#Opinion | “ಹೇಗಿತ್ತು ಮಳೆ” ಎಂಬ ಮಳೆಯ ಹಿನ್ನೋಟ | ಪ್ರಕೃತಿಯ ನಿಗೂಢ ನಡೆ…! | ಏನಾದೀತು ಮಳೆ ಕಡಿಮೆಯಾಗಿ ? |

July 20, 2023
10:39 PM
ಮಳೆಯ ಬಗ್ಗೆ ಸಹಜವಾದ ನಿರೀಕ್ಷೆಗಳು ಈಗ ಹೆಚ್ಚಾಗಿದೆ. ಏಕೆ ಮಳೆಯಾಗುತ್ತಿಲ್ಲ ಎನ್ನುವುದೇ ಪ್ರಶ್ನೆಯಾಗಿದೆ. ಈ ನಡುವೆ ಮಳೆಯ ಹಿನ್ನೋಟದ ಬಗ್ಗೆ ಬರೆದಿದ್ದಾರೆ ಕೃಷಿಕ ಸುರೇಶ್ಚಂದ್ರ ಕಲ್ಮಡ್ಕ.

ಮಳೆ ಮಳೆ ಮಳೆ ಎಂಬ ಮಾನವ ಸಹಜ ತುಡಿತ, ಚಡಪಡಿಕೆಗಳ ಮಧ್ಯೆ ಈಗಿನ ಕೆಲವು ವರ್ಷಗಳಲ್ಲಿ ಮಳೆ ಪ್ರಮಾಣ ಹೇಗಿತ್ತೂ ಎನ್ನುವುದರ ಹಿನ್ನೋಟ. ಪ್ರಕೃತಿಯ ಓಘವಿದೆಯಲ್ಲಾ…ಆಹಾ…ನೋಡಿ ಅನುಭವಿಸುವುದಕ್ಕೆ ಖುಷಿಯೋ ಖುಷಿ. ಒಮ್ಮೆ ಶಾಂತ,ಒಮ್ಮೆ ರೌದ್ರ,ಮತ್ತೊಮ್ಮೆ ಸರಳ,ಮಗದೊಮ್ಮೆ ಗಂಭೀರ .ಬಿಸಿಲು,ಮಳೆ ,ಮುಗಿಲು, ಚಳಿ, ಗಾಳಿ, ಮಂಜು.. .ಆಹಾ…ಕ್ಷಣ ಕ್ಷಣಕ್ಕೂ ಹೊಸಹೊಸ ರೂಪ ಧರಿಸಿ ಧೀಂಗಣವಿಡುವ ಅದ್ಭುತ ಶಕ್ತಿಯೇ ನಿನಗಾರು ಸಾಟಿ. ಶರಣು ಶರಣು.

Advertisement
Advertisement

ಮಳೆ ಸುರಿದ ಪ್ರಮಾಣದೆಡೆ ಹೀಗೊಂದು ಹಿನ್ನೋಟ….
2023 ರ ಈ ವರ್ಷ ಇಂದು, 20ರ ತನಕ ಒಟ್ಟು ಸುರಿದ ಮಳೆ 57 ದಿನಗಳಲ್ಲಿ1783 ಮಿಮಿ.
ಜುಲೈ ತಿಂಗಳಲ್ಲಿ ಮಾತ್ರ ಇಂದಿನ ತನಕ 926 ಮಿಮಿ.

2022 ರಲ್ಲಿ ಜುಲೈ 20 ರ ತನಕ ಒಟ್ಟು 78 ದಿನಗಳಲ್ಲಿ ಸುರಿದ ಮಳೆ 3171 ಮಿಮೀ.
ಜುಲೈ ತಿಂಗಳಲ್ಲಿ ಮಾತ್ರ 20 ರ ತನಕ 1648 ಮಿಮೀ.
ವಾರ್ಷಿಕವಾಗಿ ಒಟ್ಟು ಮಳೆ…. 168 ದಿನಗಳಲ್ಲಿ ಸುರಿದ ಮಳೆ 5486 ಮಿಮೀ.

2021 ರಲ್ಲಿ ಜುಲೈ 20 ರ ತನಕ ಒಟ್ಟು 87 ದಿನಗಳಲ್ಲಿ ಸುರಿದ ಮಳೆ 2357ಮಿಮೀ.
ಜುಲೈ ತಿಂಗಳಲ್ಲಿ ಮಾತ್ರ 20 ರ ತನಕ 728ಮಿಮೀ.
ವಾರ್ಷಿಕವಾಗಿ 187 ದಿನಗಳಲ್ಲಿ ಸುರಿದ ಒಟ್ಟು ಮಳೆ 5431 ಮಿಮೀ.

2020 ರಲ್ಲಿ ಜುಲೈ 20 ರ ತನಕ ಒಟ್ಟು72 ದಿನಗಳಲ್ಲಿ ಸುರಿದ ಮಳೆ 1747ಮಿಮೀ.
ಜುಲೈ ತಿಂಗಳಲ್ಲಿ ಮಾತ್ರ 20 ರ ತನಕ 802 ಮಿಮೀ .
ವಾರ್ಷಿಕವಾಗಿ 160 ದಿನಗಳಲ್ಲಿ ಸುರಿದ ಒಟ್ಟು ಮಳೆ 4545 ಮಿಮೀ.

Advertisement

ಅಂದರೆ ಕಳೆದ ವರ್ಷ ಮಳೆ ಪ್ರಮಾಣ ವಾಡಿಕೆಗಿಂತ ತುಂಬಾ ಹೆಚ್ಚಿತ್ತು. ಅಷ್ಟೇ…

ಈ ವರ್ಷ ಮುಂದಕ್ಕೆ ಪ್ರಕೃತಿಯ ನಿಗೂಢ ನಡೆ ಹೇಗಿದೆಯೋ…ನೋಡೋಣ….
ಹಿತಮಿತವಾಗಿ ಸುರಿದು ಸಮೃದ್ದಿ ತರಲೆಂದು ಶಿರಬಾಗಿ ಪ್ರಾರ್ಥಿಸೋಣವಲ್ಲವೇ…

ಕಾಲೇ ವರ್ಷತು ಪರ್ಜನ್ಯಃ
ಪೃಥ್ವಿ ಸಸ್ಯಶಾಲಿನೀ
ದೇಶೋಯಂ ಕ್ಷೋಭ ರಹಿತಃ
ಸಜ್ಜನಾ ಸಂತು ನಿರ್ಭಯಾಃ.

ಬರಹ :
ಟಿ ಆರ್‌ ಸುರೇಶ್ಚಂದ್ರ, ಕಲ್ಮಡ್ಕ

 

 

Advertisement

Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಟಿ ಆರ್ ಸುರೇಶ್ಚಂದ್ರ ತೊಟ್ಟೆತ್ತೋಡಿ

‌ ಪ್ರಗತಿಪರ ಕೃಷಿಕ, ಬರಹಗಾರ

ಇದನ್ನೂ ಓದಿ

ಸಸ್ಯ ಪರಿಚಯ | ಕರ್ಲೆಂಕಿ
June 20, 2025
11:18 PM
by: ಜಯಲಕ್ಷ್ಮಿ ದಾಮ್ಲೆ
ಏಕೆ ಕೆಲವು ಹಿಂಡಿ ದನಗಳಿಗೆ ಹಿಡಿಸುವುದಿಲ್ಲ…?
June 19, 2025
9:51 PM
by: ಎ ಪಿ ಸದಾಶಿವ ಮರಿಕೆ
ಸಹಕಾರಿ ಸಂಸ್ಥೆಗಳ ಮೂಲಕ ಹಲಸಿನ ಮೌಲ್ಯ ವರ್ಧನೆ ಸಾಧ್ಯವೇ?
June 19, 2025
11:42 AM
by: ಡಾ|ವಿಘ್ನೇಶ್ವರ ಭಟ್‌ ವರ್ಮುಡಿ
ಮಲೆನಾಡಿನಲ್ಲಿ “ಭಾರಿ” ಮಳೆಯ ದಿನದಲ್ಲಿ ಶಾಲೆಗೆ ರಜೆ ಕೊಡುವರಾರು…!?
June 19, 2025
6:38 AM
by: ಪ್ರಬಂಧ ಅಂಬುತೀರ್ಥ

You cannot copy content of this page - Copyright -The Rural Mirror

Join Our Group