Advertisement
Opinion

#Opinion | “ಹೇಗಿತ್ತು ಮಳೆ” ಎಂಬ ಮಳೆಯ ಹಿನ್ನೋಟ | ಪ್ರಕೃತಿಯ ನಿಗೂಢ ನಡೆ…! | ಏನಾದೀತು ಮಳೆ ಕಡಿಮೆಯಾಗಿ ? |

Share

ಮಳೆ ಮಳೆ ಮಳೆ ಎಂಬ ಮಾನವ ಸಹಜ ತುಡಿತ, ಚಡಪಡಿಕೆಗಳ ಮಧ್ಯೆ ಈಗಿನ ಕೆಲವು ವರ್ಷಗಳಲ್ಲಿ ಮಳೆ ಪ್ರಮಾಣ ಹೇಗಿತ್ತೂ ಎನ್ನುವುದರ ಹಿನ್ನೋಟ. ಪ್ರಕೃತಿಯ ಓಘವಿದೆಯಲ್ಲಾ…ಆಹಾ…ನೋಡಿ ಅನುಭವಿಸುವುದಕ್ಕೆ ಖುಷಿಯೋ ಖುಷಿ. ಒಮ್ಮೆ ಶಾಂತ,ಒಮ್ಮೆ ರೌದ್ರ,ಮತ್ತೊಮ್ಮೆ ಸರಳ,ಮಗದೊಮ್ಮೆ ಗಂಭೀರ .ಬಿಸಿಲು,ಮಳೆ ,ಮುಗಿಲು, ಚಳಿ, ಗಾಳಿ, ಮಂಜು.. .ಆಹಾ…ಕ್ಷಣ ಕ್ಷಣಕ್ಕೂ ಹೊಸಹೊಸ ರೂಪ ಧರಿಸಿ ಧೀಂಗಣವಿಡುವ ಅದ್ಭುತ ಶಕ್ತಿಯೇ ನಿನಗಾರು ಸಾಟಿ. ಶರಣು ಶರಣು.

ಮಳೆ ಸುರಿದ ಪ್ರಮಾಣದೆಡೆ ಹೀಗೊಂದು ಹಿನ್ನೋಟ….
2023 ರ ಈ ವರ್ಷ ಇಂದು, 20ರ ತನಕ ಒಟ್ಟು ಸುರಿದ ಮಳೆ 57 ದಿನಗಳಲ್ಲಿ1783 ಮಿಮಿ.
ಜುಲೈ ತಿಂಗಳಲ್ಲಿ ಮಾತ್ರ ಇಂದಿನ ತನಕ 926 ಮಿಮಿ.

2022 ರಲ್ಲಿ ಜುಲೈ 20 ರ ತನಕ ಒಟ್ಟು 78 ದಿನಗಳಲ್ಲಿ ಸುರಿದ ಮಳೆ 3171 ಮಿಮೀ.
ಜುಲೈ ತಿಂಗಳಲ್ಲಿ ಮಾತ್ರ 20 ರ ತನಕ 1648 ಮಿಮೀ.
ವಾರ್ಷಿಕವಾಗಿ ಒಟ್ಟು ಮಳೆ…. 168 ದಿನಗಳಲ್ಲಿ ಸುರಿದ ಮಳೆ 5486 ಮಿಮೀ.

2021 ರಲ್ಲಿ ಜುಲೈ 20 ರ ತನಕ ಒಟ್ಟು 87 ದಿನಗಳಲ್ಲಿ ಸುರಿದ ಮಳೆ 2357ಮಿಮೀ.
ಜುಲೈ ತಿಂಗಳಲ್ಲಿ ಮಾತ್ರ 20 ರ ತನಕ 728ಮಿಮೀ.
ವಾರ್ಷಿಕವಾಗಿ 187 ದಿನಗಳಲ್ಲಿ ಸುರಿದ ಒಟ್ಟು ಮಳೆ 5431 ಮಿಮೀ.

2020 ರಲ್ಲಿ ಜುಲೈ 20 ರ ತನಕ ಒಟ್ಟು72 ದಿನಗಳಲ್ಲಿ ಸುರಿದ ಮಳೆ 1747ಮಿಮೀ.
ಜುಲೈ ತಿಂಗಳಲ್ಲಿ ಮಾತ್ರ 20 ರ ತನಕ 802 ಮಿಮೀ .
ವಾರ್ಷಿಕವಾಗಿ 160 ದಿನಗಳಲ್ಲಿ ಸುರಿದ ಒಟ್ಟು ಮಳೆ 4545 ಮಿಮೀ.

ಅಂದರೆ ಕಳೆದ ವರ್ಷ ಮಳೆ ಪ್ರಮಾಣ ವಾಡಿಕೆಗಿಂತ ತುಂಬಾ ಹೆಚ್ಚಿತ್ತು. ಅಷ್ಟೇ…

ಈ ವರ್ಷ ಮುಂದಕ್ಕೆ ಪ್ರಕೃತಿಯ ನಿಗೂಢ ನಡೆ ಹೇಗಿದೆಯೋ…ನೋಡೋಣ….
ಹಿತಮಿತವಾಗಿ ಸುರಿದು ಸಮೃದ್ದಿ ತರಲೆಂದು ಶಿರಬಾಗಿ ಪ್ರಾರ್ಥಿಸೋಣವಲ್ಲವೇ…

ಕಾಲೇ ವರ್ಷತು ಪರ್ಜನ್ಯಃ
ಪೃಥ್ವಿ ಸಸ್ಯಶಾಲಿನೀ
ದೇಶೋಯಂ ಕ್ಷೋಭ ರಹಿತಃ
ಸಜ್ಜನಾ ಸಂತು ನಿರ್ಭಯಾಃ.

ಬರಹ :
ಟಿ ಆರ್‌ ಸುರೇಶ್ಚಂದ್ರ, ಕಲ್ಮಡ್ಕ

 

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಟಿ ಆರ್ ಸುರೇಶ್ಚಂದ್ರ ತೊಟ್ಟೆತ್ತೋಡಿ

‌ ಪ್ರಗತಿಪರ ಕೃಷಿಕ, ಬರಹಗಾರ

Published by
ಟಿ ಆರ್ ಸುರೇಶ್ಚಂದ್ರ ತೊಟ್ಟೆತ್ತೋಡಿ

Recent Posts

2050 ರ ವೇಳೆಗೆ ಭೂಕುಸಿತದ ಅಪಾಯ ಮತ್ತಷ್ಟು ಹೆಚ್ಚಳ : ಮಳೆ ತೀವ್ರತೆ, ನಗರೀಕರಣವೇ ಪ್ರಮುಖ ಕಾರಣ – ಅಧ್ಯಯನ

2050ರ ವೇಳೆಗೆ ಮಳೆಯ ತೀವ್ರತೆ ಮತ್ತು ನಗರೀಕರಣದ ಪರಿಣಾಮವಾಗಿ ಭಾರತದ ಹಲವು ಗುಡ್ಡ…

14 minutes ago

ಅಕಾಲದ ಹಸಿವು, ಅಸಮಯದ ನಿದ್ದೆ ದೇಹದ ಯಂತ್ರ ಕೆಟ್ಟಿರುವ ಸಂಕೇತ : ರಾಘವೇಶ್ವರ ಶ್ರೀ

ಅಕಾಲದ ಹಸಿವು ಮತ್ತು ಅಸಮಯದ ನಿದ್ದೆ ದೇಹದ ಯಂತ್ರದಲ್ಲಿ ಸಮಸ್ಯೆಯ ಸಂಕೇತ ಎಂದು…

2 hours ago

ಮತ್ತೆ ಚುರುಕುಗೊಂಡ ಮಳೆ | ಸುಳ್ಯ ಮಲೆನಾಡು ಭಾಗದಲ್ಲಿ ಬೆಳಗ್ಗಿನಿಂದ ಧಾರಾಕಾರ ಮಳೆ

ಸುಳ್ಯ ತಾಲೂಕಿನ ಮಲೆನಾಡು ಭಾಗದಲ್ಲಿ ಎರಡು ದಿನಗಳ ವಿರಾಮದ ಬಳಿಕ ಮತ್ತೆ ಭಾರೀ…

2 hours ago

ದೇಶದ ಅಡಿಕೆ ಉತ್ಪಾದನೆಯಲ್ಲಿ ಕರ್ನಾಟಕದ ಮೊದಲು – 75.47% ಉತ್ಪಾದನೆ, 71.56% ವಿಸ್ತೀರ್ಣದಲ್ಲಿ ಅಡಿಕೆ ಬೆಳೆ

ದೇಶದ ಅಡಿಕೆ ಉತ್ಪಾದನೆ ಹಾಗೂ ಬೆಳೆ ವಿಸ್ತೀರ್ಣದಲ್ಲಿ ಕರ್ನಾಟಕವೇ ಅಗ್ರಸ್ಥಾನದಲ್ಲಿದೆ ಎಂದು ಕೇಂದ್ರ…

11 hours ago

ಕಳಪೆ ವಿದೇಶಿ ಅಡಿಕೆ ಆಮದು ನಿಯಂತ್ರಿಸಿ – ಕೋಟ ಶ್ರೀನಿವಾಸ ಪೂಜಾರಿ ಒತ್ತಾಯ

ವಿದೇಶದಿಂದ ಕಳಪೆ ಅಡಿಕೆ ಆಮದು ನಿಯಂತ್ರಿಸಿ ದೇಶೀಯ ಅಡಿಕೆ ಬೆಳೆಗಾರರನ್ನು ರಕ್ಷಿಸುವಂತೆ ಸಂಸದ…

13 hours ago

ಹವಾಮಾನ ವರದಿ | 04-08-2026 | ರಾಜ್ಯದಲ್ಲಿ ಆಗಸ್ಟ್‌ 12 ರವರೆಗೆ ಮಳೆ ಸಾಧ್ಯತೆ – ಮುಂಗಾರು ದುರ್ಬಲವಾಗುವ ಲಕ್ಷಣ

ಕರಾವಳಿ ಜಿಲ್ಲೆಗಳಲ್ಲಿ ಆಗಸ್ಟ್‌ 12ರವರೆಗೆ ಬಿಟ್ಟುಬಿಟ್ಟು ಮಳೆಯಾಗುವ ಸಾಧ್ಯತೆ ಇದೆ. ಜಪಾನ್ ಸಮೀಪದ…

21 hours ago