ಭಾರೀ ಮಳೆಗೆ ಎಲ್ಲೆಡೆಯೂ ಕೆಲಸಗಳು ಸ್ಥಗಿತಗೊಳ್ಳುತ್ತವೆ. ಮನೆಯಲ್ಲೇ ಕುಳಿತಿರುವವರ ಸಂಖ್ಯೆ ಹೆಚ್ಚಾಗಿರುತ್ತದೆ. ಟಿ ವಿ ಸೇರಿದಂತೆ ಮೊಬೈಲ್ ವೀಕ್ಷಣೆ ಹೆಚ್ಚಿರುತ್ತದೆ. ಆದರೆ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ವಿದ್ಯುತ್ ಇಲಾಖೆಯ ಪವರ್ ಮ್ಯಾನ್ ತಂಡದ ಕೆಲಸಗಳಿಗೆ ಸಲಾಂ ಹೇಳಬೇಕಿದೆ.
ಮಳೆಯ ನಡುವೆ ಏಣಿಯ ಮೂಲಕ ಕಂಬ ಏರಿ ವಿದ್ಯುತ್ ಸಂಪರ್ಕ ಕಲ್ಪಿಸುವ ಕೆಲಸವನ್ನು ನಿರಂತರವಾಗಿ ಮಾಡುತ್ತಿರುತ್ತಾರೆ. ಅದರಲ್ಲೂ ಈಗಾಗಲೇ ಭೂಕಂಪನ ಹಾಗೂ ಭೂಕುಸಿತದ ಭಯದಿಂದ ಇರುವ ಊರಾದ ಸಂಪಾಜೆ – ಚೆಂಬು ಪ್ರದೇಶದಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸುವುದೇ ಸಾಹಸದ ಕೆಲಸ. ಗ್ರಾಮೀಣ ಭಾಗದಲ್ಲಿ ಗಾಳಿ ಮಳೆಗೆ ಮರ ಬೀಳುವುದು , ಮರದ ಗೆಲ್ಲು ಬೀಳುವುದು ಎಚ್ ಟಿ ತಂತಿ ಸಮಸ್ಯೆಯಾಗುವುದು ಇದ್ದೇ ಇರುತ್ತದೆ. ಈ ಸಮಯದಲ್ಲಿ ಮಳೆ-ಗಾಳಿ ಎಂದು ಲೆಕ್ಕಿಸದೆ ಪವರ್ ಮ್ಯಾನ್ ಸ್ಥಳಕ್ಕೆ ತೆರಳಿ ವಿದ್ಯುತ್ ಸುಸ್ಥಿತಿಗೆ ತರಲು ಪ್ರಯತ್ನ ಪಡುತ್ತಿರುತ್ತಾರೆ. ಇಂತಹ ಕೆಲಸಗಳಿಂದಲೇ ಪ್ರತೀ ಮನೆಗೂ ವಿದ್ಯುತ್ ಸಂಪರ್ಕ ಸಾಧ್ಯವಾಗುತ್ತಿದೆ.
ಚೆಂಬು ಪ್ರದೇಶದಲ್ಲಿನ ಪವರ್ ಮ್ಯಾನ್ ಬಸವರಾಜ್ ಅವರ ಕೆಲಸವನ್ನು ಚೆಂಬು ಪ್ರದೇಶದ ಆನಂದ ಅವರು ವಿಡಿಯೋ ಮಾಡಿ ಕಳುಹಿಸಿದ್ದಾರೆ.
ತನ್ನಲ್ಲಿರುವುದನ್ನು ಸಮ್ಮನಸ್ಸಿನಿಂದ ನೀಡುವುದು ದಾನ. ಪಡಕೊಂಡವನ ತೃಪ್ತಿಯು ದಾನಿಗೆ ಹಾರೈಕೆ. ಇಲ್ಲಿ ಪ್ರಚಾರದ…
ಚಂದನ್ ಕೆ ಪಿ, 8 ನೇ ತರಗತಿ, ರೋಟರಿ ಪ್ರೌಢಶಾಲೆ, ಪಡ್ಡಂಬೈಲು |…
ಗೋಕರ್ಣ ಮಂಡಲಾಧೀಶ್ವರ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರಭಾರತೀ ಮಹಾಸ್ವಾಮೀಜಿಯವರ 32ನೇ ಚಾತುರ್ಮಾಸ್ಯ ವ್ರತ ಆಷಾಢ…
ಭಾರತವು ವಾರ್ಷಿಕವಾಗಿ ಅಂದಾಜು 1.4 ಮಿಲಿಯನ್ ಟನ್ ಹಲಸಿನ ಹಣ್ಣನ್ನು ಉತ್ಪಾದಿಸುತ್ತದೆ, ಆದರೆ…
Ayanshi K.H, 1st. Std, New Horizon School Bahrain ಅಯಂಶಿ ಕೆಚ್,…
ಒಂದು ಕಡೆ ಅಡಿಕೆ ಬರ್ಮಾ ಅಡಿಕೆ ಅಕ್ರಮವಾಗಿ ಸಾಗಾಟ, ಇನ್ನೊಂದು ಕಡೆ ದೇಶದ…