Advertisement
Opinion

#Opinion | “ಹೇಗಿತ್ತು ಮಳೆ” ಎಂಬ ಮಳೆಯ ಹಿನ್ನೋಟ | ಪ್ರಕೃತಿಯ ನಿಗೂಢ ನಡೆ…! | ಏನಾದೀತು ಮಳೆ ಕಡಿಮೆಯಾಗಿ ? |

Share

ಮಳೆ ಮಳೆ ಮಳೆ ಎಂಬ ಮಾನವ ಸಹಜ ತುಡಿತ, ಚಡಪಡಿಕೆಗಳ ಮಧ್ಯೆ ಈಗಿನ ಕೆಲವು ವರ್ಷಗಳಲ್ಲಿ ಮಳೆ ಪ್ರಮಾಣ ಹೇಗಿತ್ತೂ ಎನ್ನುವುದರ ಹಿನ್ನೋಟ. ಪ್ರಕೃತಿಯ ಓಘವಿದೆಯಲ್ಲಾ…ಆಹಾ…ನೋಡಿ ಅನುಭವಿಸುವುದಕ್ಕೆ ಖುಷಿಯೋ ಖುಷಿ. ಒಮ್ಮೆ ಶಾಂತ,ಒಮ್ಮೆ ರೌದ್ರ,ಮತ್ತೊಮ್ಮೆ ಸರಳ,ಮಗದೊಮ್ಮೆ ಗಂಭೀರ .ಬಿಸಿಲು,ಮಳೆ ,ಮುಗಿಲು, ಚಳಿ, ಗಾಳಿ, ಮಂಜು.. .ಆಹಾ…ಕ್ಷಣ ಕ್ಷಣಕ್ಕೂ ಹೊಸಹೊಸ ರೂಪ ಧರಿಸಿ ಧೀಂಗಣವಿಡುವ ಅದ್ಭುತ ಶಕ್ತಿಯೇ ನಿನಗಾರು ಸಾಟಿ. ಶರಣು ಶರಣು.

ಮಳೆ ಸುರಿದ ಪ್ರಮಾಣದೆಡೆ ಹೀಗೊಂದು ಹಿನ್ನೋಟ….
2023 ರ ಈ ವರ್ಷ ಇಂದು, 20ರ ತನಕ ಒಟ್ಟು ಸುರಿದ ಮಳೆ 57 ದಿನಗಳಲ್ಲಿ1783 ಮಿಮಿ.
ಜುಲೈ ತಿಂಗಳಲ್ಲಿ ಮಾತ್ರ ಇಂದಿನ ತನಕ 926 ಮಿಮಿ.

2022 ರಲ್ಲಿ ಜುಲೈ 20 ರ ತನಕ ಒಟ್ಟು 78 ದಿನಗಳಲ್ಲಿ ಸುರಿದ ಮಳೆ 3171 ಮಿಮೀ.
ಜುಲೈ ತಿಂಗಳಲ್ಲಿ ಮಾತ್ರ 20 ರ ತನಕ 1648 ಮಿಮೀ.
ವಾರ್ಷಿಕವಾಗಿ ಒಟ್ಟು ಮಳೆ…. 168 ದಿನಗಳಲ್ಲಿ ಸುರಿದ ಮಳೆ 5486 ಮಿಮೀ.

2021 ರಲ್ಲಿ ಜುಲೈ 20 ರ ತನಕ ಒಟ್ಟು 87 ದಿನಗಳಲ್ಲಿ ಸುರಿದ ಮಳೆ 2357ಮಿಮೀ.
ಜುಲೈ ತಿಂಗಳಲ್ಲಿ ಮಾತ್ರ 20 ರ ತನಕ 728ಮಿಮೀ.
ವಾರ್ಷಿಕವಾಗಿ 187 ದಿನಗಳಲ್ಲಿ ಸುರಿದ ಒಟ್ಟು ಮಳೆ 5431 ಮಿಮೀ.

2020 ರಲ್ಲಿ ಜುಲೈ 20 ರ ತನಕ ಒಟ್ಟು72 ದಿನಗಳಲ್ಲಿ ಸುರಿದ ಮಳೆ 1747ಮಿಮೀ.
ಜುಲೈ ತಿಂಗಳಲ್ಲಿ ಮಾತ್ರ 20 ರ ತನಕ 802 ಮಿಮೀ .
ವಾರ್ಷಿಕವಾಗಿ 160 ದಿನಗಳಲ್ಲಿ ಸುರಿದ ಒಟ್ಟು ಮಳೆ 4545 ಮಿಮೀ.

ಅಂದರೆ ಕಳೆದ ವರ್ಷ ಮಳೆ ಪ್ರಮಾಣ ವಾಡಿಕೆಗಿಂತ ತುಂಬಾ ಹೆಚ್ಚಿತ್ತು. ಅಷ್ಟೇ…

ಈ ವರ್ಷ ಮುಂದಕ್ಕೆ ಪ್ರಕೃತಿಯ ನಿಗೂಢ ನಡೆ ಹೇಗಿದೆಯೋ…ನೋಡೋಣ….
ಹಿತಮಿತವಾಗಿ ಸುರಿದು ಸಮೃದ್ದಿ ತರಲೆಂದು ಶಿರಬಾಗಿ ಪ್ರಾರ್ಥಿಸೋಣವಲ್ಲವೇ…

ಕಾಲೇ ವರ್ಷತು ಪರ್ಜನ್ಯಃ
ಪೃಥ್ವಿ ಸಸ್ಯಶಾಲಿನೀ
ದೇಶೋಯಂ ಕ್ಷೋಭ ರಹಿತಃ
ಸಜ್ಜನಾ ಸಂತು ನಿರ್ಭಯಾಃ.

ಬರಹ :
ಟಿ ಆರ್‌ ಸುರೇಶ್ಚಂದ್ರ, ಕಲ್ಮಡ್ಕ

 

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಟಿ ಆರ್ ಸುರೇಶ್ಚಂದ್ರ ತೊಟ್ಟೆತ್ತೋಡಿ

‌ ಪ್ರಗತಿಪರ ಕೃಷಿಕ, ಬರಹಗಾರ

Published by
ಟಿ ಆರ್ ಸುರೇಶ್ಚಂದ್ರ ತೊಟ್ಟೆತ್ತೋಡಿ

Recent Posts

ಹವಾಮಾನ ವರದಿ | 15-09-2026 | ಕರ್ನಾಟಕದಲ್ಲಿ ಮಳೆ ಮತ್ತೆ ಚುರುಕಾಗುವ ಸೂಚನೆ

ಕರ್ನಾಟಕದಲ್ಲಿ ಸದ್ಯ ಬಿಸಿಲು ಮುಂದುವರಿದಿದ್ದರೂ ಸೆ.16ರಿಂದ ಮಲೆನಾಡು, ಸೆ.17ರಿಂದ ಉತ್ತರ ಒಳನಾಡಿನಲ್ಲಿ ಮೋಡ…

56 minutes ago

ಹವಾಮಾನ ವರದಿ | 14-09-2026 | ಸೆ.18ರ ಬಳಿಕ ಮಳೆ ಚಿತ್ರಣ ಬದಲಾಗಬಹುದೇ?

ಕರ್ನಾಟಕದಲ್ಲಿ ಸದ್ಯ ಬಿಸಿಲು ಮುಂದುವರಿದಿದ್ದರೂ ಸೆ.18ರಿಂದ ಮಳೆಯ ವ್ಯಾಪ್ತಿ ಹೆಚ್ಚಾಗುವ ಸೂಚನೆಗಳಿವೆ. ಸೆ.19ರಿಂದ…

1 day ago

ನನ್ನ ಚಿತ್ರ-ನನ್ನ ಖುಷಿ | ಬಣ್ಣಗಳ ಮೂಲಕ ಅರಳಿದ ಗಣೇಶ

ಬಣ್ಣಗಳ ಮೂಲಕ ಅರಳಿದ ಗಣೇಶ - ಕುಕ್ಕೆ ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯದ 8…

1 day ago

ನನ್ನ ಚಿತ್ರ-ನನ್ನ ಖುಷಿ | ಬಣ್ಣಗಳ ಲೋಕದಲ್ಲಿ ಪುಟ್ಟ ಮನಸ್ಸಿನ ಖುಷಿ

ನನ್ನ ಚಿತ್ರ – ನನ್ನ ಖುಷಿ | ಗಣೇಶನನ್ನು ಬಣ್ಣಗಳಲ್ಲಿ ಅರಳಿಸಿದ ಪುಟಾಣಿ…

1 day ago

ವಿಘ್ನಗಳ ಆಚೆ ಕಾಣುವ ಗಣೇಶತತ್ತ್ವ

ಗಣೇಶ ಚತುರ್ಥಿಯನ್ನು ಕೇವಲ ಧಾರ್ಮಿಕ ಆಚರಣೆಯಾಗಿ ನೋಡುವುದಕ್ಕಿಂತ, ಗಣೇಶನ ರೂಪಲಕ್ಷಣಗಳಲ್ಲಿರುವ ಜೀವನದ ಸಂದೇಶಗಳನ್ನು…

1 day ago