ್ನಾವರದ ವಾಗ್ದೇವಿ ಭಜನಾ ಮಂಡಳಿಯಿಂದ ಭಜನಾ ಸೇವೆ ನಡೆಯಿತು. ಧಾರ್ಮಿಕ ಕಾರ್ಯಕ್ರಮದಲ್ಲಿ ರಾಮತಾರಕ ಹವನ, ರುದ್ರಹೋಮ ನೆರವೇರಿಸಲಾಯಿತು.
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಜಗತ್ತು ನಮ್ಮ ಜೊತೆಗಿದೆ ಎಂಬ ಭ್ರಮೆ

ಜಗತ್ತು ಸದಾ ನಮ್ಮ ಜೊತೆಗಿರುತ್ತದೆ ಎಂಬ ನಿರೀಕ್ಷೆಗಿಂತ, ಪರಿಸ್ಥಿತಿ ಬದಲಾದರೂ ನಮ್ಮ ದಾರಿಯಲ್ಲಿ…

2 hours ago

ತೆಂಗಿನ ಎಣ್ಣೆಯಿಂದ ವಿಮಾನದ ಇಂಧನ ? ಜೆಟ್‌ ಎಂಜಿನ್‌ ಪರೀಕ್ಷೆಯಲ್ಲಿ ಕುತೂಹಲ ಮೂಡಿಸಿದ ಫಲಿತಾಂಶ

ಮಾರುಕಟ್ಟೆಗೆ ಯೋಗ್ಯವಲ್ಲದ ತೆಂಗಿನಕಾಯಿಯಿಂದ ಪಡೆದ ತೆಂಗಿನ ಎಣ್ಣೆಯನ್ನು ಬಳಸಿ ಸುಸ್ಥಿರ ವಿಮಾನ ಇಂಧನ…

8 hours ago

ಕೃಷಿ ಇನ್ನು ಕೇವಲ ಬೆಳೆ ಬೆಳೆಯುವುದಲ್ಲ – ಯುವಕರಿಗೆ ಸ್ಟಾರ್ಟ್‌ಅಪ್ ಕ್ಷೇತ್ರ

ಕೃಷಿ ಮತ್ತು ಕೃಷಿ ಸಂಬಂಧಿತ ಕ್ಷೇತ್ರಗಳು ಯುವ ಉದ್ಯಮಶೀಲತೆಗೆ ಮುಂದಿನ ದೊಡ್ಡ ಅವಕಾಶಗಳಾಗಿದ್ದು,…

12 hours ago

ಬರಪೀಡಿತ ಪ್ರದೇಶಗಳ ರೈತರಿಗೆ ಗುಡ್‌ನ್ಯೂಸ್ ; ಬೆಳೆ ವಿಮೆ ನೋಂದಣಿ ಅವಧಿ ವಿಸ್ತರಣೆ

ಕರ್ನಾಟಕದ ಬರಪೀಡಿತ ಪ್ರದೇಶಗಳಲ್ಲಿ ಬೆಳೆ ವಿಮೆ ನೋಂದಣಿ ಹಾಗೂ ಪ್ರೀಮಿಯಂ ಕಡಿತದ ಅವಧಿಯನ್ನು…

21 hours ago

ರಾಜ್ಯದ 102 ತಾಲೂಕುಗಳಲ್ಲಿ ಬರದ ಛಾಯೆ – ತಿಂಗಳಾಂತ್ಯಕ್ಕೆ ಕೇಂದ್ರಕ್ಕೆ ವರದಿ ಸಲ್ಲಿಕೆ

ಕರ್ನಾಟಕದ 102 ತಾಲೂಕುಗಳಲ್ಲಿ ಬರ ಪರಿಸ್ಥಿತಿ ಉಂಟಾಗಿದ್ದು, ಈ ತಿಂಗಳಾಂತ್ಯಕ್ಕೆ ಕೇಂದ್ರ ಸರ್ಕಾರಕ್ಕೆ…

21 hours ago

ಮಂಗಳೂರಿನ ಅಶ್ಮಿತ್ ಎ.ಜೆ. ಅವರಿಗೆ ‘ಸರಿಗಮಪ 2026’ರ ಕಿರೀಟ

ಮಂಗಳೂರಿನ ಅಶ್ಮಿತ್ ಎ.ಜೆ. ಅವರು ಝೀ ಕನ್ನಡದ ‘ಸರಿಗಮಪ 2026’ರ ವಿಜೇತರಾಗಿ ₹20…

22 hours ago