ಕೊಯನಾಡು ದಬ್ಬಡ್ಕದಲ್ಲಿ ಉಂಟಾದ ಜಲಸ್ಫೋಟದಿಂದ ಸಂಪಾಜೆ ಗ್ರಾಮದ ಪೇರಡ್ಕದಲ್ಲಿ ದಿಡೀರ್ ಪ್ರವಾಹದಿಂದ ದರ್ಗಾ ಶರೀಫ್ ,ಟಿ.ಎಂ ಶಾಹಿದ್ ತೆಕ್ಕಿಲ್ ಅವರ ತೋಟ, ಸಫಿಯರ ಮನೆ ಮತ್ತು ತೋಟ, ಸತ್ಯಜಿತ್ ಹಾಗು ಲಕ್ಷ್ಮೀಶ ಅವರ ತೋಟ, ಕೆ.ಎಂ.ಮೂಸಾ ಅವರ ತೋಟಗಳು ಜಲಾವೃತಗೊಂಡಿತು. ಈ ಪ್ರದೇಶಕ್ಕೆ ಕೆಪಿಸಿಸಿ ಕಾರ್ಯದರ್ಶಿ ಟಿ.ಎಂ ಶಾಹಿದ್ ತೆಕ್ಕಿಲ್ ಭೇಟಿ ನೀಡಿ ಸ್ಥಳ ಪರಿಶೀಲಿದರು.
ಈ ಪ್ರದೇಶದಲ್ಲಿ ನಿರಂತರ ಸಂಭವಿಸುವ ನೆರೆಯಿಂದ ಮುಕ್ತಿಯಾಗಲು ಪೇರಡ್ಕ ದರ್ಗಾ ಶರೀಫ್ ನಲ್ಲಿ ಸ್ಥಳೀಯ ಖತೀಬರಾದ ಬಹು ರಿಯಾಜ್ ಫೈಝಿ ಎಮ್ಮೆಮಾಡುರವರ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಟಿ.ಎಂ ಶಾಹಿದ್ ತೆಕ್ಕಿಲ್ ರೊಂದಿಗೆ ಗ್ರಾಮ ಪಂಚಾಯತ್ ಸದಸ್ಯ ಅಬುಸಾಲಿ ಗೂನಡ್ಕ , ಸಹಾಯಕ ಅಧ್ಯಾಪಕ ನೂರುದ್ದೀನ್ ಮುಸ್ಲಿಯಾರ್ , ಮಸೀದಿಯ ಕಾರ್ಯದರ್ಶಿ ಟಿ.ಎಂ ಅಬ್ದುಲ್ ರಝಾಕ್ ಹಾಜ ತೆಕ್ಕಿಲ್, ತೆಕ್ಕಿಲ್ ಮೊಹಮ್ಮದ್ ಕುಂಞ ಪೇರಡ್ಕ, ಟಿ.ಬಿ. ಅಬ್ದುಲ್ಲಾ ತೆಕ್ಕಿಲ್, ರಹೀಮ್ ಬೀಜದಕಟ್ಟೆ, ಅಶ್ರಫ್ ತೆಕ್ಕಿಲ್ ಪೇರಡ್ಕ, ಜುರೈದ್ ತೆಕ್ಕಿಲ್ ಪೇರಡ್ಕ, ಸಾಧುಮಾನ್ ತೆಕ್ಕಿಲ್ ಪೇರಡ್ಕ, ಕೆ.ಎಂ ಮೂಸಾನ್ ಪೇರಡ್ಕ, ಕೆ.ಎಂ ಇಸ್ಮಾಯಿಲ್ , ಉಸ್ಮಾನ್ ಅರಂತೋಡು,ಹಾಫಿಳ್ ಪೇರಡ್ಕ,ತಾಜುದ್ದೀನ್ ತೆಕ್ಕಿಲ್, ಮಿಸ್ಬಾ ಅರಂತೋಡು , ಆರಿಫ್ ತೆಕ್ಕಿಲ್ ದರ್ಖಾಸ್ , ಸೊಹೈಲ್, ಇರ್ಫಾನ್ ಪೇರಡ್ಕ ಮೊದಲಾದವರಿದ್ದರು.
ಭೋಜನವೆಂದರೆ ಉದರಾಗ್ನಿಯನ್ನು ತಣಿಸುವ ಯಜ್ಞ. ಉದರಾಗ್ನಿಗೆ ಖಾದ್ಯಗಳೇ ಆಜ್ಯಗಳು. ಯಜ್ಞವೆಂದಾಗ ಶ್ರದ್ಧೆ, ಭಕ್ತಿ ಮತ್ತು…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490
ಅರಬ್ಬಿ ಸಮುದ್ರದಲ್ಲಿ ಮೇಲ್ಮೈ ಸುಳಿಗಾಳಿ ಉಂಟಾಗಿದ್ದು, ಇದರ ಪ್ರಭಾವದಿಂದ ಜೂನ್ 11 ರಿಂದ…
ಇತ್ತೀಚಿನ ದಿನಗಳಲ್ಲಿ ಮಾಲಿನ್ಯದ ಬಗ್ಗೆ ಹೆಚ್ಚುತ್ತಿರುವ ಕಾಳಜಿ, ಪರಿಸರ ಸಂರಕ್ಷಣೆಯ ಬಗ್ಗೆ ಚಿಂತಿಸುವಂತೆ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರಾದ ಜ್ಯೋತಿಷ್ಗಳನ್ನು ಸಂಪರ್ಕಿಸಿ 9535156490
ಹಲಸಿನ ಹಣ್ಣಿನ ಮಲ್ಪುರಿಗೆ ಬೇಕಾಗುವ ಸಾಮಗ್ರಿಗಳು : ಹಲಸಿನ ಹಣ್ಣಿನ ಪಲ್ಪ್ 1/2 ಕಪ್,…