Advertisement
ಅನುಕ್ರಮ

ಮಳೆ ಎಂಬ ಮಾಯೆಯ ಲೆಕ್ಕ | ಮಳೆ ಬಂದಾಗ ಬಿಸಿಲಿನಾಸೆ, ಬಿಸಿಲು ಬಂದಾಗ ಚಳಿಯ ಆಸೆ…. ! | ಮಳೆಯ ಸುತ್ತ ಬರೆಯುತ್ತಾರೆ ಕೃಷಿಕ ಟಿ ಆರ್‌ ಸುರೇಶ್ಚಂದ್ರ |

Share
ಮಳೆ ಎಂಬ ಮಾಯೆಯ ಬಗ್ಗೆ ಕೃಷಿಕ ಟಿ ಆರ್‌ ಸುರೇಶ್ಚಂದ್ರ ಬರೆದಿದ್ದಾರೆ. ಮಳೆ ಎಂದರೆ ಪ್ರಕೃತಿಯ ಒಳನೋಟ. ಬಿದ್ದ ಮಳೆಯನ್ನು  ವಿಶ್ಲೇಷಣೆ ಮಾಡಿದ್ದಾರೆ ಸುರೇಶ್ಚಂದ್ರ ಅವರು ಕಳೆದ ವರ್ಷ ಇದುರೆಗೆ ಸುರಿದ ಒಟ್ಟು ವಾರ್ಷಿಕ ಮಳೆ 1190 ಮಿಮೀ. ಈ ವರ್ಷ ಸುರಿದ ಒಟ್ಟು ವಾರ್ಷಿಕ ಮಳೆ 1644 ಮಿಮೀ ಸುರಿದಿದೆ..!
ಮಳೆ ಮಳೆ ಮಳೆ…
ಏನೆಂದು ನಾ ಹೇಳಲೀ
ಮಾನವನಾಸೆಗೆ ಕೊನೆ ಎಲ್ಲೀ
ಕಾಣೋದೆಲ್ಲಾ ಬೇಕು ಎಂಬ ಹಟದಲ್ಲೀ
ಒಳ್ಳೆದೆಲ್ಲಾ ಬೇಕು ಎಂಬ ಛಲದಲ್ಲಿ
ಯಾರನ್ನೂ ಪ್ರ್ರೀತಿಸನೂ ಜಗದಲ್ಲಿ
ಏನೊಂದೂ ಬಾಳಿಸನೂ ಜಗದಲ್ಲೀ…

….ನಮ್ಮ ಅಸೆಗಳಿಗೆ ಮಿತಿ ಇದೆಯಾ… ನಿರೀಕ್ಷೆಗಳಿಗೆ ಮಿತಿ ಇದೆಯೋ… ಆಸೆಗಳ ಹಿಂದೆ ಓಡೋಡುತ್ತಾ ಪ್ರಕೃತಿಯನ್ನೂ ನಮ್ಮ ತಾಳಕ್ಕೆ ತಕ್ಕಂತೆ ಕುಣಿಸೋ ಪ್ರಯತ್ನ ಮಾಡ್ತೇವಲ್ಲಾ….. ತನ್ನ ಕಾರ್ಯ ಆದರೆ ಸಾಕು,ತನ್ನ ಕಾರ್ಯಕ್ಕೆ ಪ್ರಕೃತಿ ಒಲಿಯಬೇಕೂ ಎಂಬ ನಿರೀಕ್ಷೆ ಸದಾ ಹುಚ್ಚು ಕುದುರೆಯಂತೆ ಕಾಡುತ್ತಲ್ಲಾ……. ಹೌದು…,

ಮಳೆ ಬಂದಾಗ ಬಿಸಿಲಿನಾಸೆ…
ಬಿಸಿಲು ಬಂದಾಗ ಛಳಿಯ ಆಸೆ..
ಚಳಿ ಬಂದಾಗ ಮಳೆಯ ಆಸೆ…… ಎಲ್ಲೆಲ್ಲಿಯೋ ನೆರೆ ಬಂದು‌ ಮುಳುಗಡೆಯಾದ ವಿಡಿಯೋ ಥ್ರಿಲ್ ಕೊಡುತ್ತದೆ, ಎಲ್ಲೋ ಅಣೆಕಟ್ಟು ತುಂಬಿ ಊರು ಕೇರಿಗಳು ಮುಳುಗಿ ಬಂದ ವಿದ್ಯುತ್ ಮುದ ನೀಡುತ್ತದೆ, ಯಾವುದೋ ಗುಡ್ಡ ಕುಸಿಯುವ ಚಿತ್ರ, ಯಾವುದೊ ಮನೆಗೆ ನುಗ್ಗುವ ನೀರು ಕುತೂಹಲ ಮೂಡಿಸುತ್ತದೆ.
ಆದರೆ…, ನಮ್ಮ ತೋಟಕ್ಕೆ ಪ್ರವಾಹ ಬಂದರೆ ಸಂಪೂರ್ಣ ಅಲ್ಲೋಲ ಕಲ್ಲೋಲ, ನಮ್ಮ ತೋಟದ ಅಡಿಕೆ/ತೆಂಗು ಯಾ ಇನ್ನಿತರ ಬೆಳೆಗಳ ಬುಡದಲ್ಲಿ ನೀರು ನಿಂತರೆ ಯಾತನೆಯ ಪರಮಾವಧಿ, ನಮ್ಮ ಗುಡ್ಡ ಕುಸಿದರೆ ನಿಂತ ನೆಲೆಯೇ ಕುಸಿದಂತೆ… ಊಹೂಂ..,
ಪ್ರಕೃತಿ ಮಾತೆ ಒಂದು ಇಂಚೂ ಬದಲಾಗಳು… ತನ್ನ ನಿರ್ಧಾರದಿಂದ ಹಿಂದೆ ಸರಿಯಳು…. ನಮಗಾಗಿ ಪ್ರಕೃತಿಯನ್ನು ಬದಲಿಸಲು ಹೊರಟು ಗೆದ್ದ ಪ್ರಸಂಗ ಕಂಡದ್ದಿದೆಯಾ…ಇಲ್ಲ….ಬದಲಿಸ ಹೊರಟರೆ ಅದರ ನಾಲ್ಕು ಪಾಲು ವೇಗದಲ್ಲಿ ಮುನ್ನುಗ್ಗಿ ಬಂದಾಳು….
ಮುನ್ನುಗ್ಗಿ ಬಂದಾಗ ಒಪ್ಪಲೇ ಬೇಕಷ್ಟೆ..  ಹಾಗೆಯೇ ಈ ವರ್ಷದ ಮಳೆ ಕೂಡಾ… ಜೂನ್ ತಿಂಗಳಲ್ಲಿ ಅಷ್ಟಕ್ಕಷ್ಟೇ ಇದ್ದ ಮಳೆ ಜುಲೈ ತಿಂಗಳ ಪ್ರಾರಂಭಕ್ಕೇ ವೇಗ ವರ್ಧಿಸುತ್ತಾ ದಾಖಲೆಗಳತ್ತ ಒಡುತ್ತಾ ಮನುಜನನ್ನು ಗಣನೆಗೇ ತೆಗೆದುಕೊಳ್ಳಲಿಲ್ಲ.
ಕಳೆದ ವರ್ಷ ಜುಲೈ ಮೊದಲ ಹತ್ತು ದಿನ ಮಳೆ ಇರಲೇ ಇಲ್ಲ….ಆದರೆ, ಈ ವರ್ಷ ಜುಲೈ ಪ್ರಾರಂಭದಿಂದಲೇ ಶತಕ ದಾಖಲೆಯ ಪ್ರವಾಹ…, ಹಾಗೆಯೇ..,  ಈ ವರ್ಷ ಆರ್ಧ್ರಾ ನಕ್ಷತ್ರದ ಎಲ್ಲಾ ದಿನಗಳೂ ಓತಪ್ರೋತವಾಗಿ ಮಳೆ ಸುರಿದು 865 ಮಿಮೀ ತಲುಪಿತು. ಅದೇ ಕಳೆದ ವರ್ಷದ ಆರ್ಧ್ರಾ ನಕ್ಷತ್ರದಲ್ಲಿ ಕೇವಲ ಆರು ದಿನಗಳಲ್ಲಿ ಮಳೆ ಸುರಿದು 173 ಮಿಮೀ ತಲುಪಿತ್ತಷ್ಟೆ…ಅದೇ 2020 ರ ಆರ್ಧ್ರಾ ನಕ್ಷತ್ರದ ಹನ್ನೊಂದು ದಿನಗಳಲ್ಲಿ ಮಳೆ ಸುರಿದು 453 ಮಿಮೀ ತಲುಪಿತ್ತು.
ಹಾ..,  ಆರ್ಧ್ರಾ ನಕ್ಷತ್ರದ ದಿನಗಳು ಕಳೆದು ಮಹಾಮಳೆ ನಕ್ಷತ್ರ ಪುನರ್ವಸುವಿನ ದಿನಗಳಲ್ಲಿದ್ದೇವೆ… ಕಳೆದ ವರ್ಷದ ಪುನರ್ವಸು ಹತ್ತು ದಿನಗಳಲ್ಲಿ ಮಳೆ ಸುರಿಸಿ 644ಮಿಮೀ ತಲುಪಿತ್ತು, ಹಾಗೂ 2020 ರಲ್ಲಿ ಹದಿಮೂರು ದಿನಗಳಲ್ಲಿ ಸುರಿದು 564 ಮಿಮೀ ತಲುಪಿತ್ತು.

2020 ರಲ್ಲಿ ಜುಲೈ ಆರನೇ ತಾರೀಕಿನ ತನಕ 57 ದಿನಗಳಲ್ಲಿ ಸುರಿದ ಒಟ್ಟು ವಾರ್ಷಿಕ ಮಳೆ 1190 ಮಿಮೀ.
2021 ರಲ್ಲಿ ಜುಲೈ ಆರನೇ ತಾರೀಕಿನ ತನಕ 67 ದಿನಗಳಲ್ಲಿ ಸುರಿದ ಒಟ್ಟು ವಾರ್ಷಿಕ ಮಳೆ 1644 ಮಿಮೀ.

2022 ರಲ್ಲಿ ಜುಲೈ ಆರನೇ ತಾರೀಕಿನ ತನಕ 66 ದಿನಗಳಲ್ಲಿ ಸುರಿದ ಒಟ್ಟು ವಾರ್ಷಿಕ ಮಳೆ 2293 ಮಿಮೀ.
ಅಂದರೆ ಕಳೆದ ವರ್ಷಕ್ಕಿಂತ ಈ ವರ್ಷ ಸುಮಾರು 650 ಮಿಮೀ ಮಳೆ ಹೆಚ್ಚು ಸುರಿದಿದೆ….
ಪ್ರಕೃತಿಯ ನಡೆ ನಿಗೂಢ ……ದಾಖಲಿಸಬಹುದಷ್ಟೇ ಹೊರತು ,ಊಹಿಸಲು ಅಸಾಧ್ಯ…. ಅದಕ್ಕಾಗಿಯೇ ಸನಾತನೀಯರು ಈ ಪ್ರಕೃತಿಯ ನಿಗೂಢತೆಗೆ ಹತ್ತು ಹಲವು ದೇವರೆಂಬ ಹೆಸರು ಕೊಟ್ಟು ಕೊಟ್ಟು..

” ತ್ವಂ ಬ್ರಹ್ಮಾ ತ್ವಂ ವಿಷ್ಣುಸ್ತ್ವಂ ರುದ್ರಸ್ತ್ವಮಿಂದ್ರಸ್ತ್ವಮಗ್ನಿಸ್ತ್ವಂ ವಾಯುಸ್ತ್ವಂ ಸೂರ್ಯಸ್ತ್ವಂ ಚಂದ್ರಮಾಸ್ತ್ವಂ ಬ್ರಹ್ಮ ಭೂರ್ಬವಃ ಸುವರೋಮ್ ” ಎಂದು ಶರಣಾಗತಿಯ ಪಾಠ ಮಾಡಿದರಲ್ಲವೇ….
ಅನುಸರಿಸೋಣ ಹಿರಿಯರ ನಡೆಯ, ಪ್ರಕೃತಿಯ ಮಹತ್ತನ್ನು ನಮಿಸೋಣ .

ಬರಹ :
ಟಿ.ಆರ್‌ ಸುರೇಶ್ಚಂದ್ರ ತೊಟ್ಟೆತ್ತೋಡಿ, ಕಲ್ಮಡ್ಕ
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಟಿ ಆರ್ ಸುರೇಶ್ಚಂದ್ರ ತೊಟ್ಟೆತ್ತೋಡಿ

‌ ಪ್ರಗತಿಪರ ಕೃಷಿಕ, ಬರಹಗಾರ

Published by
ಟಿ ಆರ್ ಸುರೇಶ್ಚಂದ್ರ ತೊಟ್ಟೆತ್ತೋಡಿ

Recent Posts

ಹವಾಮಾನ ವರದಿ | 15-09-2026 | ಕರ್ನಾಟಕದಲ್ಲಿ ಮಳೆ ಮತ್ತೆ ಚುರುಕಾಗುವ ಸೂಚನೆ

ಕರ್ನಾಟಕದಲ್ಲಿ ಸದ್ಯ ಬಿಸಿಲು ಮುಂದುವರಿದಿದ್ದರೂ ಸೆ.16ರಿಂದ ಮಲೆನಾಡು, ಸೆ.17ರಿಂದ ಉತ್ತರ ಒಳನಾಡಿನಲ್ಲಿ ಮೋಡ…

36 minutes ago

ಹವಾಮಾನ ವರದಿ | 14-09-2026 | ಸೆ.18ರ ಬಳಿಕ ಮಳೆ ಚಿತ್ರಣ ಬದಲಾಗಬಹುದೇ?

ಕರ್ನಾಟಕದಲ್ಲಿ ಸದ್ಯ ಬಿಸಿಲು ಮುಂದುವರಿದಿದ್ದರೂ ಸೆ.18ರಿಂದ ಮಳೆಯ ವ್ಯಾಪ್ತಿ ಹೆಚ್ಚಾಗುವ ಸೂಚನೆಗಳಿವೆ. ಸೆ.19ರಿಂದ…

1 day ago

ನನ್ನ ಚಿತ್ರ-ನನ್ನ ಖುಷಿ | ಬಣ್ಣಗಳ ಮೂಲಕ ಅರಳಿದ ಗಣೇಶ

ಬಣ್ಣಗಳ ಮೂಲಕ ಅರಳಿದ ಗಣೇಶ - ಕುಕ್ಕೆ ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯದ 8…

1 day ago

ನನ್ನ ಚಿತ್ರ-ನನ್ನ ಖುಷಿ | ಬಣ್ಣಗಳ ಲೋಕದಲ್ಲಿ ಪುಟ್ಟ ಮನಸ್ಸಿನ ಖುಷಿ

ನನ್ನ ಚಿತ್ರ – ನನ್ನ ಖುಷಿ | ಗಣೇಶನನ್ನು ಬಣ್ಣಗಳಲ್ಲಿ ಅರಳಿಸಿದ ಪುಟಾಣಿ…

1 day ago

ವಿಘ್ನಗಳ ಆಚೆ ಕಾಣುವ ಗಣೇಶತತ್ತ್ವ

ಗಣೇಶ ಚತುರ್ಥಿಯನ್ನು ಕೇವಲ ಧಾರ್ಮಿಕ ಆಚರಣೆಯಾಗಿ ನೋಡುವುದಕ್ಕಿಂತ, ಗಣೇಶನ ರೂಪಲಕ್ಷಣಗಳಲ್ಲಿರುವ ಜೀವನದ ಸಂದೇಶಗಳನ್ನು…

1 day ago